Aditi Prabhudeva: ನಟಿ ಅದಿತಿ ಪ್ರಭುದೇವ ತಾಳಿ ಹಾಕಿಲ್ಲ, ಪ್ಯಾಂಟ್ ಯಾಕೆ ಹಾಕ್ತಾರೆ ಎಂದಿದ್ದು ಯಾರು?
ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವ ಅವರು ಹಲವು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಯಶಸ್ ಅವರೊಂದಿಗೆ ಮದುವೆಯೂ ಆಗಿ ವೈವಾಹಿಕ ಜೀವನ ಹಾಗೂ ಸಿನಿಜೀವನನ್ನು ಜೊತಯಾಗಿ ತೂಗಿಸಿಕೊಂಡು ಹೋಗುತ್ತಿದ್ದಾರೆ. ಅದಿತಿ ಜೋಡಿಗೆ ಮುದ್ದಾದ ಹೆಣ್ಣು ಮಗು ಇದ್ದು, ಇತ್ತೀಚೆಗೆ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಸಖತ್ ಗ್ರ್ಯಾಂಡ್ ಆಗಿ ಮಾಡಿದ್ದರು. ಇನ್ನು ನಟಿ ಅದಿತಿ ಸಾಂಪ್ರದಾಯಿಕವಾಗಿ ಮದುವೆಯಾಗಿದ್ದು ಗೊತ್ತೇ ಇದೆ. ಸಂಪ್ರದಾಯಗಳ ಮೇಲೆ ಅವರಿಗಿರುವ ಗೌರವವೂ ಎಲ್ಲರ ಕಣ್ಣಮುಂದಿದೆ. ಆದರೆ, ಅದಿತಿ ಮದುವೆಯಾಗಿದ್ರೂ ತಾಳಿ ಹಾಕಲ್ಲ, ಸೀರೆ ಬದಲು ಪ್ಯಾಂಟ್ ಧರಿಸುತ್ತಾರೆ ಎನ್ನುವ ಕಾಮೆಂಟ್ಗಳು ಕೇಳಿಬಂದಿವೆಯಂತೆ. ಈ ಬಗ್ಗೆ ನಟಿ ಅದಿತಿ ಪ್ರಭುದೇವ ಅವರೇ ವೇದಿಕೆಯಲ್ಲಿ ಮಾತನಾಡಿದ್ದಾರೆ.
ಹೌದು, ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅದಿತಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರೋಧಿ ದಿನದ ಕಾರ್ಯಕ್ರಮದಲ್ಲಿ ಅದಿತಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ಜೀವನದಲ್ಲಿ ಜನ ಹೇಗೆ ಇತರರ ಬಗ್ಗೆ ಸದಾ ಮಾತನಾಡುತ್ತಲೇ ಇರುತ್ತಾರೆ ಎಂಬುದರ ಬಗ್ಗೆ ಅದಿತಿ ವಿವರಿಸಿದ್ದಾರೆ. ʼಈಗ ಜನ ಬೇರೆಯವರ ಆಕ್ಷನ್ಗಳ ಬಗ್ಗೆಯೇ ಹೆಚ್ಚಾಗಿ ಮಾತನಾಡುತ್ತಾರೆಯೇ ಹೊರತು, ನಾನೇನು ದಬ್ಬಾಕಿದ್ದೀನಿ, ನಾನು ಏನ್ ಮಾಡ್ತಿದ್ದೀನಿ? ನಾನು ಸರಿ ಇದ್ದೀನಾ? ಅನ್ನೋದು ಮುಖ್ಯ ಆಗುತ್ತೆʼ ಎಂದಿದ್ದಾರೆ.

ʼಇನ್ನು ಕಾಮೆಂಟ್ ಮಾಡೋದು ನಮ್ಮ ಮನೆಯಿಂದಲೇ ಶುರುವಾಗುತ್ತೆ. ನಿನ್ ಕೈಯಲ್ಲಿ ಅದು ಆಗಲ್ಲ, ನಿನ್ ಹಣೆಬರಹ ಇಷ್ಟೇ ಅಂತಾರೆ. ಉದಾಹರಣೆಗೆ ನಾವು ಜೀವನದಲ್ಲಿ ಒಂದು ಕಡೆ ಸುಮ್ಮನೆ ಹೀಗೆ ಕೂತಿರುತ್ತೇವೆ. ಜನ ಅದರ ಬಗ್ಗೆಯೂ ಮಾತನಾಡುತ್ತಾರೆ. ಅವಳು ಯಾಕೆ ಕೂತಿದ್ದಾಳೆ? ಅಲ್ಲಿ ಕೂರಬಾರ್ದಿತ್ತು, ಹೀಗೆ ಕೂರಬೇಕಿತ್ತು, ನಿಂತುಕೊಳ್ಳಬೇಕಿತ್ತು ಎಂದು ಹಲವು ರೀತಿ ಕಾಮೆಂಟ್ ಮಾಡ್ತಾರೆʼ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ʼಅದಿತಿ ಯಾಕೆ ಪ್ಯಾಂಟ್ ಹಾಕ್ಕೊಂಡು ಬಂದಿದ್ದಾರೆ? ಸೀರೆ ಧರಿಸಿ ಬರಬೇಕಿತ್ತು. ಅದಿತಿ ಯಾಕೆ ಮದುವೆಯಾಗಿದ್ರೂ ತಾಳಿ ಹಾಕಿಲ್ಲ? ಅವರು ತಾಳಿ ಹಾಕಬೇಕಿತ್ತು? ಎಂದೂ ಕಾಮೆಂಟ್ ಮಾಡ್ತಾರೆ. ನಮ್ಮ ಸಮಯವನ್ನು ಬೇರೆಯವರ ಉದ್ಧಾರಕ್ಕಾಗಿ ವ್ಯರ್ಥ ಮಾಡಬಾರದು. ನಾನು ನನಗೆ ದೇವರು ಕೊಟ್ಟಿರುವ ಸಮಯವನ್ನ, ಈ ಸುಂದರವಾದ ಬದುಕನ್ನ ಹೇಗೆ ಬಳಸಿಕೊಳ್ಳಬೇಕು? ಎಂದು ಯೋಚನೆ ಮಾಡಬೇಕು. ಎಷ್ಟೋ ಜನ್ಮಗಳು ಆದ ಮೇಲೆ ಮನುಷ್ಯ ಜನ್ಮ ಬರೋದು ಅಂತಾರೆ, ಹಾಗಾಗಿ ನಾವು ತುಂಬಾ ಅದೃಷ್ಟವಂತರು. ಇಂತಹ ಜನ್ಮವನ್ನು ಬೇರೆಯವರ ವಿಷಯಗಳಿಗೆ ಯೋಚನೆ ಮಾಡಿ ಯಾಕೆ ಹಾಳು ಮಾಡಿಕೊಳ್ಳಬೇಕು?ʼ ಎಂದು ಅದಿತಿ ಪ್ರಭುದೇವ ಉದಾಹರಣೆಯೊಂದಿಗೆ ಮಕ್ಕಳಿಗೆ ನೀತಿ ಪಾಠ ಹೇಳಿದ್ದಾರೆ.

ಮೊಬೈಲ್ ಬೆಂಕಿ ಇದ್ದಂಗೆ
ʼಮೊಬೈಲ್ ಅನ್ನೋದು ಬೆಂಕಿ ಇದ್ದಂಗೆ, ಬೆಂಕಿಯಿಂದ ನಾವು ಅನ್ನನೂ ಬೇಯಿಸಿಕೊಳ್ಳಬಹುದು. ಒಂದು ಮನೆಗೆ ಬೆಂಕಿನೂ ಹಚ್ಚಬಹುದು. ಹಾಗಾಗಿ ಮೊಬೈಲ್ನಲ್ಲಿ ನೀವು ಸ್ಕ್ರೋಲ್ ಮಾಡುವಾಗ ಇದು ನಮಗೆ ಎಷ್ಟು ಉಪಯೋಗ ಅನ್ನೋದನ್ನ ಒಮ್ಮೆ ಯೋಚನೆ ಮಾಡಿ. ಇದರಿಂದ ನನ್ನ ಸಾಧನೆಗಳಿಗೆ ಒಳ್ಳೆಯದಾಗುತ್ತಾ? ನನಗೆ ಇದರಿಂದ ನಿಜವಾದ ಖುಷಿ ಸಿಗುತ್ತಾ? ಅನ್ನೋದು ತಿಳಿದುಕೊಳ್ಳಿ. ಕಾಮೆಂಟ್ ಸೆಕ್ಷನ್ನಲ್ಲಿ ಕೆಟ್ಟ ಕಾಮೆಂಟ್ ಮಾಡುವವರ ವ್ಯಕ್ತಿತ್ವ ಕುಂದುತ್ತದೆಯೇ ಹೊರತು, ಕಾಮೆಂಟ್ ಮಾಡಿಸಿಕೊಂಡವರು ಎಲ್ಲೋ ಇರ್ತಾರೆʼ ಎಂದು ಅದಿತಿ ಕಿವಿಮಾತು ಹೇಳಿದ್ದಾರೆ.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications