Bigg Boss: ರಜತ್ vs ಧನರಾಜ್, ಅಂಕಲ್ - ಪಾಪು ಅಂತ ಬಿಗ್ಫೈಟ್!
ಬಿಗ್ಬಾಸ್ ಕನ್ನಡ ಸೀಸನ್11 ರಲ್ಲಿ ನಾಮಿನೇಷನ್ ಕಿಚ್ಚು ಜೋರಾಗಿದೆ. ಬಿಗ್ಬಾಸ್ ಕನ್ನಡ ಮನೆಗೆ ಅತಿಥಿಗಳ ಆಗಮನ ಹಾಗೂ ನಾಮಿನೇಷನ್ ಪ್ರಕ್ರಿಯೆ ಜೋರಾಗಿದೆ. ಇನ್ನು ಬಿಗ್ಬಾಸ್ ಕನ್ನಡ ಸೀಸನ್11 ಈಗ ಸಿಕ್ಕಾಪಟ್ಟೆ ರೋಚಕ ಹಂತವನ್ನು ತಲುಪಿದೆ. ಇದೀಗ ಬಿಗ್ಬಾಸ್ ಸೀಸನ್ 11ಕ್ಕೆ ಕಳೆದ ಬಾರಿ ಬಿಗ್ಬಾಸ್ನಲ್ಲಿ ಮಿಂಚಿದ್ದ ಸ್ಪರ್ಧಿಗಳು ಆಗಮಿಸುತ್ತಿದ್ದು, ನಾಮಿನೇಷನ್ ಹಾಗೂ ಎಂಟರ್ಟೇನ್ಮೆಂಟ್ ಸ್ವಲ್ಪ ಜಾಸ್ತಿನೇ ಆಗಿದೆ. ಬಿಗ್ಬಾಸ್ಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಹಾಗೂ ಹಾಸ್ಯದ ಮೂಲಕವೇ ಹೆಚ್ಚು ಫೇಮಸ್ ಆಗಿರುವ ಧನರಾಜ್ ನಡುವೆ ಇದೀಗ ಬಿಗ್ಫೈಟ್ ಶುರುವಾಗಿದೆ. ಯಾವ ಕಾರಣಕ್ಕೆ ಇವರಿಬ್ಬರ ನಡುವೆ ಫೈಟ್ಆಗಿದೆ ಅನ್ನೋದು ನೋಡುವುದಾದರೆ..
ಬಿಗ್ಬಾಸ್ನಲ್ಲಿ ಇದೀಗ ನಾಮಿನೇಷನ್ ಸೀಸನ್ ಇದೆ. ಈಗ ನಡೆಯುತ್ತಿರುವ ನಾಮಿನೇಷನ್ ಪ್ರಕ್ರಿಯೆ ತುಸು ಕಾರವಾಗಿಯೇ ಇದೆ. ಕಳೆದ ಬಾರಿ ಬಿಗ್ಬಾಸ್ನಲ್ಲಿ ಮಿಂಚಿದ್ದ ನಮ್ರತಾ ಹಾಗೂ ಬಿಗ್ಬಾಸ್ ಕನ್ನಡ ಸೀಸನ್ 10ರ ಚಾಂಪಿಯನ್ ಕಾರ್ತಿಕ್ ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಬಿಗ್ಬಾಸ್ನ ಒಳಗೆ ಹೊಸ ಜೋಶ್ ಸೃಷ್ಟಿಯಾಗಿದೆ. ಆದರೆ, ಈ ಮಧ್ಯೆ ರಜತ್ ಹಾಗೂ ಧನ್ರಾಜ್ ನಡುವೆ ಬಿಗ್ ಫೈಟ್ ಆಗಿದೆ.
ಧನರಾಜ್ ಅವರು ಮಾತನಾಡಿ ನಾವು ಗ್ರೋಸರಿ ಟಾಸ್ಕ್ ಮಾಡ್ತೀವಿ.. ಅವಾಗ ತ್ರಿವಿಕ್ರಮ್ ಅವರು ವಿನ್ ಆಗಲ್ಲಿಕ್ಕೆ ರಜತ್ ಕಾರಣ ಅಂತ ಹೇಳ್ತಾರೆ ಅಂತ ಮಾತು ಶುರು ಮಾಡಿದ್ದಾರೆ. ಈ ವಿಷಯವನ್ನ ಹೇಳಿ ಧನರಾಜ್ ಅವರು ರಜತ್ ಅವರನ್ನ ನಾಮಿನೇಟ್ ಮಾಡಿದ್ದಾರೆ.

ಇದಕ್ಕೆ ಕೆಂಡಾಮಂಡಲಾಗಿರುವ ರಜತ್ ಅವರು ಯಾವನೋ ಕೊಟ್ಟಿರುವ ಕಾರಣಕ್ಕೆ ನನಗೆ ಬಂದು ಹೇಳ್ತಾನೆ ಗುಗ್ಗು ನನ್ ಮಗ ಎಂದಿದ್ದಾರೆ. ಮುಂದುವರಿದು ನಿಮ್ಮ ಲೆವೆಲ್ ಏನಂತ ನನಗೆ ಗೊತ್ತಾಗಿದೆ. ಆಗ ರಜತ್ ನಾನು ಎಂತವನು ಅಂತ ನಿಮಗೆ ಗೊತ್ತಿಲ್ಲ ಅಂತ ಹೇಳಿರುವುದು ಪ್ರೋಮೋದಲ್ಲಿದೆ. ನನ್ನ ಬಳಿ ಈ ರೀತಿ ಆಟವೆಲ್ಲ ಆಡಬೇಡ ಅಂತ ರಜತ್ ಹೇಳಿದ್ರೆ. ನಾನು ಬಂದಿರೋದೇ ಆಟವಾಡಲಿಕ್ಕೆ ಅಂತ ಧನರಾಜ್ ಹೇಳಿದ್ದಾರೆ. ಲೋ ಮಗು ಅಂತ ಹೇಳೋದು ನಿಂಗೆ ಇದಕ್ಕೆ ಕಣೋ.. ಅಂತ ರಜತ್ ಕಾಲೆಳೆದಿದ್ದು, ಈ ಇಬ್ಬರ ನಡುವೆ ವಾಕ್ಸಮರವಾಗುವುದಕ್ಕೆ ಕಾರಣವಾಗಿದೆ. ಅಲ್ಲದೇ ರಜತ್ ಪಾಪು ಎನ್ನುವುದಕ್ಕೂ ಧನರಾಜ್ ಅಂಕಲ್ ಎನ್ನುವ ರಿಪ್ಲೈ ಕೊಟ್ಟಿದ್ದಾರೆ. ಏನ್ ಏನ್ ಅಂತ ಇಬ್ಬರ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ಇದು ಹೋಗಿದೆ. ಈ ಹಂತದಲ್ಲಿ ಮಂಜಣ್ಣ ಅವರು ಮಧ್ಯಪ್ರವೇಶ ಮಾಡಿದ್ದಾರೆ.
ಬಿಗ್ಬಾಸ್ಗೆ ರಜತ್ ಎಂಟ್ರಿ ಕೊಟ್ಟಾಗಲಿಂದಲೂ ಆಟದ ಖದರ್ ಚೇಂಜ್ ಆಗಿದೆ. ಇನ್ನು ಧನರಾಜ್ ಅವರು ಹಾಸ್ಯದ ಮೂಲಕವೇ ಎಲ್ಲರನ್ನು ಮೆಚ್ಚಿಸಿದ್ದಾರೆ. ಹಾಸ್ಯ ಹಾಗೂ ಕೋಪಗಳ ಸಮ್ಮಿಶ್ರಣದಂತೆ ಇಂದಿನ ಪ್ರೋಮೊ ಇದೆ. ಬಿಗ್ಬಾಸ್ ಕನ್ನಡ ಸೀಸನ್ 11 ಕೊನೆಯ ಹಾಗೂ ನಿರ್ಣಾಯಕ ಹಂತವನ್ನು ತಲುಪುತ್ತಿದ್ದು, ಕೊನೆಯ ಹಂತದಲ್ಲಿ ಯಾರೆಲ್ಲ ಉಳಿದುಕೊಳ್ಳಲಿದ್ದಾರೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications