ಎಸ್.ಕೆ. ಶಾಮಸುಂದರ

ಅಮೆರಿಕಾದ ನಾನಾ ಪ್ರಾಂತ್ಯಗಳಲ್ಲಿ ಸರಿಸುಮಾರು 27ವರ್ಷ ಜೀವನ ಸಾಗಿಸಿ ಸ್ವಇಚ್ಛೆಯಿಂದ ಸ್ವದೇಶ ಭಾರತಕ್ಕೆ ಮರಳಿದ ಬೆರಳಿಕೆಯಷ್ಟು ಮಂದಿಯಲ್ಲಿ ಶಿಕಾರಿಪುರ ಹರಿಹರೇಶ್ವರ ಒಬ್ಬರು. ಅವರು ಅಮೆರಿಕೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನುವ ಸಂಗತಿ ಎಷ್ಟೋ ಮಂದಿಗೆ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಅವರು ಯಾವತ್ತೂ ಡ್ರಾಯಿಂಗು, ಸೀಮೆಂಟು, ಕಾಂಕ್ರೀಟು ಅಥವಾ ಸ್ಟೀಲು ಬಗ್ಗೆ ಚಕಾರವೆತ್ತಿದವರಲ್ಲ. ಎಲ್ಲಿ ಹೋದರೂ ಕನ್ನಡ ಭಾಷೆ, ಕನ್ನಡ ಸಂಸ್ಕೃತಿ, ಕನ್ನಡ ಬರವಣಿಗೆ, ಕನ್ನಡ ಸಂಸಾರಗಳೊಂದಿಗೆ ಸ್ನೇಹ ...ಹೀಗೆ ಕನ್ನಡಮಯವೇ ಆಗಿದ್ದವರು. ಪತ್ರಕರ್ತರಾಗಿ, ಸಂಶೋಧಕರಾಗಿ, ಸಾಹಿತ್ಯ ಪರಿಚಾರಕರಾಗಿ, ಅಂಕಣಕಾರರಾಗಿ ಅವರ ಕನ್ನಡ ವಿಶ್ವ ವಿಶಾಲವಾದದ್ದು .
ಉತ್ತರ ಕ್ಯಾಲಿಫೋನಿಯಾದ ಸ್ಟಾಕ್ಟನ್ನಲ್ಲಿದ್ದ ತಮ್ಮ ಮನೆಯನ್ನು ಮಾರಿ ಗಂಟುಮೂಟೆ ಕಟ್ಟಿಕೊಂಡು ಅವರು ಮೈಸೂರಿಗೆ ಮರಳಿ ಈಗ್ಗೆ ಎರಡು ವರ್ಷ ತುಂಬುತ್ತಾ ಬಂದಿದೆ. ಅವರು ಹಾಗು ಅವರ ಹೆಂಡತಿ ನಾಗಲಕ್ಷ್ಮಿ ಮೈಸೂರಿನಲ್ಲಿ ವಾಸವಾಗಿದ್ದು ನಿವೃತ್ತ ಜೀವನವನ್ನು ಭಾರತದಲ್ಲಿ ಸಂತೋಷದಿಂದ ನೀಗಿಕೊಳ್ಳುವ ಕಾಯಕದಲ್ಲಿ ತೊಡಗಿದ್ದಾರೆ.
ನಿವೃತ್ತ ಜೀವನ ಎಂದರೆ ಈಜಿ ಛೇರ್ ಮೇಲೆ ಕುಳಿತು ಕಾಲು ಅಲ್ಲಾಡಿಸುತ್ತಾ ವೃತ್ತ ಪತ್ರಿಕೆ ಓದುವುದು ಎಂದು ಹರಿ ದಂಪತಿಗಳು ನಂಬಿದವರಲ್ಲ. ಭಾರತಕ್ಕೆ ಮರಳಿದ ಮೇಲೆ ಅವರ ಕನ್ನಡ ಚಟುವಟಿಕೆಗಳು ದುಪ್ಪಟ್ಟಾಗಿವೆ. ನಿತ್ಯ ಯಾವುದಾದರೊಂದು ಕನ್ನಡ ಕಾರ್ಯಕ್ರಮದಲ್ಲಿ ಭಾಷಣ, ಚರ್ಚೆ, ಹೊಸ ಪುಸ್ತಕದ ಓದಿನಲ್ಲಿ ದಂಪತಿಗಳು ಸಂತೋಷ ಕಾಣುವರು. ಊರಿನಲ್ಲಿ ಏನೂ ಕಾರ್ಯಕ್ರಮ ಇಲ್ಲದಿದ್ದರೆ ತಮ್ಮ ಮನೆಯಲ್ಲೇ ಒಂದು ಕಾರ್ಯಕ್ರಮ ಏರ್ಪಡಿಸುವರು. ಸಾಹಿತ್ಯ, ಸಂಗೀತ, ಸಂಸ್ಕೃತಿಯ ಅಭಿರುಚಿ ಇರುವ ಜನರನ್ನು ಆಹ್ವಾನಿಸಿ ಚರ್ಚೆ, ಸಂವಾದ ನಡೆಸಿ ಒಳ್ಳೆ ಊಟಹಾಕಿ ಒಂದು ಕನ್ನಡ ಪುಸ್ತಕ ಕೈಗಿಟ್ಟು ಬೀಳ್ಕೊಡುವರು.
ಇಂಥ ಹರಿ-ನಾಗ ದಂಪತಿಗಳಿಗೆ ಸುಮನಾ, ನಂದಿನಿ ಹೆಸರಿನ ಇಬ್ಬರು ಹೆಣ್ಣು ಮಕ್ಕಳು. ಅವರಿಬ್ಬರು ಅಮೆರಿಕದಲ್ಲೇ ಇದ್ದಾರೆ ಎಂದು ಹೇಳುವ ಅಗತ್ಯವಿಲ್ಲ. ತಂದೆಯ ಎದೆಮಟ್ಟಕ್ಕೆ ಬೆಳೆದು ನಿಂತಿರುವ ಮಕ್ಕಳು ವಿದ್ಯಾರ್ಜನೆ ಪೂರೈಸಿ, ಅಮೆರಿಕದಲ್ಲಿ ತಮಗೊಪ್ಪುವ ನೌಕರಿ ಕಂಡುಕೊಂಡಿರುವರು.
ಮಕ್ಕಳನ್ನು ಒಮ್ಮೆ ನೋಡಿಕೊಂಡು ಬರುವ ಜವಾಬ್ದಾರಿ ತಂದೆಯ ಕೆಲಸವನ್ನು ನಿರ್ವಹಿಸಲು ಹರಿ ಅವರು ಪ್ರಸಕ್ತ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಅವರಿಗೆ ಆಗಲೂ, ಈಗಲೂ, ಯಾವಾಗಲೂ ಕನ್ನಡದ ಕನಸುಗಳು. ಅಂತೆಯೇ ಕ್ಯಾಲಿಫೋರ್ನಿಯಾ ದ ಹಳೆ ಗೆಳೆಯರು, ಹಾಗೂ ಕನ್ನಡಾಭಿಮಾನಿಗಳ ಜತೆ ಬೆರೆತು ಇತ್ತೀಚೆಗೆ ತಾವು ಕಂಡುಂಡ ಭಾರತದ ಅನುಭವಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುತ್ತಿದ್ದಾರೆ.
ಆ ಕಾರ್ಯಕ್ರಮ ಇದೇ ಶನಿವಾರ ಮಾರ್ಚ್ 12ರಂದು ಬೇ ಏರಿಯಾದಲ್ಲಿ ವ್ಯವಸ್ಥೆಯಾಗಿದೆ. ಹರಿ ಅವರು ಪಾಲ್ಗೊಳ್ಳುತ್ತಿರುವ ಅನೌಪಚಾರಿಕ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾತನಾಡಲು ಆಯ್ದುಕೊಂಡಿರುವ ವಿಷಯ ; 'ನಮ್ಮ ಕನ್ನಡ ಲೇಖಕರರೊಂದಿಗೆ ನಾನು ಕಳೆದ ಇತ್ತೀಚಿನ ದಿನಗಳು'
ಕರ್ನಾಟಕದಲ್ಲಿ ನೆಲೆಸಿರುವ ಕನ್ನಡಿಗರ ಇವತ್ತಿನ ಮನೋಧರ್ಮ, ಕನ್ನಡ ಲೇಖಕರ ಸ್ಥಿತಿ ಗತಿ, ಸಾಹಿತ್ಯ ಕೃಷಿ, ಮುದ್ರಣ, ಪ್ರಕಾಶನ ಮುಂತಾದ ವಿಷಯಗಳ ಬಗ್ಗೆ ಅವರು ಮಾತನಾಡುವರು. ಕನ್ನಡ ಭಾಷೆ, ಬರವಣಿಗೆಯಲ್ಲಿ ಆಸಕ್ತಿ ಇರುವವರು ಕನ್ನಡದ ಬಗ್ಗೆಯೂ, ಆಸಕ್ತಿ ಇಲ್ಲದವರು 'ಭಾರತಕ್ಕೆ ಮತ್ತೆ ನೀವು ಹೇಗೆ ಹೊಂದಿಕೊಂಡಿರಿ ' ಎಂಬ ಪ್ರಶ್ನೆಯಾಂದಿಗೆ ಮಾತು ಆರಂಭಿಸಿ ಚರ್ಚೆ ಬೆಳೆಸಬಹುದು.
Venue : Cedar Room, Santa Clara Central Library,
2635 Homestead Road, Santa Clara, CA 95051
Time : between 10am and 12pm
Mr. Harihareshwara now staying with Raj and Vijaya Joshi in Lafayette, North California: phone: (925-934-9919)
About Harihareshwara:
/category/hellokannada/hari.html
/sahitya/nri2/1110hari.html
Thank you for choosing Thatskannada.com
[email protected]
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್











Click it and Unblock the Notifications