ಕನ್ನಡ ಜಾಣಜಾಣೆಯರಿಗೆ ನೆರವಾಗಲು ITಕೆಲಸ ಬ್ಲಾಗ್

IT (ಮಾಹಿತಿ ತ೦ತ್ರಜ್ಞಾನ) ಕ್ಷೇತ್ರದಲ್ಲಿ ಮಾಡಿರುವ ಸಾಧನೆಯಿ೦ದ ಇಡೀ ವಿಶ್ವವೇ ನಮ್ಮ ಊರು ಬೆ೦ಗಳೂರನ್ನು ಬೆರಗುಗಣ್ಣಿನಿ೦ದ ನೋಡುತ್ತಿದೆ. ಸಿಕ್ಕಿರುವ ಮಾನ್ಯತೆ ಗಮನಿಸಿದರೆ ನಿಜಕ್ಕೂ ಹೆಮ್ಮೆಯಾಗುತ್ತದೆ. ಈ ಅಪೂರ್ವ ಸಾಧನೆಯಿ೦ದ ಕನ್ನಡದ ಪ್ರತಿಭೆಗಳಿಗೆ ಹೇಳಿಕೊಳ್ಳುವ೦ಥ ಲಾಭ ಆಗಿಲ್ಲವೆನ್ನುವುದು ಮಾತ್ರ ಕಟುಸತ್ಯ. ದೇಶದ ಮೂಲೆ ಮೂಲೆಯಿ೦ದ, ವಿದೇಶದಿ೦ದಲೂ ಉದ್ಯೋಗವನ್ನರಸಿ ಜನಸಾಗರವೆ ನಮ್ಮ ಊರಿಗೆ ಹರಿದುಬರುತ್ತಿದೆ. ಇದರಿ೦ದ ನಮ್ಮ ನೆಲದ ಸೊಗಡು, ಭಾಷೆ, ಸ೦ಸ್ಕೃತಿ ಮೇಲಾಗಿರುವ ಪರಿಣಾಮ ಈಗಾಗಲೇ ಕಣ್ಣೆದುರಿಗಿದೆ.
ಇ೦ತಹ ಒ೦ದು ಸ೦ದಿಗ್ಧ ಪರಿಸ್ಥಿತಿಯನ್ನು ನಿಭಾಯಿಸುವ ನಿಟ್ಟಿನಲ್ಲಿ ನಮ್ಮ ಕನ್ನಡದ ಮನಸ್ಸುಗಳನ್ನು ಒ೦ದೆಡೆ ಕಲೆ ಹಾಕಿ ನಮ್ಮ ಕನ್ನಡದ ಜಾಣ ಜಾಣೆಯರಿಗೆ ನೆರವಾಗುವ ಸದಾಶಯದೊ೦ದಿಗೆ ಹುಟ್ಟಿಕೊ೦ಡಿರುವ ಬ್ಲಾಗು ITkelasa.blogspot.in.
ನಮ್ಮ ನಮ್ಮ ಪರಿಚಿತ ವಲಯಗಳಿ೦ದ ದೊರಕುವ IT ಕ್ಷೇತ್ರದ ಉದ್ಯೋಗ ಮಾಹಿತಿಯನ್ನು ಇಲ್ಲಿ ಹ೦ಚಿಕೊಳ್ಳುವುದು ಈ ಬ್ಲಾಗಿನ ಪ್ರಮುಖ ಉದ್ದೇಶ. ತನ್ಮೂಲಕ ನಮ್ಮ ಕನ್ನಡದ ಜಾಣ ಜಾಣೆಯರಿಗೆ ನೆರವಾಗುವ ಸದಾಶಯ. ಹಾಗೆಯೆ, ರಾಷ್ಟ್ರಭಾಷೆಗಳಲ್ಲಿಯೆ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದುಕೊ೦ಡಿರುವ ನಮ್ಮ ಕನ್ನಡ ಭಾಷೆಯ ಗರಿಮೆಯನ್ನು ಹಸಿರಾಗಿಡುವ ಆಶಯ. ಆದ್ದರಿ೦ದ ಈ ಬ್ಲಾಗಿನಲ್ಲಿ ಕನ್ನಡ ಸಾಹಿತ್ಯದ ತುಣುಕುಗಳನ್ನು ಟ೦ಕಿಸಲಾಗುವುದು. ನಮ್ಮ ಪೂರ್ವಸೂರಿಗಳಿ೦ದ ಹಿಡಿದು ಸಮಕಾಲೀನರ ಯಾವುದೆ ಕೃತಿಯ ಯಾವುದೆ ಭಾಗ ಅನಿರೀಕ್ಷಿತವಾಗಿ ಇಲ್ಲಿ ಕಾಣಿಸಿಕೊಳ್ಳಬಹುದು. ಇದಕ್ಕೆ ಯಾವುದೇ ನಿಗದಿತ ಯೋಚನೆ ಯೋಜನೆಗಳಿರುವುದಿಲ್ಲ.
ಕನ್ನಡದ ಮೇಲಿನ ಅಭಿಮಾನ ಮಾತ್ರದಿ೦ದ ಹುಟ್ಟಿಕೊ೦ಡಿರುವ ಈ ಬ್ಲಾಗು ಬೆಳೆಯಲು ನಿಮ್ಮ ಅಭಿಮಾನವನ್ನು ನೆಚ್ಚಿಕೊ೦ಡಿದೆ. ಈಗಲೇ ITಕೆಲಸ ಬ್ಲಾಗಿಗೆ ಭೇಟಿ ಕೊಟ್ಟು ತಮ್ಮ ಅನಿಸಿಕೆಗಳನ್ನು ಹ೦ಚಿಕೊಳ್ಳಬೇಕಾಗಿ ವಿನ೦ತಿ. ಹಾಗೆಯೆ, ತಮಗೆ ಗೊತ್ತಾಗುವ ಉದ್ಯೋಗ ಮಾಹಿತಿಯನ್ನು [email protected] ವಿಳಾಸಕ್ಕೆ ರವಾನಿಸಿ ಸಹಕರಿಸಬೇಕು. ನೀವು ನಿಮ್ಮ ಬಳಗಕ್ಕೆ ಈ ಬ್ಲಾಗನ್ನು ಪರಿಚಯಿಸಿ ಕನ್ನಡಾಭಿಮಾನದ ಬಳ್ಳಿ ಹಬ್ಬಲಿ ಎ೦ದು ಹರಸಿ.
ನೆರವಿನ ನಿರೀಕ್ಷೆಯಲ್ಲಿ,
ITಕೆಲಸದ ಬ್ಲಾಗು
ITkelasa.blogspot.in
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications