ಫಲಿತಾಂಶ : ಚಿಕ್ಕಮಗಳೂರಲ್ಲಿ ಐದರಲ್ಲಿ ನಾಲ್ಕು ಬಿಜೆಪಿ ಪಾಲು
ಬೆಂಗಳೂರು, ಮೇ 15: ಮಲೆನಾಡು, ಅರೆ ಮಲೆನಾಡು, ಹಾಗೂ ಬಯಲು ಸೀಮೆಗಳನ್ನೊಳಗೊಂಡ ವೈವಿಧ್ಯಮಯ ಜಿಲ್ಲೆ ಚಿಕ್ಕಮಗಳೂರಿನಲ್ಲಿ ಬಿಜೆಪಿಗೆ ಭರ್ಜರಿ ಪ್ರದರ್ಶನ ನೀಡಿದೆ. ಐದಕ್ಕೆ ಐದು ಸ್ಥಾನವನ್ನು ಗೆಲ್ಲುವ ನಿರೀಕ್ಷೆ ಮೂಡಿತ್ತು. ಆದರೆ, ತೀವ್ರ ಪೈಪೋಟಿ ನಡುವೆ ಹಾಲಿ ಶಾಸಕ ಜೀವರಾಜ್ ಅವರು ಸೋಲು ಕಂಡಿದ್ದಾರೆ.
ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗ, ಬಿಲ್ಲವ ಸಮುದಾಯ, ಬ್ರಾಹ್ಮಣ, ಬಂಟ, ಮುಸ್ಲಿಂ, ಕ್ರೈಸ್ತ, ಜೈನ ಸೇರಿದಂತೆ ಹತ್ತು ಹಲವು ಜಾತಿ ಮತಗಳು ಈ ಕ್ಷೇತ್ರದಲ್ಲಿ ಪ್ರಮುಖವಾಗಿದೆ.
ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಮತ ಒಲಿಸಿಕೊಂಡರೆ ಬಿಜೆಪಿ ಪಾರುಪತ್ಯಕ್ಕೆ ಅಂತ್ಯ ಆಡಬಹುದು ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಲೆಕ್ಕಾಚಾರ ಹಾಕಿತ್ತು. ಆದರೆ, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಕರಾವಳಿ ಹಾಗೂ ಮಲೆನಾಡಿನಲ್ಲಿ ಮಾಡಿದ ಮೋಡಿಗೆ ಪ್ರತಿಪಕ್ಷಗಳು ಬೆಚ್ಚಿವೆ.
ಶೃಂಗೇರಿ ಕ್ಷೇತ್ರದಲ್ಲಿ ಕಾಂಗೆಸ್ಸಿನ ಟಿಡಿ ರಾಜೇಗೌಡ ಹಾಗೂ ಬಿಜೆಪಿಯ ಡಿಎನ್ ಜೀವರಾಜ್ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಆದರೆ, ಅಂತಿಮವಾಗಿ ಕಾಂಗ್ರೆಸ್ ಗೆಲುವಿನ ನಗೆ ಬೀರಿದೆ.
ಚಿಕ್ಕಮಗಳೂರು
ಜಿಲ್ಲೆ
ವಿಧಾನಸಭಾ
ಕ್ಷೇತ್ರಗಳಲ್ಲಿ:
ಗೆದ್ದವರು,
ಸೋತವರ
ವಿವರ
ಹೀಗಿದೆ:[ಅಂಕಿ
ಅಂಶ
ಅಪ್ಡೇಟ್
ಆಗಲಿದೆ]
ಕ್ಷೇತ್ರ | ಗೆದ್ದವರು | ಗಳಿಸಿದ ಮತಗಳು | ಪಕ್ಷ | ಸೋತವರು | ಪಕ್ಷ | ಗಳಿಸಿದ ಮತಗಳು |
ಶೃಂಗೇರಿ |
ಟಿ.ಡಿ
ರಾಜೇಗೌಡ | 48013 |
ಕಾಂಗ್ರೆಸ್ |
ಡಿ.ಎನ್
ಜೀವರಾಜ್ |
ಬಿಜೆಪಿ | 47755 |
ಮೂಡಿಗೆರೆ |
ಎಂಪಿ
ಕುಮಾರಸ್ವಾಮಿ |
58783 | ಬಿಜೆಪಿ |
ಮೋಟಮ್ಮ |
ಕಾಂಗ್ರೆಸ್ | 46271 |
ಚಿಕ್ಕಮಗಳೂರು | ಸಿ.ಟಿ ರವಿ | 65773 | ಬಿಜೆಪಿ |
ಬಿ.ಎಲ್
ಶಂಕರ್ | ಕಾಂಗ್ರೆಸ್ | 42335 |
ತರೀಕೆರೆ | ಡಿ.ಎಸ್ ಸುರೇಶ್ | 43562 | ಬಿಜೆಪಿ |
ಜಿ.ಎಚ್
ಶ್ರೀನಿವಾಸ | ಪಕ್ಷೇತರ | 31409 |
ಕಡೂರು | ಬೆಳ್ಳಿ ಪ್ರಕಾಶ್ | 61264 | ಜೆಡಿಎಸ್ |
ವೈಎಸ್
ವಿ
ದತ್ತಾ | ಕಾಂಗ್ರೆಸ್ | 46272 |