ರಜನಿಕಾಂತ್ ಮಾಜಿ ಅಳಿಯನ ಜೊತೆ ಡೇಟಿಂಗ್; ಸತ್ಯ ಬಾಯ್ಬಿಟ್ಟ ನಟಿ ಮೃಣಾಲ್
ತಮಿಳು ಚಿತ್ರರಂಗದ ಖ್ಯಾತ ನಟ ಧನುಷ್ ಅವರು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ಅವರನ್ನು ಮದುವೆಯಾಗಿದ್ದರು. ಇತ್ತೀಚೆಗಷ್ಟೇ ಅವರು ವೈಯಕ್ತಿಕ ಕಾರಣಗಳಿಂದ ಪರಸ್ಪರ ಡಿವೋರ್ಸ್ ಪಡೆದಿದ್ದರು. ಬರೋಬ್ಬರಿ 18 ವರ್ಷಗಳ ದಾಂಪತ್ಯಕ್ಕೆ ವಿದಾಯ ಹೇಳಿದ್ದರು. ಇದರ ಬೆನ್ನಲ್ಲೇ ನಟ ಧನುಷ್ ಮತ್ತೊಬ್ಬ ನಟಿಯೊಂದಿಗೆ ಡೇಟಿಂಗ್ನಲ್ಲಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿದೆ. ಅದು ಬೇರೆ ಯಾರೂ ಅಲ್ಲ, ಸೀತಾರಾಮಂ ಹಾಗೂ ಹಾಯ್ ನಾನ್ನ ಸಿನಿಮಾಗಳ ಖ್ಯಾತಿಯ ಮೃಣಾಲ್ ಠಾಕೂರ್. ಇವರಿಬ್ಬರ ಡೇಟಿಂಗ್ ವದಂತಿ ಎಲ್ಲೆಡೆ ಹರಿದಾಡಿದ್ದರಿಂದ ಮೃಣಾಲ್ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾರೆ.
ಮೃಣಾಲ್ ಠಾಕೂರ್ ನಟನೆಯ ಸನ್ ಆಫ್ ಸರ್ದಾರ್ 2 ಪ್ರೀಮಿಯರ್ನಲ್ಲಿ ನಟ ಧನುಷ್ ಕಾಣಿಸಿಕೊಂಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಮೃಣಾಲ್ ಧನುಷ್ ಅವರನ್ನು ಸ್ವಾಗತಿಸಲು ಆತುರಪಡುತ್ತಿರುವುದು, ಪಾಪರಾಜಿಗಳಿಂದ ಛಾಯಾಚಿತ್ರ ತೆಗೆಯಲು ರೆಡ್ ಕಾರ್ಪೆಟ್ಗೆ ಹೋಗುವ ಮೊದಲು ಅಕ್ಕಪಕ್ಕದಲ್ಲಿ ಅಪ್ಪಿಕೊಳ್ಳುವ ವಿಡಿಯೋ ವೈರಲ್ ಆಗಿತ್ತು. ಸನ್ ಆಫ್ ಸರ್ದಾರ್ 2 ಚಿತ್ರದ ಫಸ್ಟ್ ಶೋಗೆ ಧನುಷ್ ಬಂದಿದ್ದರು. ವಿಶೇಷವಾಗಿ ಮೃಣಾಲ್ಗೆ ಹುರಿದುಂಬಿಸಲು ಧನುಷ್ ಬಂದಿದ್ದರು ಎಂದು ಗಾಸಿಪ್ ಶುರುವಾಗಿತ್ತು. ಧನುಷ್ ಈ ಊಹಾಪೋಹಕ್ಕೆ ಪ್ರತಿಕ್ರಿಯಿಸಲಿಲ್ಲ. ನಟನನ್ನು ವಾಸ್ತವವಾಗಿ ಅಜಯ್ ದೇವಗನ್ ಆಹ್ವಾನಿಸಿದ್ದು ಎಂದು ಮೃಣಾಲ್ ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ವೀಡಿಯೊ ವೈರಲ್ ಆದ ನಂತರ ಧನುಷ್ ಜೊತೆಗಿನ ಡೇಟಿಂಗ್ ವದಂತಿಯ ಬಗ್ಗೆಯೂ ನಟಿ ಮಾತನಾಡಿದ್ದಾರೆ. ಧನುಷ್ ನನಗೆ ಒಳ್ಳೆಯ ಸ್ನೇಹಿತ ಅಷ್ಟೇ. ಇತ್ತೀಚೆಗೆ ನಮ್ಮಿಬ್ಬರ ನಡುವೆ ಸಂಬಂಧ ಇದೆ ಎಂಬ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ ಎಂದು ನನಗೆ ತಿಳಿದಿದೆ. ಅದನ್ನು ನೋಡಿದಾಗ ನನಗೆ ತಮಾಷೆ ಎನಿಸಿತು. ಧನುಷ್ ಸನ್ ಆಫ್ ಸರ್ದಾರ್-2 ನೋಡಲು ಬಂದಿದ್ದರು. ಯಾರೂ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ. ಅವರನ್ನು ಆಹ್ವಾನಿಸಿದ್ದೇ ಅಜಯ್ ದೇವಗನ್ ಎಂದು ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
'ನಮ್ಮಿಬರ ನಡುವೆ ಅದೆಲ್ಲ ಇಲ್ಲ'
ಧನುಷ್ ನನಗೆ ಒಳ್ಳೆಯ ಸ್ನೇಹಿತ. ಈಗಿನ ವದಂತಿಗಳೆಲ್ಲವೂ ಆಧಾರರಹಿತ ಎಂದು ತಳ್ಳಿಹಾಕಿದ್ದಾರೆ. ಮಾಧ್ಯಮಗಳಲ್ಲಿ ಕೇಳಿಬಂದ ಈ ಸುದ್ದಿ ನೋಡಿ ಜೋಕ್ ಎನಿಸಿತು. ನಮ್ಮ ನಡುವೆ ಯಾವುದೇ ಪ್ರಣಯವಿಲ್ಲ ಎಂದೂ ಮೃಣಾಲ್ ಕ್ಲಾರಿಟಿ ಕೊಟ್ಟಿದ್ದಾರೆ. ಧನುಷ್ ಬಂದಿದ್ದು ಅಜಯ್ ದೇವಗನ್ ಆಹ್ವಾನದ ಮೇರೆಗೆ, ನಾನು ಅವರನ್ನು ಅಲ್ಲಿಗೆ ಕರೆದಿರಲಿಲ್ಲ ಎಂದಿದ್ದಾರೆ.
ಸನ್ ಆಫ್ ಸರ್ದಾರ್ 2 ಪ್ರದರ್ಶನಕ್ಕೂ ಮುನ್ನ ಮೃಣಾಲ್ ಠಾಕೂರ್ ಧನುಷ್ ಅವರ ಮುಂಬರುವ ಚಿತ್ರ ತೇರೆ ಇಷ್ಕ್ ಮೇ ಚಿತ್ರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು. ಅಲ್ಲದೆ ಮೃಣಾಲ್ ಇನ್ಸ್ಟಾಗ್ರಾಮ್ನಲ್ಲಿ ಧನುಷ್ ಸಹೋದರಿಯರನ್ನು ಫಾಲೋ ಮಾಡಲು ಶುರುಮಾಡಿದ ನಂತರವೇ ಈ ಗಾಸಿಪ್ ಖಚಿತ ಪಡಿಸಿದ್ದರು. ನಟಿ ಧನುಷ್ ಅವರ ಕುಟುಂಬಕ್ಕೆ ಹತ್ತಿರವಾಗುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ಸಹೋದರಿಯನ್ನು ಪರಿಚಯ ಮಾಡಿಕೊಳ್ಳುತ್ತಿದ್ದಾರೆ ಎಂದೆಲ್ಲ ಹೇಳಲಾಗಿತ್ತು.
-
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು












Click it and Unblock the Notifications