ಮಗು ಮುದ್ದೆ ತರ ಹೊರ ಬಂತು: ಅಬಾಷನ್ ಬಗ್ಗೆ ಓಪನ್ ಆಗಿ ಮಾತನಾಡಿದ ನಟಿ
ನಗಿಸುವವರ ಹಿಂದೆ ನೋವಿರುತ್ತದೆ ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ ಎಂದು ಅನೇಕರು ಪದೇ ಪದೇ ಹೇಳುತ್ತಾರೆ. ತೆರೆ ಮೇಲೆ ಎಲ್ಲರನ್ನು ನಗಿಸುವ ನಟಿಯೊಬ್ಬರ ಜೀವನದಲ್ಲಿ ನಡೆದ ಕಹಿ ಘಟನೆ, ನಟಿ ಎನ್ನುವುದಕ್ಕಿಂತೂ ಒಂದು ಹೆಣ್ಣಿನ ಜೀವನದಲ್ಲಿ ನಡೆದ ಕಹಿ ಘಟನೆಯ ಬಗ್ಗೆ ಈ ಸುದ್ದಿಯಲ್ಲಿ ವಿವರಿಸಲಾಗಿದೆ. ಈ ಸುದ್ದಿ ಓದುತ್ತಾ ನಮ್ಮನೆಲ್ಲಾ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವ ಈಕೆ ಜೀವನದಲ್ಲಿ ಇಷ್ಟೆಲ್ಲಾ ನೋವಿದೆಯಾ ಅಂತಾ ನಿಮಗೆ ಅನಿಸುವುದು ಸಹಜ
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟಿ ನಯನಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಪಟಪಟ ಮಾತು..ನಕ್ಕು ನಗಿಸುವ ಪಂಚ್ ಡೈಲಾಗ್ಗಳು, ನಗು ಮುಖ..ನೋಡಿದ ಎಂತವರಾದರೂ ಎಷ್ಟು ಚಂದದ ಲವಲವಕೆಯ ಜೀವನ ಎಂದುಕೊಳ್ಳುವಂತೆ ನಯನಾ ತೆರೆ ಮೇಲೆ ಕಾಣಿಸಿಕೊಳ್ಳುತ್ತಾರೆ. ಆದರೆ ಆಕೆಯ ಜೀವನದಲ್ಲಿ ಎಂದೂ ಮರೆಯದ ಕಹಿ ಘಟನೆಗಳು ನಡೆದಿದ್ದು, ಕೇಳಿದರೆ ಖಂಡಿತಾ ಕಣ್ಣೀರಾಗುತ್ತೇವೆ.

ತಮ್ಮ ಜೀವನದಲ್ಲಿ ನಡೆದ ಆ ಘಟನೆಯ ಬಗ್ಗೆ ಸ್ವತಃ ನಯನ ಇತ್ತೀಚಿಗೆ ನಡೆದ ಸಂದರ್ಶವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. "ನಾನು ೨೨ ವರ್ಷ ಇರುವಾಗಲೇ ಮದುವೆಯಾದೆ. ಜೀವನದಲ್ಲಿ ಎಲ್ಲಾ ಚೆನ್ನಾಗೆ ಇತ್ತು. ಒಳ್ಳೆ ಆಫರ್ಗಳು ಬರುತ್ತಿದ್ದವು. ಶರತ್ ಅವರು ನನಗೆ ತುಂಬಾ ಸಪೋರ್ಟ್ ಆಗಿ ನಿಂತುಕೊಂಡಿದ್ದರು. ಹೀಗಾಗಿ ಒಂದು ಸಮಯದಲ್ಲಿ ನಾವು ಒಂದು ಮಗು ಮಾಡಿಕೊಳ್ಳೋಣ ಎಂದ ತಕ್ಷಣ ಕೊರೊನಾ ಶುರುವಾಯ್ತು. ನಾವು ಉಳಿಸಿದ್ದೆಲ್ಲಾ, ಕೊರೊನಾದಲ್ಲಿ ಖರ್ಚಾಯ್ತು. ಆಮೇಲೆ ನನಗೂ ಕೊರೊನಾ ಬಂತು.
ಇದೇ ಸಮಯದಲ್ಲಿ ನಾನು ಗರ್ಭಿಣಿಯಾದೆ. ಎರಡು ತಿಂಗಳು ಇರುವಾಗ ಆರೋಗ್ಯ ಬೇರೆ ಹದಗೆಟ್ಟಿತ್ತು. ನನಗಿರುವ ಸಮಸ್ಯೆಗಳು ಮಗುಗೆ ಬರಬಹುದು ಎಂದರು ಹೀಗಾಗಿ ಆ ಮಗುವನ್ನು ತೆಗೆಸಬೇಕಾಗಿ ಬಂತು. ಗಟ್ಟಿ ಮನಸ್ಸು ಮಾಡಿ ಆ ಮಗುವನ್ನು ತೆಗೆದರು. ಆಸ್ಪತ್ರೆಯಿಂದ ಮನೆಗೆ ಹೋಗೋದೆ ದೊಡ್ಡ ಟಾಸ್ಕ್ ಆಗಿತ್ತು. ಕೊರೊನಾ ಬೇರೆ ಬಂದಿತ್ತು ಎಂದು ತಮ್ಮ ಮೊದಲ ಮಗು ಕಳೆದುಕೊಂಡ ಘಟನೆ ವಿವರಿಸಿದರು.
ಕೊರೊನಾ ಮುಗಿಯುವಷ್ಟರಲ್ಲಿ ಮತ್ತೆ ಜಿರೋಯಿಂದ ಶುರು ಮಾಡಬೇಕಾಯಿತು. ಮತ್ತೆ ಜೀವನವನ್ನು ಒಂದು ಹಂತಕ್ಕೆ ತರುವಷ್ಟರಲ್ಲಿ ಸಾಕಾಗಿ ಹೋಯ್ತು. ಆಮೇಲೆ ಮತ್ತೆ ಮಗು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದೆವು. ನನ್ನ ಸುತ್ತ ಇರುವ ಫ್ರೆಂಡ್ಸ್ ಗರ್ಭಿಣಿ ಜೀವನದ ಬಗ್ಗೆ ಹೇಳೋರು. ನಾನು ಪ್ರೆಂಗ್ನೆಟ್ ಆದ ಏನು ಏನು ಕೇಳಬೇಕು ಅಂತಾ ಬುಕ್ ಅಲ್ಲಿ ಬರೆದುಕೊಂಡಿಟ್ಟಿದ್ದೆ. ಆದರೆ ಆ ಸಮಯದಲ್ಲಿ ಎಲ್ಲವೂ ಬದಲಾಯ್ತು..ಕೆಲವರ ಮುಖ ಬಯಲಾಯ್ತು.
ನಾನು ಯಾರಿಗೆ ಮುಖ್ಯ ಅಂತಾ ತಿಳಿದುಕೊಂಡೆ. ಜೀವನ ಅಂದ್ರೆ ಇದು ಅಂತಾ ತಿಳಿದುಕೊಂಡೇ. ತುಂಬಾ ಆಲೋಚನೆಗಳು ಕಾಡುತ್ತಿದ್ದವು. ಆ ಸಮಯದಲ್ಲಿ ನನಗೆ ಹೆಲ್ತ್ ಸಮಸ್ಯೆ ಇತ್ತು. ಎರಡನೇ ಮಗು ನನಗೆ ಗೊತ್ತಿಲ್ಲದೇ ಹೋಗಿಬಿಡ್ತು. ಇಷ್ಟು ಮುದ್ದೆ ತರ ಬಂದು ಬಿಡ್ತು ಮಗು. ಅದನ್ನು ನೋಡಿ ಜೋರಾಗಿ ಕಿರುಚಿಕೊಂಡೆ. ಅದನ್ನು ನೆನಪು ಮಾಡಿಕೊಳ್ಳೋಕು ನನಗೆ ಇಷ್ಟ ಇಲ್ಲ. ಆಗ ನಮ್ಮ ಅಜ್ಜಿ ಬಂದು ನೀರು ಹಾಕಿ. ಏನು ಆಗಿಲ್ಲ ಅಂತಾ ಸಮಾಧಾನ ಮಾಡಿದರು ಎಂದು ತಮ್ಮ ಒಳಗಿನ ನೋವನ್ನು ಹಂಚಿಕೊಂಡರು.
ಮಾತು ಮುಂದುವರಿಸಿದ ನಟಿ ನಯನಾ ನನ್ನ ಮಗಳು ನನ್ನ ಜೀವನದಲ್ಲಿ ಬರಬೇಕು ಎಂದರೆ ಖಂಡಿತಾ ಅದು ಭಗವಂತನ ಆಶೀರ್ವಾದ. ಯಾಕೆಂದರೆ ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ಮಾತ್ರೆಗಳನ್ನು ತೆಗೆದುಕೊಂಡಿದ್ದೆ. ಆದರೆ ಯುಗಾದಿ ಹಬ್ಬದ ದಿನ ನನಗೆ ಸುಸ್ತಾಯ್ತು. ಕಿಟ್ ತೆಗೆದುಕೊಂಡು ಟೆಸ್ಟ್ ಮಾಡಿದಾಗ ಗರ್ಭಿಣಿ ಎಂದು ಗೊತ್ತಾಯ್ತು" ಎಂದು ತಮ್ಮ ಜೀವನದಲ್ಲಿ ನಡೆಸ ಅತಿ ಸುಂದರವಾದ ಕ್ಷಣವನ್ನು ಮೆಲುಕು ಹಾಕಿದ್ದಾರೆ.
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications