ಗೌರಿ ಗಣೇಶರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು

ಐಟಿ ಕ್ಷೇತ್ರದಲ್ಲಿ ಹೇಗಿದ್ದರೂ ವಾರಕ್ಕೆ ಐದು ದಿನ ತಾನೆ? ಶನಿವಾರ ರಜೆ ಎಂದು ಯಾರಾದರೂ ಭಾವಿಸಿದರೆ ಅದು ತಪ್ಪಾಗುತ್ತದೆ. ನಾವು ಈಗ ಬದುಕುತ್ತಿರುವುದು ದುರ್ಭರ ಆರ್ಥಿಕ ಕಾಲದಲ್ಲಾದ್ದರಿಂದ ಅನೇಕ ಕಚೇರಿಗಳಲ್ಲಿ ಶನಿವಾರದಂದೂ ಕೇಜಿಗಟ್ಟಲೆ ಲೆಕ್ಕದಲ್ಲಿ ಪ್ರೋಗ್ರಾಮುಗಳನ್ನು ಬರೆಯುವ ಕೆಲಸಗಳಿರುತ್ತವೆ. ಜಡೆಯಲ್ಲಿ ಹಬ್ಬದ ಹೂವು ಮುಡೆಯಲಾಗದೆ ಕಿವಿಯಲ್ಲಿ ಫೋನು ಸಿಗಿಸಿಕೊಂಡು ಕರೆಗಳನ್ನು ಸ್ವೀಕರಿಸುವ ಕಾಲ್ ಸೆಂಟರ್ ಹುಡುಗಿಯರಿಗೆ ಈ ಬಾರಿಯ ಗೌರಿ ಹಬ್ಬದ ಸಂಭ್ರಮ ಅಷ್ಟಕ್ಕಷ್ಟೇನೆ. ಮುಂದಿನ ವರ್ಷ ಪರಿಸ್ಥಿತಿ ಹೇಗಿರತ್ತೋ ಏನೋ, ನೋಡಿಕೊಳ್ಳೋಣ.
ಮಧ್ಯಮ ಮತ್ತು ಕೆಳ ಮಧ್ಯಮ ವರ್ಗಕ್ಕೆ ಸೇರಿದವರ ಮನೆಗಳಲ್ಲಿ ಹಣದ ಚಲಾವಣೆ ಕಡಿಮೆ ಆಗಿರುವುದರಿಂದ ಹಬ್ಬ ಅದ್ದೂರಿಯಾಗುವುದಿಲ್ಲ. ಸಾರ್ವಜನಿಕ ಗಣೇಶ ಕೂಡಿಸುವ ಸಂಘ ಸಂಸ್ಥೆಗಳ ಸ್ಥಿತಿಯೂ ಅಷ್ಟೆ. ಗಣೇಶನ ಕೂರಿಸ್ತೀವಿ, ಹುಂಡಿಗೆ ಕಾಸು ಹಾಕಿ ಎಂದು ಹುಡುಗರು ಕೇಳಿದರೆ, ಪ್ರಾಮಾಣಿಕವಾಗಿ ಡಬ್ಬಕ್ಕೆ ಕಾಸುಗಳು ಬೀಳುತ್ತವೆಯೇ ವಿನಾ ಕಾಗದದ ನೋಟುಗಳು ಬೀಳವು. ಮನೆಗಳಲ್ಲೂ ಅಷ್ಟೆ. ಬೆಲೆಗಳ ಸೂಚ್ಯಂಕವನ್ನು ಮತ್ತದರ ಪರಿಣಾಮಗಳನ್ನು ಅಕ್ಷರಶಃ ಅನುಭವಿಸುವ ಶ್ರೀಸಾಮಾನ್ಯರು ಆರ್ಥಿಕ ಸಂಕಷ್ಟಗಳಿಗೆ ಪ್ರತಿದಿನ ಭಾಷ್ಯ ಬರೆಯುತ್ತಲೇ ಇರುತ್ತಾರೆ. ತಮಾಷೆಗೆ ಹೇಳುವುದಾದರೆ, ನಮ್ಮ ಹೆಣ್ಣುಮಕ್ಕಳು ರಂಗೋಲಿಯಲ್ಲಿ ಬರೆಯುವ ಟಿಪ್ಪಣಿಗಳು ಸ್ವಾಮಿನಾಥನ್ ಅಯ್ಯರ್ ಅಥವಾ ಸಿ ವಿಠಲ್ ಬರೆಯುವ ಅಂಕಣಗಳಿಗಿಂತ ಸತ್ಯಕ್ಕೆ ಹತ್ತಿರವಾಗಿರುತ್ತವೆ.
ಉದಾಹರಣೆಗೆ, ಮೈಸೂರಿನ ಕುವೆಂಪು ನಗರದ ಶ್ರೀಲಕ್ಷ್ಮೀ ಜೆರಾಕ್ಸ್ ಕಾರ್ನರ್ ನಲ್ಲಿ ದಿನಕ್ಕೆ 60 ರೂಪಾಯಿ ಸಂಪಾದಿಸಿ ಸಂಸಾರ ತೂಗಿಸುವ ತನುಜ ಕೇಜಿಗೆ 180 ರೂಪಾಯಿ ತೆತ್ತು ಶಾವಂತಿಗೆ ಹೂವು ಎಲ್ಲಿಂದ ತಂದಾಳು. ಹೊಸ ಸೀರೆ ಖರೀದಿ ದೀಪಾವಳಿಗೆ ಮಾಡಿದರಾಯಿತು ಎನ್ನುವುದು ಅವಳ ನಿಲುವು. ಪರವಾಗಿಲ್ಲ ಬಿಡಿ. ಹಬ್ಬ, ವ್ರತ, ಪೂಜೆ ಪುನಸ್ಕಾರಗಳು ಖರ್ಚಿನ ಬಾಬತ್ತಾದರೂ ಗಣೇಶ ಗೌರಿ ಮನೆ ಬಾಗಿಲಿಗೆ ಬಂದು ಕಾಲಿಂಗ್ ಬೆಲ್ಲು ಒತ್ತಿ ತಮಗೆ ಹಬ್ಬದ ಬಿಲ್ಲು ಕಟ್ಟಿರಿ ಎಂದೇನು ಕೇಳುವುದಿಲ್ಲ. ಆಕಸ್ಮಾತ್ ಗಣೇಶ ನಿಮ್ಮನ್ನು ಕೇಳುವುದೇ ಆದರೆ 21 ಗರಿಕೆ ಮತ್ತು 21 ನಮಸ್ಕಾರಗಳನ್ನು ಮಾತ್ರ. ನಮ್ಮ ಗೌರಿನೂ ಅಷ್ಟೆ, ಕುಂಕುಮ ಅರಿಶಿನವನ್ನಷ್ಟೆ ಬೇಡುವ ನಿರಾಭರಣ ಸುಂದರಿ ಅವಳು. ಅವರು ಕೇಳಿದ್ದನ್ನು ಕೊಟ್ಟುಬಿಡಿ. ಹಬ್ಬ ಮಾಡಿ.
(ಗಣೇಶ ಹಬ್ಬದ ನಿಮಿತ್ತ ದಟ್ಸ್ ಕನ್ನಡ ಕಚೇರಿಗೆ ಭಾನುವಾರ ರಜಾ ಘೋಷಿಸಲಾಗಿದೆ.)
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications