Darshan Thoogudeepa: ಕನ್ನಡ ಇಂಡಸ್ಟ್ರಿಯಲ್ಲೇ ದರ್ಶನ್ ತೂಗುದೀಪ್ ಶತದಡ್ಡ: ಲಾಯರ್ ಜಗದೀಶ್...
ದರ್ಶನ್ ತೂಗುದೀಪ್ ಬಳ್ಳಾರಿ ಜೈಲಿಂದ ರಿಲೀಸ್ ಆಗುವುದು ಯಾವಾಗ ಯಾವಾಗ? ಅಂತ 'ಡಿ-ಬಾಸ್' ಫ್ಯಾನ್ಸ್ ಇದೀಗ ಎಲ್ಲಾ ಕಡೆ ಚರ್ಚೆ ಮಾಡುತ್ತಿದ್ದಾರೆ. ಅದರಲ್ಲೂ ದೀಪಾವಳಿ ಹಬ್ಬಕ್ಕೆ ನಟ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿ, ಅಭಿಮಾನಿಗಳ ಜೊತೆಗೆ ಹಬ್ಬ ಮಾಡುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಹೀಗಿದ್ದಾಗಲೇ ಲಾಯರ್ ಜಗದೀಶ್ ಕೂಡ ದರ್ಶನ್ ತೂಗುದೀಪ್ ರಿಲೀಸ್ ಬಗ್ಗೆ ಈಗ ಕರ್ನಾಟಕವೇ ಖುಷಿಪಡುವ ಸುದ್ದಿ ನೀಡಿದ್ದು, ಮತ್ತೊಂದು ಕಡೆ ಕನ್ನಡ ಇಂಡಸ್ಟ್ರಿಯಲ್ಲೇ ದರ್ಶನ್ ತೂಗುದೀಪ್ ಶತದಡ್ಡ...
ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೇಳುವ ಪ್ರಕಾರ 'ಡಿ-ಬಾಸ್' ಎಂಬ ಹೆಸರಲ್ಲೇ ಈಗ ಒಂದು ಕರೆಂಟ್ ಇದೆ. ದರ್ಶನ್ ತೂಗುದೀಪ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ 'ಡಿ-ಬಾಸ್' & 'ಡಿ-ಬಾಸ್' ಅಂತಾನೆ ಕರೆಯುತ್ತಾರೆ. ಈ ಮೂಲಕ ಅತ್ಯಂತ ಪ್ರೀತಿ & ವಿಶ್ವಾಸ ಇಟ್ಟುಕೊಂಡಿದ್ದರು ಕೋಟಿ ಕೋಟಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಆದರೆ ಇಂತಹ ಸಮಯದಲ್ಲೇ ನಟ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಳ್ಳಾರಿ ಜೈಲು ಸೇರಿ ನೋವು ಕೂಡ ಹೆಚ್ಚಾಗಿದೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗುವ ಬಗ್ಗೆ ಖುಷಿ, ಖುಷಿ ಸುದ್ದಿ ಸಿಕ್ಕಿದ್ದು, ಲಾಯರ್ ಜಗದೀಶ್ ಕನ್ನಡ ಇಂಡಸ್ಟ್ರಿಯಲ್ಲೇ ದರ್ಶನ್ ತೂಗುದೀಪ್ ಶತದಡ್ಡ...

ದರ್ಶನ್ ತೂಗುದೀಪ್ ಶತದಡ್ಡ...
ಬಿಗ್ಬಾಸ್ ಮನೆಯಲ್ಲಿ ಲಾಯರ್ ಜಗದೀಶ್ ಅವರು ದೊಡ್ಡ ಸೌಂಡ್ ಮಾಡಿದ್ದರು. ಲಾಯರ್ ಜಗದೀಶ್ ಮತ್ತು ಚೈತ್ರಾ ಕುಂದಾಪುರ ನಡುವೆ ದೊಡ್ಡ ಗಲಾಟೆ ಕೂಡ ಆಗಿತ್ತು. ಹೀಗೆ ಇಬ್ಬರ ನಡುವೆ ಕಿತ್ತಾಟ ನಡೆದ ನಂತರ ಲಾಯರ್ ಜಗದೀಶ್ ಬಿಗ್ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಈ ಸಮಯದಲ್ಲೇ ಖಾಸಗಿ ಸಂದರ್ಶನ ಒಂದರಲ್ಲಿ ಲಾಯರ್ ಜಗದೀಶ್, 'ಡಿ-ಬಾಸ್' ದರ್ಶನ್ ತೂಗುದೀಪ್ ಜೈಲಿನಿಂದ ರಿಲೀಸ್ ಆಗುವ ಬಗ್ಗೆ ಮಾತನಾಡಿದ್ದಾರೆ. ಆದರೆ...
ಎಸಿಪಿ ಚಂದನ್ ಏನು ದೇವ್ರಾ?
ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ತೂಗುದೀಪ್ ಅವರು ಇದೀಗ ಜೈಲಿನಿಂದ ರಿಲೀಸ್ ಆಗುವ ಬಗ್ಗೆ ಮಾತನಾಡುತ್ತಾ ಲಾಯರ್ ಜಗದೀಶ್ ಅವರು, 'ನಮ್ಮ ದರ್ಶನ್ ನಿರಪರಾಧಿನಾ ಬರಬಹುದಾ ಅಂತ ಕೇಳ್ತಾ ಇದ್ದಾರೆ. ನಿರಪರಾಧಿ ಅಂತಾ ಹೇಳುವುದಕ್ಕೆ ಇನ್ನೂ ಸಮಯ ಇದೆ. ಯಾಕಂದ್ರೆ ಚಾರ್ಜ್ಶೀಟ್ ಹಾಕಿಬಿಟ್ಟಿದ್ದಾರೆ. ಆದರೆ ಒಂದಂತು ನಿಜ, ದರ್ಶನ್ ಹೊರಗಡೆ ಬರಬೇಕು. ಆಗಿರುವ ಕೊಲೆ ತಪ್ಪಿಸಲು ಆಗಲ್ಲ, 17 ಜನ ಮಾಡಿದ್ದು ಕೊನೆಯಲ್ಲಿ ಯಾವನ್ ಮಾಡಿದ್ದ ಅಂತಾ ಹೆಂಗೆ ಗೊತ್ತಾಯ್ತು ಎಸಿಪಿ ಚಂದನ್ಗೆ? ಎಸಿಪಿ ಚಂದನ್ ಏನು ದೇವ್ರಾ? ದೇವ್ರಾ? ಕಾಣದ ಕೈಗಳು ಕೆಲಸ ಮಾಡಿದೆ. ಕ್ಯಾಂಪೇನ್ ಮಾಡಿದ ಕಾರಣಕ್ಕೆ ಫಿಕ್ಸ್ ಮಾಡಿರುವ ಸಾಧ್ಯತೆ ಇದೆ ಅಮಾಯಕ ಅಂತಾ ಹೇಳೋದಕ್ಕೆ ಹೋಗಲ್ಲ, ದಡ್ಡ ಅಂತಾ ಹೇಳಬಲ್ಲೆ. ಇಡೀ ಇಂಡಸ್ಟ್ರಿಯಲ್ಲೇ ದಡ್ಡ, ಶತದಡ್ಡ ಅಂದ್ರೆ ತಪ್ಪಾಗಲಾರದು.' ಅಂತಾ ಲಾಯರ್ ಜಗದೀಶ್ ಅವರು ದರ್ಶನ್ ತೂಗುದೀಪ್ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗ್ತಿದೆ.
ಒಟ್ನಲ್ಲಿ ದರ್ಶನ್ ತೂಗುದೀಪ್ ಅವರು ಶೀಘ್ರದಲ್ಲೇ ರಿಲೀಸ್ ಆಗಲಿದ್ದಾರೆ ಎಂಬುದು ಲಾಯರ್ ಜಗದೀಶ್ ಅವರ ಮಾತುಗಳ ಮೂಲಕ ಕನ್ಫರ್ಮ್ ಆಗುತ್ತಿದೆ. ಅದರಲ್ಲೂ ದರ್ಶನ್ ತೂಗುದೀಪ್ ಅವರು ಹಬ್ಬ ಅಂದ್ರೆ ದೀಪಾವಳಿ ಮುಗಿಯುವ ಮೊದಲು ಬಳ್ಳಾರಿ ಜೈಲಿನಿಂದ ರಿಲೀಸ್ ಆಗಬೇಕು ಎಂಬುದೇ ಈಗ ಕೋಟಿ ಕೋಟಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಆಸೆ. ಸೋಮವಾರ ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ ವಿಚಾರಣೆ ಇದ್ದು, ಮುಂದಿನ ಸೋಮವಾರ ಅಂದ್ರೆ ಅಕ್ಟೋಬರ್ 28 ರಂದೇ ಬಳ್ಳಾರಿ ಜೈಲಿನಿಂದ ದರ್ಶನ್ ತೂಗುದೀಪ್ ರಿಲೀಸ್ ಆಗುವ ನಿರೀಕ್ಷೆ & ಸಂಭ್ರಮ ಅಭಿಮಾನಿಗಳಲ್ಲಿ ಈಗ ಮೂಡಿದೆ.
ಎಸಿಪಿ ಚಂದನ್ ಬಗ್ಗೆ ಡಿ-ಬಾಸ್ ಫ್ಯಾನ್ಸ್...
ಬಳ್ಳಾರಿ ಜೈಲಲ್ಲಿ ಪರದಾಡುತ್ತಿರುವ ದರ್ಶನ್ ತೂಗುದೀಪ್ ಅವರು ಜಾಮೀನು ಪಡೆದು, ಅದ್ಧೂರಿಯಾಗಿ ಜೈಲಿನಿಂದ ರಿಲೀಸ್ ಆಗಿ ಬರಲಿದ್ದಾರೆ. ಈ ಮೂಲಕ ಬಳ್ಳಾರಿ ಜೈಲಿಂದ ಬೆಂಗಳೂರು ತನಕ ಹೆಲಿಕಾಪ್ಟರ್ ಮೂಲಕ ದರ್ಶನ್ ತೂಗುದೀಪ್ ಅವ್ರನ್ನ ಕರೆಸಿಕೊಳ್ಳಬೇಕು ಎಂಬ ಆಸೆಯಲ್ಲಿ ಅಭಿಮಾನಿಗಳು ಇದ್ದರು. ಹೀಗಿದ್ದಾಗಲೇ ನಟ ದರ್ಶನ್ ಅವರ ಜಾಮೀನು ಅಂದ್ರೆ ಬೇಲ್ ಅರ್ಜಿ ರಿಜೆಕ್ಟ್ ಆಗಿ ಭಾರಿ ದೊಡ್ಡ ಆಘಾತ ಎದುರಾಗಿತ್ತು. ಇದೇ ಸಮಯದಲ್ಲಿ ಎಸಿಪಿ ಚಂದನ್ ಅವರ ಬಗ್ಗೆ ದರ್ಶನ್ ತೂಗುದೀಪ್ ಅವರ ಫ್ಯಾನ್ಸ್ ಆಕ್ರೋಶ ಹೊರ ಹಾಕುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವಿಡಿಯೋಗಳು ಓಡಾಡ್ತಿವೆ. ಅಲ್ಲದೆ ಬಾಸ್ ಹೊರಗೆ ಬಂದ ಮೇಲೆ ನಾವೇ ನಂಬರ್ 1 ಅಂತಿದ್ದಾರೆ ಫ್ಯಾನ್ಸ್.












Click it and Unblock the Notifications