ಸಿನಿಮಾ ಬಿಟ್ಟು ಸೀರಿಯಲ್ಗೆ ಬರಲು ಅದೇ ಕಾರಣ: ನಟ ಮೋಹನ್ ಶಂಕರ್ ಹೇಳಿದ್ದೇನು?
ಕನ್ನಡದ "ಯಾರಿಗೆ ಸಾಲುತ್ತೆ ಸಂಬಳ", "ಕುರಿಗಳು ಸಾರ್ ಕುರಿಗಳು", "ಕೋತಿಗಳು ಸಾರ್ ಕೋತಿಗಳು", "ಮಲ್ಲ" ಸಿನಿಮಾದ ಪಾತ್ರಗಳಿಂದ ಮನೆಮಾತಾಗಿದ್ದರು ನಟ ಮೋಹನ್ ಶಂಕರ್. "ಸೆಂಟ್ರಲ್ ಜೈಲ್" ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಅವರು, "ಕೃಷ್ಣ ನೀ ಲೇಟ್ ಆಗಿ ಬಾರೋ" ಸಿನಿಮಾ ಮೂಲಕ ಮೋಹನ್ ನಿರ್ದೇಶಕರಾಗಿದ್ದರು. ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋನ ನಾಲ್ಕನೇ ಸೀಸನ್ ಸ್ಪರ್ಧಿಯೂ ಆಗಿದ್ದ ಮೋಹನ್, ಬಳಿಕ ಕಿರುತೆರೆಯತ್ತ ಮುಖ ಮಾಡಿ ಅಲ್ಲಿಯೂ ಮಿಂಚಿದ್ದರು. ಇದಕ್ಕೆ ಬಲವಾದ ಕಾರಣ ಏನೆಂದು ಮೋಹನ್ ಅವರೇ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
ಹಲವು ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದ ನಟ ಮೋಹನ್ ಶಂಕರ್ ಅವರು ಶ್ರಾವಣಿ ಸುಬ್ರಮಣ್ಯ, ನಾಗಿಣಿ 2 ಸೀರಿಯಲ್ಗಳನ್ನು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದರು. ಸದ್ಯ ಅವರ ಜರ್ನಿ ಸೀರಿಯಲ್ನಲ್ಲೇ ಮುಂದುವರಿದಿದೆ. ಈಗ ನೀ ಇರಲು ಜೊತೆಯಲ್ಲಿ ಸೀರಿಯಲ್ ಲಾಂಚ್ ಆಗಿದ್ದು, ಈ ವೇಳೆ ಅವರು ಕಿರುತೆರೆಗೆ ಬರಲು ಕಾರಣವೇನು ಎಂದು ರಿವೀಲ್ ಮಾಡಿದ್ದಾರೆ. ಸಿನಿಮಾಗಳಲ್ಲಿ ನಟನಾಗಿ, ನಿರ್ದೇಶಕನಾಗಿ ಮಿಂಚುತ್ತಿರುವಾಗಲೇ ಈ ನಿರ್ಧಾರ ಏಕೆ ತೆಗೆದುಕೊಂಡಿದ್ದು ಎಂದು ವಿವರಿಸಿದ್ದಾರೆ.

'ಕೋಟಿ ಕೋಟಿ ಕಳೆದುಕೊಂಡೆ'
'ನನಗೆ ಹೆಸರು ಕೊಟ್ಟಿದ್ದು ಸಿನಿಮಾ, ಈಗ ಉಸಿರು ಕೊಡುತ್ತಿರುವುದು ಸೀರಿಯಲ್ ಎಂದು ನಟ ಮೋಹನ್ ಹೇಳಿದ್ದಾರೆ. ಈಗಲೂ ಯಾರಿಗೆ ಸಾಲುತ್ತೆ ಸಂಬಳ ಅಂತ ಸಿನಿಮಾನ ಸೆಪ್ಟೆಂಬರ್ನಲ್ಲಿ ಮಾಡ್ತೀನಿ ಎಂದು ಅವರು ಬೆಳ್ಳಿತೆರೆಗೆ ಮರಳುವ ಸುಳಿವು ಕೊಟ್ಟಿದ್ದಾರೆ. ನಾನು ಸಿನಿಮಾ ಮಾಡಿ, ಸುಮಾರು ಒಂದೂವರೆ ಕೋಟಿಯಷ್ಟು ಹಣ ಕಳೆದುಕೊಂಡೆ. ಅದನ್ನ ರಿಕವರ್ ಮಾಡಬೇಕಿದ್ದ ಕಾರಣ ಸೀರಿಯಲ್ ಕಡೆಗೆ ಮುಖ ಮಾಡಿದೆ. ಸೆಪ್ಟೆಂಬರ್ ವೇಳೆ ಮತ್ತೆ ಸಿನಿಮಾ ಕಡೆಗೆ ಹೋಗುತ್ತೀನಿ. ಸಿನಿಮಾ ಹಾಗೂ ಸೀರಿಯಲ್ ಎರಡನ್ನೂ ಮಾಡಿಕೊಂಡು ಹೋಗ್ತೀನಿ' ಎಂದಿದ್ದಾರೆ ಮೋಹನ್.
'ನನ್ನ ನಷ್ಟದ ಹಣ ರಿಕವರಿ ಮಾಡೋಕೆ ಒಂದು ಮೂಲ ಬೇಕಿತ್ತು. ನಾನು ಮೊದಲಿಗೆ ಹೀರೋ ಆಗಿಯೇ ಮಾಡುತ್ತಿದ್ದೆ. ಆದರೆ ಯಾರೂ ಹೆಚ್ಚು ಪೇಮೆಂಟ್ ಕೊಟ್ಟು ಕರೆಸಿಕೊಳ್ಳುತ್ತಿರಲಿಲ್ಲ. ಆಗ ನನಗೆ ನಾಗಿಣಿ ಸೀರಿಯಲ್ನಲ್ಲಿ ಅವಕಾಶ ಸಿಕ್ತು. ಅವರು ನನಗೆ ಹೊಟ್ಟೆತುಂಬಾ ಕೊಟ್ರು, ಅದಕ್ಕೇ ಈ ಕಡೆಗೆ ಬಂದೆ' ಎಂದು ಹಾಸ್ಯವಾಗಿ ಹೇಳಿದ್ದಾರೆ.
ಮೋಹನ್ ಅವರು ನಟ, ನಿರ್ದೇಶಕ ಮಾತ್ರವಲ್ಲದೆ, 50ಕ್ಕೂ ಸಿನಿಮಾಗಳ ಆಲ್ಬಮ್ಗಳಿಗೆ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯವನ್ನು ಬರೆಯುವ ಮೂಲಕ ಗಮನ ಸೆಳೆದಿದ್ದರು. ಉಪ್ಪಿ-ಶಿವಣ್ಣ ಕಾಂಬಿನೇಷನ್ನಲ್ಲಿ ಮೂಡಿಬಂದ ಲವ ಕುಶ ಸಿನಿಮಾಗೂ ಕಥೆ ಬರೆದಿದ್ದರು. ಇನ್ನು ಬಿಗ್ಬಾಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಮೋಹನ್ ಅವರು ಮತ್ತೆ ಮುನ್ನೆಲೆಗೆ ಬಂದಿದ್ದರು. ನಂತರ ಸೀರಿಯಲ್ಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಮಿಂಚಿದ್ದರು. ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ನಲ್ಲಿ ಶಿಕ್ಷಣ ಮಂತ್ರಿ ವೀರೇಂದ್ರನಾಥ್ ಪಾತ್ರದಲ್ಲಿ ಮೋಹನ್ ಅಭಿನಯ ಮೆಚ್ಚುಗೆಗೆ ಪಾತ್ರವಾಗಿತ್ತು. 'ನಾಗಿಣಿ-2' ಧಾರಾವಾಹಿಯ ದಿಗ್ವಿಜಯ್ ಪಾತ್ರದಲ್ಲಿಯೂ ಮೋಹನ್ ಮೋಡಿ ಮಾಡಿದ್ದಾರೆ.
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications