ಜೀವನದ ದಿಕ್ಕನ್ನೇ ಬದಲಿಸಿದ ಕೀರ್ತಿನಾಥ
ಅವರನ್ನು ನನ್ನ ಸೈಕಲ್ ಮೇಲೆ, ಹಿಂದೆ ಕೂಡಿಸಿಕೊಂಡು, ಡಬಲ್ರೈಡ್ ಮಾಡಿದ ದಿನಗಳು ನೆನಪಿಗೆ ಬರುತ್ತವೆ. ಗಿರೀಶ ಆಗ ಬಿ.ಎ.ಕ್ಲಾಸಿನಲ್ಲಿದ್ದರು. ಅವರ ಮಿತ್ರ ಕಿಟ್ಟಿ (ಕೃಷ್ಣ ಬಸರೂರ್) ಇಂಗ್ಲಿಷ್ ಎಂ.ಎ.ಕ್ಲಾಸಿಗೆ ಸೇರಿದ್ದರು, ಕೀರ್ತಿಯವರ ಸಹಪಾಠಿಯಾಗಿದ್ದರು. ಕೀರ್ತಿಯವರ ಇಂಗ್ಲಿಷ್ ಹಾಗೂ ಕನ್ನಡ ಸಾಹಿತ್ಯ ಸಾಕಷ್ಟು ಓದಿಕೊಂಡಿದ್ದರು. ಅವರು ಜಿ.ಬಿ.ಜೋಶಿಯವರ ಮನೆಯಲ್ಲಿ ಇರುತ್ತಿದ್ದರು. ನಡೆದು ಬಂದ ದಾರಿಯ ಸಂಪುಟಗಳಿಗೆ ವಿಮರ್ಶಾತ್ಮಕ ಪೀಠಿಕೆಗಳನ್ನು ಬರೆಯುತ್ತಿದ್ದರು. ಮನೋಹರ ಗ್ರಂಥ ಮಾಲೆಯ ಸಾಹಿತ್ಯ ಸಲಹೆಗಾರರಾಗಿದ್ದರು.
ಮನೋಹರ ಗ್ರಂಥಮಾಲೆಯ ಅಟ್ಟ ಸಾಹಿತ್ಯ ರಸಿಕರಿಗೆ ಆಕರ್ಷಣೆಯ ಕೇಂದ್ರವಾಗಿತ್ತು. ಗಿರೀಶರು ಒಮ್ಮೆ ಅಲ್ಲಿಗೆ ಹೋದಾಗ ವಿ.ಜಿ.ಭಟ್ಟರು ಮುಖ್ಯ ಅತಿಥಿಗಳಾಗಿದ್ದರು. ಹಿರೇಮಲ್ಲೂರ ಈಶ್ವರನ್ ಅವರು ಬಂದಿದ್ದರು. ಭಟ್ಟರ ಅಪೂರ್ಣ ಕಾದಂಬರಿ ಬೇಗ ಮುಗಿಸಲು ಜಿ.ಬಿ.ಜೋಶಿಯವರು ಹೇಳಿದಾಗ, ಅದನ್ನು ತಾವು ಮಾಲೆಯಿಂದ ಪ್ರಕಟಿಸುವ ಆಸಕ್ತಿ ತೋರಿಸಿದಾಗ, ಗಿರೀಶರಿಗೂ ಮನದೊಳಗೆ ಹೀಗೆ ತಮ್ಮ ಕೃತಿ ಪ್ರಕಟಿಸುವುದಾಗಿ ಪ್ರಕಾಶಕರು ಆಮಂತ್ರಿಸಬಹುದೇ ಎಂದುಕೊಂಡರು. ಇವರು ಬರೆದ ಮೊದಲ ನಾಟಕ ಯಯಾತಿಯನ್ನು ಮೆಚ್ಚಿದ ಕೀರ್ತಿನಾಥರು ಪ್ರಕಟಿಸಲು ಜಿ.ಬಿ.ಜೋಶಿಯವರಿಗೆ ಶಿಫಾರಸುಮಾಡಿದರು. ಅವರನ್ನು ನಾಟಕಕಾರನ್ನಾಗಿ ರೂಪಿಸಿದ ಶ್ರೇಯಸ್ಸು ಕೀರ್ತಿನಾಥ ಕುರ್ತಕೋಟಿಯವರದು ಎಂಬುದನ್ನು ಗಿರೀಶ ನೆನೆಯುತ್ತಾರೆ.
ಗಿರೀಶರ ತಾಯಿಗೆ ಸಂಸ್ಕೃತದ ಬಗ್ಗೆ ಪ್ರೀತಿ ಇತ್ತು. ಅವರು ಸುಭಾಷಿತ ಉದ್ಧರಿಸುತ್ತಿದ್ದರು. ಕಾಲೇಜಿನಲ್ಲಿ ಮೊದಲನೆಯ ವರ್ಷ ಪಠ್ಯವಾಗಿದ್ದ ಕಾಳಿದಾಸನ ರಘುವಂಶ ಕಾವ್ಯದ ಮಾಧುರ್ಯ, ಪದಲಾಲಿತ್ಯ ಗಿರೀಶರನ್ನು ಮರುಳುಗೊಳಿಸಿದ್ದವು. ಮೊದಲಿನ ಎರಡು ಸರ್ಗ ಇವರಿಗೆ ಕಂಠಪಾಠವಾಗಿದ್ದವು. ಮುಂದೆ ಹರ್ಷನ ನಾಗಾನಂದ ಹಾಗೂ ರತ್ನಾವಲಿ ಅಭ್ಯಾಸ ಮಾಡಬೇಕಾಯಿತು. ಈ ಕಳಪೆ ನಾಟಕಗಳಿಂದಾಗಿ ಇವರಿಗೆ ಸಂಸ್ಕೃತ ನಾಟಕಗಳಲ್ಲಿ ಆಸಕ್ತಿ ಕಡಿಮೆಯಾಯಿತು.
ಮುಂದೆ ಇವರು ಮದ್ರಾಸಿನಲ್ಲಿದ್ದಾಗ ಮನ್ವಂತರದಲ್ಲಿ (ಮನೋಹರ ಗ್ರಂಥಮಾಲೆಯ ಅ-ನಿಯತಕಾಲಿಕ ಪತ್ರಿಕೆ) ಕೀರ್ತಿಯವರು ಸಂಸ್ಕೃತ ನಾಟಕಗಳ ಬಗ್ಗೆ ಬರೆದ ಲೇಖನ ಓದಿ ಪ್ರಭಾವಿತರಾಗಿ ಕಾಳಿದಾಸನ ಶಾಕುಂತಲ, ಭವಭೂತಿಯ ಉತ್ತರರಾಮ ಚರಿತ, ಶೂದ್ರಕನ ಮೃಚ್ಛಕಟಿಕ ಮೊದಲಾದ ಸಂಸ್ಕೃತ ನಾಟಕಗಳನ್ನು ಅಭ್ಯಾಸ ಮಾಡಿದರು. ಮುಂದೆ ಫುಲ್ ಬ್ರೈಟ್ ಸ್ಕಾಲರ್ಶಿಪ್ ಪಡೆದು (ರಾಮಾನುಜನ್ ನೆಲೆಸಿದ್ದ) ಶಿಕಾಗೋಕ್ಕೆ ಹೋದಾಗ (1987-88) ಅಲ್ಲಿ ಸಂಸ್ಕೃತ ನಾಟಕಗಳ ಮೇಲೆ ಒಂದು ಭಾಷಣಮಾಲೆಯನ್ನೇ ಪ್ರಸ್ತುತಪಡಿಸಿದ್ದನ್ನು ನೆನೆಯುತ್ತಾರೆ. ಧಾರವಾಡದಲ್ಲಿ ಸಂಸ್ಕೃತವನ್ನು ದುರ್ಲಕ್ಷ್ಯ ಮಾಡಿದ್ದರಿಂದ ಕರ್ನಾಟಕ ಕಾಲೇಜಿನಲ್ಲಿದ್ದ ಸಂಸ್ಕೃತ ಘನವಿದ್ವಾಂಸ ಪ್ರೊ| ಕೆ.ಟಿ.ಪಾಂಡುರಂಗಿಯವರ ಸಂಪರ್ಕ ಬರಲಿಲ್ಲ ಎಂಬುದರ ಬಗ್ಗೆ ಖೇದ ವ್ಯಕ್ತಪಡಿಸುತ್ತಾರೆ. ಮುಂದೆ ಬೆಂಗಳೂರಲ್ಲಿ ಅವರ ಮಾರ್ಗದರ್ಶನ ಪಡೆದುದನ್ನೂ ನೆನೆಯುತ್ತಾರೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ













Click it and Unblock the Notifications