ಹಿರಿಯೂರಿನಲ್ಲಿ ಕಮಲ ಅರಳಿಸಲು ನಾನಾ ಕಸರತ್ತು
ಕಾಡುಗೊಲ್ಲರ ಕಾಶಿ ಎಂದು ಪ್ರಸಿದ್ಧಿ ಪಡೆದಿದ್ದು ಜೊತೆಗೆ ಸಾಕಷ್ಟು ಇತಿಹಾಸವಿರುವ ಅನೇಕ ದೇವಸ್ಥಾನಗಳು. ಒಂದೆರಡು ಪ್ರೇಕ್ಷಣೀಯ ಸ್ಥಳಗಳು ಸೇರಿದಂತೆ ಕಲೆಯಲ್ಲಿ ಶ್ರೀ ಮಂತಿಕೆಯನ್ನು ಹೊಂದಿರುವ ಕ್ಷೇತ್ರ ಹಿರಿಯೂರು. ಸತತವಾಗಿ ಮೂರ್ನಾಲ್ಕು ವರ್ಷಗಳ ಬರಗಾಲಕ್ಕೆ ತುತ್ತಾಗಿದ್ದರು ರಾಜಕೀಯ ಚುನಾವಣೆಗೆ ಜಿದ್ದಾ ಜಿದ್ದಿಯ ಕಣವಾಗಿದೆ..
ಹಿರಿಯೂರು ಬಿಜೆಪಿಯ ರಾಜಕೀಯ ಚಿತ್ರಣ
ಒಂದಾನೊಂದು ಕಾಲದಲ್ಲಿ ಹಿರಿಯೂರಿನಲ್ಲಿ ಬಿಜೆಪಿಯ ವಾಸನೆ ಇರಲಿಲ್ಲ ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇಂದು ಜಿಲ್ಲಾ ಪಂಚಾಯಿತಿ ಒಂದು ಸ್ಥಾನ. ತಾಲೂಕು ಪಂಚಾಯಿತಿ ಎರಡು ಸ್ಥಾನಗಳು.
ಒಂದಿಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಅಧಿಕಾರ ಇದ್ದು ಮೊದಲನೇ ಬಾರಿಗೆ ಹಿರಿಯೂರು ನಗರಸಭೆಯನ್ನು ತನ್ನ ಹಿಡಿತಕ್ಕೆ ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು ಹಿರಿಯೂರಿನಲ್ಲಿ ತನ್ನದೆ ಆದ ವಾಸನೆಯ ಬಿರುಗಾಳಿ ಬಿಸಿದೆ...
ಹಿರಿಯೂರು ಕೋಟೆ ಬೇಧಿಸಲು ಬಂದ ಬಿಜೆಪಿಯ ಅಶ್ವಮೇಧ
ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರ ಬುನಾದಿ ಎಂದೇ ಬಿಂಬಿತವಾಗಿರುವ ಹಿರಿಯೂರು ಕ್ಷೇತ್ರವನ್ನು ತಳ ಮಟ್ಟದಿಂದ ಪ್ರತಿಯೊಂದು ಹಂತದಲ್ಲೂ ಪಕ್ಷ ಸಂಘಟನೆ ಮಾಡಿಕೊಂಡು ಮೊದಲ ಬಾರಿಗೆ ನಗರಸಭೆಯನ್ನು ಆಡಳಿತಕ್ಕೆ ಪಡೆದುಕೊಂಡಿದ್ದು. ಯುವಕರನ್ನು ಸಂಘಟನೆ ಮಾಡಿಕೊಂಡು ಕೆಲವು ಸಮಾಜದ ಘಟಾನುಘಟಿ ನಾಯಕರನ್ನು ತನ್ನ ಪಕ್ಷಕ್ಕೆ ಸಳೆದುಕೊಂಡು. ಕೇಂದ್ರದಲ್ಲಿ ಮೋದಿಯವರ ಉತ್ತಮ ಆಡಳಿತ.

ಬಿಜೆಪಿಯ ಪರಿವರ್ತನಾ ಯಾತ್ರೆ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ, ಕೆ.ಎಸ್ ಈಶ್ವರಪ್ಪ, ನಾಯಕ ಜನಾಂಗದ ಸಂಸದ ಶ್ರೀರಾಮುಲು, ಶಾಸಕ ತಿಪ್ಪೇಸ್ವಾಮಿ, ಜಿ.ಎಚ್. ತಿಪ್ಪಾರೆಡ್ಡಿ, ಸಿದ್ದೇಶ್ ಯಾದವ್ ಇನ್ನಿತರ ಬಿಜೆಪಿಯ ಪ್ರಬಲ ಮುಖಂಡರು ಕ್ಷೇತ್ರಕ್ಕೆ ಆಗಮಿಸಿ ಬಲ ತುಂಬಿದ್ದಾರೆ. ಕೇಂದ್ರದ ಜನಪ್ರಿಯ ಯೋಜನೆಗಳು ಹಾಗೂ ಬಿಜೆಪಿ ಸರ್ಕಾರದ ಸಾಧನೆಗಳನ್ನು ಮತದಾರರ ಮುಂದಿಡಲಾಗಿದೆ.
ಹಿರಿಯೂರಿನಲ್ಲಿ ಜನವರಿ 10 ರಂದು ನಡೆದ ಬಿಜೆಪಿಯ ಪರಿವರ್ತನಾ ಯಾತ್ರೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಪಾಲ್ಗೊಂಡಿದ್ದರು. ಅಪಾರ ಜನಸ್ತೋಮ ಗೆಲುವಿಗೆ ಹೊಸ ವರ್ಷದ ಚಿಗುರು ನೀಡಿದೆ ಎನ್ನಬಹುದು.

ಜನಮನ್ನಣೆಗಾಗಿ ಬಿಜೆಪಿ ಅಭ್ಯರ್ಥಿ ಕಸರತ್ತು
ಶ್ರೀಕೃಷ್ಣ ಜನ್ಮಾಷ್ಟಮಿ, ವಾಲ್ಮೀಕಿ ಜಯಂತಿ, ಅಂಬೇಡ್ಕರ್ ಜಯಂತಿ. ಸಿದ್ದರಾಮೇಶ್ವರ ಜಯಂತಿ ಇನ್ನು ವಿವಿಧ ಜಯಂತಿಗಳಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಅವರು ಪಾಲ್ಗೊಂಡು ಜನಮನ್ನಣೆ ಗಳಿಸಿದ್ದಾರೆ.
ಕ್ಷೇತ್ರದಲ್ಲಿ ನಡೆಯುವ ಮದುವೆ, ನಾಮಕರಣ, ಜಾತ್ರೆ, ಪೂಜೆ ಪುನಸ್ಕಾರಗಳು, ಹಬ್ಬ ಹರಿದಿನಗಳಲ್ಲಿ ಪಾಲ್ಗೊಳ್ಳುವುದು, ನಿರುದ್ಯೋಗಿಗಳಿಗೆ ಉದ್ಯೋಗ ಮೇಳ, ಕ್ರಿಕೆಟ್ ಟೂರ್ನಿಮೆಂಟ್ ಏರ್ಪಡಿಸುವುದರ ಮೂಲಕ ತನ್ನ ಮತದಾರರನ್ನು ಸೆಳೆಯುತ್ತಿರುವುದು ಕಂಡು ಬಂದಿದೆ.

ಬರಗಾಲದಲ್ಲಿ ಅನ್ನ, ನೀರು ಕೊಟ್ಟು ದಾಹ ನೀಗಿಸಿದರು
ಬರಗಾಲಕ್ಕೆ ಬಳಲಿದ ಹಿರಿಯೂರು ತಾಲ್ಲೂಕಿನ ಸುಮಾರು ಹಳ್ಳಿಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಯಿತು ಇಂತಹ ಒಂದು ಸಂಧರ್ಭದಲ್ಲಿ ಪ್ರತಿಯೊಂದು ಹಳ್ಳಿಗೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಿ ಜೊತೆಗೆ ಗೋಶಾಲೆ ಯಲ್ಲಿ ಪ್ರತಿನಿತ್ಯ ಅನ್ನ ನೀಡಿ ಹಸಿವನ್ನು ನೀಗಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಭೇಟಿ, ಪ್ರಗತಿಪರ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, ಬೆಳೆ ಹಾನಿಯಾದ ಹೊಲಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗೆ ಸ್ಪಂದಿಸಲು ಸಹಾಯವಾದ ಇಂಥವರಿಗೆ ಒಂದು ಬಾರಿ ಅಧಿಕಾರ ಕೊಡಬೇಕು ಎಂಬುದು ಕೆಲವು ಮತದಾರರ ಮನದಾಳದ ಮಾತುಗಳಾಗಿವೆ

