ಸಿನಿಮಾ ಪಾತ್ರಕ್ಕೆ ಬಂದ ಬಡವರ ಮನೆ ಹುಡುಗಿ ಜೊತೆ ಲೀವಿಂಗ್ ಟುಗೆದರ್.. ಮದುವೆ!
ಬೆಂಗಳೂರು, ನವೆಂಬರ್ 04: ಮಠ, ಎದ್ದೇಳು ಮಂಜುನಾಥ, ಎರಡನೇ ಸಲದಂತಹ ಎಂದೂ ಮರೆಯದ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಸ್ಟಾರ್ ನಿರ್ದೇಶಕ ಗುರು ಪ್ರಸಾದ್ ಸಾವಿಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ಒಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಿರ್ದೇಶಕ ಗುರು ಪ್ರಸಾದ್ ದೇಹ ಪತ್ತೆ ಆಗಿದ್ದು, ಅಂತ್ಯಸಂಸ್ಕಾರ ಕೂಡ ನೆರವೇರಿದೆ.
ನಿರ್ದೇಶಕ ಗುರು ಪ್ರಸಾದ್ ಅವರ ಬದುಕು, ಮದುವೆ ಹಾಗೂ ಸಾವಿನ ಬಗ್ಗೆ ಅನೇಕ ವಿಚಾರಗಳು ಹರಿದಾಡುತ್ತಿದ್ದು, ಗುರು ಪ್ರಸಾದ್ ಇತ್ತೀಚಿಗೆ ಎರಡನೇ ಮದುವೆಯಾಗಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ನಟ, ಸಂಸದ ಜಗ್ಗೇಶ್ ಮಾತನಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಜಗ್ಗೇಶ್, ಮೊದಲು ಬಂದಾಗ ಸ್ಕ್ರಿಪ್ಟ್ ಹಿಡಿದುಕೊಂಡು ಬರುವ ಗುರು ಪ್ರಸಾದ್ನ ನೋಡಿದ್ದೆ.

ಇತ್ತೀಚಿಗೆ ಬಂದಾಗ ಆರು ಬಾಟೆಲ್ಗಳನ್ನು ಹಿಡಿದುಕೊಂಡು ಬರುವ ವ್ಯಕ್ತಿಯನ್ನು ಸಹ ನೋಡಿದೆ. ಮೊದಲು ಅವನ ಜೀವನ ಚೆನ್ನಾಗಿತ್ತು. ಒಳ್ಳೆ ಹೆಂಡತಿ ಸಿಕ್ಕಿದ್ದಳು ಅವನಿಗೆ. ಎಂತಹಾ ಬ್ಯೂಟಿಫುಲ್ ಹೆಂಡತಿ ಸಿಕ್ಕಿದ್ದಳು ಅಂದರೆ ಅರುಂಧತಿ ಅಂತಾ ಆಕೆಯ ಹೆಸರು. ಅವಳಿಗೆ ಮುದ್ದಾದ ಮಗಳಿದ್ದಾಳೆ ಎಂದರು.
ಗುರು ಪ್ರಸಾದ್ ಮೊದಲನೇ ಹೆಂಡತಿ ಮತ್ತು ಮಗಳು ಇಬ್ಬರೂ ಯೋಗಪಟುಗಳು. ಇಬ್ಬರೂ ನ್ಯಾಷನಲ್ ಲೆವೆಲ್ನಲ್ಲಿ ಫೇಮಸ್. ಅವರ ಜೊತೆ ವಿಚ್ಛೇಧನ ಮಾಡಿಕೊಂಡು ಪಾಪ ಇನ್ನೊಂದು ಅಮಾಯಕ ಹೆಣ್ಣು ಮಗಳನ್ನು ಎರಡನೇ ಮದುವೆಯಾದರು. ಅವಳನ್ನು ಈಗ ನೆನಪಿಸಿಕೊಂಡರೂ ನನ್ನ ಕಣ್ಣಿನಲ್ಲಿ ನೀರು ಬರುತ್ತದೆ. ತುಂಬಾ ಒಳ್ಳೆ ಹುಡುಗಿ. ಯಾವುದೋ ಸಿನಿಮಾ ಪಾತ್ರ ಅಂತಾ ಬಂದಿರುವ ಬಡವರ ಮನೆ ಹುಡುಗಿ. ಅವಳ ಜೊತೆ ಲೀವಿಂಗ್ ಟುಗೆದರ್ನಲ್ಲಿ ಇದ್ದು, ಬಳಿಕ ಮದುವೆಯಾಗಿ ಹೆಣ್ಣು ಮಗುವನ್ನು ದಾನ ಕೊಟ್ಟಿದ್ದಾನೆ. ಆ ಮಗುವಿಗೆ ಈಗ ಮೂರು ವರ್ಷ ಎಂದು ಜಗ್ಗೇಶ್ ಹೇಳಿದರು.
ಮಾತು ಮುಂದುವರಿಸಿದ ಅವರು, ಇಂತಹ ಸಮಯದಲ್ಲಿ ಹೀಗೆ ಆದರೆ ಅವರ ಮುಂದಿನ ಜೀವನ ಏನು?.. ಸಿಟ್ಟು, ಹತಾಶೆ, ಕೋಪ, ಇಡೀ ಉದ್ಯಮದಲ್ಲಿ ಎಲ್ಲರನ್ನೂ ಸಹ ಡೈಲಾಗ್ ಮೂಲಕ ಬೈಯುವುದು. ವ್ಯಂಗ್ಯ, ಒಳ್ಳೆ ಕನ್ನಡ ಹಾಡು ಮಾಡಿ ಮೀಟೂ ಅಂದ..ಅದು ಆಮೇಲೆ ನನ್ನ ಮೇಲೆ ಬಂತು..ನಾನ್ಯಾಕೆ ಆ ರೀತಿ ಹೇಳಲಿ. ಅವನು ಎಷ್ಟೇ ದೊಡ್ಡ ಕಲಾವಿದ ಆದರೂ ಅವನು ನಿರ್ದೇಶಕರಿಗೆ ಅಧೀನ. ಅವನು ಏನು ಹೇಳುತ್ತಾನೋ ಅವನು ಅದನ್ನು ಮಾಡಬೇಕು. ಇಲ್ಲ ಅಂದರೆ ಅದು ತಪ್ಪಾಗುತ್ತದೆ ಎಂದರು.
ಆತನಿಗಿದ್ದ ಹತಾಶೆ, ಸಾಲಬಾಧೆ, ಕೆಟ್ಟ ಚಟದಿಂದ ಅವರ ಬದುಕು ತುಂಬಾ ಗೊಂದಲ ಮಯವಾಗಿತ್ತು. ಮಠ ಹಾಗೂ ಎದ್ದೇಳು ಮಂಜುನಾಥ ಸಿನಿಮಾವನ್ನು ನನ್ನ ಕೊನೆ ಉಸಿರು ಇರುವವರೆಗೂ ಮರೆಯಲು ಆಗುವುದಿಲ್ಲ. ಒಬ್ಬ ಕಲಾವಿದನಾಗಿ ಎರಡೂ ಸಿನಿಮಾವನ್ನು ಪ್ರೀತಿಸಿದ್ದೇನೆ. ಅಂತಹ ಒಳ್ಳೆ ನಿರ್ದೇಶಕ ಸ್ವಯಂಕೃತ ಅಪರಾಧದಿಂದ ಇಂದು ಹೀಗಾದರು ಎಂದು ನಟ ಜಗ್ಗೇಶ್ ಹೇಳಿದರು.
-
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ












Click it and Unblock the Notifications