Kannada Cinema: ಹಾಕಿದ್ದು 75 ಲಕ್ಷ ರೂಪಾಯಿ, ಕನ್ನಡ ಇಂಡಸ್ಟ್ರಿಯಲ್ಲೇ ಇತಿಹಾಸ ನಿರ್ಮಿಸಿದ್ದ ಸಿನಿಮಾ ಇದು!
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಸುಲಭವಾಗಿ 10 ಕೋಟಿ ರೂಪಾಯಿ, 100 ಕೋಟಿ ರೂಪಾಯಿ, 1,000 ಕೋಟಿ ರೂಪಾಯಿ ಹಣ ಗಳಿಸುವ ಸಿನಿಮಾಗಳು ಸಿಗುತ್ತವೆ. ಆದರೆ 20 ವರ್ಷಗಳ ಹಿಂದೆ ಪರಿಸ್ಥಿತಿ ಹೀಗೆ ಇರಲಿಲ್ಲ. ಕನ್ನಡ ಸಿನಿಮಾಗಳು ಹಾಕಿದ ಬಂಡವಾಗಳ ವಾಪಸ್ ಪಡೆಯುವುದೇ ಹರಸಾಹಸ ಎಂಬ ರೀತಿ ಪರಿಸ್ಥಿತಿ ನಿರ್ಮಾಣ ಆಗಿತ್ತು. ಅದರಲ್ಲೂ ಒಂದು ಹಂತದಲ್ಲಿ ಕನ್ನಡ ಸಿನಿಮಾ ಇಂಡಸ್ಟ್ರಿ ಇನ್ನೇನು ಸಂಪೂರ್ಣ ಒದ್ದಾಡುವ ಹಂತಕ್ಕೆ ಬಂದು ನಿಂತಿತ್ತು. ಇಂತಹ ಸಮಯದಲ್ಲೇ ನೋಡಿ ಅದೊಂದು ಸಿನಿಮಾ ಇಡೀ ಇಂಡಸ್ಟ್ರಿಗೆ ಹೊಸ ಉತ್ಸಾಹ & ಹುಮ್ಮಸ್ಸು ನೀಡಿದ್ದು!
ಮುಂಗಾರು ಮಳೆ ಅನ್ನೋ ಸಿನಿಮಾ 2006 ಅಂತ್ಯದಲ್ಲಿ ರಿಲೀಸ್ ಆಗಿ ದೊಡ್ಡ ಸಾಧನೆ ಮಾಡಿಬಿಟ್ಟಿತ್ತು. ಹೌದು ಕನ್ನಡ ಸಿನಿಮಾ ರಂಗದಲ್ಲಿ 'ಮುಂಗಾರು ಮಳೆ' ಸಾಧನೆ ಯಾರು ಎಂದೆಂದಿಗೂ ಮರೆಯಲು ಆಗಲ್ಲ. ಅದರಲ್ಲೂ 90s & 80s ಕಿಡ್ಗಳ ಪಾಲಿಗೆ ಈ ಸಿನಿಮಾ ಎವರ್ಗ್ರೀನ್ ಅನ್ನಬಹುದು. ಒಂದೆರಡು ತಲೆಮಾರು ಈ ಸಿನಿಮಾಗೆ ಮಾರು ಹೋಗಿದ್ದ ದಿನಗಳು ಆಗಿನ ಕಾಲಘಟ್ಟದಲ್ಲಿ ಇದ್ದವು. ಅದರಲ್ಲೂ 'ಮುಂಗಾರು ಮಳೆ' ಸಿನಿಮಾದ ಹಾಡುಗಳು ಇಲ್ಲದೆ ಮದುವೆ, ಗೃಹಪ್ರವೇಶ ಸೇರಿದಂತೆ ಹಬ್ಬ & ಹರಿದಿನಗಳೇ ನಡೆಯುತ್ತಿರಲಿಲ್ಲ ಎಂಬ ಮಾತು ಕೂಡ ಇತ್ತು. ಹಾಗಾದ್ರೆ ಈ ಸಿನಿಮಾ ಗಳಿಸಿದ್ದ ಲಾಭ ಎಷ್ಟು? ಮುಂದೆ ಓದಿ.

75,00,000 ರೂಪಾಯಿ ಬಂಡವಾಳ!
2006ರ ಡಿಸೆಂಬರ್ ತಿಂಗಳಲ್ಲಿ ಕನ್ನಡ ಸಿನಿಮಾ ರಂಗಕ್ಕೆ ದೊಡ್ಡ ತಿರುವು ಸಿಕ್ಕೇಬಿಟ್ಟಿತ್ತು. ಸಾಲು ಸಾಲಾಗಿ ಸೋತು ಹೋದ ಸಿನಿಮಾಗಳು ಬಂದು ಕನ್ನಡ ಸಿನಿಮಾ ಪ್ರೇಕ್ಷಕರನ್ನು ಕೂಡ ಬೇಸರಕ್ಕೆ ತಳ್ಳಿತ್ತು ಅಂದಿನ ವಾತಾವರಣ. ಆಗ ಒಂದೇ ಒಂದು ಸಿನಿಮಾ ಕನ್ನಡ ಸಿನಿ ರಂಗದಲ್ಲಿ ಮಿಂಚಿನ ಸಂಚಲನವನ್ನೇ ಸೃಷ್ಟಿಸಿತ್ತು. ಅಷ್ಟಕ್ಕೂ ಹೊಸಬರ ಸಿನಿಮಾ, ಜಗತ್ತಿನಾದ್ಯಂತ ಕನ್ನಡ ಬಾವುಟ ಹಾರಿಸುವಂತೆ ಮಾಡಿದ್ದೇ ಈ ಮುಂಗಾರು ಮಳೆ ಸಿನಿಮಾದ ಸಾಧನೆ. ಈ ಸಿನಿಮಾಗೆ ಕೇವಲ 75,00,000 ರೂಪಾಯಿ ಅಂದರೆ 75 ಲಕ್ಷ ರೂಪಾಯಿ ಬಂಡವಾಳ ಹಾಕಲಾಗಿತ್ತು. ಹಾಗಾದ್ರೆ ಈ ಸಿನಿಮಾ ಬಾಕ್ಸ್ ಆಫಿಸ್ ಅಖಾಡದಲ್ಲಿ ಗಳಿಸಿದ ಹಣವು ಎಷ್ಟು ಕೋಟಿ ರೂಪಾಯಿ? ಮುಂದೆ ಓದಿ.
ಕನ್ನಡಿಗರ ಎದೆಯಲ್ಲಿ ಮುಂಗಾರು ಮಳೆ!
ಮುಂಗಾರು ಮಳೆ ಮೂಲಕ ಕನ್ನಡ ಸಿನಿ ಪ್ರೇಮಿಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತೆ ದೂದ್ ಪೇಡ ದಿಗಂತ್ ಹತ್ತಿರ ಆಗಿಬಿಟ್ಟರು. ಮುಂಗಾರು ಮಳೆ ಸಿನಿಮಾದಲ್ಲಿ ಭರ್ಜರಿ 7 ಹಾಡು ಇದ್ದವು, ಹಾಗೇ ಅದ್ಧೂರಿಯಾಗಿ ಕ್ಯಾಮೆರಾ ವರ್ಕ್ ಮೂಡಿಬಂದಿತ್ತು. ಪ್ರತಿಯೊಂದು ಹಂತದಲ್ಲೂ ಗೆದ್ದು ಬೀಗಿದ್ದ ಈ ಸಿನಿಮಾ ಇಂದಿಗೆ ಇತಿಹಾಸ ನಿರ್ಮಿಸಿದೆ. ಇನ್ನು ಕೇವಲ 75,00,000 ರೂಪಾಯಿ ಬಂಡವಾಳದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಕೊನೆಗೆ ಬರೋಬ್ಬರಿ 75 ಕೋಟಿ ರೂಪಾಯಿ ಹಣ ಗಳಿಸುವ ಮೂಲಕ ಕನ್ನಡಿಗರ ಎದೆಯಲ್ಲೂ ಅಚ್ಚಳಿಯದೇ ಉಳಿದುಬಿಟ್ಟಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications