ನಾವು ನೀವು ಮತ್ತು ಬಿಜೆಪಿ ಕರೆಂಟು

ಅವರು ಜಿಗುಪ್ಸೆಗೆ ಕಾರಣಗಳಿವೆ. ಲೋಡ್ ಶೆಡ್ಡಿಂಗ್ ಮಾಡುವುದಾಗಿ ಹೇಳಿಕೆಗಳನ್ನು ಕೊಡುವ ಮತ್ತು ಹೇಳಿಕೆ ಕೊಟ್ಟಹಾಗೆ ನಡೆದುಕೊಳ್ಳುವ ಕೆಪಿಟಿಸಿಎಲ್ ಕಂಪನಿಯ ನಿಯತ್ತಿನ ಬಗ್ಗೆಯೇ ಪತ್ರಕರ್ತರಿಗೆ ಬೇಸರವಿದೆ. ವರ್ಷಕ್ಕೆ ಏನಿಲ್ಲವೆಂದರೂ ಏಳೆಂಟು ಹತ್ತು ಬಾರಿ ವಿದ್ಯುತ್ ಖೋತಾ ಆಗುವ ಸುದ್ದಿಗಳನ್ನು ಬರೆಯಬೇಕು, ಬರೆದು ಬಿಸಾಕಬೇಕು. ಕರೆಂಟು ಖೋತಾದಿಂದ ಎಲ್ಲರಿಗೂ ಒಂದಲ್ಲಾ ಒಂದು ಬಗೆಯ ತೊಂದರೆಯಾಗುವುದು ನಿಸ್ಸಂಶಯ. ನಿಮ್ಮ ದಟ್ಸ್ ಕನ್ನಡ ಕಚೇರಿಯ ಉದಾಹರಣೆಯನ್ನೇ ತೆಗೆದುಕೊಳ್ಳೋಣ.
ನಮ್ಮ ಅಡ್ಮಿನ್ ಬಾಲರಾಜ್ ತಂತ್ರಿ ಅವರ ವರದಿ ಪ್ರಕಾರ ಈ ವರ್ಷದಲ್ಲಿ (2009)ಕನಿಷ್ಠ ದಿನಕ್ಕೆ 2 ಗಂಟೆಯಂತೆ ಕರೆಂಟು ಕೈಕೊಟ್ಟಿದೆ. ಕರೆಂಟು ಹೋದಾಕ್ಷಣ ಆಪತ್ತಿನ ಕಾಲಕ್ಕೆ ಆಗುವ ನೆಂಟ 250 KVA, Diesel Genarator. ಈ ಹತ್ತು ತಿಂಗಳಲ್ಲಿ ಸರಾಸರಿ ದಿನಕ್ಕೆ ಎರಡು ಗಂಟೆ ಲೆಕ್ಕದಲ್ಲಿ ಒಟ್ಟು ಸುಮಾರು 600 ಗಂಟೆಗಳ ಕಾಲ ಡೀಸೆಲ್ ಜನರೇಟರ್ ಓಡಿದೆ. ಡೀಸೆಲ್ ಬೆಲೆ ಲೀಟರಿಗೆ 37.01 ರೂಪಾಯಿ. ಕುಡುಕ ಜನರೇಟರ್ ಒಂದು ಗಂಟೆಗೆ 20 ಲೀಟರ್ ಎಣ್ಣೆ ಗುಟಕರಿಸುತ್ತಾನೆ.
ಇದು ನಾವು ನಿಮಗೊಪ್ಪಿಸುತ್ತಿರುವ ಒಂದೇ ಒಂದು ಪುಟಾಣಿ ಉದಾಹರಣೆ. ಕೆಪಿಟಿಸಿಎಲ್ ಸೋಮವಾರ (ಅ. 27) ರಂದು ಹೊರಡಿಸಿರುವ "ಮತ್ತೆ ಲೋಡ್ ಶೆಡ್ಡಿಂಗ್" ಪ್ರಕಟಣೆಯನ್ನು ಓದಿ ಇದೆಲ್ಲ ಬರೆಯಬೇಕಾಗಿ ಬಂತು. ಅಷ್ಟೇ ವಿನಃ ಮತ್ತೇನಿಲ್ಲ. ಇದು ನಮ್ಮ ಕತೆಯಾಯಿತು. ನಿಮ್ಮ ಕತೆ? ನೀವು ನಿಮ್ಮ ಅನುಭವಗಳನ್ನು ಹೇಳುವ ಮುಂಚೆ ಇನ್ನೊಂದು ಮಾತನ್ನು ನಿಮಗೆ ತಿಳಿಸಬೇಕು.
ಈ ಪವರ್ ಕಟ್ ಕಥಾಕಾಲಕ್ಷೇಪ ಮಾಡುವ ಸಮಯಕ್ಕೆ ಸರಿಯಾಗಿ ಬಿಜೆಪಿ ಸರಕಾರದಲ್ಲಿ ಪವರ್ ಸ್ಟ್ರಗಲ್ ಕೋಲಾಹಲ ಉಕ್ಕುತ್ತಿರುವುದು ಕಾಕತಾಳೀಯ ಅಂತೀರಾ? ಇದು ಇನ್ನೇನು ತಾರಕ್ಕೆ ಹೋದರೂ ಹೋಗಬಹುದು. ಒಳಜಗಳ, ರೆಡ್ಡಿಗಳ ಕಬಡ್ಡಿ, ಶೋಭಾ ಕರಂದ್ಲಾಜೆಯ ಅಧಿಕಪ್ರಸಂಗತನ ಮತ್ತು ಕೋಟೆ ಭದ್ರವಾಗಿಟ್ಟುಕೊಳ್ಳಲು ಯಡಿಯೂರಪ್ಪನವರು ಪಡುತ್ತಿರುವ ಪಾಡು ನಗೆ ತರಿಸುತ್ತಿದೆ.
ನಮ್ಮ ಕಚೇರಿಯಲ್ಲಿ ಕರೆಂಟು ಹೋದರೂ ಪರವಾಗಿಲ್ಲ, ಇನ್ನೂ 17 ತಿಂಗಳ ಅಧಿಕಾರ ಸರಿಯಾಗಿ ಪೂರೈಸದೆ, ಸಿಂಗಲ್ ಫೇಸಲ್ಲಿ ಮಿಣಕುತ್ತಿರುವ ಸರಕಾರದ ಕರೆಂಟು ಹೋಗದಿದ್ದರೆ ಸಾಕು, ತಿಮ್ಮಪ್ಪನೇ ಎಂದು ಪ್ರಾರ್ಥಿಸುತ್ತೇವೆ. ಯಾಕೆಂದರೆ, ಮತ್ತೆ ಮತ್ತೆ ಪ್ರಣಾಳಿಕೆ, ಚುನಾವಣೆ, ಫಲಿತಾಂಶ, ಮೈತ್ರಿ ಸರಕಾರ, ಪ್ರಮಾಣವಚನಗಳ ಬಗ್ಗೆ ಬರೆಯುವುದಕ್ಕೆ ನಮ್ಮ ಮೈಬಗ್ಗಲ್ಲ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications