ವೈರಾಗ್ಯದಲ್ಲಿ ಮೂರು ಬಗೆ, ಯಾವುದು ಹಿತ ಎನ್ನುತ್ತೀರಾ?
ಪ್ರಸವ ವೈರಾಗ್ಯ, ಸ್ಮಶಾನ ವೈರಾಗ್ಯ ಮತ್ತು ಅಭಾವ ವೈರಾಗ್ಯ. ಹೆರಿಗೆಯ ನೋವನ್ನು ಕಂಡು ಅಥವಾ ಅನುಭವಿಸಿ, ತನಗದು (ಇನ್ನು) ಬೇಡ ಎನ್ನುವ ಆತಂಕ-ಜನಿತ ಮನಸ್ಸಿನ ಬಿಮ್ಮು ; ‘ಏನಾದರೂ ಗಳಿಸಬೇಕಾದರೆ ಇಷ್ಟೆಲ್ಲಾ ಎಷ್ಟೊಂದು ಕಷ್ಟ ಪಡಬೇಕೆ’, ಎಂಬ ಶಂಕೆಯೇ- ಪ್ರಸವ ವೈರಾಗ್ಯ.
ಮೂರನೆಯದು, ‘ತನ್ನ ಕೈ ಮೀರಿದ್ದು, ತನಗದು ಸಿಗಲು ಸಾಧ್ಯವೇ ಇಲ್ಲ ; ಏಕೆ ಬೇಕು ಈ ವ್ಯರ್ಥ ಪ್ರಯತ್ನ’- ಎಂಬೆಲ್ಲ ಹುಸಿವಾದದಿಂದ, ಆತ್ಮ ವಿಶ್ವಾಸವನ್ನು ಕುಡಿಯಲ್ಲೇ ಚುಗುಟಿಹಾಹುವ ಪ್ರವೃತ್ತಿಯೇ- ಅಭಾವ ವೈರಾಗ್ಯ! ‘ಯತ್ನೇ ಕೃತೇ ಯದಿ ನ ಸಿಧ್ಯತಿ, ಕೋ ಅತ್ರ ದೋಷ:?’ ಎಂಬ ಸುಭಾಷಿತ ತನಗಲ್ಲ, ಆದ್ದರಿಂದ ಎತ್ತರದ ಮರ ಹತ್ತಲು ನನ್ನ ಕೈಲಾಗದು; ಹತ್ತಿದರೂ, ಕಿತ್ತು , ಸಿಪ್ಪೆ ಸುಲಿದು, ಚಿಪ್ಪು ಒಡೆದು, ಕುಡಿದರೂ ಎಳನೀರು ಸಿಹಿಯಾಗಿರುವ ಭರವಸೆ ಎಲ್ಲಿದೆ? ತಾನಾಗಿಯೇ ನನಗದು ಸಿಕ್ಕಿಲ್ಲ ; ಆದ್ದರಿಂದ ತನಗೆ ಅದು ಬೇಡ- ಎಂಬ ಪೊಳ್ಳು ಕಾರಣದ ವಿತಂಡವಾದದಿಂದ, ಇಲ್ಲದ್ದನ್ನು ಗಳಿಸಿಕೊಳ್ಳುವ ಮುನ್ನುಗ್ಗುತನಕ್ಕೆ ತಿಲಾಂಜಲಿ ಬಿಡುವ ಮನೋಭಾವ- ಅಭಾವ ವೈರಾಗ್ಯ.
ತೊಡರುಗಳ ಗೆದ್ದು ಓಡಿದವರಿಗೆ ಬೆಳ್ಳಿಯ ಢಾಲು
ಮೂರೂ ಬಗೆಯ ವೈರಾಗ್ಯಗಳು ಪ್ರಗತಿಯ ನಡೆಯಲ್ಲಿ ಅಡೆ ತಡೆಗಳು ; ಕಾಲ್ತೊಡರುಗಳು. ಇವನ್ನು ಅತಿಕ್ರಮಿಸಿ, ಓಡಿ ಗೆದ್ದವರಿಗೇ ಬೆಳ್ಳಿಯ ಢಾಲು! ಕ್ರಿಯಾಸಿದ್ಧಿ ನಾಣ್ಯಕ್ಕೆ ಆತ್ಮವಿಶ್ವಾಸಪೂರಿತ ಯೋಜನೆ ಮತ್ತು ಸಾಹಸ ಪ್ರವೃತ್ತಿಗಳು ಎರಡು ಮುಖಗಳು! ಈಗ ಕವನಕ್ಕೆ ಹಿಂತಿರುಗೋಣ :
‘ನಾನು
ಮಾತ್ರ
ಆಗ
ಹೇಗೋ
ಹಾಗೆಯೇ
ಈಗಲೂ
ಆರೆಂದರೆ
ಹಿಗ್ಗಲಿಲ್ಲ
,
ಮೂರೆಂದರೆ
ಕುಗ್ಗಲಿಲ್ಲ
;
ನಾನು
ಅಚ್ಯುತ,
ನಾ
ನಿರ್ಜರ,
ನಾನೆ
ಅದ್ವಿತೀಯ;
ಒಂದೇ
ರೀತಿ,
ಒಂದೇ
ನೀತಿ,
ಒಂದೇ
ಸಮ,
ನೆಲಮಟ್ಟ-
ಅರಿತಿರೇನು
ನೀವು
ನನ್ನ
ಹೆಬ್ಬಾಳಿನ
ಗುಟ್ಟ?’
- ಎಂದು ಕೊನೆಗೊಳ್ಳುವ ಈ ಕವನ, ಕಣ್ಣಿದ್ದೂ ಕುರುಡನಾದ ಕಿವಿಯಿದ್ದೂ ಕಿವುಡನಾದ, ಬಾಯಿದ್ದೂ ಮೂಕನಾದ, ಕಾಲಿದ್ದೂ ಹೆಳವನಾದ, ಜೀವ ಇದ್ದೂ ಸತ್ತವನ ಕೆಣಕಿ, ಚುಚ್ಚಿ ಹಂಗಿಸಿ ಹೀಯಾಳಿಸುತ್ತದೆ ; ಮುಸುಕಿನಲ್ಲೆ ಗುದ್ದುತ್ತದೆ ; ಕಣ್ಣು ತೆರೆದು ನಡೆಯುವವರಿಗೆ ಬಾಳದಾರಿಯ ಕೈ ಮರವೂ ಆಗುತ್ತದೆ.
ನನ್ನ ಅವತಾರ
ವಾರ್ತಾ
ಸಂಚಯ
ಅಡಿಗರ
ಸಂಕ್ರಾಂತಿ
ಸೂರ್ಯ
ಅಡಿಗರ
ಕವನಗಳು
ನವ್ಯವೋ?
ನವೋದಯವೋ?