Gilli: ತುಂಬಾ ಸಣ್ಣ ಆಗಿದ್ದೀಯ: ಬಿಗ್ಬಾಸ್ ವಿನ್ನರ್ ಗಿಲ್ಲಿಗೆ ನಟ ಶಿವಣ್ಣ ನಿವಾಸದಲ್ಲಿ ಆತಿಥ್ಯ
ಬಿಗ್ಬಾಸ್ ಕನ್ನಡ ಸೀಸನ್-12ರ ವಿನ್ನರ್ ಆಗಿ ಹೊರಹೊಮ್ಮಿದ ಬಳಿಕ ನಟ ಗಿಲ್ಲಿ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿದರು. ಶಿವರಾಜ್ಕುಮಾರ್ ಅವರ ನಿವಾಸಕ್ಕೆ ತೆರಳಿದ ಗಿಲ್ಲಿಯನ್ನು, ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ದಂಪತಿ ಆತ್ಮೀಯವಾಗಿ ಬರಮಾಡಿಕೊಂಡು ಅಭಿನಂದಿಸಿದರು. ಈ ಭೇಟಿ ವೇಳೆ ಬಿಗ್ಬಾಸ್ ಗೆಲುವಿನ ಖುಷಿ, ಗಿಲ್ಲಿಯ ಆಟದ ಪಯಣ ಮತ್ತು ಮುಂದಿನ ಸಿನಿ ಜೀವನದ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಯಿತು.
ಭೇಟಿಯ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್ಕುಮಾರ್, ಗಿಲ್ಲಿಯ ಗೆಲುವಿನ ಬಗ್ಗೆ ತಮ್ಮ ನಂಬಿಕೆಯನ್ನು ಹಂಚಿಕೊಂಡರು. "ನಾನು ಕಾರ್ಯಕ್ರಮವೊಂದರಲ್ಲಿ ಬಿಗ್ಬಾಸ್ ಗೆಲ್ಲೋದು ಗಿಲ್ಲಿಯೇ ಎಂದು ಟೇಬಲ್ ತಟ್ಟಿ ಹೇಳಿದ್ದೆ. ಅದೇ ದಿನ ನೀನು ಬಿಗ್ಬಾಸ್ ಮನೆಯೊಳಗೆ ನನ್ನ ಬಗ್ಗೆ ಮಾತನಾಡಿದ್ದೀಯ. ಅದು ನನಗೂ ಆಗಲೇ ಗೊತ್ತಿರಲಿಲ್ಲ. ಆದರೆ ಇಬ್ಬರ ಮಾತುಗಳು ಒಂದೇ ದಿನ ಸಿಂಕ್ ಆಗಿವೆ. ಇದು ನನಗೂ ವಿಶೇಷ ಅನುಭವ" ಎಂದು ಶಿವಣ್ಣ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಗಿಲ್ಲಿ, ಶಿವರಾಜ್ಕುಮಾರ್ ಬಗ್ಗೆ ತಾನು ಹೊಂದಿರುವ ಗೌರವ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದರು.

ಗಿಲ್ಲಿಯ ದೇಹದ ಬದಲಾವಣೆಯತ್ತ ಗಮನ ಹರಿಸಿದ ಶಿವರಾಜ್ಕುಮಾರ್, "ತುಂಬಾ ಸಣ್ಣ ಆಗಿದ್ದೀಯ" ಎಂದು ಕಾಳಜಿಯಿಂದ ಪ್ರಶ್ನಿಸಿದರು. ಬಿಗ್ಬಾಸ್ ಮನೆಯೊಳಗಿನ 100 ದಿನಗಳ ಅನುಭವದಲ್ಲಿ ದೈಹಿಕ ಹಾಗೂ ಮಾನಸಿಕ ಸವಾಲುಗಳ ನಡುವೆಯೂ ಸಾಕಷ್ಟು ತೂಕ ಇಳಿಸಿಕೊಂಡಿರುವುದನ್ನು ಗಿಲ್ಲಿ ವಿವರಿಸಿದರು. ಗಿಲ್ಲಿಯ ಆರೋಗ್ಯದ ಬಗ್ಗೆ ಶಿವಣ್ಣ ಸಲಹೆ ನೀಡಿದರು.
ಗಿಲ್ಲಿ ಜೊತೆ ಸಿನಿಮಾ ಮಾಡ್ತೀನಿ
ಈ ಹಿಂದೆಯೇ ಗಿಲ್ಲಿಯ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದ ಶಿವರಾಜ್ಕುಮಾರ್ ಅವರು, ಸಿನಿಮಾದಲ್ಲಿ ಗಿಲ್ಲಿ ಜೊತೆ ನಟಿಸುವುದಾಗಿ ಹೇಳಿದ್ದರು. ಬಿಗ್ಬಾಸ್ ವಿನ್ನರ್ ಆದ ಬಳಿಕ ನಡೆದ ಈ ಭೇಟಿ, ಗಿಲ್ಲಿಯ ಸಿನಿ ಬದುಕಿಗೆ ಹೊಸ ದಾರಿ ತೆರೆದಂತಾಗಿದೆ. ಅಭಿಮಾನಿಗಳ ವಲಯದಲ್ಲಿ ಈ ಭೇಟಿಯ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಗಿಲ್ಲಿ ಶಿವರಾಜ್ಕುಮಾರ್ ಜೊತೆ ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಬಿಗ್ಬಾಸ್ ಗೆಲುವಿನ ಬಳಿಕ ಹಿರಿಯ ನಟರಿಂದ ಸಿಕ್ಕಿರುವ ಈ ಆಶೀರ್ವಾದ ಗಿಲ್ಲಿಯ ಮುಂದಿನ ಪ್ರಯಾಣಕ್ಕೆ ದೊಡ್ಡ ಬೆಂಬಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
Gilli with KING SHIVANNA👑🙇🏻♂️ pic.twitter.com/ZjD0wjakAQ
— Hitesh VeSa (@Vesahitesh) January 20, 2026
ಇದೇ ವೇಳೆ ವಿಶೇಷ ಕ್ಷಣವೊಂದರಲ್ಲಿ, ಶಿವರಾಜ್ಕುಮಾರ್ ಅವರ ಮನೆಯಿಂದಲೇ ಗಿಲ್ಲಿ ಜನಪ್ರಿಯ ಆಂಕರ್ ಅನುಶ್ರೀ ಅವರಿಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದರು. ಈ ಸಂದರ್ಭದಲ್ಲಿ ಅನುಶ್ರೀ, "ಗಿಲ್ಲಿ ಬಿಗ್ಬಾಸ್ ಗೆದ್ದಿದ್ದು ನಿಜಕ್ಕೂ ತುಂಬಾ ಖುಷಿ. ನೀನು ಈ ಗೆಲುವಿಗೆ ಸಂಪೂರ್ಣವಾಗಿ ಅರ್ಹ. ಹೃದಯಪೂರ್ವಕ ಅಭಿನಂದನೆಗಳು" ಎಂದು ಶುಭ ಹಾರೈಸಿದರು. ಶಿವಣ್ಣನ ಮನೆಯಲ್ಲಿಯೇ ನಡೆದ ಈ ವಿಡಿಯೋ ಕಾಲ್ ಕ್ಷಣಗಳು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮತ್ತು ಸಂತಸ ಮೂಡಿಸಿದೆ. ಬಿಗ್ಬಾಸ್ ವಿನ್ನರ್ ಆದ ಬಳಿಕ ನಡೆದ ಈ ಭೇಟಿ, ಗಿಲ್ಲಿಯ ಸಿನಿ ಬದುಕಿಗೆ ಹೊಸ ದಿಕ್ಕು ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಿರಿಯ ನಟರಿಂದ ಸಿಕ್ಕಿರುವ ಈ ಆಶೀರ್ವಾದ ಗಿಲ್ಲಿಯ ಮುಂದಿನ ಪ್ರಯಾಣಕ್ಕೆ ದೊಡ್ಡ ಬೆಂಬಲವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications