ಕರ್ನಾಟಕ ಸಮೀಕ್ಷೆ ಸರಾಸರಿ : ಬಿಜೆಪಿಗೆ 107, ಅಧಿಕಾರಕ್ಕೆ ಹತ್ತಿರ
ಬೆಂಗಳೂರು, ಮೇ 12: ಕರ್ನಾಟಕದಲ್ಲಿ ಅಬ್ಬರ ಚುನಾವಣಾ ಪ್ರಚಾರ, ಆಶ್ವಾಸನೆಗಳ ಸುರಿಮಳೆಗಳ ನಡುವೆ ರಾಜ್ಯದಲ್ಲಿ ಮೇ 12ರಂದು ಶಾಂತಿಯುತ ಮತದಾನವಾಗಿದೆ. ಈಗ ಚುನಾವಣೋತ್ತರ ಸಮೀಕ್ಷೆಗಳ ಸಂಗ್ರಹ, ಸರಾಸರಿಯ ಲೆಕ್ಕಾಚಾರ ಶುರುವಾಗಿದೆ.
ಸಮೀಕ್ಷೆಗಳ ಸರಾಸರಿಯಂತೆ ಬಿಜೆಪಿ ಅತಿ ದೊಡ್ಡ ಪಕ್ಷ(107)ವಾಗಿ ಹೊರ ಹೊಮ್ಮಿದ್ದರೂ ಮ್ಯಾಜಿಕ್ ನಂಬರ್ 113 ದಾಟಲು ಸಾಧ್ಯವಾಗುವುದಿಲ್ಲ ಎಂಬ ಫಲಿತಾಂಶ ಬಂದಿದೆ. ಆದರೆ, ಆಪರೇಷನ್ ಕಮಲ ಸಾಧ್ಯತೆ ಮೂಲಕ ಬಹುಮತಕ್ಕೆ ಬೇಕಾದ ಸಂಖ್ಯೆ ಪಡೆಯಲು ಬಿಜೆಪಿಗೆ ಸಾಧ್ಯವಿದ್ದು, ಮತ್ತೊಮ್ಮೆ ಕರ್ನಾಟಕದಲ್ಲಿ ಕಮಲ ಅರಳುವುದು ನಿಶ್ಚಯವಾಗಿದೆ ಎಂದು ಸರಾಸರಿ ಸಮೀಕ್ಷೆ ಅಂತಿಮ ತೀರ್ಪು ನೀಡಿದೆ.
ಈ ನಡುವೆ ಚುನಾವಣಾ ಪೂರ್ವ ಸಮೀಕ್ಷೆ, ಅಭಿಪ್ರಾಯಗಳ ಸಂಗ್ರಹ ಕುತೂಹಲಕಾರಿಯಾಗಿದ್ದು, ಈ ಬಾರಿ ಯಾವ ಪಕ್ಷಕ್ಕೆ ಅಧಿಕಾರ ಸ್ಥಾಪಿಸುವ ಹಕ್ಕು ಸಿಗಲಿದೆ? 224 ವಿಧಾನಸಭಾ ಕ್ಷೇತ್ರಗಳ ಪೈಕಿ 222 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಮೇ 12ರಂದು ಮತದಾನವಾಗಲಿದೆ. ಮೇ 15ರಂದು ಫಲಿತಾಂಶ ಹೊರಬರಲಿದೆ.
ಈ ಬಾರಿ ರಾಜ್ಯದಲ್ಲಿ ಒಟ್ಟು 5,00,15,895 (5 ಕೋಟಿ) ಮತದಾರರಿದ್ದಾರೆ. ಇದರಲ್ಲಿ 2,53,26,629 ಪುರುಷ ಮತದಾರರಾದರೆ, ಮಹಿಳಾ ಮತದಾರರ ಸಂಖ್ಯೆ 2,46,84,311. ಇನ್ನು 4,955 ತೃತೀಯ ಲಿಂಗಿ ಮತದಾರರೂ ರಾಜ್ಯದಲ್ಲಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಒಂದು ಸಮೀಕ್ಷೆಯಲ್ಲಿ ಬಹುಮತ
ಕಾಂಗ್ರೆಸ್ : 222 ಕ್ಷೇತ್ರಗಳಿಗೆ, ಈ ಸಮಯಕ್ಕೆ 112 ಮ್ಯಾಜಿಕ್ ನಂಬರ್
ಟೈಮ್ಸ್ ನೌ ಟಿವಿ -ವಿಎಂಆರ್ : 97
ಎಕ್ಸಿಸ್ ಮೈ ಇಂಡಿಯಾ : 111
ಸಿ ವೋಟರ್ : 93
ಜನ್ ಕಿ ಬಾತ್: 75
ರಿಪಬ್ಲಿಕ್ : 82
ಎಬಿಪಿ ನ್ಯೂಸ್ : 87
ನ್ಯೂಸ್ ಎಕ್ಸ್ - ಸಿಎನ್ ಎಕ್ಸ್ : 78
ನ್ಯೂಸ್ ನೇಷನ್ : 75
ಸರಾಸರಿ: ಕಾಂಗ್ರೆಸ್ 85,

ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಿಜೆಪಿ
ಬಿಜೆಪಿ: 222 ಕ್ಷೇತ್ರಗಳಿಗೆ, ಈ ಸಮಯಕ್ಕೆ 112 ಮ್ಯಾಜಿಕ್ ನಂಬರ್
ಟೈಮ್ಸ್ ನೌ ಟಿವಿ -ವಿಎಂಆರ್ : 94
ಟೈಮ್ಸ್ ನೌ ಟಿವಿ ಟುಡೇಸ್ ಚಾಣಕ್ಯ : 120
ಎಕ್ಸಿಸ್ ಮೈ ಇಂಡಿಯಾ : 85
ಸಿ ವೋಟರ್ : 103
ಜನ್ ಕಿ ಬಾತ್: 106
ರಿಪಬ್ಲಿಕ್ : 114
ಎಬಿಪಿ ನ್ಯೂಸ್ : 97-109
ನ್ಯೂಸ್ ಎಕ್ಸ್ - ಸಿಎನ್ ಎಕ್ಸ್ : 102-110
ನ್ಯೂಸ್ ನೇಷನ್ : 105-109
ಸರಾಸರಿ: ಬಿಜೆಪಿ -107

ಜೆಡಿಎಸ್ ಬಲ ಕುಸಿತ
ಜೆಡಿಎಸ್ : 222 ಕ್ಷೇತ್ರಗಳಿಗೆ, ಈ ಸಮಯಕ್ಕೆ 112 ಮ್ಯಾಜಿಕ್ ನಂಬರ್
ಟೈಮ್ಸ್ ನೌ ಟಿವಿ -ವಿಎಂಆರ್ : 35
ಟೈಮ್ಸ್ ನೌ ಟಿವಿ ಟುಡೇಸ್ ಚಾಣಕ್ಯ: 26
ಎಕ್ಸಿಸ್ ಮೈ ಇಂಡಿಯಾ : 26
ಸಿ ವೋಟರ್ : 25
ಜನ್ ಕಿ ಬಾತ್: 37
ರಿಪಬ್ಲಿಕ್ : 43
ಎಬಿಪಿ ನ್ಯೂಸ್ : 21-30
ನ್ಯೂಸ್ ಎಕ್ಸ್ - ಸಿಎನ್ ಎಕ್ಸ್ : 35-39
ನ್ಯೂಸ್ ನೇಷನ್ : 36-40
ಸರಾಸರಿ: ಜೆಡಿಎಸ್ 27

ಇತರೆ ಎಷ್ಟು ಸ್ಥಾನ
ಇತರೆ : 222 ಕ್ಷೇತ್ರಗಳಿಗೆ, ಈ ಸಮಯಕ್ಕೆ 112 ಮ್ಯಾಜಿಕ್ ನಂಬರ್
ಟೈಮ್ಸ್ ನೌ ಟಿವಿ -ವಿಎಂಆರ್ : 3
ಟೈಮ್ಸ್ ನೌ ಟಿವಿ ಟುಡೇಸ್ ಚಾಣಕ್ಯ: 3
ಎಕ್ಸಿಸ್ ಮೈ ಇಂಡಿಯಾ : 4
ಸಿ ವೋಟರ್ : 1
ಜನ್ ಕಿ ಬಾತ್: 2
ರಿಪಬ್ಲಿಕ್ : 2-3
ಎಬಿಪಿ ನ್ಯೂಸ್ : 1-8
ನ್ಯೂಸ್ ಎಕ್ಸ್ - ಸಿಎನ್ ಎಕ್ಸ್ : 3-5
ನ್ಯೂಸ್ ನೇಷನ್ : 3-5
ಸರಾಸರಿ: ಇತರೆ-3

2013ರಲ್ಲಿ ಕಾಂಗ್ರೆಸ್
2013ರಲ್ಲಿ ಕಾಂಗ್ರೆಸ್ 122, ಬಿಜೆಪಿ 40, ಜೆಡಿಎಸ್ 40, ಬಿಎಸ್ ಅರ್ ಕಾಂಗ್ರೆಸ್ 4, ಕೆಜೆಪಿ 9, ಇತರೆ 12
2018ರ ಚುನಾವಣಾಪೂರ್ವ ಸಮೀಕ್ಷೆಯಲ್ಲಿ ಅತಂತ್ರ ಸ್ಥಿತಿ ಎಂದು ಬಹುತೇಕ ಸಮೀಕ್ಷಾ ಸಂಸ್ಥೆಗಳು ಅತಂತ್ರ ಸ್ಥಿತಿ ಎಂದು ಫಲಿತಾಂಶ ಬಂದಿತ್ತು. ಆದರೆ, ಚುನಾವಣೋತ್ತರ ಸಮೀಕ್ಷೆಗಳ ಸರಾಸರಿಯಲ್ಲಿ ಸರಾಸರಿ: ಬಿಜೆಪಿ 107, ಕಾಂಗ್ರೆಸ್ 85, ಜೆಡಿಎಸ್ 27, ಇತರೆ 3 ಎಂದು ಬಂದಿದೆ.
2,622 ಅಭ್ಯರ್ಥಿಗಳಿದ್ದು, ಪುರುಷ ಅಭ್ಯರ್ಥಿಗಳು 2,405, ಮಹಿಳೆಯರು 217. ಪಕ್ಷವಾರು: ಬಿಜೆಪಿ 222, ಕಾಂಗ್ರೆಸ್ 220, ಜೆಡಿಎಸ್ 199, ಬಿಎಸ್ಪಿ 18, ಇತರೆ 1963.
ಸರಾಸರಿ ಎಕ್ಸಿಟ್ ಪೋಲ್ 2018
| ಸಂಸ್ಥೆ | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಇತರೆ |
| ಟೈಮ್ಸ್ ನೌ ಟಿವಿ -ವಿಎಂಆರ್ 6.30 PM 7.30 PM | 87/94 | 97/97 | 35/28 | 3/3 |
| ಟೈಮ್ಸ್ ನೌ ಟುಡೇಸ್ ಚಾಣಕ್ಯ | 120 | 73 | 26 | 3 |
| ಎಕ್ಸಿಸ್ ಮೈ ಇಂಡಿಯಾ | 85 | 111 | 26 | 4 |
| ಸಿಎನ್ ಎಕ್ಸ್ | 106 | 75 | 35 | 4 |
| ಸಿ ವೋಟರ್ | 103 | 93 | 25 | 1 |
| ಜನ್ ಕಿ ಬಾತ್ | 106 | 75 | 37 | 2 |
| ರಿಪಬ್ಲಿಕ್ | 95-114 | 73-82 | 43 | 2-3 |
| ಎಬಿಪಿ ನ್ಯೂಸ್ | 97-109 | 87-99 | 21-30 | 1-8 |
| ನ್ಯೂಸ್ ಎಕ್ಸ್- ಸಿಎನ್ ಎಕ್ಸ್ | 102-110 | 72-78 | 35-39 | 3-5 |
| ನ್ಯೂಸ್ ನೇಷನ್ | 105-109 | 71-75 | 36-40 | 03-05 |
| ಸರಾಸರಿ: | 107 | 85 | 27 | 3 |
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications