Gauthami Jadav: ಮಂಜಣ್ಣ-ಗೌತಮಿ ನಡುವೆ ಗೆಳೆತನಕ್ಕೂ ಮೀರಿದ ಬಾಂಧವ್ಯ ಇದ್ಯಾ?
ಬಿಗ್ ಬಾಸ್ ಕನ್ನಡ ಸೀಜನ್ 11 ಅಂತಿಮ ದಿನಗಳತ್ತ ಸಾಗುತ್ತಿದೆ. ಗ್ರ್ಯಾಂಡ್ ಫಿನಾಲೆಗೆ ಇನ್ನೆರಡು ವಾರ ಬಾಕಿ ಇರುವಾಗಲೇ ಕಳೆದ ವಾರದ ವೀಕೆಂಡ್ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಸಂದರ್ಶನಗಳಲ್ಲಿ ಬ್ಯೂಸಿಯಾಗಿರುವ ಚೈತ್ರಾ ಕುಂದಾಪುರ ಮನೆಯೊಳಗಿರುವ ಇತರ ಸ್ಪರ್ಧಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಫಿಲ್ಮೀ ಬಿಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯೊಳಗೆ ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಗೆಳತನದ ಬಗ್ಗೆ ಮಾತನಾಡಿದ್ದಾರೆ. 'ಮಂಜಣ್ಣ ಮನೆಯವರಿಗೆ ಮಾತು ಕೊಟ್ಟಿರುವುದು ನನಗೆ ವೀಕೆಂಡ್ ಸಂಚಿಕೆಯಲ್ಲಿ ಗೊತ್ತಾಗಿದ್ದು. ದೂರ ಇರಲು ಇಬ್ಬರು ಕಡೆಯಿಂದಲೂ ಪ್ರಯತ್ನ ಆಗಿದೆ. ಆದರೆ ಎಲ್ಲೋ ಒಂದು ಕಡೆ ಒಂದೇ ಬಾರಿಗೆ ಕಡಿದುಕೊಳ್ಳಲಾಗದ ಬಾಂಧವ್ಯ ಅದಾಗಿತ್ತು. ಆಟ ಅಂತಾ ಬಂದಾಗ ಅನಿವಾರ್ಯವಾಗಿ ಒಂದೇ ತಂಡದಲ್ಲಿ ಆಡಬೇಕಾದ ಪರಿಸ್ಥಿತಿ ಬಂತು ಎಂದು ಮಂಜಣ್ಣ ಹೇಳಿದರು. ಆದರೆ ಅದು ಅನಿವಾರ್ಯ ಅಂತಾ ನಮಗೆ ಅನಿಸಲಿಲ್ಲ'.

