Get Updates
Get notified of breaking news, exclusive insights, and must-see stories!

ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಜೋಡಿಯಿಂದ ಕರ್ನಾಟಕ ಸೇರಿ ದೇಶದ ಪ್ರಮುಖ ದೇವಸ್ಥಾನಗಳಲ್ಲಿ ಅನ್ನದಾನ ಸೇವೆ

Rashmika Mandanna-Vijay Devarakonda: ದಕ್ಷಿಣ ಭಾರತದ ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರು ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ದೇಶದ ವಿವಿಧ ರಾಜ್ಯಗಳ ಪ್ರಮುಖ ದೇವಾಲಯಗಳಲ್ಲಿ ಅನ್ನದಾನ ಸೇವೆ ನಡೆಸುವ ಮೂಲಕ ಈ ಜೋಡಿ ಸದ್ದಿಲ್ಲದೆ ಪುಣ್ಯದ ಕೆಲಸಕ್ಕೆ ಕೈಹಾಕಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ದೇವಾಲಯಗಳ ಪಟ್ಟಿ ಈಗ ವೈರಲ್ ಆಗುತ್ತಿದ್ದು, ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಈ ಸ್ಟಾರ್ ಜೋಡಿಯ ಅನ್ನದಾನ ಸೇವೆಯು ಕೇವಲ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 16 ಪ್ರಮುಖ ದೇವಾಲಯಗಳಲ್ಲಿ ಈ ಸೇವೆ ನಡೆಯುತ್ತಿದೆ. ಜೊತೆಗೆ ಸಿಹಿ ಹಂಚುವ ಬಗ್ಗೆಯೂ ಮಾಹಿತಿಯನ್ನು ಇಬ್ಬರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Rashmika Mandanna and Vijay Deverakonda Launch Nationwide Annadanam Across 16 Temples After Wedding

ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿ ಅನ್ನದಾನ ಸೇವೆ

* ಬೆಂಗಳೂರಿನ ಶಿವೋಹಂ ದೇವಾಲಯ.
* ಕೊಡಗಿನ ಪಾಡಿ ಇಗ್ಗುತಪ್ಪ ದೇವಾಲಯ.
* ಮೈಸೂರಿನ ಶ್ರೀ ಚಾಮುಂಡೇಶ್ವರಿ ದೇವಾಲಯ.
* ಬೆಂಗಳೂರಿನ ಹರೇ ಕೃಷ್ಣ ಹಿಲ್ಸ್‌ನಲ್ಲಿರುವ ರಾಧಾ ಕೃಷ್ಣ ದೇವಾಲಯ.

ಕರ್ನಾಟಕದ ಹೊರತಾಗಿ ಇತರ ರಾಜ್ಯಗಳಲ್ಲೂ ಅನ್ನದಾನ

* ಉತ್ತರ ಪ್ರದೇಶ: ಶ್ರೀ ಶ್ರೀ ಕೃಷ್ಣ ಬಲರಾಮ್ ಮಂದಿರ (ವೃಂದಾವನ).
* ಅಸ್ಸಾಂ: ಶ್ರೀ ರುಕ್ಮಿಣಿ ದೇವಾಲಯ (ಗುವಾಹಟಿ).
* ಗುಜರಾತ್: ಇಸ್ಕಾನ್ ಶ್ರೀ ಶ್ರೀ ಗೋವಿಂದ ಧಾಮ ದೇವಾಲಯ (ಅಹಮದಾಬಾದ್).
* ಛತ್ತೀಸ್‌ಗಢ: ಶ್ರೀ ಶ್ರೀ ರಾಧಾ ರಾಸ್ ಬಿಹಾರಿ ಜಿ ದೇವಾಲಯ (ರಾಯಪುರ).
* ರಾಜಸ್ಥಾನ: ಗೋವಿಂದ ದೇವ್ ಜಿ ದೇವಾಲಯ (ಜೈಪುರ).
* ತಮಿಳುನಾಡು: ಅರುಲ್ಮಿಗು ಕೊನ್ನಿಯಮ್ಮನ್ ತಿರುಕೋಯಿಲ್ (ಕೊಯಮತ್ತೂರು).
* ತೆಲಂಗಾಣ: ಚಿಂತಪಲ್ಲಿ ಸಾಯಿ ಬಾಬಾ ದೇವಾಲಯ
* ತೆಲಂಗಾಣ: ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಾಲಯ (ಮಹಬೂಬ್‌ನಗರ)
* ತೆಲಂಗಾಣ: ಹರೇ ಕೃಷ್ಣ ದೇವಾಲಯ (ಹೈದರಾಬಾದ್)
* ಆಂಧ್ರಪ್ರದೇಶ: ವಿಶಾಖಪಟ್ಟಣದ ಶ್ರೀ ಕನಕ ಮಹಾಲಕ್ಷ್ಮಿ ದೇವಾಲಯ
* ಆಂಧ್ರಪ್ರದೇಶ: ದ್ವಾರಕಾ ತಿರುಮಲ ದೇವಾಲಯ
* ಆಂಧ್ರಪ್ರದೇಶ: ವಿಜಯವಾಡದ ಕನಕದುರ್ಗ ಕನಕದುರ್ಗ ದೇವಾಲಯ (ವಿಜಯವಾಡ)

ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಐಷಾರಾಮಿ ಜೀವನದ ಮೂಲಕ ಸುದ್ದಿಯಾಗುತ್ತಾರೆ. ಆದರೆ, ಈ ರೀತಿ ಅನ್ನದಾಸೋಹ ಕಾರ್ಯದ ಮೂಲಕ ರಶ್ಮಿಕಾ ಮತ್ತು ವಿಜಯ್ ಮಾದರಿಯಾಗಿದ್ದಾರೆ. "ನಿಮ್ಮ ಆಶೀರ್ವಾದ ಸದಾ ಇರಲಿ" ಎಂಬ ಸಂದೇಶದೊಂದಿಗೆ ಈ ಪಟ್ಟಿಯನ್ನು ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಟೋ ಸಖತ್ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಸಿನಿಮಾ ಕೆಲಸಗಳ ನಡುವೆಯೂ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಳಕಳಿ ತೋರುತ್ತಿರುವ ಈ ಜೋಡಿಯ ನಡೆ ಅನೇಕರಿಗೆ ಸ್ಪೂರ್ತಿಯಾಗಿದೆ.

ಜೊತೆಗೆ ತಮ್ಮ ಮದುವೆಯ ಸಂಭ್ರಮವನ್ನು ದೇಶದಾದ್ಯಂತ ಹಂಚಿಕೊಳ್ಳಲು ನಿರ್ಧರಿಸಿರುವ ಈ ಜೋಡಿ, ಮಾರ್ಚ್ 1ರಂದು ಹಸಿದವರಿಗೆ ಅನ್ನದಾನ ಮಾಡುವ ಮೂಲಕ ಎಲ್ಲರ ಹಾರೈಕೆಯನ್ನು ಕೋರಿದ್ದಾರೆ. "ಭಾರತದಲ್ಲಿ ಯಾವುದೇ ವಿಶೇಷ ಸಂದರ್ಭವನ್ನು ಸಿಹಿ ಮತ್ತು ಆಹಾರದೊಂದಿಗೆ ಆಚರಿಸುವುದು ವಾಡಿಕೆ" ಎಂದು ತಿಳಿಸಿರುವ ಈ ಜೋಡಿ, ಇಂದು ದೇಶಾದ ಹಲವು ಭಾಗಗಳಲ್ಲಿ ಸಿಹಿ ಮತ್ತು ಆಹಾರದ ಟ್ರಕ್‌ಗಳನ್ನು ಕಳುಹಿಸುತ್ತಿರುವುದಾಗಿ ಹೇಳಿದ್ದಾರೆ.

ಎಲ್ಲೆಲ್ಲಿ ಸಹಿ ಹಂಚಿ ಸಂಭ್ರಮ

* ತೆಲಂಗಾಣ: ಹೈದರಾಬಾದ್, ಮೆಹಬೂಬ್‌ನಗರ, ಕಾರಿಂನಗರ
* ದೆಹಲಿ
* ಛತ್ತಿಸ್‌ಘಢ: ನೋಯ್ಡಾ, ಘಾಜಿಯಾಬಾದ್
* ಗುಜರಾತ್: ಅಹಮದಾಬಾದ್
* ಮಧ್ಯಪ್ರದೇಶ: ಭೋಪಾಲ್
* ರಾಜಸ್ಥಾನ್: ಜೈಪುರ್
* ಆಂಧ್ರಪ್ರದೇಶ: ವೈಜಾಗ್, ವಿಜಯವಾಡ, ಪುಟ್ಟಪರ್ತಿ
* ಕೇರಳ: ಕೊಚ್ಚಿ
* ಕರ್ನಾಟಕ: ಮೈಸೂರು, ಕೂರ್ಗ್‌, ಬೆಂಗಳೂರು
* ತಮಿಳುನಾಡು: ಕೋಯಂಬತ್ತೂರು, ಚೆನ್ನೈ, ಪಾಂಡಿಚೆರಿ
* ಬಿಹಾರ್

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ "ನಮ್ಮ ಈ ಪ್ರಯಾಣ ಮತ್ತು ಪ್ರೀತಿಯಲ್ಲಿ ನೀವು ಯಾವಾಗಲೂ ಭಾಗವಾಗಿದ್ದೀರಿ. ಈಗ ನಮ್ಮ ಮದುವೆಯನ್ನು ನಿಮ್ಮೆಲ್ಲರೊಂದಿಗೆ ಆಚರಿಸುತ್ತಿರುವುದು ನಮಗೆ ನಿಜಕ್ಕೂ ಸಂತೋಷ ತಂದಿದೆ" ಎಂದು ವಿಜಯ್ ಮತ್ತು ರಶ್ಮಿಕಾ ಜೋಡಿ ಎಲ್ಲರ ಆಶೀರ್ವಾದವನ್ನು ಕೋರಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+