ಜನಸಾಮಾನ್ಯರ ಪ್ರಕಾರ ಕನ್ನಡ ನ್ಯೂಸ್ ಚಾನೆಲ್ ಅಂದ್ರೆ? ಹೀಗೂ ಉಂಟು!
''ಅಯ್ಯೋ...ಎದ್ದು ರೆಡಿ ಆಗಿದ್ದು ಲೇಟ್ ಆಯ್ತು, ಅಸೈನ್ಮೆಂಟ್ ಗೆ ಟೈಮ್ ಆಗೋಯ್ತಲ್ಲಾ'' ಅಂತ ಅರ್ಧಂಬರ್ಧ ತಿಂಡಿ ತಿಂದು, ನೀರು ಕುಡಿಯೋಕೂ ಪುರುಸೊತ್ತು ಇಲ್ಲದೆ, ವಾರದಿಂದ ಸೋಪು-ನೀರು ಕಾಣದ ಪ್ಯಾಂಟು-ಶರ್ಟ್ ಹಾಕೊಂಡು, ಬೆನ್ನಿಗೆ ಒಂದು ಬ್ಯಾಗ್ ನೇತು ಹಾಕೊಂಡು ಕನ್ನಡ ನ್ಯೂಸ್ ಚಾನೆಲ್ ನಲ್ಲಿ ಕೆಲಸ ಮಾಡುವ ಕ್ಯಾಮರಾಮ್ಯಾನ್ (ಯಾವ ನ್ಯೂಸ್ ಚಾನೆಲ್ ಅಂತ ಕೇಳ್ಬೇಡಿ) ಗಡಿಬಿಡಿಯಿಂದ ರೂಮ್ ಬಾಗಿಲಿಗೆ ಬೀಗ ಹಾಕಿ ಹೊರಟ.
ಸಮಯಕ್ಕೆ ಸರಿಯಾಗಿ ಓನರ್ ಅಂಕಲ್ ಅಡ್ಡ ಬಂದ್ರು.

ಅಂಕಲ್ : ಏನಪ್ಪಾ, ಹೊರಟ್ರಾ ಆಫೀಸಿಗೆ?
ಕ್ಯಾಮರಾಮ್ಯಾನ್ : ಹ್ಹೂಂ ಅಂಕಲ್, ಇವತ್ತು ಲೇಟ್ ಆಗೋಯ್ತು
ಅಂಕಲ್ : ಒಂದ್ನಿಮಿಷ ಇರಪ್ಪಾ, ಮುಂದಿನ ವಾರ ನನ್ ಮಗಳ ಮದುವೆ. ನೀವು ತಪ್ಪದೆ ಬರಬೇಕು.
ಕ್ಯಾಮರಾಮ್ಯಾನ್ : ಓಕೆ ಅಂಕಲ್, ಗ್ಯಾರೆಂಟಿ ಬರ್ತೀನಿ.
ಅಂಕಲ್ : ನೀನ್ ಮಾತ್ರ ಅಲ್ಲ, ಬೇರೆ ಚಾನೆಲ್ ನಲ್ಲಿ ಇರೋ ಕ್ಯಾಮರಾಮ್ಯಾನ್, ರಿಪೋರ್ಟರ್ ಗಳನ್ನೂ ಕರ್ಕೊಂಡು ಬಾರಪ್ಪ.
ಕ್ಯಾಮರಾಮ್ಯಾನ್ : ಏನ್ ವಿಶೇಷ ಅಂಕಲ್?
ಅಂಕಲ್ : ನೀವೆಲ್ಲಾ ಚೆನ್ನಾಗಿ ಮದುವೆ ಕವರೇಜ್ ಮಾಡ್ತೀರಾ. ನನ್ ಮಗಳ ಮದುವೆನೂ ಚೆನ್ನಾಗಿ ಕವರ್ ಮಾಡಿ.
ಕ್ಯಾಮರಾಮ್ಯಾನ್ : ಅಯ್ಯೋ...ನಾವು ಮದುವೆ ಎಲ್ಲಾ ಕವರ್ ಮಾಡಲ್ಲ ಅಂಕಲ್.!
ಅಂಕಲ್ : ಏಯ್..ನನಗೆ ಗೊತ್ತಿಲ್ವಾ? ವಾರ ಎಲ್ಲಾ ಶಿವಣ್ಣನ ಮಗಳ ಮದುವೆ ತೋರಿಸಿದ್ರೀ, ಯಶ್ ನಿಶ್ಚಿತಾರ್ಥ ಮಾಡಿಕೊಂಡಿದನ್ನ ಇಡೀ ದಿನ ಹಾಕಿದ್ರಿ....
ಕ್ಯಾಮರಾಮ್ಯಾನ್ : ಅದು ಹಾಗಲ್ಲ ಅಂಕಲ್.
ಅಂಕಲ್ : ನನ್ನ ಮಗಳ ಮದುವೆ ದಿನ ಪೂರ್ತಿ ಹಾಕೋದು ಬೇಡ. ಆಗಾಗ ಒಂದೊಂದು ನಿಮಿಷ ಬಂದ್ರೆ ಸಾಕು.
ಕ್ಯಾಮರಾಮ್ಯಾನ್ : ಇದೆಲ್ಲ ಮಾಡೋಕೆ ಆಗಲ್ಲ ಅಂಕಲ್
ಅಂಕಲ್ : ಶಿವಣ್ಣ ಮಗಳ ಮದುವೆ, ಯಶ್ ಎಂಗೇಜ್ಮೆಂಟ್ ಎಲ್ಲಾ ಫ್ರೀ ಆಗಿ ಕವರ್ ಮಾಡಿದ್ದೀರಾ, ಯಶ್ ಕರೆಯದೆ ಇದ್ರೂ ಗೋವಾಗೆ ಹೋಗಿದ್ರಿ? ನಾನು ಬಾಯ್ಬಿಟ್ಟು ಕರೀತಿದ್ದೀನಿ. ನಿಮ್ಮ ಓನರ್ ಮಗಳು ಮದುವೆ ಕವರ್ ಮಾಡಿಕೊಡಲ್ವಾ? ಜೊತೆಗೆ ಮದುವೆಗೆ ಬಂದವರನ್ನೆಲ್ಲರನ್ನೂ ಮಾತಾಡಿಸ್ತೀರಾ ತಾನೆ.?
ಓನರ್ ಅಂಕಲ್ ಮಾತು ಕೇಳಿ ಕ್ಯಾಮರಾಮ್ಯಾನ್ ಸ್ತಬ್ಧ.!
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್












Click it and Unblock the Notifications