ನಟಿ ಕಾರುಣ್ಯಾ ರಾಮ್ ಆ ನಟಿಯ ಮದುವೆ ಮುರಿದದ್ದು ನಿಜನಾ?
ಕನ್ನಡ ಕಿರುತೆರೆ ನಟಿಯ ಮದುವೆ ಕನ್ನಡ ಚಿತ್ರರಂಗದ ನಟಿ ಕಾರುಣ್ಯ ರಾಮ್ ಅವರಿಂದ ಮುರಿದು ಬಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಇದೀಗ ಸ್ವತಃ ನಟಿ ಕಾರುಣ್ಯ ರಾಮ್ ಮಾತನಾಡಿದ್ದು, ಘಟನೆಯ ಹಿಂದೆ ಏನಾಯಿತು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ಯಾವುದೋ ಒಂದು ಆರೋಪ ಬಂದಾಗ ಅದರಲ್ಲಿ ನನ್ನ ಪಾತ್ರ ಇದೆ. ಅದರಲ್ಲಿ ನಾನು ಒಂದು ಭಾಗ ಆದರೆ ಅದಕ್ಕೆ ಪ್ರತಿಕ್ರಿಯೆ ನೀಡುವುದು ಸಾಮಾನ್ಯ. ಅದಕ್ಕೆ ಒಂದು ಅರ್ಥ ಇದೆ. ನನ್ನದು ಏನು ಇಲ್ಲ. ನನ್ನ ಪಾತ್ರವೇ ಇಲ್ಲವೇ ಅಂದ ಮೇಲೆ ಏನು ಉತ್ತರ ಕೊಡಬೇಕು. ಏನಂತ ಸ್ಪಷ್ಟನೆ ಕೊಡಬೇಕು. ಹೀಗಾಗಿ ನಾನು ಅದನ್ನು ಅಲ್ಲಿಗೆ ಬಿಟ್ಟುಬಿಟ್ಟೆ' ಎಂದರು.

'ನನ್ನ ತಮ್ಮನ ಸಾವಿನ ಬಳಿಕ ನಾನು ಮತ್ತೆ ಡಿಪ್ರೆಷನ್ಗೆ ಹೋಗಿದ್ದು ಇದೇ ಕಾರಣಕ್ಕೆ. ಜೀವನ ಹೊಸದಾಗಿ ತಿರುವು ತೆಗೆದುಕೊಂಡು ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಿಕೊಂಡಿದ್ದಾಗ ಈ ರೀತಿ ನನ್ನ ಹೆಸರನ್ನು ಸುಮ್ಮನೆ ಬಳಸಿಕೊಂಡಿದ್ದು ತುಂಬಾ ತಪ್ಪು. ಆದರೆ ಅಲ್ಲಿನ ನೈಜತೆ ಯಾರಿಗೂ ಗೊತ್ತಿಲ್ಲ. ಅಲ್ಲಿ ನನ್ನ ಹೆಸರು ಯಾರು ತೆಗೆದುಕೊಂಡರು ಎನ್ನುವುದು ಗೊತ್ತಿಲ್ಲ'.
'ನನಗೆ ತಂಗಿ ಇದ್ದಾಳೆ, ನನಗೆ ಗೊತ್ತು ಹೆಣ್ಣು ಮಕ್ಕಳು ಕೆಲವೊಮ್ಮೆ ಮೋಸ ಹೋಗುತ್ತಾರೆ. ಅವರು ದಿಢೀರ್ ನಿರ್ಧಾರ ಮಾಡುತ್ತಾರೆ. ಆ ರೀತಿ ಮಾಡಬಾರದು. ಆ ನಟಿ ಕೂಡ ದಿಢೀರ್ ನಿರ್ಧಾರ ಮಾಡದೇ ಸ್ವಲ್ಪ ಸಮಯ ತೆಗೆದುಕೊಂಡಿದ್ದರೆ ಅವರಿಗೂ ಅದರ ಅಸಲಿ ವಿಚಾರ ಅವರಿಗೂ ಗೊತ್ತಾಗುತ್ತಿತ್ತು. ಬಳಿಕ ನಾನು ಅವರನ್ನು ಭೇಟಿಯಾಗಿ ಸ್ಪಷ್ಟನೆ ಕೊಟ್ಟೆ ಕೂಡ. ಮೊದಲು ನನಗೆ ಆಕೆ ಯಾರೂ ಅಂತಾನೂ ಗೊತ್ತಿರಲಿಲ್ಲ. ಆ ಸಮಯದಲ್ಲಿ ಅದು ನನಗೆ ಬೇಡದ ವಿಚಾರ ಅನಿಸಿತು. ನಾನೇನು ಮಾಡದೇ ಇದ್ದಾಗ ಸ್ಪಷ್ಟನೆ ಕೊಡುವುದು ನನಗೆ ನಿರುಪಯುಕ್ತ ಅನಿಸಿತು' ಎಂದು ಹೇಳಿದರು.

'ಆ ವ್ಯಕ್ತಿಯ ಜೊತೆಗಿನ ಒಂದು ಫೋಟೋ ತೋರಿಸಿ, ಈ ಆರೋಪಕ್ಕೆ ಒಂದು ಸಾಕ್ಷಿ ಕೊಡಿ ಅಂತಾ ಕೇಳಿದ್ದೆ. ಈ ಅಂತೆ ಕಂತೆಗಳಿಗೆ ಹೇಗೆ ಪ್ರತಿಕ್ರಿಯೆ ಕೊಡಲು ಆಗುತ್ತದೆ. ಯಾರ ಹತ್ತಿರನೂ ಒಂದು ಸಾಕ್ಷಿ ಇಲ್ಲ. ಈ ಘಟನೆ ಆಗಿ ಒಂದು ನಾಲ್ಕು ದಿನ ಆದ ಮೇಲೆ ಆ ಹುಡುಗಿಯನ್ನು ಭೇಟಿ ಆಗಿ ನನ್ನನ್ನೇ ಕೇಳಬಹುದಿತ್ತು. ಯಾಕೆ ಹೀಗೆ ಮಾಡಿದಿರಿ ಅಂತಾ ಕೇಳಿದೆ. ಆಗ ಆ ಹುಡುಗಿ ನಾನು ಕೇಳ ಬೇಕಂತಿದ್ದೆ ಆದರೆ ಅವರ ಮನೆಯವರು ಬೇಡ ಅಂತಾ ಹೇಳಿದರು ಅಂದಳು'.
'ಆಗ ನನಗೆ ಅನಿಸಿತು ಆ ಹುಡುಗನ ಮನೆಯವರ ಉದ್ದೇಶವೇನು? ಜನ ಹಿಂದಿನಿಂದ ಏನೆಲ್ಲಾ ಮಾಡುತ್ತಾರೆ ಅನಿಸಿತು. ಯಾರೋ ಒಬ್ಬರು ಜೀವನದಲ್ಲಿ ಎಷ್ಟು ಕಷ್ಟಪಟ್ಟು ಹೆಸರು ಮಾಡಿರುತ್ತಾರೆ. ಅವರ ಕಾಲು ಎಳೆಯಲು ಜನ ಏನು ಬೇಕಾದರೂ ಮಾಡುತ್ತಾರೆ ಅನಿಸಿತು. ಆಮೇಲೆ ಆ ಹುಡುಗಿ ನನ್ನ ಹತ್ತಿರ ಕ್ಷಮೆ ಕೇಳಿ ನಿಮಗೆ ಒಳ್ಳೆಯದಾಗುತ್ತದೆ ಅಂದರು. ಅಲ್ಲದೇ ನನ್ನನ್ನು ಇಂತವರಿಂದ ಬಚಾವ್ ಮಾಡಿದಿರಿ ಅಂತಾ ಧನ್ಯವಾದ ಕೂಡ ತಿಳಿಸಿದರು. ಅದಾದ ಮೇಲೆ ನಾನು ಬಿಟ್ಟು ಹಾಕಿದೆ' ಎಂದು ನಟಿ ಕಾರುಣ್ಯಾ ರಾಮ್ ಹೇಳಿದ್ದಾರೆ.
-
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ












Click it and Unblock the Notifications