233685lok sabha election 2009ಮಂಕುಬೂದಿ ಎರಚಲು ಸಾಧ್ಯವಿಲ್ಲದ ಇಂಕು!/news/2009/03/14/indelible-ink-by-mysore-paints-and-varnish.htmlಮೈಸೂರು, ಮಾ. 14 : ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಹಳ ದಿನಗಳವರೆಗೆ ಅಳಿಸಲಾಗದ ಗುರುತು ಮೂಡಿಸುವ ಸಂಗತಿ ಯಾವುದು? ರೌಡಿಗಳ ದರ್ಬಾರು, ರಾಜಕಾರಣಿಗಳ ಭ್ರಷ್ಟಾಚಾರ ಯಾವುದೂ ಅಲ್ಲ. ಅದು, ಮತ ಹಾಕಿದ ನಂತರ ಎಡ ತೋರುಬೆರಳಿನ ಮೇಲೆ ಹಾಕುವ ಮಸಿಯ ಗುರುತು.ಹೌದು, ಪಂಚಾಯತಿ ಚುನಾವಣೆಯಿರಲಿ, ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯೇ ಇರಲಿ, ಬ್ಯಾಲೆಟ್ 35223http://kannada.oneindia.com/img/2009/03/14-gangubai-hangal2.jpg233685lok sabha election 2009ಚುನಾವಣೆ : ಡಿವಿ ಗುಂಡಪ್ಪ ಕಂಡಂತೆ/literature/poem/2009/0317-poetic-rendering-on-election-by-dvg.htmlಇಂದು (ಮಾರ್ಚ್ 17) ಡಿವಿ ಗುಂಡಪ್ಪ ಅವರ ಜನ್ಮದಿನ. ಅವರ 'ಮಂಕುತಿಮ್ಮನ ಕಗ್ಗ' ಎಲ್ಲರಿಗೂ ಗೊತ್ತು. ಆದರೆ, 'ಮಹಾಚುನಾವಣೆ'ಯ ಬಗ್ಗೆಯೂ ಡಿವಿಜಿ ಅವರು ಕೆಲವು ಪದ್ಯಗಳನ್ನು ಬರೆದಿದ್ದಾರೆಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. 1965ರಲ್ಲಿ ಬರೆದ ಆ ಪದ್ಯಗಳು ಇಂದಿಗೂ ಪ್ರಸ್ತುತವಾಗಿವೆಯೆಂದರೆ ನಮ್ಮ ರಾಜಕಾರಣವು ಅಂದಿಗೂ ಇಂದಿಗೂ ಬದಲಾಗಿಲ್ಲವೆಂಬುದು ವೇದ್ಯವಾಗುತ್ತದೆ.* ಎಚ್. ಆನಂದರಾಮ ಶಾಸ್ತ್ರೀಹೌದು. ರಾಜಕಾರಣವೆಂಬುದು ಕೊಳಕುಗಟ್ಟಿ ನಿಂತ ನೀರು. 35286http://kannada.oneindia.com/img/2009/03/17-dvg5.jpg233685lok sabha election 2009ಮಹಾಸಮರಕ್ಕೊಂದು ಮುನ್ನುಡಿ/news/2009/03/17/lok-sabha-election-2009-wake-up-call.htmlಪ್ರಜಾಪ್ರಭುತ್ವದಲ್ಲಿ ಇನ್ನೂ ಪ್ರಜೆಗಳ ಕೈಯ್ಯಲ್ಲಿ ಉಳಿದುಕೊಂಡಿರುವ ಏಕೈಕ ಅಸ್ತ್ರ ಮತದಾನದ ಹಕ್ಕು. ಇದಕ್ಕೂ ಕುತ್ತು ಬಂದರೆ ಆಶ್ಚರ್ಯವಿಲ್ಲ. ಮತದಾನದಲ್ಲಿ ಪಾಲ್ಗೊಳ್ಳದೆ ಸಿಕ್ಕಿದ ರಜೆಯನ್ನು ಕಂಬಳಿ ಹೊದ್ದು ಮಲಗಲು ಬಳಸಿಕೊಂಡರೆ ದೇಶ ಆಳಲು ಅರ್ಥಾತ್ ನಮ್ಮನ್ನು ಆಳಲು ಒಳ್ಳೆಯವರು ಬರಲು ಸಾಧ್ಯವೇ ಇಲ್ಲ. ಇದನ್ನು ಪ್ರಜಾತಂತ್ರದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬನೂ ಅರಿಯುವುದೊಳಿತು.* ಚಿದಂಬರ ಬೈಕಂಪಾಡಿ, ಸೂರತ್ಕಲ್, ಮಂಗಳೂರುಮತ್ತೊಂದು ಮಹಾಸಮರಕ್ಕೆ ಅಖಾಡ 35294http://kannada.oneindia.com/img/2009/03/17-politician2.jpg233685lok sabha election 2009ಬಿಜೆಪಿ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ/news/2009/03/17/15th-ls-poll-bjp-third-list-announced.htmlಬೆಂಗಳೂರು, ಮಾ. 17 : 15ನೇ ಲೋಕಸಭೆ ಚುನಾವಣೆಗೆ ಭಾರಿ ಸಿದ್ಧತೆಯಲ್ಲಿರುವ ಭಾರತೀಯ ಜನತಾ ಪಕ್ಷ ಇಂದು ನಾಲ್ಕು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚುನಾವಣೆ ತಯಾರಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗಿಂತ ಮುಂದೆ ಎನ್ನುವುದನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತುಪಡಿಸಿರುವ ಬಿಜೆಪಿ, ಈಗಾಗಲೇ ಗೆಲುವಿನ ಕುದುರೆ ಎನ್ನುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ 35298http://kannada.oneindia.com/img/2009/03/17-janardhana-swamy1.jpg233685lok sabha election 2009ಚುನಾವಣೆಯೆಂಬ ಮಾಯೆಯ ಮಹಿಮೆ ಏನಿದೆಯೋ?/column/bhat/2009/0319-lok-sabha-election-who-knows-what-happens.htmlಒಂದೇ ಸಮನೆ ಸೂರ್ಯ ಉಗಿಯಲಾರಂಭಿಸಿದ್ದಾನೆ. ಬಿಸಿಲಗುಳ್ಳೆಗಳು ಒಡೆಯಲಾರಂಭಿಸಿವೆ. ನೆಲ ಕಾದ ಕಾವಲಿಯಂತಾಗಿದೆ. ನೀರಿನ ಪಸೆ ಕಾವಲಿ ಮೇಲೆ ಬಿದ್ದ ನೀರಿನ ಹನಿಗಳ ಹಾಗೆ ಆವಿಯಾಗುತ್ತಿವೆ. ಏಪ್ರಿಲ್, ಮೇ ಹೇಗಿರಬಹುದೆಂಬುದನ್ನು ಊಹಿಸಿದರೇ ಬೆವರು ಟಿಸಿಲೊಡೆಯುತ್ತವೆ. ಇಷ್ಟೂ ಸಾಲದೆಂಬಂತೆ ಚುನಾವಣೆ ಕಾವು ಕೊಡಲಾರಂಬಿಸಿದೆ. ಬಿಸಿಲಿನ ಝಳ ಹಾಗೂ ಚುನಾವಣೆ ಕಾವಿನ ಜುಗಲ್‌ಬಂದಿಯಲ್ಲಿ ಜನಸಾಮಾನ್ಯ ಚಕ್ರದಡಿಗೆ ಸಿಕ್ಕ ಲಿಂಬೆಹಣ್ಣಿನಂತಾಗಿದ್ದಾನೆ. ಎಲ್ಲ ರಾಜಕೀಯ 35348http://kannada.oneindia.com/img/2009/03/19-jyoti-basu1.jpg109196ravi belagereದೇವೇಗೌಡರ ಹೆಗಲ ಮೇಲಿಂದ ಜ್ಞಾನಪೀಠಿ ಕೈ ತೆಗೆಯಲಿ!/column/ravibelagere/2008/1229-ur-ananthamurthy-voices-against-mining.htmlನಾಡಿನ ಹಿರಿಯ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಮೊನ್ನೆ ಗಂಭೀರವಾದ ವಿಷಯವೊದನ್ನು ಪ್ರಸ್ತಾಪಿಸಿದ್ದಾರೆ. ಗಣಿಗಾರಿಕೆ ಅನ್ನುವುದೇ ಮುಲತಃ ಅವ್ಯವಹಾರ. ಹೀಗಾಗಿ ಈ ಗಣಿಗಾರಿಕೆ ಕೆಲಸ ಏನಿದೆ? ಅದರ ವಿರುದ್ಧವೇ ಹೋರಾಡಬೇಕು ಅನ್ನುವುದು ಅವರ ಕಥೆ. ನಿಜ, ಅವರ ಮಾತಿನ ಹಿನ್ನೆಲೆಯಲ್ಲಿರುವ ಉದ್ದೇಶವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಇವತ್ತು ಗಣಿಗಾರಿಕೆ ಮೂಲಕ ತೆಗೆಯುತ್ತಿರುವ ಕಬ್ಬಿಣದ ಅದಿರೇನಿದೆ? ಈ ಅದಿರನ್ನು 33750http://kannada.oneindia.com/img/2008/12/29-ura5.jpg109196ravi belagereಪತ್ರಕರ್ತ ಬಿವಿ ಸೀತಾರಾಂ ಜೈಲು ಪ್ರಸಂಗ/column/ravibelagere/2009/0112-karavali-ale-editor-bv-seetharam-in-soup.htmlಸೀತಾರಾಂ ಅವರ ಹಟಮಾರಿತನದ ಪರಿಣಾಮವಾಗಿ ಕರಾವಳಿ ಅಲೆ ವರದಿಗಾರರು ಕೆಲಸಬಿಟ್ಟು ಹೋಗಿದ್ದಾರೆ. ಬೇರೆ ಪತ್ರಿಕೆಗಳಿಗೆ, ಛಾನಲ್ ಗಳಿಗೆ ಸೇರಿಕೊಂಡಿದ್ದಾರೆ. ಸೀತಾರಾಂ ತಮ್ಮ ದೃಷ್ಟಿಕೋನ ಬದಲಿಸಿಕೊಳ್ಳಲಿ. ಪದೇಪದೇ ಜೈಲು ಸೇರುವುದನ್ನು ಅವರು ಹೋರಾಟ ಅಂದುಕೊಂಡರೆ, ಅದು ಅವರ ಮತ್ತು ಅವರ ಪತ್ರಿಕೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಸೀತಾರಾಂ ಅವರ ಬಂಧನವನ್ನು ಖಂಡಿಸಿ ಜ.12ರ ಸಂಜೆ 4: 30ಕ್ಕೆ ಬೆಂಗಳೂರಿನ 34027http://kannada.oneindia.com/img/2009/01/12-bv-seetharam1.jpg109196ravi belagereಇಮೇಲಿನಲ್ಲಿ ಪತ್ರಕರ್ತ ರವಿಬೆಳಗೆರೆ ಬಂಧನ/column/ravibelagere/2009/0119-here-is-ravi-belagere-email-id.htmlನೀವು ಪತ್ರಿಕೆಯಲ್ಲಿ ನಿಮ್ಮ ಮೊಬೈಲ್ ನಂಬರೂ ಹಾಕುವುದಿಲ್ಲ. ಆಫೀಸಿನ ಫೋನಿಗೂ ಸಿಕ್ಕುವುದಿಲ್ಲ. ಕಡೇ ಪಕ್ಷ mail-id ಕೊಡುತ್ತೀರಾ ಅಂತ ನೋಡಿದರೆ, ಅದೂ ಇಲ್ಲ. ಇದೆಂಥ ನಿಗೂಢ ಪತ್ರಿಕೋದ್ಯಮ ಅಂತ ಕೆಲವರು ಬೇಜಾರು ಮಾಡಿಕೊಳ್ಳುತ್ತಿದ್ದಾರೆ.ಆಫೀಸಿನ ಫೋನಿಗೆ ನಾನು ಭಾನುವಾರಗಳಲ್ಲಿ ಸಾಮಾನ್ಯವಾಗಿ ಸಿಗುತ್ತೇನೆ: ಊರಲ್ಲಿದ್ದರೆ. 080-26790805ಗೆ ಯಾವ ಭಾನುವಾರ ಬೇಕಾದರೂ ಮಾಡಬಹುದು. ಉಳಿದಂತೆ ಎಸ್ಸೆಮ್ಮೆಸ್ ಕಳಿಸಲಿಕ್ಕೆಂದೇ 99166 74753 ನಂಬರಿನ 34151http://kannada.oneindia.com/img/2009/01/19-ravibelegere4.jpg109196ravi belagereಇಸ್ಕಂಡ ಸಂಪಂಗಿ ಎಂಬ ಕೋಡಂಗಿ/column/ravibelagere/2009/0203-sampangi-the-rotten-kgf-mla.htmlಶಾಸಕ ಸಂಪಂಗಿ ಅಕ್ಕ ಪಕ್ಕದವರ ಮುಖಕ್ಕೆ ಮಸಿ ಬಳಿದು ತಾನು ಅಮೇಧ್ಯದ ಡ್ರಮ್ಮಿನಲ್ಲೇ ಮುಳುಗಿ ಜೈಲು ತಲುಪಿಕೊಂಡಿದ್ದಾನೆ. ಇಷ್ಟು ದಿನ 'ಆಪರೇಷನ್ ಕಮಲ' ಅನ್ನುತ್ತಿದ್ದವರು 'ಆಪರೇಷನ್ ಮಲ' ಅನ್ನತೊಡಗಿದ್ದಾರೆ. ದಲಿತನೆಂಬ ಯಾವ ರಿಯಾಯಿತಿಯನ್ನೂ ಕೊಡದೆ ಶಾಸಕ ಸಂಪಂಗಿಯನ್ನು ಕ್ಯಾಕರಿಸಿ ಆಚೆಗಟ್ಟಬೇಕು. ಲೋಕಾಯುಕ್ತ ಸಂತೋಷ್ ಹೆಗ್ಗಡೆ ಮತ್ತು ಅವರ ಸಿಬ್ಬಂದಿಯವರು ದೊಡ್ಡ ಬೇಟೆ ಆಡಿದ್ದಾರೆ. ಗುಮಾಸ್ತರಿಗಷ್ಟೇ ಸೀಮಿತವಾಗಿದ್ದ ನೇಣು 34449http://kannada.oneindia.com/img/2009/02/03-sampangi-y2e.jpg109196ravi belagereಮುತಾಲಿಕರ ಪುಂಡಾಟಿಕೆ ಮತ್ತು ವ್ಯಾಲಂಟೈನ್ ಮನಸುಗಳು/column/ravibelagere/2009/0209-who-is-pramod-mutalik-to-stop-valentines-day.htmlಕಾಲ ಬದಲಾಗಿದೆ. ಹುಡುಗ ಹುಡುಗಿಯರು ಪ್ರೇಮ ನಿವೇದನೆ ಮಾಡಿಕೊಳ್ಳುವುದು, ಬಾಳ ಸಂಗಾತಿಯನ್ನು ಹುಡುಕಿಕೊಳ್ಳುವುದು ಅವರವರಿಗೆ ಬಿಟ್ಟ ವಿಚಾರ. ವೈಯಕ್ತಿಕ ಸ್ವಾತಂತ್ರ್ಯ ಹರಣವಾಗುವುದನ್ನು ಯಾರೂ ಸಹಿಸಿಕೊಳ್ಳುವುದಿಲ್ಲ. ಹುಡುಗ ಹುಡುಗಿಯರು ಸಾರ್ವಜನಿಕವಾಗಿ ಅಸಹ್ಯವಾಗಿ ವರ್ತಿಸುತ್ತಿದ್ದರೆ ಅವರನ್ನು ದಾರಿಗೆ ತರಲು ಬೇಕಾದಷ್ಟು ಮಾರ್ಗಗಳಿವೆ, ಆದರೆ ಪುಂಡಾಟಿಕೆಯಿಂದಲ್ಲ. ಇದನ್ನು ಮುತಾಲಿಕ್ ಮತ್ತು ಅವರ ಶ್ರೀರಾಮಸೇನೆ ಅರಿತುಕೊಳ್ಳುವುದು ಉತ್ತಮ.* ರವಿ ಬೆಳಗೆರೆ"ಹುಡುಗ ಹುಡುಗಿ ಒಟ್ಟಿಗಿರುವುದನ್ನು 34554http://kannada.oneindia.com/img/2009/02/09-velentines1.jpg208189ಲೋಕಸಭೆ ಚುನಾವಣೆ 2009ಯುಪಿಎ ಸರ್ಕಾರದ ಸಾಧನೆಯೇ ಶ್ರೀರಕ್ಷೆ, ಸೋನಿಯಾ/news/2009/02/25/end-factionalism-in-congress-sonia-gandhi.htmlನವದೆಹಲಿ, ಫೆ. 25 : ಪಕ್ಷದಲ್ಲಿರುವ ಮುಖಂಡರು ಒಳಜಗಳಗಳನ್ನು ಮರೆತು ಏಕತೆಯಿಂದ ಲೋಕಸಭೆ ಚುನಾವಣೆಯಲ್ಲಿ ಹೋರಾಟ ನಡೆಸುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು. ಕಾಂಗ್ರೆಸ್ಸಿನ 14ನೇ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನಸ್ತಾಪ, ವೈಮನಸ್ಸು ಕೈಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದರೆ ಮಾತ್ರ ಜಯಗಳಿಸಲು ಸಾಧ್ಯ ಎಂದರು. ಕಾಂಗ್ರೆಸ್ ನೇತೃತ್ವದ 34859http://kannada.oneindia.com/img/2009/02/25-sonia-gandhi.jpg208189ಲೋಕಸಭೆ ಚುನಾವಣೆ 2009ಫೆ.26 ಯುಪಿಎ ಸರ್ಕಾರದ ಅಂತಿಮ ಅಧಿವೇಶನ/news/2009/02/26/farewell-session-of-14th-lok-sabha-on-feb26-upa.htmlನವದೆಹಲಿ. ಫೆ. 26 : 14 ನೇ ಲೋಕಸಭೆ ಅಧಿವೇಶನದ ಕೊನೆಯ ದಿನ ಆರಂಭವಾಗಿದ್ದು, ಯಪಿಎ ಸರ್ಕಾರದ ಅಂತಿಮ ಅಧಿವೇಶನ ಇದಾಗಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಸರ್ಕಾರದ ಅಂತಿಮ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಪಾಲ್ಗೊಂಡು ಸಂಸತ್ತು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ. ಪ್ರಧಾನಮಂತ್ರಿಯವರಿಗೆ ಕನಿಷ್ಠ ಎರಡು ತಿಂಗಳು ವಿಶ್ರಾಂತಿ ಅವಶ್ಯಕತೆ ಇದ್ದು, ಇಂದಿನ ಅಧಿವೇಶನ 34881http://kannada.oneindia.com/img/2009/02/26-india-parliament.jpg208189ಲೋಕಸಭೆ ಚುನಾವಣೆ 2009ಹಾಸನದಿಂದ ಲೋಕಸಭೆಗೆ ಸ್ಪರ್ಧೆ: ದೇವೇಗೌಡ/news/2009/02/27/deve-gowda-to-contest-from-haasan-for-ls-polls.htmlಪಾಂಡವಪುರ, ಫೆ. 27 : ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಕುರಿತು ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ. ಒಂದೊಮ್ಮೆ ಸ್ಪರ್ಧೆ ಅನಿವಾರ್ಯವಾದರೆ ಮಂಡ್ಯದಿಂದ ಕಣಕ್ಕಿಳಿಯುವುದಿಲ್ಲ. ನನ್ನ ತವರು ಕ್ಷೇತ್ರ ಹಾಸನದಿಂದ ಅಖಾಡಕ್ಕಿಳಿಯುವೆ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಇಲ್ಲಿನ ಬೇಬಿ ಬೆಟ್ಟಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಸ್ಪರ್ಧಿಗೆ ಇಳಿಯುವಂತೆ 34892http://kannada.oneindia.com/img/2009/02/27-deve-gowda1.jpg208189ಲೋಕಸಭೆ ಚುನಾವಣೆ 2009ಆಪರೇಷನ್ ಕಮಲ; ಯೋಗೇಶ್ವರ ಬಿಜೆಪಿಗೆ /news/2009/02/28/mla-yogeshwar-basavraju-likely-to-join-bjp.htmlಬೆಂಗಳೂರು, ಫೆ. 28 : ಆಪರೇಷನ್ ಕಮಲವನ್ನು ಮುಂದುವರಿಸಿರುವ ಬಿಜೆಪಿ ಈ ಬಾರಿ ಕಾಂಗ್ರೆಸ್ ಪಕ್ಷದ ಚನ್ನಪಟ್ಟಣದ ಶಾಸಕ ಸಿ ಪಿ ಯೋಗೇಶ್ವರ ಹಾಗೂ ಮಾಜಿ ಸಂಸದ ಜಿ ಎಸ್ ಬಸವರಾಜ್ ಅವರಿಗೆ ಗಾಳ ಹಾಕಿದೆ. ಈ ಇಬ್ಬರು ನಾಯಕರು ಶೀಘ್ರದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ವೇದಿಕೆ ಸಿದ್ಧಗೊಂಡಿದೆ ಎನ್ನಲಾಗಿದೆ. ಯೋಗೇಶ್ವರ ಅವರನ್ನು ಬೆಂಗಳೂರು 34915http://kannada.oneindia.com/img/2009/02/28-cp-yogeshwar1.jpg208189ಲೋಕಸಭೆ ಚುನಾವಣೆ 200915 ನೇ ಲೋಕಸಭೆ ಚುನಾವಣೆಗಳ ವೇಳಾಪಟ್ಟಿ/news/2009/03/02/ec-announces-lok-sabha-election2009-dates.htmlನವದೆಹಲಿ, ಮಾ. 2 : ತೀವ್ರ ಕುತೂಹಲ ಸೃಷ್ಟಿಸಿದ್ದ 15 ನೇ ಲೋಕಸಭೆ ಚುನಾವಣೆಗಳ ವೇಳಾಪಟ್ಟಿಯನ್ನು ಇಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಐದು ಹಂತದಲ್ಲಿ ಚುನಾವಣೆ ನಡೆಸಲು ನಿರ್ಧರಿಸಿರುವ ಆಯೋಗ, ಎಪ್ರಿಲ್ 16, 23, 30, ಮೇ 7 ಮತ್ತು ಮೇ 13 ರಂದು ಮತದಾನ ನಡೆಸಲಾಗುವುದು. ಮೇ 16 ರಂದು ಮತ ಎಣಿಕೆ ಕಾರ್ಯ 34937http://kannada.oneindia.com/img/2009/03/02-gopalaswamy2.jpgnews"> ರೋಲ್ ಮಾಡೆಲ್‌ಗಳಾ ರೋಲ್‌ಕಾಲ್ ಮಾಡೆಲ್‌ಗಳಾ? | Lok Sabha Election 2009 | Role model politician | Chandregowda - ರೋಲ್ ಮಾಡೆಲ್‌ಗಳಾ ರೋಲ್‌ಕಾಲ್ ಮಾಡೆಲ್‌ಗಳಾ? - Kannada Oneindia

ರೋಲ್ ಮಾಡೆಲ್‌ಗಳಾ ರೋಲ್‌ಕಾಲ್ ಮಾಡೆಲ್‌ಗಳಾ?

DB Chandregowda
ಜಯಪ್ರಕಾಶ್ ನಾರಾಯಣ್, ಗಾಂಧಿ, ಲೋಹಿಯಾ, ಅಂಬೇಡ್ಕರ್ ಅವರಂಥ ರೋಲ್ ಮಾಡೆಲ್ ನಾಯಕರುಗಳು ಒಬ್ಬರಾದರೂ ಇದ್ದಾರಾ ಅಂತ ಹುಡುಕಿದೆ ಒಬ್ಬರೂ ಸಿಗುವುದಿಲ್ಲ. ಪಕ್ಷನಿಷ್ಠೆ ಸವಕಲು ನಾಣ್ಯದಂತಾಗಿದೆ, ಜನಪರ ಕಾಳಜಿ ನಗಣ್ಯವಾಗಿದೆ. ಇಂಥವರಿಂದ ಚುನಾವಣೆಯ ಸಮಯದಲ್ಲಿ ದುಡ್ಡು ಕಿತ್ತುಕೊಂಡರೇನು ತಪ್ಪು ಎಂಬುದು ಸಾಮಾನ್ಯ ಮತದಾರರ ಪ್ರಶ್ನೆ.

* ರವಿ ಬೆಳಗೆರೆ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನೇ ದಿನೇ ಹೆಚ್ಚಾಗತೊಡಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯ ನಂತರ ದಿಲ್ಲಿ ಮಟ್ಟದಲ್ಲಿ ತಮ್ಮ ಪ್ರಭಾವ ಹೆಚ್ಚಾಗಬೇಕೆಂದು ಎಲ್ಲ ಪಕ್ಷಗಳ ನಾಯಕರೂ ಬಯಸುತ್ತಿರುವುದರಿಂದ ಇಂತಹ ಕಾವು ಹೆಚ್ಚಾಗುತ್ತಿದೆ ಅನ್ನುವುದೂ ನಿಜವೇ.

ಆದರೆ, ನನಗೆ ಕಳವಳ ಆಗುತ್ತಿರುವುದೆಂದರೆ ಈ ಚುನಾವಣೆಯ ನಂತರ ಕರ್ನಾಟಕದ ಪರಿಸ್ಥಿತಿ ಮತ್ತಷ್ಟು ದಯನೀಯವಾಗುತ್ತದಾ ಅನ್ನುವ ಪ್ರಶ್ನೆ. ಸುಮ್ಮನೆ ನೋಡುತ್ತಾ ಹೋಗಿ, ಬಿಜೆಪಿ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು ಅನ್ನುವ ಕಾರಣಕ್ಕಾಗಿ ದಂಡಿಯಾಗಿ ದುಡ್ಡು ಸುರಿಯುತ್ತಿವೆ. ಹೀಗೆ ದುಡ್ಡು ಸುರಿಯುವ ಪಕ್ಷಗಳು, ನಾಯಕರು ನಾಳೆ ಇದನ್ನು ಹಿಂಪಡೆಯಬೇಕು ಅನ್ನುವ ಉದ್ದೇಶವಿಲ್ಲದೇ ಮಾಡಲು ಸಾಧ್ಯವಾ? ಖಂಡಿತ ಇಲ್ಲ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ರಣಾಂಗಣಕ್ಕಿಳಿದಿರುವ ರಾಜಕೀಯ ಪಕ್ಷಗಳು ಯಾವ ವಿಷಯವನ್ನಿಟ್ಟುಕೊಂಡು ಮಾತನಾಡುತ್ತಿವೆ?

ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೋಮುವಾದಿ. ಅದು ಅಸ್ತಿತ್ವದಲ್ಲಿದ್ದರೆ ಜನತೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ ಅಂತ ಚೀರಾಡಿಕೊಂಡು ಹೋಗುತ್ತಿದ್ದರೆ ಇತ್ತ ಯಡಿಯೂರಪ್ಪನವರ ಸರ್ಕಾರದಲ್ಲಿರುವ ಜನ ತಮ್ಮ ಸರ್ಕಾರದ ಜನಪ್ರಿಯತೆಯನ್ನು ಕಂಡು ಪ್ರತಿಪಕ್ಷಗಳಿಗೆ ಹೊಟ್ಟೆ ಉರಿ, ಹೀಗಾಗಿ ಟೀಕಿಸುತ್ತಿವೆ ಅಂತೆಲ್ಲ ಮಾತಾಡಿಕೊಂಡು ಹೋಗುತ್ತಿದ್ದಾರೆ. ಇದೆಲ್ಲ ವ್ಯರ್ಥಾಪಾಲ ಅಂತ ಎಂಥವರಿಗೂ ಗೊತ್ತಾಗುತ್ತದೆ. ಆದರೆ ಇವತ್ತಿನ ರಾಜಕೀಯ ಸಂದರ್ಭದಲ್ಲಿ ನಮ್ಮ ನಾಯಕರು ಅನ್ನಿಸಿಕೊಂಡವರು ಹೇಗೆ ಬದಲಾಗುತ್ತಿದ್ದಾರೆ ನೋಡಿ.

ಉದಾಹರಣೆಗೆ ನಮ್ಮ ಡಿಬಿ ಚಂದ್ರೇಗೌಡರು. ಒಂದು ಕಾಲದ ಸೆಕ್ಯುಲರ್ ರಾಜಕೀಯದ ಪ್ರತೀಕದಂತೆ ಇದ್ದ ಡಿಬಿಸಿ ಇವತ್ತು ಥೇಟು ಬಿಜೆಪಿ ಮನುಷ್ಯನಂತೆ ಮಾತನಾಡುತ್ತಿದ್ದಾರೆ. ಬಿಜೆಪಿ ಏನು ಪಾಕಿಸ್ತಾನದಲ್ಲಿರುವ ಪಕ್ಷವಾ? ಅನ್ನುವ ರೀತಿಯಲ್ಲಿ ಅವರು ಮಾತನಾಡುತ್ತಿದ್ದರೆ, ಎಪ್ಪತ್ತರ ಗಡಿ ದಾಟುವತನಕ ಚಂದ್ರೇಗೌಡ ಎಂಬ ರಾಜಕಾರಣಿ ಮಾತಾಡಿಕೊಂಡು ಬಂದಿದ್ದೆಲ್ಲ ಸುಳ್ಳಾ? ಅಥವಾ ರಾಜಕೀಯ ಲಾಭಕ್ಕಾಗಿ ಅವರು ಈ ವ್ಯವಸ್ಥೆಯ ಜತೆ ರಾಜಿಯಾಗಿಬಿಟ್ಟರಾ ಅನ್ನಿಸುತ್ತದೆ. ಹಾಗಂತ ನಾವು ನಾಯಕರ ಬಗ್ಗೆ ತೀರಾ ಸಿನಿಕರಾಗುವ ಅಗತ್ಯವೇನಿಲ್ಲ. ಕೇವಲ ಮೂರು ವರ್ಷಗಳ ಹಿಂದೆ ಬಿಜೆಪಿ ಜತೆ ಕೈ ಜೋಡಿಸಿ ಮುಖ್ಯಮಂತ್ರಿ ಆಗುವ ಕಾಲಕ್ಕೆ ನಮ್ಮ ಕುಮಾರಸ್ವಾಮಿಗೆ ಸೆಕ್ಯುಲರ್ ಪದದ ಅರ್ಥ ಏನೂಂತ ಗೊತ್ತಿರಲಿಲ್ಲ. ಹಾಗಂತಲೇ ಯಾರೇ ಕೇಳಿದರೂ ಸೆಕ್ಯುಲರ್ ಅನ್ನುವ ಪದದ ಅರ್ಥ ಏನ್ರೀ? ನನಗೆ ಯಾವ ಡಿಕ್ಷನರಿಯಲ್ಲೂ ಅದರ ಅರ್ಥ ಸಿಗುತ್ತಿಲ್ಲ ಅಂತ ಯಬಡೇಸಿಯಂತೆ ಮಾತನಾಡುತ್ತಿದ್ದರು. ಆದರೆ ಅದೇ ಕುಮಾರಸ್ವಾಮಿ ಇವತ್ತು ಸೆಕ್ಯುಲರ್ ವ್ಯವಸ್ಥೆಯ ಆಧಾರ ಸ್ತಂಭದಂತೆ ಪೋಜು ಕೊಡುತ್ತಿದ್ದಾರೆ.

ಅವರಪ್ಪ ದೇವೆಗೌಡರ ಮಾತಂತೂ ಬಿಟ್ಟೇ ಬಿಡಿ. ಬಿಜೆಪಿ ಜತೆ ಹೋದ್ರೂ ಕುಮಾರ ಚೆನ್ನಾಗೇ ಕೆಲಸ ಮಾಡ್ತಿದಾನೆ ಅಂತ ಸರ್ಟಿಫಿಕೇಟು ಕೊಟ್ಟ ಭೂಪ ಅವರು. ಹೀಗೇ ನೀವು ಒಂದೆಡೆಯಿಂದ ನೋಡುತ್ತಾ ಹೋದರೆ ತಾವು ಹಿಂದಾಡಿದ ಮಾತಿಗೇ ಅವಮಾನವಾಗುವಂತೆ ನಡೆದುಕೊಳ್ಳುತ್ತಿರುವ ಡಜನ್ನುಗಟ್ಟಲೆ ನಾಯಕರು ಹೆಜ್ಜೆಗಿಬ್ಬರಂತೆ ಸಿಗುತ್ತಾರೆ. ಅದು ಬಂಗಾರಪ್ಪ ಇರಬಹುದು, ನಾಗಮಾರಪಲ್ಲಿ ಇರಬಹುದು, ಗೋವಿಂದರಾಜ ನಗರದ ಸೋಮಣ್ಣ ಇರಬಹುದು. ಹೀಗೆ ಯಾರ್ಯಾರಿಗೆ ತಮ್ಮ ಅನುಕೂಲ ಎಲ್ಲಿದೆ ಅಂತ ಗೊತ್ತಾಗುತ್ತಿದೆಯೋ ಅವರೆಲ್ಲ ಅಲ್ಲಲ್ಲಿಗೆ ಹೋಗಿ ನಿಂತು ಮಾತಾಡುತ್ತಿದ್ದಾರೆ.

ಇದನ್ನೆಲ್ಲ ನೋಡಿದರೆ ನಿಜಕ್ಕೂ ವಿಷಾದವಾಗುತ್ತದೆ. ಎಲ್ಲಿಂದ ಎಲ್ಲಿಗೆ ಹೋಗಿ ನೋಡಿದರೂ ನಮಗೆ, ನಮ್ಮ ಮಕ್ಕಳಿಗೆ ರೋಲ್ ಮಾಡೆಲ್ ಆಗುವಂಥ ನಾಕರೇ ಇಲ್ಲವಲ್ಲ ಎಂಬ ನೆನಪಾಗಿ ಖೇದವಾಗುತ್ತದೆ. ಒಂದು ಕಾಲದಲ್ಲಿ ಗಾಂಧಿ, ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್, ಲೋಹಿಯಾ ಅವರಂತಹ ರೋಲ್ ಮಾಡೆಲ್‌ಗಳು ಕಣ್ಣಮುಂದಿದ್ದರು. ಆದರೆ ಇವತ್ತು ಅಂತಹವರು ಎಲ್ಲಿದ್ದಾರೆ? ನನ್ನ ದೃಷ್ಟಿಯಲ್ಲಿ ರೋಲ್ ಮಾಡೆಲ್‌ಗಳು ಎಂದರೆ ಅಂತರಂಗದಲ್ಲಿ ಮತ್ತು ಬಹಿರಂಗದಲ್ಲಿ ಒಂದೇ ಆಗಿರುವಂತಹ ನಾಯಕರು. ದೇಶವನ್ನು ಸರ್ವಾಧಿಕಾರದ ಬಲೆಯಿಂದ ಬಿಡಿಸಲು ಹೋರಾಡಿದ ಜೆಪಿ ಅಂತಹ ಹೋರಾಟದ ಕಾಲದಲ್ಲಿ ಎಷ್ಟು ತಪಸ್ವಿಯ ಥರ ಇದ್ದರೆಂದರೆ ಟೀಕುಡಿಯುವ ಸಲುವಾಗಿ ತಮ್ಮ ಪತ್ನಿ ಒಳ್ಳೆ ಲೋಟಗಳನ್ನು ತಂದರೆ ಸಿಡಿಮಿಡಿಗೊಂಡುಬಿಟ್ಟಿದ್ದರು. ತುತ್ತು ಅನ್ನಕ್ಕೂ ಬಡಿದಾಡುವ ಜನ ದೇಶದಲ್ಲಿರುವಾಗ ಇಂತಹ ಲೋಟಗಳಲ್ಲಿ ಟೀ ಕುಡಿಯುವುದೂ ಐಷಾರಾಮ ಅನ್ನುವುದು ಜೆಪಿ ಭಾವನೆಯಾಗಿತ್ತು.

ಆದರೆ ಎಲ್ಲಿದ್ದಾರೆ ಇಂತಹ ಜನ? ಎಲ್ಲ ರೋಲ್‌ಕಾಲ್ ಮಾಡೆಲ್‌ನವರೇ. ಯಾವ ಪಕ್ಷವನ್ನು ತೆಗೆದು ನೋಡಿದರೂ ಅಷ್ಟೇ. ತಾವು ಭ್ರಷ್ಟರೇ ಅಲ್ಲ ಅಂತ ಹೇಳಿಕೊಳ್ಳುವ ಜನ ಎಲ್ಲ ಸರ್ಕಾರಗಳ ಕಾಲದಲ್ಲಿ ಒಬ್ಬಿಬ್ಬರು ಇರುತ್ತಾರಾದರೂ ಅವರೂ ತಮ್ಮ ಭ್ರಮೆಯಲ್ಲಿ ಮುಳುಗಿ ಔಟ್ಡೇಟೆಡ್ ಆಗಿ ಹೋಗಿರುತ್ತಾರೆ.

ಯಡಿಯೂರಪ್ಪ, ದೇವೆಗೌಡ, ಕುಮಾರಸ್ವಾಮಿ ಎಲ್ಲರೂ ರೈತರ ಹೆಸರು ಹೇಳುತ್ತಾರೆ. ಯಾರಾದರೊಬ್ಬರು ಸರಳವಾಗಿ, ಸಾಮಾನ್ಯ ಜನರಿಗೆ ರೋಲ್ ಮಾಡೆಲ್ ಗಳು ಅನ್ನಿಸುವ ಹಾಗೆ ಬದುಕಿದ್ದಾರಾ ಅಂತ ನೋಡಿದರೆ ಉಹೂಂ, ಎಲ್ಲರೂ ಬಂಗಲೆಯಲ್ಲಿ ಕುಳಿತು ರೈತರ ಬಗ್ಗೆ, ಬಡವರ ಬಗ್ಗೆ ಯೋಚಿಸುವವರೇ. ಈ ಪೈಕಿ ಕುಮಾರಸ್ವಾಮಿಯಂತೂ ರೈತರ ಬಗ್ಗೆ ಧೇನಿಸಲು ಮಾರಿಷಸ್ಸಿಗೆ, ದುಬೈಗೆ ಹೋಗಿ ಬರುತ್ತಿರುತ್ತಾರೆ. ಇಂತಹ ಜನ ನಮ್ಮ ರೋಲ್ ಮಾಡೆಲ್ಲುಗಳಾದರೆ ಮತದಾರರು ಹೇಗೆ ತಾನೆ ಪ್ರಜಾಪ್ರಭುತ್ವದ ಉಳಿವಿನ ಬಗ್ಗೆ ನಂಬಿಕೆ ತಾಳುತ್ತಾರೆ?

ಕೆಲವೇ ದಿನಗಳ ಹಿಂದೆ ಉಪಚುನಾವಣೆಗಳು ನಡೆದವಲ್ಲ? ಆ ಸಂದರ್ಭದಲ್ಲಿ ಮಧುಗಿರಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜನ ರಾಜಕೀಯ ಪಕ್ಷಗಳ ನಾಯಕರ ಬಳಿ ನೇರವಾಗಿ ಹಣ ಕೇಳುತ್ತಿದ್ದುದನ್ನು ಟಿವಿ ಮಾಧ್ಯಮಗಳು ಪ್ರಸಾರ ಮಾಡಿದವು. ಅವತ್ತು ನಮ್ಮ ಜನ ಇಷ್ಟು ಕೆಟ್ಟುಹೋದರಾ ಅಂತ ಕೇಳಿದವರಿದ್ದರು. ಹಣಕ್ಕಾಗಿ ಮತ ಮಾರಿಕೊಳ್ಳುವ ಈ ದೇಶಕ್ಕೆ ಭವಿಷ್ಯವಿರಲು ಸಾಧ್ಯವಾ ಅಂದವರಿದ್ದರು. ಆದರೆ ನಮ್ಮ ಮತದಾರರು ಹೀಗಾಗಲು ಕಾರಣರಾದವರು ಯಾರು? ರಾಜಕಾರಣಿಗಳೇ ತಾನೆ? ತಾವು ಜನಸೇವೆ ಮಾಡಲೆಂದು ರಾಜಕೀಯಕ್ಕೆ ಬಂದಿದ್ದೇವೆ ಅಂತ ಜನ ನಂಬುವಂತೆ ಇವರು ಬದುಕಿದರೆ? ಹಾಗಂತ ಇವತ್ತು ಯಾವೊಬ್ಬ ನಾಯಕನಾದರೂ ಹೇಳಲಿ ನೋಡೋಣ. ಜನ ನಗಬಾರದ ಜಾಗದಿಂದೆಲ್ಲ ನಗುತ್ತಾರೆ.

ಅದಕ್ಕಾಗಿಯೇ ಇವತ್ತು ಸಾಮಾನ್ಯ ಮತದಾರರಲ್ಲಿ ಹಲವು ಜನ ರಾಜಕಾರಣಿಗಳು ತಮ್ಮ ಮನೆ ಬಾಗಿಲಿಗೆ ಬಂದರೆ ಕಾಸು ಮಡಗಿ ಅನ್ನುವುದು. ಕಾರಣ? ದರೊಡೆ ಮಾಡಿಲ್ವಾ? ಯಾರಪ್ಪನ ಮನೆ ದುಡ್ಡು ಕೊಡ್ತಾನೆ, ಕೊಡ್ಲಿಬಿಡಿ ಸ್ವಾಮಿ ಅನ್ನುವುದು ಅವನ ಗುನುಗು. ಅವನ ದೃಷ್ಟಿಯಲ್ಲಿ ಅದು ತಪ್ಪಲ್ಲ. ಇವತ್ತು ಅರವತ್ತೈದು ಸಾವಿರ ಕೋಟಿ ರುಪಾಯಿ ಟರ್ನ್ ಓವರ್ ಇರುವ ಸರ್ಕಾರ ಎಂಬ ಸಾರ್ವಜನಿಕ ಸಂಸ್ಥೆಯನ್ನು ರಾಜಕಾರಣಿಗಳು, ಅಧಿಕಾರಿಗಳು ಸೇರಿ ಯಾವ ಪರಿ ದರೊಡೆ ಮಾಡುತ್ತಿದ್ದಾರೆ ಅಂತ ಕೇಳಲು ಹೋದರೆ ಅದೇ ದೊಡ್ಡ ಕತೆ.

ಕುಡಿಯುವ ನೀರಿನ ಯೋಜನೆಯಿಂದ ಹಿಡಿದು ರಸ್ತೆ ನಿರ್ಮಾಣದವರೆಗೆ, ಕರೆಂಟಿನಿಂದ ಹಿಡಿದು ಬಡವರ ಕಾರ್ಯಕ್ರಮಗಳವರೆಗೆ ಯಾವುದೆಂದರೆ ಆ ಯೋಜನೆಯಲ್ಲಿ ನಲವತ್ತು-ಐವತ್ತು ಪರ್ಸೆಂಟು ಹಣವನ್ನು ನಾಚಿಕೆಯಿಲ್ಲದೇ ಹೊಡೆದು ತಿನ್ನಲಾಗುತ್ತಿದೆ. ಇವತ್ತು ಎಲ್ಲ ರಾಜಕೀಯ ಪಕ್ಷಗಳಿಗೆ ನಿಜವಾದ ಜನಪರ ಕಾಳಜಿ ಅಂತಿದ್ದರೆ ಈ ಹಣ ಹೊಡೆದು ತಿನ್ನುವ ನೀಚತನದ ಬಗ್ಗೆ ಚರ್ಚೆ ಮಾಡುವ ಪ್ರಾಮಾಣಿಕತೆ ಪ್ರದರ್ಶಿಸಬೇಕಿತ್ತು. ಎಲ್ಲೆಲ್ಲಿ ಹಿಗೆ ಸಾರ್ವಜನಿಕ ಹಣದ ಸೋರಿಕೆಯಾಗುತ್ತಿದೆ? ಅದನ್ನು ತಡೆಗಟ್ಟುವುದು ಹೇಗೆ? ಅನ್ನುವುದರ ಕುರಿತು ಚರ್ಚಿಸಬೇಕಿತ್ತು.

ಆದರೆ ಯಾವ ಪಕ್ಷದ, ಯಾವನಾದರೂ ಒಬ್ಬ ನಾಯಕ ಈ ಬಗ್ಗೆ ಮಾತನಾಡುತ್ತಿದ್ದಾನಾ ಹೇಳಿ? ಇಂಥವರು ಹೇಗೆ ಜನರ ರೋಲ್ ಮಾಡೆಲ್‌ಗಳಾಗುತ್ತಾರೆ? ಇವರಿಂದ ರಾಜ್ಯಕ್ಕೆ ಹೇಗೆ ಉಪಕಾರವಾಗುತ್ತದೆ? ಇವರನ್ನು ಯಾವ ಕಾರಣಕ್ಕಾಗಿ ಬೆಂಬಲಿಸಬೇಕು? ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಹೋಗುವ ಮುನ್ನ ಈ ಬಗ್ಗೆ ಯೋಜಿಸಿ ನೋಡಿ.

(ಸ್ನೇಹಸೇತು : ಹಾಯ್ ಬೆಂಗಳೂರು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+