ಒನ್ಇಂಡಿಯಾದಲ್ಲಿ ಯೋಗ ಕುರಿತು ಸರಣಿ ಲೇಖನ ಆರಂಭ
ಎಷ್ಟೋ ಜನರು ನಾನೂ ಯೋಗ ಮತ್ತು ಯೋಗಾಸಾನ ಮಾಡಬೇಕು ಎಂದು ಹಂಬಲಿಸುತ್ತಿರುತ್ತಾರೆ. ಆದರೆ, ಸಮಯಾಭಾವದ ಕೊರತೆಯ ಜೊತೆಗೆ ಇಂದಿನ ದುಬಾರಿ ದುನಿಯಾದಲ್ಲಿ ಬಹಳಷ್ಟು ಹಣ ಯೋಗ ಕಲಿಯಲೆಂದು ಖರ್ಚು ಮಾಡುವುದು ಸುಲಭದ ಮಾತಲ್ಲ.
ಇಂಥವರಿಗೆಂದೇ, ಯೋಗ ಮತ್ತು ಯೋಗಾಸನಗಳ (ಯೋಗ ಬೇರೆ ಯೋಗಾಸನ ಬೇರೆ) ಕುರಿತು ವಿಶೇಷ ಲೇಖನಗಳು ಸದ್ಯದಲ್ಲಿಯೇ ಪ್ರಕಟವಾಗಲಿವೆ. ಯೋಗದ ಜೊತೆಗೆ ಆರೋಗ್ಯ ರಕ್ಷಣೆ ಕುರಿತು ನುರಿತ ತಜ್ಞರು ಓದುಗರಿಗೆ ವಿಶೇಷವಾಗಿ ತಮ್ಮ ಲೇಖನಗಳಲ್ಲಿ ತಿಳಿಸಿ ಕೊಡಲಿದ್ದಾರೆ.
ಓದುಗರು, ನುರಿತ ತಜ್ಞರು ನೀಡುವ ಯೋಗಗಳ ಸಮಗ್ರ ಮಾಹಿತಿಯನ್ನು ನೋಟ್ ಮಾಡಿಟ್ಟುಕೊಂಡು ಮನೆಯಲ್ಲಿಯೇ ಪ್ರತಿನಿತ್ಯ ಅಭ್ಯಾಸ ಮಾಡಬಹುದು. ಯಾವುದೇ ಸೈಡ್ ಎಫೆಕ್ಟ್ ಇಲ್ಲದ ವ್ಯಾಯಾಮವೆಂದರೆ ಯೋಗ ಮಾತ್ರವೇ ಎನ್ನಬಹುದು. ಅದೂ ಅಲ್ಲದೇ, ಯೋಗವನ್ನು ಎಲ್ಲ ವಯಸ್ಸಿನವರು ಮಾಡಬಹುದು. ಇದಕ್ಕೆ ಲಿಂಗಭೇದವಿಲ್ಲ, ಜಾತಿಭೇದವಿಲ್ಲ. ಆರೋಗ್ಯ ಚೆನ್ನಾಗಿಟ್ಟುಕೊಂಡು ಉತ್ಸಾಹ, ಹುರುಪು ನಿತ್ಯದ ಯೋಗದಿಂದ ಸಾಧ್ಯ. [ಓಂ ಬದಲು ಅಲ್ಲಾಹ್ ಅನ್ನಿ]

ವಯಸ್ಸಾಗದೇ ಇನ್ನೂ ಹರೆಯದವರ ತರಹನೇ ಕಾಣಬೇಕು, ಹೊಟ್ಟೆಯ ಬೊಜ್ಜು ಕರಗಬೇಕು, ಮುಂದಿನ ದಿನಗಳಲ್ಲಿ ಯಾವುದೇ ರೋಗಗಳು ಬರದಂತೆ ಇರಬೇಕು, ಕೂದಲುರುವುದು ನಿಲ್ಲಬೇಕು, ದೃಷ್ಟಿದೋಷ ಬರಬಾರದು, ಮಾನಸಿಕ ಸ್ಥಿರತೆ ಹೆಚ್ಚಿಸಿಕೊಳ್ಳಲು, ಕೆಲಸದಲ್ಲಿ ಏಕಾಗ್ರತೆ ಸಾಧಿಸಿಕೊಳ್ಳಬೇಕು ಎಂದುಕೊಳ್ಳುವವರು ತಪ್ಪಿಸದೇ ಯೋಗಾಭ್ಯಾಸ ಮಾಡಬಹುದು.
ಯೋಗಾಭ್ಯಾಸವು ನಿತ್ಯದ ಕರ್ಮಗಳಂತೆ ಒಂದು ಎಂದುಕೊಂಡು ಇದಕ್ಕಾಗಿ ದಿನಚರಿಯಲ್ಲಿ ಸಮಯವನ್ನು ಮೀಸಲಿಡಬೇಕು. ಹಲ್ಲುಜ್ಜುವುದು, ಸ್ನಾನ ಮಾಡುವುದು, ಮೂರೊತ್ತು ತಿನ್ನೋದು ಜೊತೆಗೆ ಒಂದೊತ್ತು ಯೋಗವೂ ನಿತ್ಯದ ದಿನಚರಿಯಲ್ಲಿಟ್ಟುಕೊಳ್ಳುವುದು ತುಂಬಾ ಅತ್ಯವಶ್ಯ.
ಗಟ್ಟಿಮುಟ್ಟಾಗಿದ್ದಾಗಲೇ ದೇಹ ದಂಡನೆ ಮಾಡಿಕೊಳ್ಳುವುದು ಒಳ್ಳೆಯದು, ದೇವರು ದೇಹ ದಂಡನೆ ಮಾಡಿದ ಬಳಿಕ ಅಂದರೆ ರೋಗಗಳು ದೇಹಕ್ಕೆ ವಕ್ಕರಿಸಿಕೊಂಡಾಗ ದೇಹ ದಂಡನೆಯ ನೋವು ತಡೆದುಕೊಳ್ಳಲಾಗುವುದಿಲ್ಲ ಎಂಬುದು ನೆನಪಿರಲಿ. [ಯೋಗಕ್ಕೆ ಮೋದಿ ಮಣೆ : ಸಿಕ್ಕಿತು ಜಾಗತಿಕ ಮನ್ನಣೆ]
ಮೊಟ್ಟ ಮೊದಲಿಗೆ ಸೂರ್ಯ ನಮಸ್ಕಾರದೊಂದಿಗೆ ಯೋಗಾಸನಗಳ ಕುರಿತು ಲೇಖನಗಳು ಆರಂಭವಾಗಲಿವೆ. ಓದುಗರು ಯೋಗಾಭ್ಯಾಸದಿಂದ ತಮ್ಮ ಮತ್ತು ಕುಟುಂಬದವರ, ಸ್ನೇಹಿತರ ಆಯುರಾರೋಗ್ಯ ಹೆಚ್ಚಿಸಿಕೊಳ್ಳುತ್ತಾರೆಂಬುದು ನಮ್ಮ ನಂಬಿಕೆ.
ಇನ್ನೊಂದು ವಿಶೇಷವಾದ ವಿಷಯವೇನೆಂದರೆ, ಓದುಗರು ಯಾವುದಕ್ಕೂ ಈ ಬಗ್ಗೆ ಏನಾದರೂ ಸಲಹೆ, ಸೂಚನೆ ಮತ್ತು ಆಕ್ಷೇಪಣೆಗಳನ್ನು ನಿಸ್ಸಂಕೋಚವಾಗಿ ಕಮೆಂಟ್ ಬಾಕ್ಸ್ ನಲ್ಲಿ ಹಾಕಿ.
ಪರಮ ಯೋಗಗುರುವಿಗೆ ಅರ್ಪಣೆ : ಜೂನ್ 21ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಈ ಸರಣಿಯನ್ನು ಆರಂಭಿಸಲಾಗುತ್ತಿದ್ದು, ಭಾರತೀಯ ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ತಂದುಕೊಟ್ಟ, 2014ರ ಆಗಸ್ಟ್ 20ರಂದು ವಿಧಿವಶರಾದ ಯೋಗಗುರು ಬಿಕೆಎಸ್ ಅಯ್ಯಂಗಾರ್ ಅವರಿಗೆ ಈ ಅಂಕಣವನ್ನು ಅರ್ಪಿಸಲಾಗಿದೆ.
ಮುಂದಿನ ಲೇಖನ : ಯೋಗ ಮಾಡುವ ಮುನ್ನ ಹೀಗಿರಬೇಕು.
-
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸಿನಿಮಾ ಕಥೆಗೆ ವಿರುದ್ಧವಾಗಿ ಕುಂಭಮೇಳ ಮೊನಾಲಿಸಾ ಮದುವೆ, 10 ಕೋಟಿ ರೂ. ಸಾಲ ಮಾಡಿದ್ದೇನೆ: ನಿರ್ದೇಶಕ ಸನೋಜ್ ಮಿಶ್ರಾ ಆತಂಕ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್













Click it and Unblock the Notifications