ನಟಿ ಕಾರುಣ್ಯಾ ರಾಮ್ ಆ ನಟಿಯ ಮದುವೆ ಮುರಿದದ್ದು ನಿಜನಾ?
ಕನ್ನಡ ಕಿರುತೆರೆ ನಟಿಯ ಮದುವೆ ಕನ್ನಡ ಚಿತ್ರರಂಗದ ನಟಿ ಕಾರುಣ್ಯ ರಾಮ್ ಅವರಿಂದ ಮುರಿದು ಬಿತ್ತು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಇದೀಗ ಸ್ವತಃ ನಟಿ ಕಾರುಣ್ಯ ರಾಮ್ ಮಾತನಾಡಿದ್ದು, ಘಟನೆಯ ಹಿಂದೆ ಏನಾಯಿತು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಅವರು, 'ಯಾವುದೋ ಒಂದು ಆರೋಪ ಬಂದಾಗ ಅದರಲ್ಲಿ ನನ್ನ ಪಾತ್ರ ಇದೆ. ಅದರಲ್ಲಿ ನಾನು ಒಂದು ಭಾಗ ಆದರೆ ಅದಕ್ಕೆ ಪ್ರತಿಕ್ರಿಯೆ ನೀಡುವುದು ಸಾಮಾನ್ಯ. ಅದಕ್ಕೆ ಒಂದು ಅರ್ಥ ಇದೆ. ನನ್ನದು ಏನು ಇಲ್ಲ. ನನ್ನ ಪಾತ್ರವೇ ಇಲ್ಲವೇ ಅಂದ ಮೇಲೆ ಏನು ಉತ್ತರ ಕೊಡಬೇಕು. ಏನಂತ ಸ್ಪಷ್ಟನೆ ಕೊಡಬೇಕು. ಹೀಗಾಗಿ ನಾನು ಅದನ್ನು ಅಲ್ಲಿಗೆ ಬಿಟ್ಟುಬಿಟ್ಟೆ' ಎಂದರು.

'ನನ್ನ ತಮ್ಮನ ಸಾವಿನ ಬಳಿಕ ನಾನು ಮತ್ತೆ ಡಿಪ್ರೆಷನ್ಗೆ ಹೋಗಿದ್ದು ಇದೇ ಕಾರಣಕ್ಕೆ. ಜೀವನ ಹೊಸದಾಗಿ ತಿರುವು ತೆಗೆದುಕೊಂಡು ಒಳ್ಳೊಳ್ಳೆ ಸಿನಿಮಾಗಳನ್ನು ಮಾಡಿಕೊಂಡಿದ್ದಾಗ ಈ ರೀತಿ ನನ್ನ ಹೆಸರನ್ನು ಸುಮ್ಮನೆ ಬಳಸಿಕೊಂಡಿದ್ದು ತುಂಬಾ ತಪ್ಪು. ಆದರೆ ಅಲ್ಲಿನ ನೈಜತೆ ಯಾರಿಗೂ ಗೊತ್ತಿಲ್ಲ. ಅಲ್ಲಿ ನನ್ನ ಹೆಸರು ಯಾರು ತೆಗೆದುಕೊಂಡರು ಎನ್ನುವುದು ಗೊತ್ತಿಲ್ಲ'.
'ನನಗೆ ತಂಗಿ ಇದ್ದಾಳೆ, ನನಗೆ ಗೊತ್ತು ಹೆಣ್ಣು ಮಕ್ಕಳು ಕೆಲವೊಮ್ಮೆ ಮೋಸ ಹೋಗುತ್ತಾರೆ. ಅವರು ದಿಢೀರ್ ನಿರ್ಧಾರ ಮಾಡುತ್ತಾರೆ. ಆ ರೀತಿ ಮಾಡಬಾರದು. ಆ ನಟಿ ಕೂಡ ದಿಢೀರ್ ನಿರ್ಧಾರ ಮಾಡದೇ ಸ್ವಲ್ಪ ಸಮಯ ತೆಗೆದುಕೊಂಡಿದ್ದರೆ ಅವರಿಗೂ ಅದರ ಅಸಲಿ ವಿಚಾರ ಅವರಿಗೂ ಗೊತ್ತಾಗುತ್ತಿತ್ತು. ಬಳಿಕ ನಾನು ಅವರನ್ನು ಭೇಟಿಯಾಗಿ ಸ್ಪಷ್ಟನೆ ಕೊಟ್ಟೆ ಕೂಡ. ಮೊದಲು ನನಗೆ ಆಕೆ ಯಾರೂ ಅಂತಾನೂ ಗೊತ್ತಿರಲಿಲ್ಲ. ಆ ಸಮಯದಲ್ಲಿ ಅದು ನನಗೆ ಬೇಡದ ವಿಚಾರ ಅನಿಸಿತು. ನಾನೇನು ಮಾಡದೇ ಇದ್ದಾಗ ಸ್ಪಷ್ಟನೆ ಕೊಡುವುದು ನನಗೆ ನಿರುಪಯುಕ್ತ ಅನಿಸಿತು' ಎಂದು ಹೇಳಿದರು.

'ಆ ವ್ಯಕ್ತಿಯ ಜೊತೆಗಿನ ಒಂದು ಫೋಟೋ ತೋರಿಸಿ, ಈ ಆರೋಪಕ್ಕೆ ಒಂದು ಸಾಕ್ಷಿ ಕೊಡಿ ಅಂತಾ ಕೇಳಿದ್ದೆ. ಈ ಅಂತೆ ಕಂತೆಗಳಿಗೆ ಹೇಗೆ ಪ್ರತಿಕ್ರಿಯೆ ಕೊಡಲು ಆಗುತ್ತದೆ. ಯಾರ ಹತ್ತಿರನೂ ಒಂದು ಸಾಕ್ಷಿ ಇಲ್ಲ. ಈ ಘಟನೆ ಆಗಿ ಒಂದು ನಾಲ್ಕು ದಿನ ಆದ ಮೇಲೆ ಆ ಹುಡುಗಿಯನ್ನು ಭೇಟಿ ಆಗಿ ನನ್ನನ್ನೇ ಕೇಳಬಹುದಿತ್ತು. ಯಾಕೆ ಹೀಗೆ ಮಾಡಿದಿರಿ ಅಂತಾ ಕೇಳಿದೆ. ಆಗ ಆ ಹುಡುಗಿ ನಾನು ಕೇಳ ಬೇಕಂತಿದ್ದೆ ಆದರೆ ಅವರ ಮನೆಯವರು ಬೇಡ ಅಂತಾ ಹೇಳಿದರು ಅಂದಳು'.
'ಆಗ ನನಗೆ ಅನಿಸಿತು ಆ ಹುಡುಗನ ಮನೆಯವರ ಉದ್ದೇಶವೇನು? ಜನ ಹಿಂದಿನಿಂದ ಏನೆಲ್ಲಾ ಮಾಡುತ್ತಾರೆ ಅನಿಸಿತು. ಯಾರೋ ಒಬ್ಬರು ಜೀವನದಲ್ಲಿ ಎಷ್ಟು ಕಷ್ಟಪಟ್ಟು ಹೆಸರು ಮಾಡಿರುತ್ತಾರೆ. ಅವರ ಕಾಲು ಎಳೆಯಲು ಜನ ಏನು ಬೇಕಾದರೂ ಮಾಡುತ್ತಾರೆ ಅನಿಸಿತು. ಆಮೇಲೆ ಆ ಹುಡುಗಿ ನನ್ನ ಹತ್ತಿರ ಕ್ಷಮೆ ಕೇಳಿ ನಿಮಗೆ ಒಳ್ಳೆಯದಾಗುತ್ತದೆ ಅಂದರು. ಅಲ್ಲದೇ ನನ್ನನ್ನು ಇಂತವರಿಂದ ಬಚಾವ್ ಮಾಡಿದಿರಿ ಅಂತಾ ಧನ್ಯವಾದ ಕೂಡ ತಿಳಿಸಿದರು. ಅದಾದ ಮೇಲೆ ನಾನು ಬಿಟ್ಟು ಹಾಕಿದೆ' ಎಂದು ನಟಿ ಕಾರುಣ್ಯಾ ರಾಮ್ ಹೇಳಿದ್ದಾರೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications