ಕೊಪ್ಪಳ ಜಿಲ್ಲಾ ಚುನಾವಣಾ ವಿಶ್ಲೇಷಣೆ:ಗೆಲ್ಲುವ ಪಾಂಡವರಾರು?
ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬಹಳಷ್ಟು ಇತಿಹಾಸ ಹೊಂದಿರುವ ಕೊಪ್ಪಳ ಜಿಲ್ಲೆಯಲ್ಲಿ ಅಶೋಕ ಚಕ್ರವರ್ತಿಯ ಶಿಲಾ ಶಾಸನಗಳು, ಶಿಲಾಯುಗದ ಜನರು ವಾಸಿಸುತ್ತಿದ್ದ ಗವಿಗಳು ಕಾಣ ಸಿಗುತ್ತದೆ.
ಕೊಪ್ಪಳ ಜಿಲ್ಲೆಯಲ್ಲಿ ಲೆಕ್ಕವಿಲ್ಲದಷ್ಟು ಪ್ರೇಕ್ಷಣೀಯ ಸ್ಥಳಗಳಿವೆ. ಅದರಲ್ಲಿ ಪ್ರಮುಖವಾಗಿ ಗಗನ ಅರೆಮನೆ, ಆನೆಗೊಂದಿ ಕೋಟೆ,ಪಂಪ ಸರೋವರ, 64 ಕಂಭಗಳಿರುವ ಕೃಷ್ಣದೇವರಾಯನ ಸಮಾಧಿ,ನವ ಬೃಂದಾವನ, ಕಲ್ಲಿನ ಮೇಲೆ ಕೆತ್ತನೆಯ ಗರ್ಭಗುಡಿಯಿರುವ ಶ್ರೀ ಗಣಪತಿ ದೇವಸ್ಥಾನ, ಶ್ರೀ ಗವಿ ರಂಗನಾಥ ದೇವಸ್ಥಾನ.

(ಚಿತ್ರದಲ್ಲಿ: ಆನೆಗೊಂದಿ ಸೇತುವೆ)
ಶ್ರೀ ವಿಜಯ ರಚಿಸಿರುವ ಕವಿರಾಜ ಮಾರ್ಗದಲ್ಲಿ ಬರುವಂತೆ, ಪುರಾಣ ಕಾಲದಿಂದಲೂ ಅರ್ಜುನ ಶಿವನಿಂದ ಪಾಶುಪತಾಸ್ತ್ರ ಪಡೆದಿರುವ ಮತ್ತು ತಪಸ್ಸನ್ನು ಮಾಡಿರುವ "ಇಂದ್ರಕೀಲ ಪರ್ವತ' ಇಲ್ಲಿಯೇ ಇರುವದು. ಅರ್ಜುನನು ಮಳಲು ಲಿಂಗವನ್ನು ಪೂಜಿಸಲು ಈಶ್ವರನು ಪ್ರತ್ಯಕ್ಷನಾದನು. ಇದೇ ಇಂದು ಮಳೆ ಮಲ್ಲೇಶ್ವರ ಎಂದು ಪ್ರಸಿದ್ದಿಯಾಗಿದೆ. ಪಾಂಡವರು ಕೂಡಾ ಇಲ್ಲಿ ಬಿಡಾರ ಮಾಡಿದ್ದರು. ಇದನ್ನು "ಪಾಂಡವರ ವಠಾರ' ವೆಂದು ಇಂದಿಗೂ ಇದನ್ನು ಕರೆಯಲಾಗುತ್ತದೆ.
ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಮೂರರಲ್ಲಿ ಬಿಜೆಪಿ, ಒಂದರಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಕಳೆದ ಬಾರಿ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆ ಎಲ್ಲಾ ಪ್ರಮುಖ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಲಿದೆ. ಜಿಲ್ಲೆಯ ವ್ಯಾಪ್ತಿಗೆ ಬರುವ ತಾಲೂಕುಗಳು: ಕೊಪ್ಪಳ, ಗಂಗಾವತಿ, ಯಲ್ಬುರ್ಗಾ, ಕುಷ್ಟಗಿ
2008ರಲ್ಲಿ ಗೆದ್ದವರ ಪಟ್ಟಿ | 2013 ಫಲಿತಾಂಶ: ಗೆದ್ದವರು, ಸೋತವರ ವಿವರ
ಕುಷ್ಟಗಿ : ಅಮರೇ ಗೌಡ ಬಯ್ಯಾಪುರ, ಕಾಂಗ್ರೆಸ್, ಗೆದ್ದ ಮತದ ಅಂತರ 1,770.
ಕನಕಗಿರಿ : ಶಿವರಾಜ್ ತಂಗಡಗಿ, ಪಕ್ಷೇತರ, ಗೆದ್ದ ಮತದ ಅಂತರ 2,183.
ಗಂಗಾವತಿ : ಪರಣ್ಣ ಈಶ್ವರಪ್ಪ ಮನವಳಿ, ಬಿಜೆಪಿ, ಗೆದ್ದ ಮತದ ಅಂತರ 2,885.
ಯಲ್ಬುರ್ಗಾ : ಈಶಣ್ಣ ಗುಲಗುಣ್ಣವರ್, ಬಿಜೆಪಿ, ಗೆದ್ದ ಮತದ ಅಂತರ 29,781.
ಕೊಪ್ಪಳ : ಕರಡಿ ಸಂಗಣ್ಣ, ಬಿಜೆಪಿ, ಗೆದ್ದ ಮತದ ಅಂತರ 10,345.
2013 ಕರ್ನಾಟಕ ವಿಧಾನಸಭೆ ಚುನಾವಣೆ ಬಾಗಲಕೋಟೆ ಜಿಲ್ಲೆ ಅಭ್ಯರ್ಥಿಗಳು:
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಕಾಂಗ್ರೆಸ್ | ಬಿಜೆಪಿ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ / ಸಿಪಿ / ಪಕ್ಷೇತರರು /ಇತರರು |
| 60 | ಕುಷ್ಟಗಿ | ಅಮರೇಗೌಡ ಬಯ್ಯಾಪುರ | ದೊಡ್ದನಗೌಡ | ಕೆ ಶರಣಪ್ಪ | ಫಕೀರಪ್ಪ | ರಾಜಶೇಖರ ಗೌಡ (BSR) ಒಟ್ಟು 14 ಮಂದಿ ಕಣದಲ್ಲಿ |
| 61 | ಕನಕಗಿರಿ ಮೀಸಲು | ಶಿವರಾಜ್ ತಂಗಡಗಿ | ರಾಮಾ ನಾಯ್ಕ್ | ಪ್ರಕಾಶ್ ರಾಥೋಡ್ | ಬಸವರಾಜ್ ದಡೇಸೂಗೂರು | ಮುಕುಂದರಾವ್ ಭವಾನಿಮಠ (BSR) ಒಟ್ಟು 15 ಮಂದಿ ಕಣದಲ್ಲಿ. |
| 62 | ಗಂಗಾವತಿ | ಶ್ರೀನಾಥ್ ಎಚ್ ಆರ್ | ಪರಣ್ಣ ಮುನವಳ್ಳಿ | ಇಕ್ಬಾಲ್ ಅನ್ಸಾರಿ | ಬಸವರಾಜ್ ಪಾಟೀಲ್ ಅನ್ವರಿ | ಪಂಪನಗೌಡ ಪಟೇಲ್ (BSR) ಸೇರಿ ಒಟ್ಟು ಒಂಬತ್ತು ಮಂದಿ ಕಣದಲ್ಲಿ. |
| 63 | ಯಲಬುರ್ಗಾ | ಬಸವರಾಜ ರಾಯರೆಡ್ಡಿ | ಹಾಲಪ್ಪ ಬಸಪ್ಪ ಆಚಾರ್ | ಜಿ ಟಿ ಪಂಪಾಪತಿ | ಸಿ ಎಚ್ ಪೋಲಿಸ್ ಪಾಟೀಲ್ | ನವೀನ್ ಗುಳಗುಣ್ಣವರ್ (BSR) ಸೇರಿ ಒಟ್ಟು 12 ಮಂದಿ ಕಣದಲ್ಲಿ. |
| 64 | ಕೊಪ್ಪಳ | ರಾಘವೇಂದ್ರ ಹಿಟ್ನಾಳ್ | ಸಂಗಣ್ಣ ಕರಡಿ | ಪ್ರದೀಪ್ ಗೌಡ | ಕೆ ಎಂ ಸಯ್ಯದ್ | ನೆಕ್ಕಂಟಿ ನಾಗರಾಜ್ (BSR) ಸೇರಿ ಒಟ್ಟು ಎಂಟು ಮಂದಿ ಕಣದಲ್ಲಿ. |
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications