ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ 12 ಶಾಸಕರು ಗೈರು
ಬೆಂಗಳೂರು, ಮೇ 16: ನಗರದಲ್ಲಿ ಸರ್ಕಾರ ರಚನೆಯ ಕಸರತ್ತು ಬಿರುಸುಗೊಂಡಿದೆ. ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ತಮ್ಮ ಶಾಸಕರನ್ನು ಜೊತೆಗಿಟ್ಟುಕೊಂಡು ಸರಕಾರ ರಚಿಸಲು ಮುಂದಾಗಿವೆ.
ಮೂರು ಪಕ್ಷಗಳು ಇಂದು ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ 12 ಶಾಸಕರು ಗೈರಾಗಿರುವುದು ವರದಿಯಾಗಿದೆ.
ಪ್ಲ್ಯಾನ್ ಇದೆ... ಏನು ಎಂದು ಆಮೇಲೆ ಹೇಳ್ತೀವಿ: ಡಿಕೆಶಿ
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ಸಭೆಗೆ ಆನಂದ್ ಸಿಂಗ್, ಅಖಂಡ ಶ್ರೀನಿವವಾಸ ಮೂರ್ತಿ, ನಾಗೇಂದ್ರ, ಭೀಮಾ ನಾಯ್ಕ್, ಗಣೇಶ್ ಹುಕ್ಕೇರಿ, ಯಶವಂತರಾಯಗೌಡ, ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಗಣೇಶ್ ಹುಕ್ಕೇರಿ, ಜಮೀರ್ ಅಹಮದ್, ಮಹಂತೇಶ್ ಕೌಜಲಗಿ ಮತ್ತು ತುಕರಾಂ ಗೈರಾಗಿದ್ದಾರೆ.
ಇವರಲ್ಲಿ ಒಂದಷ್ಟು ಜನರು ಬಿಜೆಪಿ ಸಂಪರ್ಕಕ್ಕೆ ಸಿಕ್ಕರಬಹುದು ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು, ಕಾಂಗ್ರೆಸ್ ನಾಯಕರು ಆತಂಕಗೊಂಡಿದ್ದಾರೆ.
Comments
congress jds bjp karnataka assembly elections 2018 karnataka election results 2018 ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಕರ್ನಾಟಕ ವಿಧಾನಸಭೆ ಚುನಾವಣೆ 2018
English summary
Karnataka assembly elections 2018: 12 MLAs of Congress are not presented in Congress legislative party meeting held in Bengaluru.