ಅದು ಟಾಟಾ ಚೆರಿಯೋ, ನೀವು ಅನ್ಕೊಂಡಿದ್ದಲ್ಲ: ರಾಜಾ ರಾಜಾ ಹಾಡಿನ ಲಿರಿಕ್ ಬಗ್ಗೆ ವಿ.ಮನೋಹರ್ ಕ್ಲಾರಿಟಿ
ಕ್ರೇಜಿ ಸ್ಟಾರ್ ವಿ.ರವಿಚಂದ್ರನ್ ಅವರ ಎವರ್ಗ್ರೀನ್ ಸಿನಿಮಾಗಳಲ್ಲಿ "ಪ್ರೀತ್ಸೋದ್ ತಪ್ಪಾ?" ಕೂಡ ಒಂದು. 1998ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ರವಿಚಂದ್ರನ್ ಹಾಗೂ ನಟಿ ಶಿಲ್ಪಾ ಶೆಟ್ಟಿ ಜೋಡಿ ಮೋಡಿ ಮಾಡಿತ್ತು. ಇನ್ನು ಈ ಸಿನಿಮಾ ಹಾಡುಗಳು ಇಂದಿಗೂ ಜನರ ಬಾಯಲ್ಲಿದೆ. ಈ ಸಿನಿಮಾದ ರಾಜಾ ರಾಜಾ ಹಾಡಿಗೆ ಇಂದಿಗೂ ಜನ ರೀಲ್ಸ್ ಮಾಡಿ, ಹುಚ್ಚೆದ್ದು ಕುಣಿಯುತ್ತಾರೆ. ಸಿನಿಮಾ ಹಳೆಯದಾದ್ರೂ ಇದರ ಹಾಡುಗಳಿಗೆ ಇರುವ ಕ್ರೇಜ್ ಬೇರೆ. ಆದರೆ ಇದೇ ಹಾಡಿನ ಸಾಲುಗಳನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ಅಶ್ಲೀಲವಾಗಿ ಟ್ರೋಲ್ ಮಾಡಿದ್ದೂ ಇದೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡಿನ ಸಾಲುಗಳನ್ನು ಕಟ್ ಮಾಡಿ ಬೇರೆ ಬೇರೆ ಅರ್ಥ ಕಲ್ಪಿಸಲಾಗಿತ್ತು. ಆದರೆ ಹಾಡಿನ ನಿಜವಾದ ಸಾಲುಗಳೇನು ಎಂದು ಸಂಗೀತ ನಿರ್ದೇಶಕ ವಿ.ಮನೋಹರ್ ಅವರೇ ಸ್ಪಷ್ಟಪಡಿಸಿದ್ದಾರೆ.
ಪ್ರೀತ್ಸೋದ್ ತಪ್ಪಾ ಈ ಸಿನಿಮಾದ ಎಲ್ಲಾ ಹಾಡುಗಳನ್ನು ಸಂಗೀತ ನಿರ್ದೇಶಕ ಹಂಸಲೇಖ ಅವರೇ ಬರೆದು ಸಂಗೀತ ಸಂಯೋಜಿಸಿದ್ದರು. ರಾಜಾ ರಾಜಾ...ಹೆಂಗಿರಬೇಕು ಗೊತ್ತಾ ನನ್ನ ರಾಜಾ ಹಾಡು ಅಂದ್ರೆ ಇಂದಿನ ಯುವತಿಯರಿಗೂ ಫೆವರೇಟ್ ಆಗಿದೆ. ನಾ ಮೆಚ್ಚೋ ಹುಡುಗ ರಾಜರ ರಾಜ ಎಂದು ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಮತ್ತೊಂದೆಡೆ ಇದೇ ಹಾಡಿನ ಒಂದು ಸಾಲನ್ನು ಕೆಲವರು ಅಶ್ಲೀಲವಾಗಿ ಬಳಸುತ್ತಿದ್ದಾರೆ. ಇದನ್ನು ಕೆಲ ಟ್ರೋಲ್ ಪೇಜ್ಗಳಲ್ಲೂ ಹಾಕಿ ವಿಕೃತಿ ಮೆರೆಯುತ್ತಿದ್ದಾರೆ. ಆದರೆ ಜನ ಟ್ರೋಲ್ ಮಾಡುತ್ತಿರುವಂತೆ ಆ ಲಿರಿಕ್ ಇಲ್ಲ ಎಂದು ವಿ.ಮನೋಹರ್ ಸ್ಪಷ್ಟಪಡಿಸಿದ್ದಾರೆ.

ಶ್ರೀಗಂಧ ಟಿವಿ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮನೋಹರ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ʼಪ್ರೀತ್ಸೋದ್ ತಪ್ಪಾ ಸಿನಿಮಾದ ರಾಜಾ ರಾಜಾ ಹಾಡಿನಲ್ಲಿ "ಕನ್ಯಾಸೆರೆಗೆ ನನ್ನ ಟಾಟಾ ಚೆರಿಯೋ" ಎಂದು ಸಾಲುಗಳಿವೆ. ಟಾಟಾ ಚೆರಿಯೋ ಅಂದ್ರೆ ವಿದಾಯ ಎಂದರ್ಥ. ಆದರೆ ಈ ಸಾಲುಗಳನ್ನ ಕೆಲವರು "*** ತೆರಿಯೋ" ಎಂಬರ್ಥ ಕಲ್ಪಿಸಿಕೊಂಡು ಅಶ್ಲೀಲವಾಗಿ ಬಳಸುತ್ತಿದ್ದಾರೆ. ಟಾಟಾ ಪದಕ್ಕೆ ಬದಲು ಅಶ್ಲೀಲ ಪದ ಕಲ್ಪಿಸಿಕೊಂಡಿದ್ದಾರೆ. ಈ ವಿಚಾರವಾಗಿ ನಾನು ಜಗಳ ಕೂಡ ಆಡಿದ್ದೆʼ ಎಂದಿದ್ದಾರೆ.
'ಟಾಟಾ ಚೆರಿಯೋ ಅನ್ನೋದು ಬ್ರಿಟಿಷರ ಕೊಡುಗೆ. ಬ್ರಿಟಿಷರು ಅದನ್ನು ಆ ಪದ ಬಳಸುತ್ತಿದ್ದರು. ಮೊದಲಿಗೆ ಟಾಟಾ ಚೆರಿಯೋ ಎನ್ನುತ್ತಿದ್ದವರು, ದಿನ ಕಳೆದಂತೆ ಟಾಟಾ ಬೈಬೈ ಅನ್ನಲು ಶುರು ಮಾಡಿದ್ರು. ಆ ಮೇಲೆ ಬೈ ಬೈ, ಈಗ ಬರೀ ಬೈ ಎನ್ನುತ್ತಿದ್ದೀವಿ. ಕಾಲಕ್ರಮೇಣ ಈ ಪದ ಬದಲಾಗುತ್ತಾ ಬಂತು. ಆ ಸಿನಿಮಾ ಸಮಯದಲ್ಲಿ ಹಂಸಲೇಖ ಗುರುಗಳು ಆ ಪದವನ್ನು ಹಾಡಿನಲ್ಲಿ ಬಳಸಿದ್ರು. ಆದರೆ ಕೆಲವರು ಅದನ್ನೇ ಅಶ್ಲೀಲ ಅರ್ಥಕ್ಕೆ ಬದಲಿಸಿಕೊಂಡು ಹೇಳುತ್ತಿದ್ದರು. ಕೆಟ್ಟದಾಗಿ ಪ್ರಚಾರ ಮಾಡಲು ಯತ್ನಿಸಿದ್ದರು, ಆ ವಿಚಾರ ಬರ್ತಾ ಬರ್ತಾ ತಣ್ಣಗಾಯ್ತು' ಎಂದು ಮನೋಹರ್ ಅಸಲಿ ವಿಚಾರ ಬಿಚ್ಚಿಟ್ಟಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications