ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷೇತ್ರ ಪರಿಚಯ: ಸಂಡೂರಲ್ಲಿ ಕಾಂಗ್ರೆಸ್ ಅಧಿಪತ್ಯ ಅಂತ್ಯ?

By Mahesh
|
Google Oneindia Kannada News

ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಎಂದೆನಿಸಿರುವ ರಾಜ್ಯದ ಕೆಲವೇ ಕೆಲವು ಕ್ಷೇತ್ರಗಳಲ್ಲಿ ಸಂಡೂರು ಕೂಡಾ ಒಂದು. ಇಲ್ಲಿ ಮೊದಲಿನಿಂದಲೂ ಪಾರಮ್ಯ ಮೆರೆದಿದ್ದು ಘೋರ್ಪಡೆ ಅವರು. ಅವರ ನಂತರ, ಇಲ್ಲಿ ಕಾಂಗ್ರೆಸ್ ಪರವಾಗಿ ಸಂತೋಷ್ ಲಾಡ್ ಶಾಸಕರಾಗಿದ್ದರು. ಈಗ, ಇಲ್ಲಿ ಕಾಂಗ್ರೆಸ್ ನವರೇ ಆದ, ಸಂತೋಷ್ ಲಾಡ್ ಅವರಿಗೆ ಆಪ್ತರಾಗಿರುವ ಇ. ತುಕಾರಾಮ್.

ಸಂಡೂರು : ತುಕಾರಾಂ ಹ್ಯಾಟ್ರಿಕ್ ತಪ್ಪಿಸಲು ಜೆಡಿಎಸ್- ಬಿಜೆಪಿ ಯತ್ನ ಸಂಡೂರು : ತುಕಾರಾಂ ಹ್ಯಾಟ್ರಿಕ್ ತಪ್ಪಿಸಲು ಜೆಡಿಎಸ್- ಬಿಜೆಪಿ ಯತ್ನ

ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿ ಇದು ಎಸ್ ಟಿ ಮೀಸಲು ಕ್ಷೇತ್ರವಾಗಿದ್ದರಿಂದ ಸಂತೋಷ್ ಲಾಡ್ ಅವರು ತುಕಾರಾಮ್ ಅವರನ್ನು ಕಣಕ್ಕಿಳಿಸಿದ್ದರು. ಆ ಎರಡೂ ಬಾರಿಯೂ ತುಕಾರಾಮ್ ಅವರೇ ಗೆಲುವು ಸಾಧಿಸಿರುವುದು ಇಲ್ಲಿನ ವಿಶೇಷ. ಈ ಬಾರಿಯೂ ಇದು ಎಸ್ ಟಿ ಮೀಸಲು ಕ್ಷೇತ್ರವಾಗಿರುವುದರಿಂದ ಈ ಬಾರಿ ತುಕಾರಾಂ ಅವರಿಗೇ ಕಾಂಗ್ರೆಸ್ ಟಿಕೆಟ್ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

Karnataka Assembly Election 2018: Sandur constituency profile

ತುಕಾರಾಮ್ ಅವರಿಗೆ ಕ್ಷೇತ್ರದಲ್ಲಿ ಒಳ್ಳೆ ಹೆಸರಿದೆ. ಮೌಲ್ಯಾಧಾರಿತ, ಸಜ್ಜನ, ಜನಪರ ಕಾಳಜಿ ಉಳ್ಳ ವ್ಯಕ್ತಿ ಎಂಬ ಹೆಗ್ಗಳಿಕೆಯಿದೆ. ಅಲ್ಲದೆ, ಕ್ಷೇತ್ರದಲ್ಲಿ ಅವರಿಂದಾಗಿರುವ ಕೆಲವಾರು ಅಭಿವೃದ್ಧಿ ಕೆಲಸಗಳಿಂದಲೂ ಜನರು ಅವರ ಬಗ್ಗೆ ಒಳ್ಳೆ ಅಭಿಪ್ರಾಯವನ್ನೇ ಇಟ್ಟುಕೊಂಡಿದ್ದಾರೆ.

ಸಿರುಗುಪ್ಪ : ಮತ್ತೆ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿಸಿರುಗುಪ್ಪ : ಮತ್ತೆ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ

ಇವರಿಗೆ ಸಡ್ಡು ಹೊಡೆಯಬೇಕೆಂದರೆ, ಬಿಜೆಪಿಯು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲೇಬೇಕಿದೆ. ಬಿಜೆಪಿ ಡಿ. ರಾಘವೇಂದ್ರ ಮತ್ತು ಜೆಡಿಎಸ್ ವಸಂತಕುಮಾರ್ ಸ್ಪರ್ಧಿಸುತ್ತಿದ್ದಾರೆ. ಘೋರ್ಪಡೆ ಕುಟುಂಬದ ಕಾರ್ತಿಕೇಯ ಅವರು ಬಿಜೆಪಿ ಸೇರಿದ್ದರೂ, ಸಮರ್ಥ ಎದುರಾಳಿ ಇಲ್ಲದ ಕಾರಣ ಧರ್ಮಾಪುರ ರಾಘವೇಂದ್ರ ಅವರಿಗೆ ಟಿಕೇಟ್ ಘೋಷಣೆ ಆಗಿದೆ.

English summary
Karnataka Assembly Election 2018: Read all about Ballari district Sandur assembly constituency of Bellary. Get election news from Ballari district. Know about candidates list, election results during Karnataka elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X