3 ವರ್ಷ ಎಲ್ಲೂ ನಟಿಸಬಾರದು ಅಂತ ಲೆಟರ್ ಕಳಿಸಿದ್ರು: ಬಿಗ್ಬಾಸ್ಗೆ ಹೋದಾಗ ಶಿಶಿರ್ಗೆ ಆಗಿದ್ದೇನು?
ಬಿಗ್ಬಾಸ್ ಕನ್ನಡ ಸೀಸನ್-11ರ (Bigg Boss Kannada) ಸ್ಪರ್ಧಿಗಳಲ್ಲಿ ಶಿಶಿರ್ ಶಾಸ್ತ್ರಿ (Shishir Shastry) ಕೂಡ ಗಮನ ಸೆಳೆದಿದ್ದರು. ಕಿರುತೆರೆಯಲ್ಲಿ ಮಿಂಚಿದ್ದ ಶಿಶಿರ್ ಅವರಿಗೆ ಬಿಗ್ಬಾಸ್ನಲ್ಲಿ ಅವಕಾಶ ಸಿಕ್ಕಿತ್ತು. ರಿಯಾಲಿಟಿ ಶೋನಲ್ಲಿ ಶಿಶಿರ್ ತಮ್ಮ ಪ್ರತಿಭೆ ಮೂಲಕ ಗುರುತಿಸಿಕೊಂಡಿದ್ದರು. ಎಲ್ಲರೂ ಬಿಗ್ಬಾಸ್ಗೆ ಅವಕಾಶ ಸಿಕ್ಕಾಗ ಫುಲ್ ಖುಷಿಯಲ್ಲಿರುತ್ತಾರೆ. ಆದರೆ ಶಿಶಿರ್ ಬಿಗ್ಬಾಸ್ನಲ್ಲಿ ಅವಕಾಶ ಸಿಕ್ಕ ಮೇಲೆ ಹಲವು ಸಮಸ್ಯೆಗಳನ್ನು ಎದುರಿಸಿದ್ದಾಗಿ ಬಹಿರಂಗಪಡಿಸಿದ್ದಾರೆ. 'ಆ ಸಮಯದಲ್ಲಿ ನನಗೆ ಮಾನಸಿಕ ಕಿರುಕುಳ ನೀಡಿದ್ರು, ಅದರಿಂದ ಹೊರಬರಲು ನನಗೆ ಸಾಕಷ್ಟು ಸಮಯ ಬೇಕಾಯ್ತು' ಎಂದು ಶಿಶಿರ್ ಬೇಸರದ ಮಾತುಗಳನ್ನಾಡಿದ್ದಾರೆ.
ಶಿಶಿರ್ ಬಿಗ್ಬಾಸ್ನಲ್ಲಿ ಸದಾ ನಗುತ್ತಾ ಕಾಣಿಸಿಕೊಂಡಿದ್ದರು. ಇದೇ ಸಮಯದಲ್ಲಿ ಅವರು ಮೂರು ವರ್ಷಗಳ ಕಾಲ ಯಾವ ಭಾಷೆಯಲ್ಲೂ ನಟಿಸಬಾರದು ಎಂದು ಷರತ್ತು ಹಾಕಲಾಗಿತ್ತು ಎಂದು ಶಿಶಿರ್ ಹೇಳಿಕೊಂಡಿದ್ದಾರೆ. 'ಬಿಗ್ಬಾಸ್ ನಂತರ ನಾನು ಒಂದಷ್ಟು ಏಳುಬೀಳುಗಳನ್ನ ನೋಡಬೇಕಾಯಿತು. ವೈಯಕ್ತಿಕ ಕಾರಣಗಳಿಂದಲೂ ಕೆಲ ಘಟನೆಗಳು ನಡೆದವು. ಅದನ್ನು ಹೇಳೋಕೆ ಇಷ್ಟವಿಲ್ಲ. ಆದರೆ ವೃತ್ತಿ ಜೀವನದಲ್ಲೂ ತುಂಬಾ ಸಮಸ್ಯೆಗಳನ್ನ ಎದುರಿಸಬೇಕಾಯ್ತು' ಎಂದಿದ್ದಾರೆ.

'ಬಿಗ್ಬಾಸ್ಗೆ ಹೋಗುವ ಸಮಯದಲ್ಲಿ ನಾನು ತೆಲುಗು ಪ್ರಾಜೆಕ್ಟ್ನಲ್ಲಿದ್ದೆ. ಅವರಿಗೆ ತೊಂದರೆ ಆಯ್ತು ಎಂಬ ಕಾರಣಕ್ಕೆ ಈ ರೀತಿ ಮಾಡಿದ್ರೋ ಗೊತ್ತಿಲ್ಲ. ಆದರೆ ನಾನು ಅವರಿಗೆ ತೊಂದರೆ ಮಾಡಲಿಲ್ಲ. ಬಿಗ್ಬಾಸ್ಗೆ ಹೋಗುವ ವಿಚಾರವನ್ನು ಮೂರು ತಿಂಗಳ ಹಿಂದೆಯೇ ತಿಳಿಸಿದ್ದೆ. ಎಲ್ಲವನ್ನೂ ತಿಳಿಸಿ, ಅಲ್ಲಿನ ಪ್ರಾಜೆಕ್ಟ್ನ ಕ್ಲೈಮ್ಯಾಕ್ಸ್ ಶೂಟ್ ಕೂಡ ಮುಗಿಸಿಯೇ ಬಂದಿದ್ದೆ' ಎಂದು ವಿವರಿಸಿದ್ದಾರೆ.
'ಆದರೂ ತೆಲುಗು ಇಂಡಸ್ಟ್ರಿಯವರು ನಾನು ಬೇರೆ ಯಾವುದೇ ಪ್ರಾಜೆಕ್ಟ್ ಮಾಡಬಾರದು ಅಂತ ಲೆಟರ್ ಕಳಿಸಿದ್ರು. ಈ ವಿಚಾರದಲ್ಲಿ ಮಾನಸಿಕವಾಗಿ ನನಗೆ ತುಂಬಾ ನೋವು ಕೊಟ್ಟರು. ನನ್ನ ಭಾಷೆಯಾದ ಕನ್ನಡದಲ್ಲೂ ಮೂರು ವರ್ಷ ಯಾವುದೇ ಪ್ರಾಜೆಕ್ಟ್ ಮಾಡಬಾರದು ಎಂದಿದ್ರು. ತೆಲುಗು ಮಾತ್ರವಲ್ಲ, ಇಡೀ ದಕ್ಷಿಣ ಭಾರತದ ಯಾವ ಭಾಷೆಯಲ್ಲೂ ನಾನು ನಟಿಸಬಾರದು ಎಂದು ಕಂಡೀಷನ್ ಹಾಕಿದ್ರು' ಎಂದು ಶಿಶಿರ್ ತಿಳಿಸಿದ್ದಾರೆ.
'ಮೂರು ವರ್ಷ ಹೊಟ್ಟೆಪಾಡಿಗೆ ಏನ್ ಮಾಡ್ಬೇಕು?'
'ಸೆಪ್ಟೆಂಬರ್ನಲ್ಲಿ ನಾನು ಬಿಗ್ಬಾಸ್ ಮನೆಗೆ ಹೋಗಿದ್ದೆ. ಅವರು ಅಕ್ಟೋಬರ್ನಲ್ಲಿ ಲೆಟರ್ ಕಳಿಸಿದ್ದರು. ಇವನು ಎಲ್ಲೂ ಪ್ರಾಜೆಕ್ಟ್ ಮಾಡಬಾರದು, ಯಾವ ಭಾಷೆಯಲ್ಲೂ ಕೆಲಸ ಮಾಡಂಗಿಲ್ಲ ಅಂತ ಅದರಲ್ಲಿತ್ತು. ನಮ್ಮ ಅಪ್ಪ ಅಮ್ಮನಿಗೆ ನಾನೊಬ್ಬನೇ ಮಗ. ಕುಟುಂಬಕ್ಕಾಗಿ ದುಡಿಯುವವನೂ ನಾನೇ, ಮೂರು ವರ್ಷ ನಾನು ಯಾವುದೇ ಕೆಲಸ ಮಾಡಬಾರದು ಅಂದ್ರೆ ಹೇಗೆ?' ಎಂದು ಬೇಸರ ಹೊರಹಾಕಿದ್ದಾರೆ.
'ಬಿಗ್ಬಾಸ್ ನನಗೆ ಹನ್ನೊಂದು ವಾರಕ್ಕೆ ಕೊಡುವ ಸಂಭಾವನೆ ಇಟ್ಟುಕೊಂಡು, ಮೂರು ವರ್ಷ ನಿಭಾಯಿಸೋಕೆ ಆಗುತ್ತಾ? ಅಥವಾ ಅವರೇ ಬಂದು ನನ್ನ ಸಾಕ್ತಾರಾ? ಬೇರೆ ಒಂದು ಭಾಷೆಯ ಇಂಡಸ್ಟ್ರಿಯವರು ನನ್ನ ಸ್ವಂತ ಭಾಷೆಯಲ್ಲೂ ಕೆಲಸ ಮಾಡಬಾರದು ಅಂತ ಮಾನಸಿಕವಾಗಿ ಒತ್ತಡ ಹಾಕಿದ್ರು. ಇದರಿಂದ ಹೊರಬರಲು ನಾನು ಮೂರು ತಿಂಗಳ ಕಾಲ ಒದ್ದಾಡಿದ್ದೀನಿ' ಎಂದು ಶಿಶಿರ್ ಆ ದಿನಗಳನ್ನು ನೆನೆದಿದ್ದಾರೆ.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications