Akul Balaji: 'ಅಕುಲ್ ಬಾಲಾಜಿ ಇದುವರೆಗೂ ಮಾಡದೇ ಇರುವ ಕೆಲಸ ಇದೊಂದೆ'
ಕನ್ನಡ ಜನಪ್ರಿಯ ನಿರೂಪಕ ಅಕುಲ್ ಬಾಲಾಜಿ ಎಂತಹ ಮಾತಿನ ಮಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಎಂತಹದ್ದೇ ಕಾರ್ಯಕ್ರಮಗಳನ್ನು ಕೊಟ್ಟರೂ ಅದನ್ನು ಯಶಸ್ವಿಯಾಗಿ ಮುಗಿಸಿಕೊಡುವ ಚತುರತೆ ಅಕುಲ್ ಬಾಲಾಜಿಗೆ ಇದೆ. ಒಂದು ಸಮಯದಲ್ಲಿ ರಿಯಾಲಿಟಿ ಶೋ ಎಂದಾಕ್ಷಣ ಥಟ್ ಅಂತಾ ನೆನಪಿಗೆ ಬರುತ್ತಿದ್ದ ಹೆಸರೇ ಅಕುಲ್ ಬಾಲಾಜಿ. ಅಷ್ಟರ ಮಟ್ಟಿಗೆ ಕಿರುತೆರೆ ಲೋಕದಲ್ಲಿ ಅಕುಲ್ ಮಿಂಚಿದ್ದರು. ಬರೀ ಶೋಗಳಲ್ಲಿ ಅಲ್ಲ ಅಕುಲ್ ನಿಜ ಜೀವನದಲ್ಲಿಯೂ ಎಂತಹ ಚತುರ ಎನ್ನುವುದರ ಬಗ್ಗೆ ನಟ ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ಅನುಶ್ರೀ ಆ್ಯಂಕರ್ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ನಟ ಕಿಚ್ಚ ಸುದೀಪ್, 'ಅಕುಲ್ ತುಂಬಾ ಬಜೆಟ್ಅಲ್ಲಿ ಜೀವನ ಮಾಡುವವರು. ಅವನ ದುಡ್ಡು ಅಂತಾ ಬಂದಾಗ ಅಕುಲ್ ತುಂಬಾ ಬಜೆಟ್ ಅಲ್ಲಿ ಲೈಫ್ ಲೀಡ್ ಮಾಡ್ತಾನೆ. ಅವರು ಬಂದು ಬಿಟ್ಟು ಏನಾದರೂ ಒಂದು ವಸ್ತು ಬಗ್ಗೆ ಹೇಳ್ತಾರೆ. ಕಿಚ್ಚ ಬ್ರೋ ನೀವು ಇದನ್ನು ನೋಡಿದ್ದೀರಾ ಅಂತಾ. ಅವರು ಯಾವ ತರ ಮಾತಾಡ್ತಾರೆ ಅಂದರೆ ಅವರೇ ನಾಳೆ ಕಳುಹಿಸಿಕೊಟ್ಟು ಬಿಡ್ತಾರೆ ಅನ್ನೋ ತರ ಮಾತಾಡ್ತಾರೆ. ಕೊನೆಯಲ್ಲಿ ಲಿಂಕ್ ಕಳುಹಿಸುತ್ತೇನೆ. ನೀವು ಆರ್ಡರ್ ಮಾಡಿ ಅಂತಾ ಹೇಳುತ್ತಾರೆ'.

'ಒಂದು ರೆಸಾರ್ಟ್ ಮಾಡಿದ್ದೇನೆ. ತುಂಬಾ ಚೆನ್ನಾಗಿ ಮಾಡಿದ್ದೇನೆ ಅಂತಾ ಹೇಳಿ ಫೋಟೋಗಳನ್ನು ತೋರಿಸಿದರು. ಆಗ ನಾನು ಇದ್ಯಾವುದೋ ಬಿಗ್ ಬಾಸ್ ಪ್ರಾಪರ್ಟಿ ಇದ್ದ ಹಾಗೇ ಇದ್ಯಾಲ್ಲ ಅಂದೆ. ಅದಕ್ಕೆ ಅವರು ನಾನು ಅಲ್ಲಿಂದಾನೇ ತಂದಿದ್ದು ಅಂತಾ ಹೇಳಿ ಬಿಟ್ಟರು. ಅವರು ಹೇಗೂ ಆ ಹಳೆಯ ಪ್ರಾಪರ್ಟಿಗಳನ್ನು ಬಳಸುದಿಲ್ಲ ಅಂತಾ ಗೊತ್ತಾದಾಗ ಅಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ'.

'ಇಡೀ ಬಿಗ್ ಬಾಸ್ ಮನೆಯೊಳಗಿದ್ದ ಪ್ರಾಪರ್ಟಿಗಳನ್ನು ತೆಗೆದುಕೊಂಡು ಹೋಗಿ ರೆಸಾರ್ಟ್ಗೆ ಹಾಕಿ ಬಿಟ್ಟಿದ್ದಾರೆ. ನಾನು ನಮ್ಮ ತಲೆಗೆ ಇಂತಹ ಐಡಿಯಾಗಳು ಬರಲ್ವಲ್ಲಾ ಅಂದುಕೊಂಡೆ. ನಮ್ಮ ಬುಡದಿಂದ ತೆಗೆದುಕೊಂಡು ಹೋಗಿ ಬ್ಯುಸಿನೆಸ್ ಅನ್ನೇ ಶುರು ಮಾಡಿದ್ದಾರೆ. ಅವರು ಸೂಪರ್ ಸ್ಮಾರ್ಟ್. ಅಕುಲ್ ಇವತ್ತಿನ ವರೆಗೂ ಮಾಡದೇ ಇರುವ ಒಂದೇ ಒಂದು ಕೆಲಸ ಅಂದರೆ ನನ್ನ ವಸ್ತುಗಳನ್ನು ತಂದು ನನಗೆ ಮಾರಿಲ್ಲ. ಇನ್ನೆಲ್ಲಾ ಮಾಡಿದ್ದಾರೆ' ಎಂದು ಅಕುಲ್ ಚತುರತೆ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದಾರೆ.
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications