Fact check: ಮೋದಿ ಜರ್ಮನ್ ಭೇಟಿ ವೇಳೆ ಚಾನ್ಸೆಲರ್ ಕಚೇರಿಯಲ್ಲಿ ನೆಹರೂ ಫೋಟೋ?
ನವದೆಹಲಿ ಮೇ 06: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬರ್ಲಿನ್ನಲ್ಲಿ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಅವರನ್ನು ಭೇಟಿಯಾದರು. ಇದೀಗ ಈ ಇಬ್ಬರು ಭೇಟಿ ವೇಳೆ ರಾಷ್ಟ್ರಗಳ ಮುಖ್ಯಸ್ಥರ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿ ಇಬ್ಬರೂ ನಾಯಕರ ಹಿಂದಿನ ಗೋಡೆಯ ಮೇಲೆ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಚಿತ್ರವೂ ಗೋಚರಿಸುತ್ತದೆ. ಜರ್ಮನಿಯ ಚಾನ್ಸಲರ್ ತಮ್ಮ ಕಚೇರಿಯಲ್ಲಿ ಪಂಡಿತ್ ನೆಹರೂ ಅವರ ಚಿತ್ರವನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಲವು ದಿನಗಳ ಹಿಂದೆ ಪ್ರಧಾನಿ ಮೋದಿ ಮತ್ತು ಜರ್ಮನಿಯ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಭೇಟಿಯಾದ ಜರ್ಮನಿಯ ರಾಜಧಾನಿ ಬರ್ಲಿನ್ನಲ್ಲಿನ ಕೊಠಡಿಯಲ್ಲಿ ಈ ಚಿತ್ರವಿದೆ ಎಂದು ವೈರಲ್ ಚಿತ್ರ ಹೇಳುತ್ತದೆ. ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಫೋಟೋದೊಂದಿಗೆ 'ನೀವು ನೆಹರುವನ್ನು ಎಲ್ಲಿ ಅಳಿಸುತ್ತೀರಿ? ಬರ್ಲಿನ್ನಲ್ಲಿ ಜರ್ಮನ್ ಚಾನ್ಸೆಲರ್ ಮತ್ತು ಮೋದಿ ಭೇಟಿಯಾದ ಸಭಾಂಗಣದಲ್ಲಿ ನೆಹರು ಈಗಾಗಲೇ ಇದ್ದಾರೆ. ಈ ಬಗ್ಗೆ ಜರ್ಮನಿ ಮೋದಿಗೆ ಸಂದೇಶ ನೀಡಿದೆ' ಎಂದು ಬರೆಯಲಾಗಿದೆ.

ಅಷ್ಟೇ ಅಲ್ಲ ಈ ಚಿತ್ರವನ್ನು ಬಿಹಾರ ಮಹಿಳಾ ಕಾಂಗ್ರೆಸ್ನ ಪರಿಶೀಲಿಸಿದ ಟ್ವಿಟರ್ ಹ್ಯಾಂಡಲ್ನಿಂದಲೂ ಪೋಸ್ಟ್ ಮಾಡಲಾಗಿದೆ. ನೆಹರೂ ಅವರನ್ನು ನಿರ್ಮೂಲನೆ ಮಾಡಲು ಪ್ರಧಾನಿ ಪ್ರಯತ್ನಿಸಬಹುದು. ಆದರೆ ಅವರನ್ನು ತೊಡೆದುಹಾಕುವುದು ಸುಲಭವಲ್ಲ ಎಂದು ಅವರು ಬರೆದಿದ್ದಾರೆ. ಈ ಚಿತ್ರ ಟ್ವಿಟರ್ ಮತ್ತು ಫೇಸ್ಬುಕ್ನಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಈ ಚಿತ್ರವನ್ನು ಒನ್ ಇಂಡಿಯಾ ಪರಿಶೀಲಿಸಿದೆ. ತನಿಖೆಯಲ್ಲಿ ಈ ಚಿತ್ರ ನಕಲಿ ಎಂಬುದು ಸಾಬೀತಾಗಿದೆ.

ವೈರಲ್ ಫೋಟೋವನ್ನು ಹಿಮ್ಮುಖವಾಗಿ ಹುಡುಕಿದಾಗ, ಈ ಚಿತ್ರ ಪ್ರಧಾನಿ ಮೋದಿ ಅವರ ಟ್ವೀಟರ್ ಪುಟದಲ್ಲಿ ಕಂಡುಬಂದಿದೆ. ಈ ಚಿತ್ರವನ್ನು 3 ಮೇ 2022 ರಂದು ಮೋದಿ ಸ್ಕೋಲ್ಜ್ ಅವರ ಸಭೆಯ ಕೆಲವು ಚಿತ್ರಗಳೊಂದಿಗೆ ಹಂಚಿಕೊಳ್ಳಲಾಗಿದೆ. ಉಭಯ ನಾಯಕರ ನಡುವಿನ ಈ ಸಭೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಮಾತುಕತೆ ನಡೆಸಲಾಯಿತು. ಆದರೆ ಅಸಲಿ ಚಿತ್ರದಲ್ಲಿ ಗೋಡೆಯ ಮೇಲೆ ನೆಹರೂ ಚಿತ್ರ ಕಾಣಿಸುತ್ತಿಲ್ಲ. ಈ ಚಿತ್ರವನ್ನು ಎಡಿಟ್ ಮಾಡಿರುವುದು ಸ್ಪಷ್ಟವಾಗಿದೆ. ಫೋಟೋವನ್ನು ಮಾರ್ಫ್ ಮಾಡಿ ಶೇರ್ ಮಾಡಲಾಗುತ್ತಿದೆ. ಹೀಗಾಗಿ ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಹಾಗೂ ಮೋದಿ ಮಾತುಕತೆ ವೇಳೆ ಹಿಂದೆ ಗೋಡೆ ಮೇಲೆ ನೆಹರೂ ಅವರ ಫೋಟೋ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ.

Fact Check
ಕ್ಲೇಮು
ಮೋದಿ ಜರ್ಮನ್ ಭೇಟಿ ವೇಳೆ ಚಾನ್ಸೆಲರ್ ಕಚೇರಿಯಲ್ಲಿ ನೆಹರೂ ಫೋಟೋ ಹಾಕಲಾಗಿದೆ.
ಪರಿಸಮಾಪ್ತಿ
ಮೋದಿ ಜರ್ಮನ್ ಭೇಟಿ ವೇಳೆ ಚಾನ್ಸೆಲರ್ ಕಚೇರಿಯಲ್ಲಿ ನೆಹರೂ ಫೋಟೋ ಇರಲಿಲ್ಲ. ಅದನ್ನು ಎಡಿಟ್ ಮಾಡಲಾಗಿದೆ.
Rating
-
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ












Click it and Unblock the Notifications