ಚಾರ್ಮಾಡಿ ಘಾಟಿನಲ್ಲಿ ರಾಜಕೀಯದ ಉಗಿಬಂಡಿ
ಬಿಜೆಪಿ
ಸರಕಾರದ ಎರಡನೇ ಬಾರಿಯ ವಿಶ್ವಾಸಮತ ಯಾಚನೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು ಬುಧವಾರ ದಿನವಿಡೀ ನಡೆದ ರಾಜಕೀಯ ದೊಂಬರಾಟಗಳು ಮತ್ತು ನ್ಯಾಯಾಲಯದ ತೀರ್ಮಾನಗಳು ಈ ಕೆಳಗಿನಂತಿವೆ: ಯಡಿಯೂರಪ್ಪ ಅವರು ರಾಜಕೀಯ ಪಗಡೆಯಾಟದಲ್ಲಿ ಗುರುವಾರ ಗೆಲ್ಲುತ್ತಾರಾ? ಅಥವಾ ಅವರ ವಿರೋಧಿಗಳು ಮತ್ತೇನಾದರೂ ಹೊಸ ಅಸ್ತ್ರ ಪ್ರಯೋಗಿಸಿ ಅವರಿಗೆ ಮಣ್ಣು ಮುಕ್ಕಿಸುವಲ್ಲಿ ಗೆಲವು ಸಾಧಿಸುತ್ತಾರಾ? ಎಂಬಂತಹ ಗೊಂದಲದ ವಾತಾವರಣದಲ್ಲಿ ಈ ಚುಕ್ಕಿ ಟಿಪ್ಪಣಿಗಳ ಮೇಲೆ ಕಣ್ಣಾಡಿಸಲು ನಿಮಗೆ ಸ್ವಾಗತ. id="toptextpromo">*
ಐವರು ಪಕ್ಷೇತರರು ವಿಶ್ವಾಸಮತ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಿಲ್ಲ - ಹೈಕೋರ್ಟ್. [ href="/news/2010/10/13/independent-mlas-cannot-vote-in-trust-vote.html" target="_blank">ಹೆಚ್ಚಿನ ವಿವರ]* ಅಷ್ಟೇ ಅಲ್ಲ. ಐವರು ಪಕ್ಷೇತರರು ವಿಧಾನಸೌಧ ಪ್ರವೇಶಿಸುವಂತೆಯೂ ಇಲ್ಲ - ಹೈಕೋರ್ಟ್.
* ಮುಚ್ಚಿದ ಲಕೋಟೆಯಲ್ಲಿ ಪಕ್ಷೇತರರು ಮತದಾನ ಮಾಡಲು ಅವಕಾಶ ಮಾಡಬೇಕೆಂಬ ಜೆಡಿಎಸ್ ಅರ್ಜಿಗೆ ಕೋರ್ಟ್ ನಕಾರ - ಬಿಜೆಪಿ ವಕೀಲ.
* ಅಂಚೆ ಲಕೋಟೆಯೂ ಇಲ್ಲ, ಮುಚ್ಚಿದ ಲಕೋಟೆಯೂ ಇಲ್ಲ - ಕಾನೂನು ಸಚಿವ ಸುರೇಶ್ ಕುಮಾರ್.
* ಗುರುವಾರ ವಿಶ್ವಾಸಮತದ ನಿರ್ಧಾರ ಏನೇ ಆದರೂ ಅದು ಮೂಲ ಅರ್ಜಿಯ ವಿಚಾರಣೆ ಮತ್ತು ತೀರ್ಮಾನಕ್ಕೆ ಬದ್ಧ - ಸರ್ವವಿದಿತ.
* ಉಲ್ಟಾ ಹೊಡೆದ ಕೋಲಾರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ - ಜನಾರ್ಧನ ರೆಡ್ಡಿಯ ಕೊನೆ ಕ್ಷಣದ ದಾಳ. [ href="/news/2010/10/13/independent-mla-varthur-prakash-ditches-rebels.html" target="_blank">ಹೆಚ್ಚಿನ ವಿವರ]
* ದಿನ ಬೆಳವಣಿಗೆಗಳಿಂದ ಬಿಜೆಪಿ ಪಾಳೆಯದಲ್ಲಿ ಉಬ್ಬಿದ ಆತ್ಮ ವಿಶ್ವಾಸ. ಗೆಲವು ತಮ್ಮದೇ - ಸಿಟಿ ರವಿ ಘೋಷಣೆ.
* ಕಾಂಗ್ರೆಸ್ ಪಾಳೆಯದಲ್ಲಿ ಮಂಕು ಕವಿದ ವಾತಾವರಣ. ಕಾಂಗ್ರೆಸ್ ಶಾಸಕರಿಗೆ ಹೈಕಮಾಂಡ್ ಮತ್ತು ರಾಜ್ಯಪಾಲರ ಮೇಲೆ ಈಗ ಕೋಪ. [ href="/news/2010/10/13/congress-legislators-not-happy-with-high-command.html" target="_blank">ಹೆಚ್ಚಿನ ವಿವರ]
* ರಾಜ್ಯ ಕಾಂಗ್ರೆಸ್ ಶಾಸಕರನ್ನು ನಡು ನೀರಿನಲ್ಲಿ ಕೈ ಬಿಟ್ಟ ಕಾಂಗ್ರೆಸ್ ಹೈಕಮಾಂಡ್ - ಆಶಾವಾದಿ ಶಾಸಕರ ಪರಿತಾಪ.
* ಎಲ್ಲಾ 73 ಕಾಂಗೈ ಶಾಸಕರು ಹೋಲ್ ಸೇಲ್ ರಾಜೀನಾಮೆ ಕೊಟ್ಟರೆ ಹೇಗೆ? - ಶಾಸಕಾಂಗ ಸಭೆಯಲ್ಲಿ ಕೇಳಿಸಿದ್ದು.
* ರಾಜ್ಯಪಾಲರ ಮೇಲೆ ಬಿಜೆಪಿ ಹೈಕಮಾಂಡ್ ಗಂಭೀರ ಆರೋಪಗಳ ಸರಮಾಲೆ - ಅರುಣ್ ಜೇಟ್ಲಿ ಅವರಿಂದ, ನವದೆಹಲಿಯಲ್ಲಿ. [ href="/news/2010/10/13/bjp-to-pm-remove-karnataka-governor.html" target="_blank">ಹೆಚ್ಚಿನ ವಿವರ]
* ವಿಧಾನಸಭೆಯಲ್ಲಿ ಮೊನ್ನೆ ನಡೆದ ಅಧ್ವಾನಗಳು ಮರುಕಳಿಸದಂತೆ ಸಭಾಧ್ಯಕ್ಷ ಬೋಪಯ್ಯ ಖಡಕ್ ಕ್ರಮಗಳು - ಅನುಭವಿ. [ href="/news/2010/10/13/bsy-trust-vote-speaker-bopaiah-guidelines.html" target="_blank">ಹೆಚ್ಚಿನ ವಿವರ]
* ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಗಪ್ ಚುಪ್, ಒಂದೂ ಮಾತೇ ಇಲ್ಲ - ಕರ್ನಾಟಕ ಮಾಧ್ಯಮ ಲೋಕ.
* ಗೋಧೂಳಿ ಸಮಯದಲ್ಲಿ ಸಿದ್ದು ಮತ್ತು ಕುಮಾರಸ್ವಾಮಿ ಅವರಿಂದ ರಾಜ್ಯಪಾಲರ ಭೇಟಿ - ಕಡೇ ಗಳಿಗೆ ಪ್ರಯತ್ನ. [ href="/news/2010/10/13/independent-mla-varthur-prakash-ditches-rebels.html" target="_blank">ಹೆಚ್ಚಿನ ವಿವರ]
* ಚಾರ್ಮಾಡಿ ಘಾಟಿನಲ್ಲಿ ಚಲಿಸುತ್ತಿರುವ ರಾಜ್ಯ ರಾಜಕೀಯದ ಉಗಿಬಂಡಿ - ದಟ್ಸ್ ಕನ್ನಡ. id='are-slot-1' class='oiad oi-axt oiadv'> id='top-searched-articles'>
href="http://www.facebook.com/fanofthatskannada">ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ
| href="/column/sham/2010/0924-thatskannada-newshunt-on-your-cell-phone.html">ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | href="http://flowers.oneindia.in/">ಹೂವಿನಂಗಡಿ 24/7 | href="/column/sham/2010/1012-kannada-news-sms-in-english.html">ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್











Click it and Unblock the Notifications