ರಾಮನಗರ: ರೇಷ್ಮೆ, ರಣಹದ್ದು, ಶೋಲೆಯ ನೆನಪಿನಂಗಳ
ಬೆಂಗಳೂರಿನಿಂದ ಮೈಸೂರು ರಸ್ತೆ ಮಾರ್ಗವಾಗಿ 48 ಕಿಮೀ ದೂರ ಕ್ರಮಿಸಿದರೆ ರಾಮನಗರ ಕಾಣಸಿಗುತ್ತದೆ. ರಾಮನಗರದ ಸುತ್ತಮುತ್ತ ಸಪ್ತಗಿರಿಗಳಿದ್ದು, ಐತಿಹಾಸಿಕವಾಗಿ ಮತ್ತು ಪೌರಾಣಿಕವಾಗಿ ವಿಶೇಷ ಸ್ಥಾನಮಾನ ಗಳಿಸಿದೆ. ಸದ್ಯಕ್ಕೆ ರಾಜಕೀಯವಾಗಿಯೂ ಜಿಲ್ಲೆಗೆ ಭಾರಿ ಮಹತ್ವವೇ ಬಂದಿದೆ.
ಜಿಲ್ಲೆ ಹೊಸದಾಗಿ ರಚನೆಯಾಗಿದೆ. ಇಲ್ಲಿರುವುದು ನಾಲ್ಕೇ ವಿಧಾನಸಭಾ ಕ್ಷೇತ್ರಗಳು: 1. ಮಾಗಡಿ, 2. ರಾಮನಗರ, 3. ಕನಕಪುರ ಮತ್ತು 4. ಚನ್ನಪಟ್ಟಣ. ಘಟಾನುಘಟಿಗಳೇ ಜಿಲ್ಲೆಯ ಕಣದಲ್ಲಿ ಜಿದ್ದಾಜಿದ್ದಿ ಹೋರಾಟ ನಡೆಸುತ್ತಿದ್ದಾರೆ. ರಾಮನಗರ ಎಂದಾಕ್ಷಣ ರಾಜಕೀಯವಾಗಿ ಎದ್ದುಕಾಣುವುದು ದೇವೇಗೌಡರ ಕುಟುಂಬ ಮತ್ತು ಡಿಕೆ ಶಿವಕುಮಾರ್. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಜೆಡಿಎಸ್ ಕುಟುಂಬದಿಂದ ಎಚ್ ಸಿ ಬಾಲಕೃಷ್ಣ (ಮಾಗಡಿ), ಎಚ್ ಡಿ ಕುಮಾರಸ್ವಾಮಿ (ರಾಮನಗರ), ಪಿಜಿಆರ್ ಸಿಂಧ್ಯಾ (ಕನಕಪುರ) ಮತ್ತು ಅನಿತಾ ಕುಮಾರಸ್ವಾಮಿ (ಚನ್ನಪಟ್ಟಣ) ಕಣದಲ್ಲಿದ್ದಾರೆ.
ಚನ್ನಪಟ್ಟಣದಿಂದ ಸಿಪಿ ಯೋಗೀಶ್ವರ್ ಅವರು ಸೈಕಲ್ ಹತ್ತಿರುವುದು ಒಂದಷ್ಟು ಕುತೂಹಲ ಮೂಡಿಸಿದೆ. ಅದೇ ರೀತಿ, ಮಾಗಡಿ ಕ್ಷೇತ್ರದಿಂದ ಜೇಡರಹಳ್ಳಿ ಕೃಷ್ಣಪ್ಪ (ಎಚ್ಎಂ ಕೃಷ್ಣ ಮೂರ್ತಿ) ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಗಮನಾರ್ಹವಾಗಿದೆ.
ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ |
182 | ಮಾಗಡಿ |
ಜಗದೀಶ್
ಪ್ರಸಾದ್ | ಮಂಜುನಾಥ | ಎಚ್ ಸಿ ಬಾಲಕೃಷ್ಣ | ಎಚ್ಎಂ ಕೃಷ್ಣ ಮೂರ್ತಿ |
183 | ರಾಮನಗರ |
ಕೆಎಸ್
ಶಿವಮಾಧು | ಮರಿದೇವರು | ಎಚ್ ಡಿ ಕುಮಾರಸ್ವಾಮಿ | ಎಸ್ಆರ್ ನಾಗರಾಜು |
184 | ಕನಕಪುರ | ಬಿ ನಾಗರಾಜ್ | ಡಿಕೆ ಶಿವಕುಮಾರ್ | ಪಿಜಿಆರ್ ಸಿಂಧ್ಯಾ | ಮಧುಗೌಡ |
185 | ಚನ್ನಪಟ್ಟಣ |
ರವಿಕುಮಾರ್
ಗೌಡ | ಸಾದತ್ ಅಲಿ ಖಾನ್ | ಅನಿತಾ ಕುಮಾರಸ್ವಾಮಿ |
ಸಿಪಿ
ಯೋಗೀಶ್ವರ್ |