ಸೀಸನ್ನಲ್ಲಿ ಹಿಂಗೂ ಇರುತ್ತೆ.. ಮಿಸ್ಸಾದ್ರೆ ಹಂಗೂ ಇರುತ್ತೆ..

ಪ್ರಶ್ನೆ: ಮಾಜಿ ಮುಖ್ಯಮಂತ್ರಿ ಯಡ್ಡ್ಯೂರಪ್ಪ ಅವರೇ ಹೇಗಿದೆ ಜೀವನ..?
ಬಿಎಸ್ವೈ: ಬೇಕಾದ್ರೆ ಹಿಡ್ಕೊಂಡು ಪೈಡ್ ಪೈಡ್ ಅಂತಾ ನಾಲಕ್ ಹೊಡಿರಿ, ಮಾಜಿ ಅಂತಾ ಮಾತ್ರ ಕರೀಬೇಡಿ. ಹೌದೂ.. ಕಿತ್ತಾಕೊಂಡು(ತಲೆ ಕೂದ್ಲುನ) ಕನ್ನಡ ಡಿಕ್ಷನರಿಲಿ ಹುಡುಕ್ಸಿ ಹೆಸ್ರು ಮುಂದೆ ನಿಕಟ ಪೂರ್ವ ಅಂತಾ ಹಾಕೊಂಡಿರೋದ್ ಸುಮ್ನೇನಾ, ನಿಕಟಪೂರ್ವ ಮುಖ್ಯಮಂತ್ರಿ ಅನ್ನೋಕೆ ಏನ್ರಿ ನಿಮ್ಗೆ..?
ಪ್ರಶ್ನೆ: ಅಷ್ಟೊಂದ್ ಅಭಿಮಾನನ ಸರ್ ಕನ್ನಡ ಮೇಲೆ..! ಒಂದ್ ಐಡಿಯಾ, ಬಿಎಸ್ವೈ: ನಿಮ್ ಹೆಸ್ರು ಬೂಕನಕೆರೆ ಸಿದ್ದಲಿಂಗಪ್ಪ ಯಡ್ಡ್ಯೂರಪ್ಪ ಅಲ್ವಾ, ಬೂಕನಕೆರೆಯಿಂದ (ಬೂ) ತಗೊಂಡು ಸಿದ್ದಲಿಂಗಪ್ಪಯಿಂದ (ಸಿ) ತಗೊಂಡು ಬೂ.ಸಿ.ಯಡ್ಡ್ಯೂರಪ್ಪ ಅಂತಾ ಇಟ್ರೆ ಹೆಂಗೆ..?
ಬಿಎಸ್ವೈ: ನೋ ಕಾಮೆಂಟ್ಸ್..! ಜನ ಡಿಸೈಡ್ ಮಾಡ್ಲಿ ಅದನ್ನ..
ಪ್ರಶ್ನೆ: ಸಿಎಂ ಸದಾನಂದಗೌಡರ ಬಗ್ಗೆ ಒಂದೆರಡು ಮಾತು.
ಬಿಎಸ್ವೈ: ಇವಾಗ್ ತಾನೇ ಡಾಕ್ಟ್ರು ಬಿಪಿ ಚೆಕ್ ಮಾಡಿ ನಾರ್ಮಲ್ ಅದೆ ಅಂತಾ ಹೇಳಿದಾರೆ, ಬೇಕಾ ಅದೆಲ್ಲಾ ಈಗ.
ಪ್ರಶ್ನೆ: ನಿಮ್ಮ ಬಣದ ಶಾಸಕರು ಅಧಿವೇಶನಕ್ಕೆ ಗೈರಾಗುತ್ತಿದ್ದಾರಲ್ಲ, ಇದರ ಹಿಂದಿನ ಮರ್ಮ..?
ಬಿಎಸ್ವೈ: ಮರ್ಮ ಹೇಳೋಕೆ ನಾನೇನ್ ಸಸ್ಪೆನ್ಸ್ ಡೈರೆಕ್ಟ್ರು ಸುನೀಲ್ ಕುಮಾರ್ ದೇಸಾಯಿನಾ? ಮಜಬೂತಾಗಿ ಗಡ್ಡ ಬಿಟ್ಕೊಂಡ್ ಆಡೋ ಹುಡ್ಗನ್ ತರ ಇರೋ ನಮ್ ಲಕ್ಷ್ಮಣ ಸವದಿ ಹತ್ರನೇ ಫೋನ್ ಕಿತ್ಕೊಂಡವ್ರೆ. ಇನ್ನೇನಿದೆ ಅಲ್ಲಿ ಕಿಸಿಯಕ್ಕೆ?
ಪ್ರಶ್ನೆ: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿದ್ದ ಪುಟ್ಟಸ್ವಾಮಿ ಅವರನ್ನು ಬಿಜೆಪಿಯಿಂದ ಸಸ್ಪೆಂಡ್ ಮಾಡಿರುವುದು ನಿಮಗೆ ಬೇಸರ ತಂದಿದೆಯಾ..?
ಬಿಎಸ್ವೈ: ಛೇ.. ಇಲ್ಲ ಇಲ್ಲ.. ಇವಾಗ್ ಇವಾಗ ನಂಗೇ ಮಾಡೋಕ್ ಕೆಲ್ಸ ಇಲ್ಲ ಅಂದ್ರೆ ಸುಮ್ನೆ ಯಾವ್ದಾದ್ರು ಪೋಸ್ಟಿಂಗ್ ಮಾಡ್ಸಿ ಅಂತಾ ಪ್ರಾಣ ತಿಂತಿದ್ದ ಮನುಷ್ಯ.. ಅದಕ್ಕೆ ರಾಜ್ಯಸಭೆ ರೆಬೆಲ್ ಕ್ಯಾಂಡಿಡೇಟ್ ಮಾಡ್ಸೋ ಪ್ಲಾನ್ ಮಾಡ್ಸಿದ್ದು. Now I am happy.
ಪ್ರಶ್ನೆ: ಅಕ್ರಮ ಫಾರಿನ್ ಮದ್ಯ ಶೇಖರಣೆಗಾಗಿ ಅಬಕಾರಿ ಸಚಿವ ರೇಣುಕಾಚಾರ್ಯರ ಮೇಲೆ ಮೊಕದ್ದಮೆ ದಾಖಲಾಗಿರುವುದರ ಬಗ್ಗೆ..?
ಬಿಎಸ್ವೈ: ಲೋಕಲ್ ಎಣ್ಣೆ ಸಾಕು ಅಂದಿದ್ರು ನಮ್ ಕಡೆವ್ರು. ಅಲ್ಲೇ ಸುತ್ತಾ ಮುತ್ತಾ ಸಿಗೋ ಬ್ರ್ಯಾಂಡ್ನ ಕಳ್ಸು ಅಂತಾ ಹೇಳಿದ್ರೆ, ಫಾರಿನ್ ಎಣ್ಣೆ ಇಡ್ಸಿದ್ರಾ..? ಸಂಜೆ ಸಿಗಿ ಕೇಳಿ ಹೇಳ್ತೀನಿ.
ಪ್ರಶ್ನೆ: ಈ ಬಾರಿಯ 1 ಲಕ್ಷ ಕೋಟಿ ರೂಪಾಯಿ ಬಜೆಟ್ನ್ನು ನೀವೇ ಮಂಡಿಸಬೇಕೆಂದು ಹಠ ಹಿಡಿದಿದ್ದರ ಕಾರಣ..?
ಬಿಎಸ್ವೈ: ನನ್ ಕ್ಯಾರೆಕ್ಟ್ರೇ ಅರ್ಥ ಮಾಡ್ಕೊಂತಲ್ವಲ್ಲ ಯಾರುನೂ, ಆಕ್ಚುಲಿ, ರಾಜಕೀಯಕ್ಕೆ ಬರೋ ಮುಂಚೆ ಶಿಕಾರಿಪುರದಲ್ಲಿ ಕ್ಲರ್ಕ್ ಆಗಿ ಕೆಲ್ಸ ಮಾಡ್ತಿದ್ದಿಂದ್ರಿಂದ I Am Always ಪಕ್ಕಾ in ಲೆಕ್ಕ.
So, ಕರೆಕ್ಟಾಗಿ ವ್ಯವಾರ ಮಾಡಿ ಮುಗ್ಸಣ ಅಂತಾ ಒಂದೇ ಒಂದು ರೀಸನ್ ಇಂದಾ ಕೇಳಿದ್ದು ಬಿಟ್ರೆ ಮತ್ತೇನಿಲ್ಲ. ಅವೆಲ್ಲಾ ಯಾಕೀಗ ಸುಮ್ನೆ.. ಬಿಡಿ.. [ಸೃಷ್ಟಿ : ಮೋಹನ್ ಎಚ್.]
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications