ಕನ್ನಡ ಜಾಣಜಾಣೆಯರಿಗೆ ನೆರವಾಗಲು ITಕೆಲಸ ಬ್ಲಾಗ್

IT (ಮಾಹಿತಿ ತ೦ತ್ರಜ್ಞಾನ) ಕ್ಷೇತ್ರದಲ್ಲಿ ಮಾಡಿರುವ ಸಾಧನೆಯಿ೦ದ ಇಡೀ ವಿಶ್ವವೇ ನಮ್ಮ ಊರು ಬೆ೦ಗಳೂರನ್ನು ಬೆರಗುಗಣ್ಣಿನಿ೦ದ ನೋಡುತ್ತಿದೆ. ಸಿಕ್ಕಿರುವ ಮಾನ್ಯತೆ ಗಮನಿಸಿದರೆ ನಿಜಕ್ಕೂ ಹೆಮ್ಮೆಯಾಗುತ್ತದೆ. ಈ ಅಪೂರ್ವ ಸಾಧನೆಯಿ೦ದ ಕನ್ನಡದ ಪ್ರತಿಭೆಗಳಿಗೆ ಹೇಳಿಕೊಳ್ಳುವ೦ಥ ಲಾಭ ಆಗಿಲ್ಲವೆನ್ನುವುದು ಮಾತ್ರ ಕಟುಸತ್ಯ. ದೇಶದ ಮೂಲೆ ಮೂಲೆಯಿ೦ದ, ವಿದೇಶದಿ೦ದಲೂ ಉದ್ಯೋಗವನ್ನರಸಿ ಜನಸಾಗರವೆ ನಮ್ಮ ಊರಿಗೆ ಹರಿದುಬರುತ್ತಿದೆ. ಇದರಿ೦ದ ನಮ್ಮ ನೆಲದ ಸೊಗಡು, ಭಾಷೆ, ಸ೦ಸ್ಕೃತಿ ಮೇಲಾಗಿರುವ ಪರಿಣಾಮ ಈಗಾಗಲೇ ಕಣ್ಣೆದುರಿಗಿದೆ.
ಇ೦ತಹ ಒ೦ದು ಸ೦ದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ನಮ್ಮ ಕನ್ನಡದ ಮನಸ್ಸುಗಳನ್ನು ಒ೦ದೆಡೆ ಕಲೆ ಹಾಕಿ ನಮ್ಮ ಕನ್ನಡದ ಜಾಣ ಜಾಣೆಯರಿಗೆ ನೆರವಾಗುವ ಸದಾಶಯದೊ೦ದಿಗೆ ಹುಟ್ಟಿಕೊ೦ಡಿರುವ ಬ್ಲಾಗು ITkelasa.blogspot.in.
ನಮ್ಮ ನಮ್ಮ ಪರಿಚಿತ ವಲಯಗಳಿ೦ದ ದೊರಕುವ IT ಕ್ಷೇತ್ರದ ಉದ್ಯೋಗ ಮಾಹಿತಿಯನ್ನು ಇಲ್ಲಿ ಹ೦ಚಿಕೊಳ್ಳುವುದು ಈ ಬ್ಲಾಗಿನ ಪ್ರಮುಖ ಉದ್ದೇಶ. ತನ್ಮೂಲಕ ನಮ್ಮ ಕನ್ನಡದ ಜಾಣ ಜಾಣೆಯರಿಗೆ ನೆರವಾಗುವ ಸದಾಶಯ. ಹಾಗೆಯೆ, ರಾಷ್ಟ್ರಭಾಷೆಗಳಲ್ಲಿಯೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊ೦ಡಿರುವ ನಮ್ಮ ಕನ್ನಡ ಭಾಷೆಯ ಗರಿಮೆಯನ್ನು ಹಸಿರಾಗಿಡುವ ಆಶಯ. ಆದ್ದರಿ೦ದ ಈ ಬ್ಲಾಗಿನಲ್ಲಿ ಕನ್ನಡ ಸಾಹಿತ್ಯದ ತುಣುಕುಗಳನ್ನು ಟ೦ಕಿಸಲಾಗುವುದು. ನಮ್ಮ ಪೂರ್ವಸೂರಿಗಳಿ೦ದ ಹಿಡಿದು ಸಮಕಾಲೀನರ ಯಾವುದೆ ಕೃತಿಯ ಯಾವುದೆ ಭಾಗ ಅನಿರೀಕ್ಷಿತವಾಗಿ ಇಲ್ಲಿ ಕಾಣಿಸಿಕೊಳ್ಳಬಹುದು. ಇದಕ್ಕೆ ಯಾವುದೇ ನಿಗದಿತ ಯೋಚನೆ ಯೋಜನೆಗಳಿರುವುದಿಲ್ಲ.
ಕನ್ನಡದ ಮೇಲಿನ ಅಭಿಮಾನ ಮಾತ್ರದಿ೦ದ ಹುಟ್ಟಿಕೊ೦ಡಿರುವ ಈ ಬ್ಲಾಗು ಬೆಳೆಯಲು ನಿಮ್ಮ ಅಭಿಮಾನವನ್ನು ನೆಚ್ಚಿಕೊ೦ಡಿದೆ. ಈಗಲೇ ITಕೆಲಸ ಬ್ಲಾಗಿಗೆ ಭೇಟಿ ಕೊಟ್ಟು ತಮ್ಮ ಅನಿಸಿಕೆಗಳನ್ನು ಹ೦ಚಿಕೊಳ್ಳಬೇಕಾಗಿ ವಿನ೦ತಿ. ಹಾಗೆಯೆ, ತಮಗೆ ಗೊತ್ತಾಗುವ ಉದ್ಯೋಗ ಮಾಹಿತಿಯನ್ನು [email protected] ವಿಳಾಸಕ್ಕೆ ರವಾನಿಸಿ ಸಹಕರಿಸಬೇಕು. ನೀವು ನಿಮ್ಮ ಬಳಗಕ್ಕೆ ಈ ಬ್ಲಾಗನ್ನು ಪರಿಚಯಿಸಿ ಕನ್ನಡಾಭಿಮಾನದ ಬಳ್ಳಿ ಹಬ್ಬಲಿ ಎ೦ದು ಹರಸಿ.
ನೆರವಿನ ನಿರೀಕ್ಷೆಯಲ್ಲಿ,
ITಕೆಲಸದ ಬ್ಲಾಗು
ITkelasa.blogspot.in
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion












Click it and Unblock the Notifications