ಎಡವಟ್ಟಿನಿಂದ 1.42 ಕೋಟಿ ಸಂಬಳ ಕೊಟ್ಟ ಕಂಪನಿ: ಹಣ ತಗೊಂಡು ಉದ್ಯೋಗಿ ಎಸ್ಕೇಪ್
ಕೊಟ್ಟೋನು ಕೋಡಂಗಿ ಈಸ್ಕೊಂಡೋನು ವೀರಭದ್ರ ಅನ್ನೋದು ಇದಕ್ಕೆ ಅನ್ಸುತ್ತೆ. ಕೇಳಿ ಸಾಲ ಪಡೆದವರೆ ವಾಪಸ್ ಮಾಡೋದು ಕಷ್ಟ ಆಗಿರುವ ಈ ಕಾಲದಲ್ಲಿ ಬೇಡದೆ ಅಕೌಂಟಿಗೆ ಬಂದ ಕೋಟಿ ರುಪಾಯಿನಾ ವಾಪಸ್ ಕೊಡೊರು ಇರ್ತಾರ?
ಅವನೊಬ್ಬ ತಿಂಗಳಿಗೆ 43 ಸಾವಿರ ಸಂಬಳ ಪಡೆಯುವ ಉದ್ಯೋಗಿ, ತನಗೆ ಬರುವ ಸಂಬಳದಲ್ಲಿ ಹೇಗೋ ಜೀವನ ಸಾಗಿಸಿಕೊಂಡಿದ್ದವನಿಗೆ ತನಗೆ ಕೆಲಸ ಕೊಟ್ಟ ಕಂಪನಿ ಮಾಡಿದ ಎಡವಟ್ಟಿನಿಂದ ಕೋಟ್ಯಧಿಪತಿಯಾಗಿದ್ದಾನೆ.
ಹೌದು, ಸಂಬಳ ಪಾವತಿಸುವ ವೇಳೆ ಕಂಪನಿ ತನ್ನ ಉದ್ಯೋಗಿಗೆ 43,000 ರುಪಾಯಿ ಬದಲಾಗಿ 1.42 ಕೋಟಿ ಪಾವತಿಸಿದೆ. ಹೆಚ್ಚುವರಿ ಸಂಬಳ ವಾಪಸ್ ಮಾಡ್ತೀನಿ ಅಂದ ಉದ್ಯೋಗಿ ಕೆಲಸ ಕೊಟ್ಟ ಕಂಪನಿಗೆ ಉಂಡೆ ನಾಮ ತಿಕ್ಕಿ ಎಸ್ಕೇಪ್ ಆಗಿದ್ದಾನೆ.

ಚಿಲಿ ದೇಶದಲ್ಲಿ ಈ ಘಟನೆ ನಡೆದಿದೆ. ಕೋಲ್ಡ್ ಕಟ್ಗಳ ಅತಿದೊಡ್ಡ ಉತ್ಪಾದಕರಲ್ಲಿ ಒಬ್ಬರಾದ ಕನ್ಸೋರ್ಸಿಯೊ ಇಂಡಸ್ಟ್ರಿಯಲ್ ಡಿ ಅಲಿಮೆಂಟೋಸ್ (ಸಿಯಾಲ್) ನಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಯ ಕಥೆ ಇದು.
ಕಳೆದ ತಿಂಗಳು ಆತ ತನ್ನ ಮಾಮೂಲಿ ಸಂಬಳ 500,000 ಪೆಸೊಗಳ (43,000 ರುಪಾಯಿ) ಪಡೆಯಬೇಕಿತ್ತು. ಆದರೆ ಕಂಪನಿ ಆಕಸ್ಮಿಕವಾಗಿ ಆತನಿಗೆ ಸಂಬಳದ 286 ಪಟ್ಟು ಹೆಚ್ಚಿಗೆ ಅಂದರೆ 165,398,851 ಚಿಲಿಯ ಪೆಸೊಗಳನ್ನು (ರೂ 1.42 ಕೋಟಿ) ಪಾವತಿಸಿದೆ.
ಹಣ ಹಿಂದಿರುಗಿಸುವಂತೆ ಕೇಳಿದ ಕಂಪನಿ
ಕಂಪನಿಯ ಆಡಳಿತ ಮಂಡಳಿಯು ದಾಖಲೆಗಳನ್ನು ಪರಿಶೀಲಿಸಿದ ನಂತರ, ಉದ್ಯೋಗಿಗೆ ಅವರ ಮಾಸಿಕ ವೇತನದ ಸುಮಾರು 286 ಪಟ್ಟು ತಪ್ಪಾಗಿ ಪಾವತಿಸಲಾಗಿದೆ ಎಂದು ಅರಿವಾಗಿದೆ. ಹೆಚ್ಚುವರಿಯಾಗಿ ಪಾವತಿಸಿದ ಹಣವನ್ನು ಹಿಂದಿರುಗಿಸಲು ಉದ್ಯೋಗಿಯನ್ನು ಸಂಸ್ಥೆ ಕೇಳಿದೆ.

ಕೆಲಸಗಾರನು ತನಗೆ ಹೆಚ್ಚುವರಿಯಾಗಿ ಪಾವತಿಸಿದ ಮೊತ್ತವನ್ನು ಹಿಂದಿರುಗಿಸಲು ತನ್ನ ಬ್ಯಾಂಕ್ಗೆ ಹೋಗಲು ಒಪ್ಪಿಕೊಂಡಿದ್ದಾನೆ. ಆದರೆ, ಆತನಿಗೆ ಹಣವನ್ನು ಹಿಂದಿರುಗಿಸುವುದು ಇಷ್ಟವಿರಲಿಲ್ಲ.
ಉದ್ಯೋಗದಾತ ಕಂಪನಿಯು ಬ್ಯಾಂಕ್ನಿಂದ ಮರುಪಾವತಿ ಅಧಿಸೂಚನೆಯನ್ನು ಸ್ವೀಕರಿಸದಿದ್ದಾಗ, ಅವರು ಉದ್ಯೋಗಿಯನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ ಉದ್ಯೋಗಿ ಅವರಿಗೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ನಂತರ ಸಂಪರ್ಕಕ್ಕೆ ಬಂದ ಆಸಾಮಿ, ತಾನು ಅತಿಯಾದ ನಿದ್ದೆ ಮಾಡುತ್ತಿದ್ದೆ ಮತ್ತು ಬ್ಯಾಂಕ್ಗೆ ಭೇಟಿ ನೀಡಿ ಹಣ ಮರುಪಾವತಿಸುವುದಾಗಿ ಹೇಳಿಕೊಂಡಿದ್ದಾನೆ.
ಆದರೆ, ಜೂನ್ 2ರಂದು ರಾಜೀನಾಮೆ ನೀಡಿ ಇದೀಗ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ. ಕಂಪನಿಯು ಆ ವ್ಯಕ್ತಿಗೆ ಆಕಸ್ಮಿಕವಾಗಿ ವರ್ಗಾವಣೆ ಮಾಡಿದ ಹಣವನ್ನು ಹಿಂಪಡೆಯಲು ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ.
Recommended Video
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications