ಜೀವನದ ದಿಕ್ಕನ್ನೇ ಬದಲಿಸಿದ ಕೀರ್ತಿನಾಥ
ಅವರನ್ನು ನನ್ನ ಸೈಕಲ್ ಮೇಲೆ, ಹಿಂದೆ ಕೂಡಿಸಿಕೊಂಡು, ಡಬಲ್ರೈಡ್ ಮಾಡಿದ ದಿನಗಳು ನೆನಪಿಗೆ ಬರುತ್ತವೆ. ಗಿರೀಶ ಆಗ ಬಿ.ಎ.ಕ್ಲಾಸಿನಲ್ಲಿದ್ದರು. ಅವರ ಮಿತ್ರ ಕಿಟ್ಟಿ (ಕೃಷ್ಣ ಬಸರೂರ್) ಇಂಗ್ಲಿಷ್ ಎಂ.ಎ.ಕ್ಲಾಸಿಗೆ ಸೇರಿದ್ದರು, ಕೀರ್ತಿಯವರ ಸಹಪಾಠಿಯಾಗಿದ್ದರು. ಕೀರ್ತಿಯವರ ಇಂಗ್ಲಿಷ್ ಹಾಗೂ ಕನ್ನಡ ಸಾಹಿತ್ಯ ಸಾಕಷ್ಟು ಓದಿಕೊಂಡಿದ್ದರು. ಅವರು ಜಿ.ಬಿ.ಜೋಶಿಯವರ ಮನೆಯಲ್ಲಿ ಇರುತ್ತಿದ್ದರು. ನಡೆದು ಬಂದ ದಾರಿಯ ಸಂಪುಟಗಳಿಗೆ ವಿಮರ್ಶಾತ್ಮಕ ಪೀಠಿಕೆಗಳನ್ನು ಬರೆಯುತ್ತಿದ್ದರು. ಮನೋಹರ ಗ್ರಂಥ ಮಾಲೆಯ ಸಾಹಿತ್ಯ ಸಲಹೆಗಾರರಾಗಿದ್ದರು.
ಮನೋಹರ ಗ್ರಂಥಮಾಲೆಯ ಅಟ್ಟ ಸಾಹಿತ್ಯ ರಸಿಕರಿಗೆ ಆಕರ್ಷಣೆಯ ಕೇಂದ್ರವಾಗಿತ್ತು. ಗಿರೀಶರು ಒಮ್ಮೆ ಅಲ್ಲಿಗೆ ಹೋದಾಗ ವಿ.ಜಿ.ಭಟ್ಟರು ಮುಖ್ಯ ಅತಿಥಿಗಳಾಗಿದ್ದರು. ಹಿರೇಮಲ್ಲೂರ ಈಶ್ವರನ್ ಅವರು ಬಂದಿದ್ದರು. ಭಟ್ಟರ ಅಪೂರ್ಣ ಕಾದಂಬರಿ ಬೇಗ ಮುಗಿಸಲು ಜಿ.ಬಿ.ಜೋಶಿಯವರು ಹೇಳಿದಾಗ, ಅದನ್ನು ತಾವು ಮಾಲೆಯಿಂದ ಪ್ರಕಟಿಸುವ ಆಸಕ್ತಿ ತೋರಿಸಿದಾಗ, ಗಿರೀಶರಿಗೂ ಮನದೊಳಗೆ ಹೀಗೆ ತಮ್ಮ ಕೃತಿ ಪ್ರಕಟಿಸುವುದಾಗಿ ಪ್ರಕಾಶಕರು ಆಮಂತ್ರಿಸಬಹುದೇ ಎಂದುಕೊಂಡರು. ಇವರು ಬರೆದ ಮೊದಲ ನಾಟಕ ಯಯಾತಿಯನ್ನು ಮೆಚ್ಚಿದ ಕೀರ್ತಿನಾಥರು ಪ್ರಕಟಿಸಲು ಜಿ.ಬಿ.ಜೋಶಿಯವರಿಗೆ ಶಿಫಾರಸುಮಾಡಿದರು. ಅವರನ್ನು ನಾಟಕಕಾರನ್ನಾಗಿ ರೂಪಿಸಿದ ಶ್ರೇಯಸ್ಸು ಕೀರ್ತಿನಾಥ ಕುರ್ತಕೋಟಿಯವರದು ಎಂಬುದನ್ನು ಗಿರೀಶ ನೆನೆಯುತ್ತಾರೆ.
ಗಿರೀಶರ ತಾಯಿಗೆ ಸಂಸ್ಕೃತದ ಬಗ್ಗೆ ಪ್ರೀತಿ ಇತ್ತು. ಅವರು ಸುಭಾಷಿತ ಉದ್ಧರಿಸುತ್ತಿದ್ದರು. ಕಾಲೇಜಿನಲ್ಲಿ ಮೊದಲನೆಯ ವರ್ಷ ಪಠ್ಯವಾಗಿದ್ದ ಕಾಳಿದಾಸನ ರಘುವಂಶ ಕಾವ್ಯದ ಮಾಧುರ್ಯ, ಪದಲಾಲಿತ್ಯ ಗಿರೀಶರನ್ನು ಮರುಳುಗೊಳಿಸಿದ್ದವು. ಮೊದಲಿನ ಎರಡು ಸರ್ಗ ಇವರಿಗೆ ಕಂಠಪಾಠವಾಗಿದ್ದವು. ಮುಂದೆ ಹರ್ಷನ ನಾಗಾನಂದ ಹಾಗೂ ರತ್ನಾವಲಿ ಅಭ್ಯಾಸ ಮಾಡಬೇಕಾಯಿತು. ಈ ಕಳಪೆ ನಾಟಕಗಳಿಂದಾಗಿ ಇವರಿಗೆ ಸಂಸ್ಕೃತ ನಾಟಕಗಳಲ್ಲಿ ಆಸಕ್ತಿ ಕಡಿಮೆಯಾಯಿತು.
ಮುಂದೆ ಇವರು ಮದ್ರಾಸಿನಲ್ಲಿದ್ದಾಗ ಮನ್ವಂತರದಲ್ಲಿ (ಮನೋಹರ ಗ್ರಂಥಮಾಲೆಯ ಅ-ನಿಯತಕಾಲಿಕ ಪತ್ರಿಕೆ) ಕೀರ್ತಿಯವರು ಸಂಸ್ಕೃತ ನಾಟಕಗಳ ಬಗ್ಗೆ ಬರೆದ ಲೇಖನ ಓದಿ ಪ್ರಭಾವಿತರಾಗಿ ಕಾಳಿದಾಸನ ಶಾಕುಂತಲ, ಭವಭೂತಿಯ ಉತ್ತರರಾಮ ಚರಿತ, ಶೂದ್ರಕನ ಮೃಚ್ಛಕಟಿಕ ಮೊದಲಾದ ಸಂಸ್ಕೃತ ನಾಟಕಗಳನ್ನು ಅಭ್ಯಾಸ ಮಾಡಿದರು. ಮುಂದೆ ಫುಲ್ ಬ್ರೈಟ್ ಸ್ಕಾಲರ್ಶಿಪ್ ಪಡೆದು (ರಾಮಾನುಜನ್ ನೆಲೆಸಿದ್ದ) ಶಿಕಾಗೋಕ್ಕೆ ಹೋದಾಗ (1987-88) ಅಲ್ಲಿ ಸಂಸ್ಕೃತ ನಾಟಕಗಳ ಮೇಲೆ ಒಂದು ಭಾಷಣಮಾಲೆಯನ್ನೇ ಪ್ರಸ್ತುತಪಡಿಸಿದ್ದನ್ನು ನೆನೆಯುತ್ತಾರೆ. ಧಾರವಾಡದಲ್ಲಿ ಸಂಸ್ಕೃತವನ್ನು ದುರ್ಲಕ್ಷ್ಯ ಮಾಡಿದ್ದರಿಂದ ಕರ್ನಾಟಕ ಕಾಲೇಜಿನಲ್ಲಿದ್ದ ಸಂಸ್ಕೃತ ಘನವಿದ್ವಾಂಸ ಪ್ರೊ| ಕೆ.ಟಿ.ಪಾಂಡುರಂಗಿಯವರ ಸಂಪರ್ಕ ಬರಲಿಲ್ಲ ಎಂಬುದರ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಮುಂದೆ ಬೆಂಗಳೂರಲ್ಲಿ ಅವರ ಮಾರ್ಗದರ್ಶನ ಪಡೆದುದನ್ನೂ ನೆನೆಯುತ್ತಾರೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral













Click it and Unblock the Notifications