Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಮಧು ವೈ.ಎನ್ ಬರಹ
Love Mocktail 3 Row: ಕೃತಿಚೌರ್ಯ ವಿವಾದದ ನಡುವೆ ಸತ್ಯ ಮತ್ತು ನೈತಿಕತೆ ಚರ್ಚೆ: ಬರಹಗಾರ, ಟೆಕ್ಕಿ ಮಧು ವೈ.ಎನ್ ಅವರ ಬರಹ ಇಲ್ಲಿದೆ.
ಲವ್ ಮಾಕ್ಟೇಲ್ ಕತೆ ಕೃತಿಚೌರ್ಯದ ಕಾಂಟ್ರೋವರ್ಸಿಯ ಬಗ್ಗೆ ನೋಡುತ್ತಿದ್ದೆ. ಇದರ ಸತ್ಯಾಸತ್ಯತೆ ಬಗ್ಗೆ ನಾವು ಇಲ್ಲಿ ಕೂತುಕೊಂಡು ಏನನ್ನೂ ತೀರ್ಮಾನ ಹೊರಡಿಸುವುದು ತಪ್ಪಾಗುತ್ತದೆ. ಆದರೆ, ಇಷ್ಟು ಆಗಿದೆಯೆಂದು ಊಹಿಸಬಹುದು.
ಒಬ್ಬ ಸಾಮಾನ್ಯ ಮನುಷ್ಯ ತನಗೆ ಯಾರಿಂದಲೋ ಅನ್ಯಾಯ ಆಗಿದೆ ಅನಿಸಿದಾಗ ಆತ ಮೊದಲು ಯಾರಿಂದ ಅನ್ಯಾಯ ಆಗಿದೆಯೋ ಅಲ್ಲಿಯೇ ನ್ಯಾಯ ಕೇಳುತ್ತಾನೆ. ಅಲ್ಲಿ ತಿರಸ್ಕಾರದ ಪ್ರತಿಕ್ರಿಯೆ ಬಂದಾಗ ಆತ ಬಲಿಷ್ಠನಾಗಿದ್ದಲ್ಲಿ ಸೇಡು, ಪ್ರತೀಕಾರದ ಮನೋಭಾವ ಹೊಂದಿದ್ದಲ್ಲಿ ಒಂದೋ ತಾನೇ ಹೊಡೆದಾಟ ಬಡಿದಾಟದ ಮೂಲಕ ನೇರ ಸಂಘರ್ಷಕ್ಕೆ ಇಳಿಯುತ್ತಾನೆ ಇಲ್ಲವೇ ಕಾನೂನಿನ ಮೊರೆ ಹೋಗುತ್ತಾನೆ. ಎರಡೂ ಅಲ್ಲದವನು ಸುಳ್ಳೇ ಕ್ಷಮಿಸಿಯೋ ಹಲ್ಲು ಕಚ್ಚಿಕೊಂಡೋ ಸುಮ್ಮನಾಗುತ್ತಾನೆ.

ಒಂದೆರಡು ದಿನ ಒಳಗೆ ದುಃಖಿಸಿ ನಂತರ ಕನಿಷ್ಠ ಮಟ್ಟದಲ್ಲಿ ಅದನ್ನು ಜನತಾ ನ್ಯಾಯಾಲಯದಲ್ಲಿ ತೋಡಿಕೊಂಡು ಹಗುರಾಗಲು ಪ್ರಯತ್ನಿಸುತ್ತಾನೆ. ರಾಘವೇಂದ ಅವರು ತಾವು ಕತೆ ಮಾಡಿಕೊಂಡಿದ್ದು ಮತ್ತು ಅದು ಅದ್ಭುತವಾಗಿದ್ದು(ನೆನ್ನಿನ ಸಂದರ್ಶನದಲ್ಲಿ ವಿವರಿಸಿದ್ದಾರೆ) ಈ ಎರಡೂ ಸತ್ಯವೆಂಬುದನ್ನು ಎಲ್ಲರೂ ಒಪ್ಪುತ್ತಾರೆ. ಇವರು ಯಾರಿಂದಲೂ ಕದ್ದ ಆರೋಪ ಇಲ್ಲ ಹಾಗಾಗಿ ಇವರು ಏನನ್ನೂ ಸಾಬೀತುಪಡಿಸಬೇಕಿಲ್ಲ. ಡಾರ್ಲಿಂಗ್ ಕೃಷ್ಣ ಅವರು ಮತ್ತೆ ಮತ್ತೆ ಅದನ್ನು ಗೂಗಲ್ ಕತೆ ಅಂತ ಹಂಗಿಸಿ ಹೀಯಾಳಿಸಿದ್ದು ಶುದ್ಧ ಉಡಾಫೆ ಮತ್ತು ಒಬ್ಬ ಸೃಜನಶೀಲ ವ್ಯಕ್ತಿಯ ಕಡೆಗೆ ಎಸಗಬಹುದಾದ ಕ್ರೌರ್ಯ. ಜೇಮ್ಸ್ ಕ್ಯಾಮರೂನ್ 1912ರಲ್ಲಿ ಟೈಟಾನಿಕ್ ಮುಳುಗಿದ್ದ ಘಟನೆಯನ್ನು ಗೂಗಲ್ ಮಾಡಿಯೋ, ಪುಸ್ತಕ ಓದಿಯೋ ತಿಳಿದುಕೊಂಡೇ ಕತೆ ಮಾಡಿರುವುದು.
ಹಾಗಂತ ಕೃಷ್ಣ ಅವರು ಇವರಿಂದಾನೇ ಎತ್ತಿಕೊಂಡಿದ್ದಾರಾ, ನನಗೆ ಗೊತ್ತಿಲ್ಲ. ಅವರ ರಕ್ಷಣೆಗೆ ಇರುವ ಮುಖ್ಯ ಅಂಶ ಏನೆಂದರೆ ಪಾರ್ಟ್- 2 ಅಂತ್ಯದಲ್ಲಾಗಲೇ ಕಥಾನಾಯಕ ಮಗುವನ್ನು ದತ್ತು ತಗೊಂಡಿದ್ದನಂತೆ. ಇದು ಇಂಟರ್ನೆಟ್ ಯುಗ. ಅವರು ಕತೆಯನ್ನು ಮೊದಲೇ ಸೃಷ್ಟಿಸಿಕೊಂಡಿದ್ದರೆ ಈಗಲೂ ಅದನ್ನು ನಿರೂಪಿಸಬಹುದು. ಗಂಡ - ಹೆಂಡತಿ ಪರಸ್ಪರ ಮೆಸೇಜು, ಈಮೇಲು ಅಥವಾ ಗೂಗಲ್ ಡ್ರೈವಿನಲ್ಲಿ ಫೈಲ್ ಹಿಸ್ಟರಿ.. ಪೂರ್ತಿ ಕತೆಯೇ ಆಗಬೇಕಿಲ್ಲ.. ಒಂದೇ ಒಂದು ಸಾಲು ಚರ್ಚಿಸಿರುವ ದಾಖಲೆ ಸಿಕ್ಕರೂ ಸಾಕು. ಅಲ್ಲಿಗೆ ಒಂದೇ ಅಂಶ ಇಬ್ಬರಿಗೂ ಏಕಕಾಲದಲ್ಲಿ ಹೊಳೆದಿರಲು ಸಾಧ್ಯವೆಂದು ಒಪ್ಪಬಹುದು. ಇದು ಸಾಧ್ಯ, ಯಾಕೆಂದು ಮುಂದೆ ಹೇಳ್ತೇನೆ. ನಾಲ್ಕು ವರ್ಷಗಳಿಂದ ಅಷ್ಟೊಂದು ವರ್ಷನ್ಗಳನ್ನು ಬರೆದಿರುವವರು ಇಬ್ಬರ ಲ್ಯಾಪ್ಟಾಪ್ನಲ್ಲಿ ಎಲ್ಲಿಯಾದರೂ ಹಳೆಯ ಟೈಂ ಸ್ಟ್ಯಾಂಪ್ನ ಕಡತವಾದರೂ ಇದ್ದಿರಬೇಕು.
ಇಂಟರ್ನೆಟ್ ಯುಗದಲ್ಲಿ ಎಲ್ಲರೂ ಒಂದೇ ವೇದಿಕೆಯಲ್ಲಿ ಇರುವುದರಿಂದ, ಒಂದೇ ಬಗೆಯ ಸುದ್ದಿಗಳಿಗೆ, ಚರ್ಚೆಗಳಿಗೆ ಇಂದ್ರಿಯಗಳನ್ನು ತೆರೆದುಕೊಳ್ಳುವುದರಿಂದ ಏಕಕಾಲದಲ್ಲಿ ಒಂದೇ ಸಂಗತಿ ಹಲವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಖಂಡಿತ ಇದೆ. ಇದು ನಮ್ಮೆಲ್ಲರ ಅನುಭವಕ್ಕೂ ಬಂದಿರುತ್ತದೆ. ನನಗೆ ಅನ್ನಿಸಿದ್ದನ್ನೇ ಇನ್ಯಾರೋ ಟೈಪು ಮಾಡಿರುತ್ತಾರೆ. ನಾನು ಯೋಚಿಸಿದ್ದನ್ನೇ ಇನ್ಯಾರೋ ಯೋಚಿಸುತ್ತಿರುತ್ತಾರೆ. ಇದರಲ್ಲಿ ಸಾಕಷ್ಟು ಸೋಷಿಯಲ್ ಮೀಡಿಯಾಗಳ ಅಲ್ಗೋರಿತಂಗಳ ಪ್ರಭಾವ ಇರುತ್ತದೆ. ಒಂದೇ ಬಗೆಯ ಅಭಿರುಚಿಯುಳ್ಳವರಿಗೆ ಒಂದೇ ಬಗೆಯ ವಸ್ತುಗಳನ್ನು ತೋರಿಸುತ್ತಿರುತ್ತವೆ.
ಒಂದು ವೇಳೆ ಕೃಷ್ಣ ಅವರು ಕದ್ದಿಲ್ಲದಿದ್ದರೂ ರಾಘವೇಂದ್ರ ಅವರಿಗೆ ನಷ್ಟವಂತೂ ಆಗಿದೆ. ಅವರು ಇನ್ನೆಂದೂ ಆ ಕತೆಯನ್ನು ಸಿನಿಮಾ ಮಾಡಲಾರರು. ಅದನ್ನು ಕೃಷ್ಣ ಅವರು ಆಗಲೇ ಮಾಡಿಯಾಗಿದೆ. ಎಗೇನ್, ಕೃಷ್ಣ ಅವರು ಕೊಡುತ್ತಿದ್ದ ಕ್ಯಾನ್ಸರ್ ಉದಾಹರಣೆ ಶುದ್ಧ ಉಡಾಫೆ, ತನ್ನ ಸಹೋದ್ಯೋಗಿಗೆ ಮಾಡುವ ಅವಮಾನ.
ತಾನು ನಂಬಿಕೆಯಿಟ್ಟು ಒಬ್ಬ ನಟರಿಗೆ ಹೇಳಿದ ಕತೆ, ಆ ನಟರಿಂದಲೇ ಕೆಲವೇ ವರ್ಷಗಳಲ್ಲಿ ಸಿನಿಮಾ ಆಗಿರುವುದರಿಂದ ರಾಘವೇಂದ್ರ ಅವರ ಆರೋಪಕ್ಕೆ ಬೆಲೆಯಿದೆ. ಅಷ್ಟನ್ನು ನಾವೆಲ್ಲರೂ ಗೌರವಿಸಬೇಕು. ಅವರು ಜನತಾ ನ್ಯಾಯಾಲಯಕ್ಕೆ ಬಂದಿರುವುದರಿಂದ.
ಹಾಗಾದರೆ ಕೃಷ್ಣ ತಪ್ಪು ಮಾಡಿಲ್ಲದಿದ್ದರೆ ಅವರಿಗೆ ಇದರಿಂದ ನಷ್ಟ ಮತ್ತು ಅವಮಾನ ಅಲ್ಲವೇ?: ಅದು ನಿಜ, ಇದಕ್ಕೆ ಸರಿಯಾದ ಮಾರ್ಗ ಮೇಲೆ ಹೇಳಿದ ಹಾಗೆ ಸಾಕ್ಷಿಗಳ ಮೂಲಕ ಆರೋಪ ಮುಕ್ತರಾಗುವುದು ಅಥವಾ ಆರೋಪ ಬಂದಕೂಡಲೇ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು. ಸಾಮಾನ್ಯ ಜನರಾದ ನಾವು ಇಬ್ಬರಿಗೂ ಕಿವಿಯಾಗಬಹುದು, ಸಂತೈಸಬಹುದು, ಧೈರ್ಯ ತುಂಬಬಹುದು, ಕೈಲಾದ ಸಹಾಯ ಮಾಡಬಹುದು, ಮಾಧ್ಯಮಗಳು ಸಮಾನ ವೇದಿಕೆ ಒದಗಿಸಬಹುದು ಹಾಗೂ ತಿಳಿದವರು ಹಿರಿಯರು ಇಬ್ಬರನ್ನೂ ಬಲ್ಲವರು ಸಮನ್ವಯ ಸಾಧಿಸಲು ಪ್ರಯತ್ನಿಸಬಹುದು. ಆದರೆ ಕೆಲವು ಮಾಧ್ಯಮಗಳಿಗೆ ಏನಾಗಿದೆ ? ಇವರ ಸಂದರ್ಶನ ನೋಡಿದ ನಂತರ ಕೃಷ್ಣ ಮತ್ತು ಮಿಲನ ಅವರ ಸಂದರ್ಶನ ಹೋಗಿ ನೋಡಿದೆ. ಕೃಷ್ಣ ಅವರು ಹಾರಿಸಿದ ಜೋಕಿಗೆ ಅಲ್ಲಿದ್ದವರು ಗಹಗಹಿಸಿ ನಗುತ್ತಿದ್ದರು.
ನೋಡಿ ಮತ್ತೊಮ್ಮೆ ಹೇಳ್ತೇನೆ, ಪಾಪ ಕೃಷ್ಣ-ಮಿಲನ ದಂಪತಿಗಳು ನಿರ್ದೋಷಿಗಳೇ ಇದ್ದಿರಬಹುದು ನನಗೆ ಅವರ ಮೇಲೆ ಯಾವುದೇ ಅಭಿಪ್ರಾಯ ಇಲ್ಲ; ಆದರೆ ಸುಂದರವಾದ ಮುಖ ಹೊಂದಿದ್ದಾರೆ ಅಂತನೋ, ಯಶಸ್ಸು ಜೊತೆಗಿದೆ ಅಂತಾನೋ, ಅವರನ್ನು ಹೆಚ್ಚು ತೋರಿಸಿದರೆ ಟಿಆರ್ಪಿ ಜಾಸ್ತಿ ಸಿಗುತ್ತೆ ಅಂತಾನೋ ಹೋಗಿ ಅವರು ಹಾರಿಸಿದ ಜೋಕಿಗೆ ನಕ್ಕಿದ್ದರೆ ನಿಮ್ಮಂತ ಜನ ಜಗತ್ತಿನಲ್ಲಿ ಇನ್ನಿಲ್ಲ. ಇಬ್ಬರು ಪಾರ್ಟಿಗಳು ಮಾನಾವವಮಾನ ಪ್ರಶ್ನೆ ಇಟ್ಟುಕೊಂಡು ಜನತಾ ನ್ಯಾಯಾಲಯದ ಎದುರು ಕೂತಿದ್ದಾಗ ನೀವು ಒಬ್ಬರ ಎದುರು ಮೈಕಿಟ್ಟು ಲಾಯರಿನಂತೆ ಪ್ರಶ್ನೆ ಬೀಸುತ್ತ ಇನ್ನೊಬ್ಬರ ಎದುರು ಕಳ್ಳೆಪುರಿ ಮೇಯುತ್ತ ಗಹಗಹಿಸಿ ನಗುವುದು ಇದೆಯಲ್ಲಾ, ಖಂಡಿತ ಕೂಡದು.
-
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Water: ಅನಂತರಪುರ ಜಿಲ್ಲೆಯ ಬರಡು ಭೂಮಿಯ ಯಶೋಗಾಥೆ: ಜಗದೀಶ್ ಕೊಪ್ಪ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Rashmika Mandanna: ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಕನಸಿನ ಹನಿಮೂನ್: ವಿಶೇಷ ವಿಡಿಯೋ ಹಂಚಿಕೊಂಡ ಜೋಡಿ -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
ಯುಗಾದಿ ಹಬ್ಬ - ಶಿವರಾತ್ರಿಯಂದು ನಾನು ಮಾಂಸ ತಿಂತಿನಿ, ಅದು ನನ್ನಿಷ್ಟ: ಮುಖ್ಯಮಂತ್ರಿ ಸಿದ್ದರಾಮಯ್ಯ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Foundation of IT ಆಯ್ಕೆ ವೈರಲ್: ಭಾಷಾ ಸಮಾನತೆಗೆ ದಕ್ಷಿಣ ಭಾರತೀಯರ ಪ್ರಶ್ನೆ, ನಾರ್ಥಿ ಮಾರ್ಕ್ಸ್ ಕಾರ್ಡ್ Viral Post -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ?












Click it and Unblock the Notifications