ಪತಿಯ ಗೆಲುವಿಗಾಗಿ ಕೈ ಜೋಡಿಸಿದ ಪೂರ್ಣಿಮಾ
ಕಳೆದ ಬಾರಿ ಕೇವಲ ಕೂದಲಳೆ ಅಂತರದಲ್ಲಿ ಸೋತಿದ್ದ ಪೂರ್ಣಿಮಾ ನವರ ತಂದೆ ದಿ /ಎ. ಕೃಷ್ಣಪ್ಪ ನವರು. ಬದಲಾದ ಸಮಯದಲ್ಲಿ ಅವರು ಅಕಾಲಿಕ ಮರಣಕ್ಕೆ ತುತ್ತಾದರು. ತಂದೆಯ ಸಾವಿನ ಅನುಕಂಪ ನಮ್ಮ ಕುಟುಂಬದ ಮೇಲೆ ತೊರಿಸಿ ಒಂದು ಸಾರಿ ಅವಕಾಶ ಕೊಡಿ ಎಂದು ಪ್ರತಿ ಮನೆ ಮನೆಗೆ ತೆರಳಿ ಪ್ರಚಾರದಲ್ಲಿ ತೊಡಗಿರುವುದು ಮಹಿಳೆಯರಿಗೆ ಕಷ್ಟ ಕಾಲದಲ್ಲಿ ಸ್ಪಂದಿಸುತ್ತಿರುವುದು. ಇದರ ಜೊತೆಗೆ ಸ್ಥಳೀಯ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸೇರಿ ಹಿರಿಯೂರಿನಲ್ಲಿ ಕಮಲ ಬಾವುಟ ಹಾರಿಸಲು ಸಾಕಷ್ಟು ಪ್ರಯತ್ನಗಳು ನೆಡೆಯುತ್ತಿದ್ದು ಡಿ.ಟಿ ಶ್ರೀನಿವಾಸ್ ಗೆಲುವಿಗಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.

ಬದಲಾವಣೆ ಬಯಸಿದ್ದಾರೆ ಹಿರಿಯೂರು ಮತದಾರರು
ಒಂದು ಸಾರಿ ಕ್ಷೇತ್ರದ ಅಧಿಕಾರವನ್ನ ಬದಲಾವಣೆ ಬಯಸಿದ್ದು ಕ್ಷೇತ್ರ ಅಭಿವೃದ್ಧಿ ಆಗಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮರಳು ಮಾಫಿಯಾ, ದಬ್ಬಾಳಿಕೆ, ಸರಿಯಾದ ರಸ್ತೆ ಸಂಪರ್ಕ ಇಲ್ಲ,. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ, ಉದ್ಯೋಗ ಸೃಷ್ಟಿಯಾಗಿಲ್ಲ, ನಿರುದ್ಯೋಗ, ಜನರು ಗೂಳೆ ಹೋಗುವ ಪರಿಸ್ಥಿತಿ ಎದುರಾಗಿದ್ದು ಮತದಾರರು ಹಿರಿಯೂರು ಬದಲಾವಣೆ ತರಬೇಕು ಎಂಬ ನಿರ್ಣಯಕ್ಕೆ ಬಂದಿದ್ದು ಹಿರಿಯೂರಿನಲ್ಲಿ ಬಿಜೆಪಿಯ ಬಗ್ಗೆ ಎಲ್ಲ ಸಮುದಾಯದ ಬೆಂಬಲ ಇದೆ ಎಂಬುದು ಬಿಜೆಪಿ ಮುಖಂಡರ ಅಭಿಪ್ರಾಯವಾಗಿದೆ.
ಒಟ್ಟಾರೆಯಾಗಿ ಚುನಾವಣೆ ದಿನದಿಂದ ದಿನಕ್ಕೆ ಬಿಸಿ ಹೆಚ್ಚಾಗಿದ್ದು ಈ ಬಾರಿ ಹಿರಿಯೂರಿನಲ್ಲಿ ಕೇಸರಿ ಬಣ್ಣದ ಬಾವುಟ ಹಾರುತ್ತಾ ಹಾಗೂ ಅನುಕಂಪದ ಅಲೆ ಬೀಸುತ್ತಾ ಎಂಬುದಕ್ಕೆ ಮೇ 15 ತನಕ ಕಾದು ನೋಡಬೇಕಿದೆ
-
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
ಬೆಂಗಳೂರಿನಲ್ಲಿ ನಡೆಯುವ ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕ್ ಮಾಡುವುದ್ಹೇಗೆ? ಇಲ್ಲಿದೆ ಮಾಹಿತಿ -
Summer Drinks: ಎಳನೀರು ಅಥವಾ ಕಬ್ಬಿನ ರಸ – ಬೇಸಿಗೆಯಲ್ಲಿ ಯಾವುದು ಉತ್ತಮ? -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ












Click it and Unblock the Notifications