ಪಬ್ಲಿಕ್ ಟಿವಿ ಸರ್ವೆ: ರಾಜ್ಯದಲ್ಲಿ ಅತಂತ್ರ ವಿಧಾನಸಭೆ
ಬೆಂಗಳೂರು, ಮೇ 08: ಪಬ್ಲಿಕ್ ಟಿವಿ ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಕುರಿತು ಜನಾಭಿಪ್ರಾಯ ಸಂಗ್ರಹಿಸಿದೆ. ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಸೃಷ್ಠಿಯಾಗಲಿದೆ.
ಚುನಾವಣೆ ಮೇಲೆ ಪ್ರಭಾವ ಬೀರುವ ಹಲವು ಪ್ರಶ್ನೆಗಳನ್ನು ಸಮೀಕ್ಷೆಯಲ್ಲಿ ಕೇಳಲಾಗಿದ್ದು, ಉತ್ತರಗಳನ್ನು ಪರಿಗಣಿಸಿ ರಾಝ್ಯ ಸರ್ಕಾರದ ಸಾಧನೆಗಳು, ಮುಖಂಡರ ವೈಯಕ್ತಿಕ ಪ್ರಭಾವಳಿ, ಟೆಂಪಲ್ ರನ್ ರಾಜಕೀಯ, ಲಿಂಗಾಯತ ಪ್ರತ್ಯೇಕ ಧರ್ಮ, ಮೋದಿ ವರ್ಸಸ್ ರಾಹುಲ್, ರಾಜ್ಯದಲ್ಲಿ ಮೋದಿ ಪ್ರಭಾವದ ಬಗ್ಗೆ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಲಾಗಿದೆ.
ಸಮೀಕ್ಷೆಯಲ್ಲಿ ಬಹುತೇಕ ಮಿಶ್ರ ಪ್ರತಿಕ್ರಿಯೆಗಳೇ ಬಂದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಾನ ಸ್ಪರ್ಧೆ ಇದೆ. ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಸಹಿತ ಈ ಸರ್ಕಾರ ಭ್ರಷ್ಟ ಸರ್ಕಾರವಾಗಿತ್ತು ಎನ್ನುವವರ ಸಂಖ್ಯೆಯೂ ಹೆಚ್ಚಿದೆ.

ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ ರಾಜ್ಯದ ಬಹುಮೆಚ್ಚಿನ ಯೋಜನೆ ಆಗಿದೆ ಆದರೆ ಲಿಂಗಾಯತ ಧರ್ಮ ವಿಭಜನೆ ಜನರಿಂದ ಬಹು ಟೀಕೆಗೆ ಗುರಿ ಆಗಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ.











Click it and Unblock the Notifications