Darshan Thoogudeepa: ದರ್ಶನ್ ಧಿಮಾಕು ದೌಲತ್ತು ವರ್ಕೌಟ್ ಆಗಲ್ಲ- ವಕೀಲ ಕೆಎನ್ ಜಗದೀಶ್ ಕುಮಾರ್ ಯ್ಯೂಟರ್ನ್
ದರ್ಶನ್ ನಿರಪರಾಧಿ ಎಂದ ವಕೀಲ ಕೆ.ಎನ್. ಜಗದೀಶ್ ಕುಮಾರ್ ಈಗ ಯ್ಯೂಟರ್ನ್ ಹೊಡೆದಿದ್ದಾರೆ. ಹೌದು.... ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಹಂಚಿಕೊಂಡು ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದು ದರ್ಶನ್ ಅಲ್ಲ, ದರ್ಶನ್ ಏಟು ಒಂದೆರಡು ಹೊಡೆದಿರಬಹುದು. ಆದರೆ ದರ್ಶನ್ ಹೊಡೆಯುವ ಮೊದಲೇ ಬಹುತೇಕ ಜೀವ ಹೋಗುವಂತೆ ಹೊಡೆದಿರುವುದು ಆರೋಪಿ ಎ13 ದೀಪಕ್ ಎಂದು ಹೇಳಿದ್ದರು. ಆದರೀಗ ದರ್ಶನ್ ಬಗ್ಗೆ ಆಡಿದ ಮಾತುಗಳು ಬೇರೆಯದ್ದೇ ಆಗಿದೆ.
ಫ್ರೀಡಂ ಪಾರ್ಕ್ನಲ್ಲಿ ದರ್ಶನ್ ಬಗ್ಗೆ ಮಾತನಾಡಿದ ವಕೀಲ ಕೆ.ಎನ್. ಜಗದೀಶ್ ಕುಮಾರ್, 'ಒಬ್ಬ ಖ್ಯಾತ ನಟನಾಗಿ ಬಡವರ ಮಕ್ಕಳನ್ನು ಈ ಕೃತ್ಯಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಬಡವರ ಮಕ್ಕಳಿಗೆ ಜಾಮೀನು ಕೊಡಸಲ್ಲಿಕ್ಕೆ ಆಗಿಲ್ಲ ಇವರ ಕೈಯಲ್ಲಿ. ಇದು ನಟನೆ ಅಲ್ಲ. ನಿಜ ಜೀವನ. ನಿಜ ಜೀವನದಲ್ಲಿ ನಟನೆ ಮಾಡಬಾರದು. ದರ್ಶನ್ ಬದಲಾವಣೆ ಆಗಬೇಕು. ಧಿಮಾಕು ದೌಲತ್ತು ವರ್ಕೌಟ್ ಆಗಲ್ಲ. ಅವರಲ್ಲಿ ಇರುವ ಧಿಮಾಕು ದೌಲತ್ತೇ ಅವರನ್ನು ಜೈಲಿಗೆ ಕರೆದುಕೊಂಡು ಹೋಗಿ ಬಿಟ್ಟಿದೆ' ಎಂದರು.

'ದರ್ಶನ್ ಧಿಮಾಕು ದೌಲತ್ತು ಬಿಡಬೇಕು'
'ನಮ್ಮೊಂದಿಗೆ ಬರೋರು ನ್ಯಾಯುತವಾಗಿ ಇರಲು ಬಂದ್ರೆ ಬನ್ನಿ. ಇಲ್ಲಿಗೆ ಬಂದು ಗಲಾಟೆ ಮಾಡಿದರೆ ಅಂತಹ ಫ್ಯಾನ್ಸ್ಗೆ ಲಾಠಿ ರುಚಿ ತೋರ್ಸಿ ಅಂತ ನಾನು ಪೊಲೀಸರಿಗೆ ಹೇಳಿದ್ದೆ. ಅಂತಹ ಫ್ಯಾನ್ಸ್ ನಮಗೆ ಬೇಡ. ನಮಗೆ ನ್ಯಾಯದ ಪರ ಇರುವ ಹತ್ತು ಜನ ಸಾಕು. ನ್ಯಾಯುತವಾಗಿ ನಡೆಯಬೇಕು. ನಾವು ಕೂಡ ಒಬ್ಬ ಸರಳ ವ್ಯಕ್ತಿಗಳೇ. ನಾವೇನು ಗನ್ಮ್ಯಾನ್ ಕರೆದುಕೊಂಡು ಜನಗಳನ್ನು ಕರೆದುಕೊಂಡು ಬಂದಿಲ್ಲ. ನಮಗೆ ಹಣ ಕೊಟ್ಟು ಜನ ಕರೆದುಕೊಂಡು ಬರೋ ಅವಶ್ಯಕತೆನೂ ಇಲ್ಲ. ಒಂದು ಸಣ್ಣ ಧ್ವನಿ ಹಳ್ಳಿಯಿಂದ ದೆಹಲಿಗೂ ಹೋಗುತ್ತೆ. ಅದೂ ಕೂಡ ಒಂದು ವಾಟ್ಸಾಪ್ ಇಂದ' ಎಂದು ಜಗದೀಶ್ ಹೇಳಿದ್ದಾರೆ.
ಜೈಲಿನಲ್ಲಿ ದರ್ಶನ್ ಫೋಟೋ ತೆಗೆದವರು ಬಿಜೆಪಿ ಅವರು...
ಜೈಲಿನಲ್ಲಿ ದರ್ಶನ್ ಫೋಟೋ ಹಿಡಿದವರು ಯಾರು? ಜೈಲಿನಲ್ಲಿ ದರ್ಶನ್ ಫೋಟೋ ಹಿಡಿದವರು ಯಾರು ಅಂತ ಗೊತ್ತಾಗಬೇಕು. ಒಬ್ಬ ಡಿವೈಎಸ್ಪಿ ಜೈಲಿನಲ್ಲಿರುವ ದರ್ಶನ್ ರಾಜಾತಿಥ್ಯದ ಫೋಟೋ ತೆಗೆದಿದ್ದಾರೆ ಅನ್ನೋ ಮಾಹಿತಿ ನನಗಿದೆ. ಆ ಡಿವೈಎಸ್ಪಿ ಬಿಜೆಪಿ ಕಡೆಯವರು ಎನ್ನಲಾಗುತ್ತದೆ. ದರ್ಶನ್ಗೂ ಬಿಜೆಪಿಗೂ ಏನ್ ಸಂಬಂಧ? ದರ್ಶನ್ ಮೇಲೆ ಬಿಜೆಪಿಯವರಿಗೆ ಯಾಕೆ ದ್ವೇಷ? ಇನ್ನೂ ಮೂರು ದಿನದಲ್ಲಿ ಯಾರು ಫೋಟೋ ತೆಗೆದಿದ್ದು ಅಂತ ಹೇಳಿಲ್ಲಾ ಅಂತಾದರೆ ನಾನೇ ರಿವೀಲ್ ಮಾಡ್ತೀನಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ನಮಗೆ ದರ್ಶನ್ ಫೋಟೋ ತೆಗೆದ ವ್ಯಕ್ತಿ ಬಗ್ಗೆ ಮಾಹಿತಿ ಇದೆ. ಆ ವ್ಯಕ್ತಿ ಬಗ್ಗೆ ಇನ್ನೂ ಮೂರು ದಿನದಲ್ಲಿ ಅವರೇ ಮಾಹಿತಿಯನ್ನ ಹೇಳಿದರೆ ಒಳ್ಳೆಯದು. ಇಲ್ಲಾ ನಾವು ಹೇಳ್ತೀವಿ ಅಂತ ಗಡುವು ನೀಡಿದರು.
ದರ್ಶನ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಜಗಧೀಶ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಬಂಧನವಾಗಿ ನೂರು ದಿನಗಳು ಕಳೆದು ಹೋಗಿವೆ. ಜೈಲಿನಲ್ಲಿರುವ ದರ್ಶನ್ ಬೇಲ್ಗಾಗಿ ಕೋರ್ಟ್ಗೆ ಅರ್ಜಿಯನ್ನೂ ಹಾಕುತ್ತಿದ್ದಾರೆ. ಈ ನಡುವೆ ದರ್ಶನ್ ಬಿಡುಗಡೆಗೆ ಆಗ್ರಹಿಸಿ ವಕೀಲ ಜಗದೀಶ್ ಕುಮಾರ್ ನೇತೃತ್ವದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿತ್ತು.
ಸೆಪ್ಟೆಂಬರ್ 23ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ಮಾಡಿದ ಅವರು ಹಾಗೂ ದರ್ಶನ್ ಅಭಿಮಾನಿಗಳು ದರ್ಶನ್ಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು. ಜೊತೆಗೆ ರೇಣುಕಾಸ್ವಾಮಿ ಕೊಲೆಯಲ್ಲಿ ರಾಜಕಾರಣಿಯೊಬ್ಬರ ಪ್ರಮುಖ ಪಾತ್ರವಿದೆ. ದರ್ಶನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಅಂತ ಆರೋಪಿಸಿದರು. ಹೀಗಾಗಿ ಜೈಲಿನಲ್ಲಿರುವ ದರ್ಶನ್ ಫೋಟೋ ತೆಗೆದವರು ಯಾರು? ಆ ವ್ಯಕ್ತಿಯ ಬಗ್ಗೆ ಮಾಹಿತಿ ಹಂಚಿಕೊಳ್ಳಬೇಕು. ಆ ವ್ಯಕ್ತಿಯ ಹಿನ್ನೆಲೆಯನ್ನು ನೀಡಬೇಕು. ಆ ವ್ಯಕ್ತಿಯ ಬಗ್ಗೆ ನಮಗೂ ಮಾಹಿತಿ ಇದೆ. ನೀವು ಮಾಹಿತಿ ನೀಡಿಲ್ಲ ಅಂತಾದರೆ ನಾವು ಆ ವ್ಯಕ್ತಿ ಬಗ್ಗೆ ವಿವರ ಹಂಚಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
-
Dr Rajkumar: ನಟ ಸಾರ್ವಭೌಮ, ಕನ್ನಡಿಗರ ಕಣ್ಮಣಿ ಡಾ. ರಾಜ್ ಕುಮಾರ್ ಬಗ್ಗೆ ಯಾರು ಏನಂದ್ರು, ಇಲ್ಲಿದೆ ವಿವರ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ












Click it and Unblock the Notifications