'ಅದರಿಂದ ಆಚೆಗೆ ಅವರು ಆಟ ಆಡುವಾಗ ತೆಗೆದುಕೊಂಡ ನಿಲುವುಗಳನ್ನು ನೋಡಿದಾಗ ಜೊತೆಗೆ ಗೌತಮಿಗೆ ಪೆಟ್ಟಾದಾಗ ಕೊಟ್ಟಿರುವ ಪ್ರತಿಕ್ರಿಯೆಗಳನ್ನು ನೋಡಿದಾಗ ಅಷ್ಟು ಸುಲಭಕ್ಕೆ, ಯಾರಿಗೋ ಕೊಟ್ಟಿರುವ ಮಾತಿಗೆ ಮುರಿದು ಬೀಳಬಹುದಾದ ಬಾಂಧವ್ಯ ಅದಾಗಿರಲಿಲ್ಲ ಅಂತಾ ನನಗೆ ಅನಿಸುತ್ತದೆ' ಎಂದರು.
ಗೆಳೆಯ-ಗೆಳತಿ ಎನ್ನುವ ಬಾಂಧವ್ಯಕ್ಕೂ ಮೀರಿದ ಬಂಧ ಅವರ ಮಧ್ಯೆ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಚೈತ್ರಾ ಕುಂದಾಪುರ, 'ಅದರ ಬಗ್ಗೆ ನನಗೂ ಸ್ಪಷ್ಟನೆ ಇಲ್ಲ' ಎಂದು ಹೇಳಿದ್ದಾರೆ. ಮಾತು ಮುಂದುವರಿಸಿದ ಅವರು, 'ಅವರಿಬ್ಬರ ಹತ್ತಿರದ ಸರ್ಕಲ್ನಲ್ಲಿ ನಾನು ಇರಲಿಲ್ಲ. ಗೌತಮಿ, ಮಂಜಣ್ಣ ಅವರನ್ನು ಕಂಟ್ರೋಲ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಬಿಗ್ ಬಾಸ್ ಮನೆಯಲ್ಲೂ ಕೇಳಿ ಬಂದಿತ್ತು. ಮಂಜಣ್ಣನೇ ಆ ಸಲುಗೆ ಜಾಸ್ತಿ ಕೊಟ್ಟಿದ್ದು ಅಂತಾ ನನಗೆ ಅನಿಸುತ್ತದೆ' ಎಂದರು.
'ಮನುಷ್ಯನಿಗೆ ಸ್ವಂತ ಬುದ್ಧಿ ಅಂತಾ ಇದ್ದೇ ಇರುತ್ತದೆ. ನಿಮ್ಮ ಆಯ್ಕೆಗಳನ್ನು ಬೇರೆಯವರಿಗೆ ಕೊಡಬೇಕಾದ ಅವಶ್ಯಕತೆನೇ ಇಲ್ಲ. ನೀವು ಬೇರೆಯವರಿಗೆ ಅವಲಂಬಿತರಾದರೆ ಅದು ನಿಮ್ಮದೇ ತಪ್ಪು. ನಿಮ್ಮ ಆಟ ಹಾಳಾಗುತ್ತದೆ ಅಂತಾ ಗೊತ್ತಿದ್ದರೂ ಹಾಗೇ ಇರುವುದು ಅದು ನಿಮ್ಮ ತಪ್ಪು. ಅದು ನಿಮ್ಮದೇ ಆಯ್ಕೆ. ಅದಕ್ಕೆ ಇನ್ನೊಬ್ಬರನ್ನು ದೂಷಿಶಿಸಿ ಪ್ರಯೋಜನ ಇಲ್ಲ' ಎಂದು ಹೇಳಿದರು.

'ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ಸಂಬಂಧಗಳನ್ನು ಮುರಿದು ಬರಲು ಒಂದು ಧೈರ್ಯ ಬೇಕು. ಬಹುತೇಕರು ಅಂತಹ ಧೈರ್ಯವನ್ನು ಪಾಲನೆ ಮಾಡುವುದಿಲ್ಲ. ನನಗೆ ಮೊದಲು ತ್ರಿವಿಕ್ರಮ್ ಅಣ್ಣನ ಜೊತೆ ಆತ್ಮೀಯತೆ ಇತ್ತು. ಒಂದು ಜಗಳ ಆಯ್ತು ಆಗ ನಾನು ಕೂಡಲೇ ಅದರಿಂದ ಹೊರ ಬರುತ್ತೇನೆ. ಶಿಶಿರ್ ಅಣ್ಣನ ಜೊತೆಗೂ ಹೀಗೆ ಆಯ್ತು. ಯಾರನ್ನೂ ಅಂಟಿಸಿಕೊಳ್ಳದ ಹಾಗೇ ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವುದು ಬಹಳ ಕಷ್ಟದ ಕೆಲಸ. ಬಿಗ್ ಬಾಸ್ ಮನೆಯಲ್ಲಿ ಇದು ಅನಿವಾರ್ಯದ ಕೆಲಸ. ಇದನ್ನು ಮಂಜಣ್ಣ ಮತ್ತು ಗೌತಮಿ ಮಾಡಬೇಕಾಗಿತ್ತು' ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
-
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್












Click it and Unblock the Notifications