278699kannada poetಹೊನಲ ಹಾಡು ಬರೆದ ಗೋಕುಲದ ಕವಿಯ ಹಬ್ಬ/literature/music/2009/0317-kannada-poet-putina-gokula-nirgamana-lyrics.htmlಕನ್ನಡ ಸಾಹಿತ್ಯ ಲೋಕದ ಇಬ್ಬರು ದಿಗ್ಗಜರಾದ ದಾರ್ಶನಿಕ ಕವಿ ಡಿ ವಿ ಗುಂಡಪ್ಪ, ಪು ತಿ ನ ಅವರು ಮಾರ್ಚ್ 17 ರಂದು ಜನಿಸಿರುವುದು ವಿಶೇಷ. ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಮೇಲುಕೋಟೆಯಲ್ಲಿ 1905 ಮಾರ್ಚ್ 17 ರಂದು ಜನಿಸಿದರು. ಇವರು 'ಗೋಕುಲ ನಿರ್ಗಮನ' ಸೇರಿದಂತೆ 11 ಕವನಸಂಕಲನಗಳನ್ನು ಹೊರತಂದರು. ಆಧ್ಯಾತ್ಮ, ಪ್ರಕೃತಿಯಲ್ಲಿ ದೈವತ್ವದ ಹುಡುಕಾಟ ಇವರ 35283http://kannada.oneindia.com/img/2009/03/17-putina2.jpg278699kannada poetಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು/column/gv/2009/0518-bendre-prose-critical-analysis-narayanacharya.html'ದೇಸಿಯತೆಯಲ್ಲಿ ಬೇರೂರಿ ಅರಳಿದ ದತ್ತ ಪ್ರತಿಭೆ' ಎಂದು ವರ್ಣಿತರಾದ ಸಾಧಕ ಕವಿ ದ.ರಾ.ಬೇಂದ್ರೆ ಅವರ ಕವಿ, ಕಾವ್ಯ ಮತ್ತು ವಿಮರ್ಶೆ ಕುರಿತು 32 ಸೂತ್ರಗಳ ವಿಮರ್ಶಾಗ್ರಂಥವನ್ನು ಡಾ. ಕೆ.ಎಸ್. ನಾರಾಯಣಾಚಾರ್ಯರು ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಬರೆದ ಈ ಗ್ರಂಥ ಈಗ ಬಿಡುಗಡೆಯಾಗುತ್ತಿದೆ. ಈ ಗ್ರಂಥಕ್ಕೆ ಬೇಂದ್ರೆ ಅವರ ಮಗ ವಾಮನ ಬೇಂದ್ರೆ ಅವರು 50 ಪುಟಗಳ 36726http://kannada.oneindia.com/img/2009/05/18-bendre4.jpg278699kannada poetನಾರಾಯಣಾಚಾರ್ಯ ಬರೆದ ಪುಸ್ತಕದ ಪರಿಚಯ (ಭಾಗ 2)/column/gv/2009/0523-book-by-ks-narayanacharya-on-bendre-prose.htmlಬೇಂದ್ರೆಯವರ ಬರವಣಿಗೆಯಲ್ಲಿ ಹುದುಗಿದ್ದ ವಿಮರ್ಶಾ ಸೂತ್ರಗಳನ್ನು ಆಯ್ದ ಶ್ರೇಯಸ್ಸು ನಾರಾಯಣಾಚಾರ್ಯರಿಗೆ ಸಲ್ಲುತ್ತದೆ. ಪ್ರತಿಯೊಂದು ಸೂತ್ರಕ್ಕೂ ನಾರಾಯಣಾಚಾರ್ಯರು 'ಸಾಹಿತ್ಯದ ವಿರಾಟ ಸ್ವರೂಪ' ಗ್ರಂಥದಲ್ಲಿ ದೀರ್ಘವಾದ ವಿದ್ವತ್‌ಪೂರ್ಣವಾದ ವ್ಯಾಖ್ಯಾನವನ್ನು ಬರೆದಿದ್ದಾರೆ. ಪುಸ್ತಕ ಪರಿಚಯದ ಎರಡನೇ ಭಾಗ ಇಲ್ಲಿದೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಡಾ| ಕೆ.ಎಸ್. ನಾರಾಯಣಾಚಾರ್ಯರು ಬೇಂದ್ರೆಯವರ "ಸಾಹಿತ್ಯದ ವಿರಾಟ ಸ್ವರೂಪ" ಗ್ರಂಥದಿಂದ 32 ವಿಮರ್ಶಾ ಸೂತ್ರಗಳನ್ನು ಆರಿಸಿದ್ದಾರೆ. ಸಾಹಿತ್ಯದ 36851http://kannada.oneindia.com/img/2009/05/23-ks-narayanacharya2.jpg278699kannada poetಸರ್ವಜ್ಞ ಪ್ರತಿಮೆ ಅನಾವಣರಕ್ಕೆ ಚೆನ್ನೈ ಸಜ್ಜು/news/2009/08/12/sarvajna-statue-unveiling-in-chennai-on-aug-13.htmlಚೆನ್ನೈ, ಆ. 12 : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚೆನ್ನೈ ನಗರದ ಮದ್ಯಭಾಗದಲ್ಲಿರುವ ಕನ್ನಡಿಗರೇ ಹೆಚ್ಚಾಗಿರುವ ಅಯನಾವರಂನಲ್ಲಿ ಪ್ರದೇಶದ ಜೀವಾ ಪಾರ್ಕ್ ನಲ್ಲಿ ಕನ್ನಡದ ಆದಿಕವಿ ಸರ್ವಜ್ಞನ ಪ್ರತಿಮೆಯನ್ನು ಗುರುವಾರ ಸಾಯಂಕಾಲ 4 ಗಂಟೆಗೆ ಅನಾವರಣ ಮಾಡಲಿದ್ದಾರೆ.ಗುರುವಾರ ನಡೆಯಲಿರುವ ಸರಕಾರಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಆರಂಭವಾಗಿದ್ದು, ಮದ್ರಾಸ್ ಕನ್ನಡ ಸಂಘ ಸೇರಿದಂತೆ ಚೆನ್ನೈ ನಗರದಲ್ಲಿ ವಾಸವಾಗಿರುವ 38596http://kannada.oneindia.com/img/2009/08/12-sarvajna2.jpg278699kannada poetಚೆನ್ನೈ : ಸರ್ವಜ್ಞ ಪ್ರತಿಮೆ ಅನಾವರಣಕ್ಕೆ ಕ್ಷಣಗಣನೆ/news/2009/08/13/chennai-all-set-for-unveiling-for-sarvajna-statue.htmlಚೆನ್ನೈ, ಆ. 13 : ಬೆಂಗಳೂರಿನಲ್ಲಿ ನಡೆದ ತಿರುವಳ್ಳುವರ್ ಪ್ರತಿಮೆ ಅನಾವರಣದಷ್ಟೇ ಅದ್ಧೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ಸರ್ವಜ್ಞ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಬೇಕು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ ಕರುಣಾನಿಧಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಹಾಗೂ ಬುಧವಾರ ಆರ್ ಪಿಎಫ್ ಮೈದಾನ ಮತ್ತು ಜೀವಾ ಪಾರ್ಕ್ ನಲ್ಲಿ ನಡೆಯುತ್ತಿರುವ ಸಿದ್ಧತೆಗಳನ್ನು ಖುದ್ದು ಪರಿಶೀಲನೆ ನಡೆಸಿದ್ದಾರೆ. ಕಾರ್ಯಕ್ರಮ 38601http://kannada.oneindia.com/img/2009/08/13-karunanidhi2e.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ/column/gv/2008/1227-vk-gokak-birth-centenary-memoirs-part2.htmlಕನ್ನಡ ಮತ್ತು ಇಂಗ್ಲಿಷಿನ ಮೇಲಿನ ಅದಮ್ಯ ಪ್ರಭುತ್ವದಿಂದಾಗಿ ಕನ್ನಡನಾಡಿನ ಒಳಗಡೆ ಮತ್ತು ಹೊರಗಡೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿನಾಯಕ ಕೃಷ್ಣ ಗೋಕಾಕ್ ಅತ್ಯಂತ ಪ್ರಭಾವಶಾಲಿ ಸಾಹಿತಿಯಾಗಿ ಹೊರಹೊಮ್ಮಿದ್ದರು. ಇತರ ಸಾಹಿತಿಗಳನ್ನು ರಾಷ್ಟ್ರಮಟ್ಟದಲ್ಲಿ ಸಮರ್ಥವಾಗಿ ಬಿಂಬಿಸಿದ್ದರಿಂದ ಕನ್ನಡ ರಾಷ್ಟ್ರದುದ್ದಕ್ಕೂ ಮೆರೆಯುವಂತಾಯಿತು. ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಸ್ಮರಣೆಯ ಎರಡನೆಯ ಭಾಗ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಗೋಕಾಕರ ವಿದ್ಯಾರ್ಥಿ ಜೀವನಕ್ಕೆ ಅವರ ಮದುವೆ 33727http://kannada.oneindia.com/img/2008/12/27-vk-gokak-bendre1.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 3)/column/gv/2009/0117-vinayaka-krishna-gokak-part3.htmlಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಬಿಎ ಮಾಡಿ ಭಾರತಕ್ಕೆ ಮರಳಿದ ವಿನಾಯಕ ಕೃಷ್ಣ ಗೋಕಾಕ್ ಅವರು ಮಾಡಿಕೊಂಡ ದೊಡ್ಡ ಆಸ್ತಿಯೆಂದರೆ ಅಪಾರ ಶಿಷ್ಯವೃಂದ. ಹೇಮಂತ ಕುಲಕರ್ಣಿ, ಸುಬ್ಬಣ್ಣ ಎಕ್ಕುಂಡಿ, ವಿ.ಜಿ.ಭಟ್ಟ, ಗಾಂಗಾಧರ ಚಿತ್ತಾಲ ಮೊದಲಾದ ಖ್ಯಾತ ಲೇಖಕರು ಗೋಕಾಕರ ಗರಡಿಯಲ್ಲಿ ಪಳಗಿದವರೇ.* ಡಾ|ಜೀವಿ ಕುಲಕರ್ಣಿಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಆಂಗ್ಲಸಾಹಿತ್ಯದಲ್ಲಿ ಪ್ರಥಮ ದರ್ಜೆಯಲ್ಲಿ ಬಿ.ಎ.(ಆಗ್ಝನ್) ಡಿಗ್ರಿ ಪಡೆದು ವಿಕ್ರಮ ಸಾಧಿಸಿದ ಗೋಕಾಕರು 34120http://kannada.oneindia.com/img/2009/01/17-vk-gokak3e.jpg99737gv kulkarniಸಮನ್ವಯಾಚಾರ್ಯ ವಿನಾಯಕ ಕೃಷ್ಣ ಗೋಕಾಕ (ಭಾಗ 4)/column/gv/2009/0124-vinayaka-krishna-gokak-part4.htmlಮಹರ್ಷಿ ಶ್ರೀ ಅರವಿಂದರ ಕೃತಿಗಳನ್ನು ಅರಗಿಸಿ ಕುಡಿದು ತಮ್ಮ ಜೀವನದಲ್ಲಿ ಹಾಗೂ ಸಾಹಿತ್ಯದಲ್ಲಿ ಅದರ ಬೆಳಕನ್ನು ಹರಡಿದ ಕೆಲವೇ ಶ್ರೇಷ್ಠ ಸಾಹಿತಿಗಳಲ್ಲಿ ಗೋಕಾಕರೂ ಒಬ್ಬರು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಜ್ಞಾನಪೀಠ ಪ್ರಶಸ್ತಿ ವಿಜೇತ ವಿನಾಯಕ ಕೃಷ್ಣ ಗೋಕಾಕರ ಜನ್ಮಶತಮಾನೋತ್ಸವ ನಿಮಿತ್ತ ಲೇಖನ ಸರಣಿ ಮುಂದುವರಿಯುತ್ತಿದೆ.* ಡಾ|ಜೀವಿ ಕುಲಕರ್ಣಿ1947ರಲ್ಲಿ ಭಾರತಕ್ಕೆ ಸ್ವಾತಂತ್ಯ ದೊರೆತ ನಂತರ ಬರೋಡಾ ಸಂಸ್ಥಾನ ಭಾರತ ಸರಕಾರದಲ್ಲಿ 34269http://kannada.oneindia.com/img/2009/01/24-vk-gokak4.jpg99737gv kulkarniಧಾರವಾಡಕ್ಕೂ ಗೋಕಾಕರಿಗೂ ಬಿಡಲಾರದ ನಂಟು/column/gv/2009/0131-unforgettable-days-of-gokak-in-dharwad.htmlಧಾರವಾಡಕ್ಕೂ ವಿಕೆ ಗೋಕಾಕರಿಗೂ ಬಿಡಲಾರದ ನಂಟು. ಅವರು ಧಾರವಾಡಕ್ಕೆ ಬರುತ್ತಿದ್ದಾರೆಂದು ತಿಳಿದಕೂಡಲೆ ಅಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಗೋಕಾಕರ ಮಹತ್ವದ ಕೃತಿಗಳು ಪ್ರಕಟವಾಗಿದ್ದು ಅವರು ಧಾರವಾಡದಲ್ಲಿದ್ದಾಗಲೇ. ಧಾರವಾಡದಲ್ಲಿನ ಅವರ ಒಡನಾಟ, ವಿದ್ಯಾರ್ಥಿಗಳೊಂದಿಗಿನ ಬಾಂಧವ್ಯ, ಸಾಂಸ್ಕೃತಿಕ ನಗರಿಯಲ್ಲಿ ಕಳೆದ ಅವಿಸ್ಮರಣೀಯ ಗಳಿಗೆಗಳನ್ನು ಜೀವಿ ಕುಲಕರ್ಣಿಯವರು ಇಲ್ಲಿ ಮೆಲುಕು ಹಾಕಿದ್ದಾರೆ. ಗೋಕಾಕ್ ಜನ್ಮಶತಮಾನೋತ್ಸವದ ನಿಮಿತ್ತ ಗೋಕಾಕ್ ಲೇಖನ ಸರಣಿಯ ಭಾಗ 34397http://kannada.oneindia.com/img/2009/01/31-vk-gokak4.jpg99737gv kulkarniಗೋಕಾಕರಿಗೆ ಸತ್ಯಸಾಯಿಬಾಬಾ ಅನುಗ್ರಹ/column/gv/2009/0207-vk-gokak-birth-centenary-part-6.htmlಶೈಕ್ಷಣಿಕವಾಗಿ ಮಾತ್ರ ವಿನಾಯಕ ಕೃಷ್ಣ ಗೋಕಾಕರು ಪರೀಕ್ಷೆಗಳನ್ನೆದುರಿಸಲಿಲ್ಲ ಜೀವನದುದ್ದಕ್ಕೂ ಅನೇಕ ಸತ್ವಪರೀಕ್ಷೆಗಳನ್ನು ಅವರು ಎದುರಿಸಿದರು. ಹೋದಲ್ಲೆಲ್ಲ ವಿಜಯಶಾಲಿಯಾದರು, ಗೆಳೆಯರನ್ನು ಸಂಪಾದಿಸಿದರು, ಶಿಷ್ಯಂದಿರನ್ನು ಹುಟ್ಟುಹಾಕಿದರು. ಅವರ ವ್ಯಕ್ತಿತ್ವವೇ ಅಂತಹುದಾಗಿದ್ದು. ಗೋಕಾಕರ ಜೀವನವನ್ನು, ವ್ಯಕ್ತಿತ್ವವನ್ನು ಬಣ್ಣಿಸುವ 'ಜೀವಿ' ಕುಲಕರ್ಣಿಯವರ ಸರಣಿ ಲೇಖನದ ಆರನೇ ಭಾಗ, ಗೋಕಾಕರ ಜನ್ಮಶತಮಾನೋತ್ಸವದ ನಿಮಿತ್ತ.ಗೋಕಾಕರು ಎರಡನೆಯ ಸಲ ಹೈದ್ರಾಬಾದ್‌ಗೆ ತೆರಳಿದ್ದು ಆಕಸ್ಮಿಕವಾಗಿದ್ದರೂ, ಒಂದು ರೀತಿಯಲ್ಲಿ, ಇದು 34531http://kannada.oneindia.com/img/2009/02/07-vk-gokak4.jpg382293bookಮೊಮ್ಮಕ್ಕಳು ಹೇಳಿದ ಅಜ್ಜೀ ಕತೆ/column/gv/2009/0314-ajji-kathe-story-on-grandmother-by-hys.htmlನನ್ನ ಮೊದಲಿನ ಎರಡು ಅಮೇರಿಕಾ ಪ್ರವಾಸಗಳು(2000 ಮತ್ತು 2002) ಅವಿಸ್ಮರಣಿಯವಾಗಲು ಕಾರಣರಾದವರಲ್ಲಿ ಡಾ| ಎಚ್.ವಾಯ್.ರಾಜಗೋಪಾಲ ಒಬ್ಬರು. ನನ್ನ ಎರಡನೆಯ ಪ್ರವಾಸದಲ್ಲಿ ನಾನು ಅವರ ಆತಿಥ್ಯದಲ್ಲಿ ಎರಡು ವಾರ ಫಿಲೆಡೆಲ್ಫಿಯಾದಲ್ಲಿದ್ದೆ. ಅವರ ಅಣ್ಣ ಪ್ರಸಿದ್ಧ ಪತ್ರಕರ್ತ ಎಚ್.ವಾಯ್. ಶಾರದಾ ಪ್ರಸಾದ. ತಮ್ಮ ತಂದೆಯ ಜನ್ಮ ಶತಾಬ್ದಿಯ ನೆನಪಿಗಾಗಿ ಎಂಟು ಮಕ್ಕಳು ಸೇರಿ ಒಂದು ಅಪೂರ್ವ ಪುಸ್ತಕ ಬರೆದಿದ್ದಾರೆ. (ಸಂಗೀತದ 35217http://kannada.oneindia.com/img/2009/03/14-sharadaprasad2.jpg382293bookಹೊತ್ತಿಗೆ ರೂಪದಲ್ಲಿ ಏನ್ ಗುರು ಕಾಫಿ ಆಯ್ತಾ?/column/enguru/2009/0508-enguru-in-book-form.html2007ರಲ್ಲಿ ಬನವಾಸಿ ಬಳಗದ "ಏನ್ ಗುರು ಕಾಫಿ ಆಯ್ತಾ?" ಅಂಕಣಮಾಲೇನಾ ಶುರು ಮಾಡಲಾಯ್ತು. ಇದಕ್ಕೆ ನಿರೀಕ್ಷೆಗೆ ಮೀರಿದ ಪ್ರತಿಕ್ರಿಯೆ, ಉತ್ತೇಜನ ನಿಮ್ಮಿಂದ ಸಿಕ್ಕಿದೆ. ಈ ಬರಹಗಳನ್ನು ಬರೀತಾ ಬರೀತಾನೇ ನಮ್ಮ ಚಿಂತನೆಗಳೂ ಸ್ಪಷ್ಟರೂಪ ತೆಗೆದುಕೊಳ್ಳುತ್ತಾ ಸಾಗಿದ್ದು ಸುಳ್ಳಲ್ಲ. ನಿಮ್ಮ ಸಹಕಾರ ಮತ್ತು ಅಭಿಮಾನದಿಂದ ಈ ಬ್ಲಾಗು ಇದುವರೆಗೂ ಒಂದು ಲಕ್ಷಕ್ಕೂ ಹೆಚ್ಚು ಜನ ಓದುಗರನ್ನು ಮುಟ್ಟಿದೆ.ಆದ್ರೆ ನಾವು 36498http://kannada.oneindia.com/img/2009/05/08-enguru1.jpg382293bookಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು/column/gv/2009/0518-bendre-prose-critical-analysis-narayanacharya.html'ದೇಸಿಯತೆಯಲ್ಲಿ ಬೇರೂರಿ ಅರಳಿದ ದತ್ತ ಪ್ರತಿಭೆ' ಎಂದು ವರ್ಣಿತರಾದ ಸಾಧಕ ಕವಿ ದ.ರಾ.ಬೇಂದ್ರೆ ಅವರ ಕವಿ, ಕಾವ್ಯ ಮತ್ತು ವಿಮರ್ಶೆ ಕುರಿತು 32 ಸೂತ್ರಗಳ ವಿಮರ್ಶಾಗ್ರಂಥವನ್ನು ಡಾ. ಕೆ.ಎಸ್. ನಾರಾಯಣಾಚಾರ್ಯರು ಬರೆದಿದ್ದಾರೆ. ಎರಡು ವರ್ಷಗಳ ಹಿಂದೆ ಬರೆದ ಈ ಗ್ರಂಥ ಈಗ ಬಿಡುಗಡೆಯಾಗುತ್ತಿದೆ. ಈ ಗ್ರಂಥಕ್ಕೆ ಬೇಂದ್ರೆ ಅವರ ಮಗ ವಾಮನ ಬೇಂದ್ರೆ ಅವರು 50 ಪುಟಗಳ 36726http://kannada.oneindia.com/img/2009/05/18-bendre4.jpg382293bookನಾರಾಯಣಾಚಾರ್ಯ ಬರೆದ ಪುಸ್ತಕದ ಪರಿಚಯ (ಭಾಗ 2)/column/gv/2009/0523-book-by-ks-narayanacharya-on-bendre-prose.htmlಬೇಂದ್ರೆಯವರ ಬರವಣಿಗೆಯಲ್ಲಿ ಹುದುಗಿದ್ದ ವಿಮರ್ಶಾ ಸೂತ್ರಗಳನ್ನು ಆಯ್ದ ಶ್ರೇಯಸ್ಸು ನಾರಾಯಣಾಚಾರ್ಯರಿಗೆ ಸಲ್ಲುತ್ತದೆ. ಪ್ರತಿಯೊಂದು ಸೂತ್ರಕ್ಕೂ ನಾರಾಯಣಾಚಾರ್ಯರು 'ಸಾಹಿತ್ಯದ ವಿರಾಟ ಸ್ವರೂಪ' ಗ್ರಂಥದಲ್ಲಿ ದೀರ್ಘವಾದ ವಿದ್ವತ್‌ಪೂರ್ಣವಾದ ವ್ಯಾಖ್ಯಾನವನ್ನು ಬರೆದಿದ್ದಾರೆ. ಪುಸ್ತಕ ಪರಿಚಯದ ಎರಡನೇ ಭಾಗ ಇಲ್ಲಿದೆ.* ಡಾ. 'ಜೀವಿ' ಕುಲಕರ್ಣಿ, ಮುಂಬಯಿಡಾ| ಕೆ.ಎಸ್. ನಾರಾಯಣಾಚಾರ್ಯರು ಬೇಂದ್ರೆಯವರ "ಸಾಹಿತ್ಯದ ವಿರಾಟ ಸ್ವರೂಪ" ಗ್ರಂಥದಿಂದ 32 ವಿಮರ್ಶಾ ಸೂತ್ರಗಳನ್ನು ಆರಿಸಿದ್ದಾರೆ. ಸಾಹಿತ್ಯದ 36851http://kannada.oneindia.com/img/2009/05/23-ks-narayanacharya2.jpg382293bookಮೇ 31ರಂದು ನಟನದಲ್ಲಿ ರಂಗವಲ್ಲಿಯ ಲೋಕಾರ್ಪಣೆ/literature/book/2009/0529-mandya-ramesh-rangavalli-in-mysuru.htmlಮೈಸೂರು, ಮೇ 29 : ಜನಪ್ರಿಯ ನಟ, ರಂಗಕರ್ಮಿ ಮಂಡ್ಯ ರಮೇಶ್ ಬರೆದ 'ರಂಗವಲ್ಲಿ' ಕೃತಿ ಮೇ 31ರ ಭಾನುವಾರ ಸಂಜೆ 5.30ಕ್ಕೆ ರಾಮಕೃಷ್ಣನಗರದ ನಟನ ರಂಗಮಂಟಪದಲ್ಲಿ ಲೋಕಾರ್ಪಣೆಗೊಳ್ಳಲಿದೆ.ಡಾ|| ಹಾಲತಿ ಸೋಮಶೇಖರ್ ಅವರ ವಿಸ್ಮಯ ಪ್ರಕಾಶನ ಹೊರತಂದಿರುವ ಈ ಕೃತಿಯನ್ನು ಕುತೂಹಲ ಸಂಸ್ಥೆ ಲೋಕಾರ್ಪಣೆಗೊಳಿಸಲಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ, ಜನಪ್ರಿಯ ಲೇಖಕ ಡಾ|| ಸಿದ್ಧಲಿಂಗಯ್ಯ ಬಿಡುಗಡೆ 36989http://kannada.oneindia.com/img/2009/05/29-rangavalli-mandya-ramesh1.jpgnews"> ನಾರಾಯಣಾಚಾರ್ಯ ಬರೆದ ಪುಸ್ತಕದ ಪರಿಚಯ (ಭಾಗ 2) | Da Ra Bendre | Narayanacharya | Vamana Bendre | GV - ನಾರಾಯಣಾಚಾರ್ಯ ಬರೆದ ಪುಸ್ತಕದ ಪರಿಚಯ (ಭಾಗ 2) - Kannada Oneindia

ನಾರಾಯಣಾಚಾರ್ಯ ಬರೆದ ಪುಸ್ತಕದ ಪರಿಚಯ (ಭಾಗ 2)

Dr. KS Narayanacharya
ಬೇಂದ್ರೆಯವರ ಬರವಣಿಗೆಯಲ್ಲಿ ಹುದುಗಿದ್ದ ವಿಮರ್ಶಾ ಸೂತ್ರಗಳನ್ನು ಆಯ್ದ ಶ್ರೇಯಸ್ಸು ನಾರಾಯಣಾಚಾರ್ಯರಿಗೆ ಸಲ್ಲುತ್ತದೆ. ಪ್ರತಿಯೊಂದು ಸೂತ್ರಕ್ಕೂ ನಾರಾಯಣಾಚಾರ್ಯರು 'ಸಾಹಿತ್ಯದ ವಿರಾಟ ಸ್ವರೂಪ' ಗ್ರಂಥದಲ್ಲಿ ದೀರ್ಘವಾದ ವಿದ್ವತ್‌ಪೂರ್ಣವಾದ ವ್ಯಾಖ್ಯಾನವನ್ನು ಬರೆದಿದ್ದಾರೆ. ಪುಸ್ತಕ ಪರಿಚಯದ ಎರಡನೇ ಭಾಗ ಇಲ್ಲಿದೆ.

* ಡಾ. 'ಜೀವಿ' ಕುಲಕರ್ಣಿ, ಮುಂಬಯಿ

ಡಾ| ಕೆ.ಎಸ್. ನಾರಾಯಣಾಚಾರ್ಯರು ಬೇಂದ್ರೆಯವರ "ಸಾಹಿತ್ಯದ ವಿರಾಟ ಸ್ವರೂಪ" ಗ್ರಂಥದಿಂದ 32 ವಿಮರ್ಶಾ ಸೂತ್ರಗಳನ್ನು ಆರಿಸಿದ್ದಾರೆ. ಸಾಹಿತ್ಯದ ವಿರಾಟ ಸ್ವರೂಪ ಎಂಬ ಮೊದಲನೆಯ ಲೇಖನವು ಬೇಂದ್ರೆಯವರು ಶಿವಮೊಗ್ಗ ಸಾಹಿತ್ಯ ಸಮ್ಮೇಲನದಲ್ಲಿ ಮಾಡಿದ ಅಧ್ಯಕ್ಷೀಯ ಭಾಷಣ. ಈ ಭಾಷಣಕ್ಕೆ ಐತಿಹಾಸಿಕ ಮಹತ್ವವಿದೆ. ಈ ಭಾಷಣದಿಂದ ನಾರಾಯಣಾಚಾರ್ಯರು 14 ಸೂತ್ರಗಳನ್ನು ಆರಿಸಿದ್ದಾರೆ. ಈ ಗ್ರಂಥದ ಇತರ ಲೇಖನಗಳಿಂದ 18 ಸೂತ್ರಗಳನ್ನು ಆರಿಸಿದ್ದಾರೆ. ನಾರಾಯಣಾಚಾರ್ಯರ ಗ್ರಂಥದಲ್ಲಿ** 8 ಅಧ್ಯಾಯಗಳು ಇವೆ. ಅಧ್ಯಾಯ 1) ಸಾಹಿತ್ಯದ ಧ್ವನಿ (ಸೂತ್ರ-1), ಅಧ್ಯಾಯ 2) ರಸಾನುಭೂತಿ ಏನನ್ನು ಮಾಡಬಲ್ಲದು (ಸೂತ್ರ 2), ಅಧ್ಯಾಯ 3) ಸಾಹಿತ್ಯ ಎದುರಿಸಬೇಕಾದ ಸವಾಲು (ಸೂತ್ರ 3), ಅಧ್ಯಾಯ 4) ಶಬ್ದಾರ್ಥಗಳ ದಾಂಪತ್ಯ ರಹಸ್ಯ ಕುರಿತು (ಸೂತ್ರ 4ರಿಂದ 7), ಅಧ್ಯಾಯ 5) ಸಾಹಿತ್ಯರಸ, ಯೋಗ, ಆನಂದ ಇತ್ಯಾದಿ (ಸೂತ್ರ 8 ರಿಂದ 13), ಅಧ್ಯಾಯ 6) ಕನ್ನಡ ಸಾಹಿತ್ಯದಲ್ಲಿ ಆಗಬೇಕಾದುದು (ಸೂತ್ರ 14 ರಿಂದ 20), ಅಧ್ಯಾಯ 7) ಕಾವ್ಯಾಭ್ಯಾಸ, ಕಾವ್ಯವಿಧಾನ, ಕಾವ್ಯಧರ್ಮ, ಕಾವ್ಯಾಯುಷ್ಯ, ಕಾವ್ಯಸ್ಥಾಯೀಭಾವ, ಕಾವ್ಯದ ಅರಿವು, ಇರವು, ಹರವು, ಕವಿಪ್ರಮುಖರು, ಅನುಭಾವ ಕುರಿತು (ಸೂತ್ರ 21 ರಿಂದ 26), ಅಧ್ಯಾಯ 8) ಸಹೃದಯತೆ, ವಿಮರ್ಶೆ, ಕಾವ್ಯಾಯುರ್ವೇದ, ತಂತ್ರಚತುರ್ಮುಖ, ಹೃದಯಸಂಪನ್ನತೆ, ಕಾವ್ಯ ವ್ಯಾಖ್ಯೆಯ ಮಿತಿ, ಕಾವ್ಯ ವಿಶ್ವರೂಪ, ಭಾವ-ಅನುಭಾವ ಕುರಿತು (ಸೂತ್ರ 27 ರಿಂದ 32).

ಪ್ರತಿಯೊಂದು ಸೂತ್ರಕ್ಕೂ ನಾರಾಯಣಾಚಾರ್ಯರು ದೀರ್ಘವಾದ ವಿದ್ವತ್‌ಪೂರ್ಣವಾದ ವ್ಯಾಖ್ಯಾನವನ್ನು ಬರೆದಿದ್ದಾರೆ. ಕನ್ನಡ, ಸಂಸ್ಕೃತ, ಪಾಶ್ಚಾತ್ಯ ವಿಮರ್ಶಕರನ್ನು ಉದಾಹರಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಖಾರವಾದ ಟೀಕಾಪ್ರಹಾರವನ್ನೇ ಮಾಡುತ್ತಾರೆ, ಸಾತ್ವಿಕ ಸಂತಾಪವನ್ನು ಸೂಚಿಸುತ್ತಾರೆ. ವಿಮರ್ಶಾಲೋಕದಲ್ಲಿ ಆವರಿಸಿದ ಗ್ರಹಣದ ಬಗ್ಗೆ ಮಾತಾಡುತ್ತಾರೆ.

ಬೇಂದ್ರೆಯವರ ಬರವಣಿಗೆಯಲ್ಲಿ ಹುದುಗಿದ್ದ ವಿಮರ್ಶಾ ಸೂತ್ರಗಳನ್ನು ಆಯ್ದ ಶ್ರೇಯಸ್ಸು ನಾರಾಯಣಾಚಾರ್ಯರಿಗೆ ಸಲ್ಲುತ್ತದೆ. ಬೇಂದ್ರೆಯವರ ವಿಮರ್ಶಾಸೂತ್ರಗಳಲ್ಲಿರುವ ಕೆಲವು ವೈಚಾರಿಕ ಕಿಡಿಗಳು ಇಂತಿವೆ:

* ಒಂದನ್ನೊಂದು ತಿಂದು ಬದುಕುವುದು ಬದುಕಲ್ಲ, ಸಾವು. ಒಂದನ್ನೊಂದು ತಿಳಿದು ಬದುಕುವುದು ಬಾಳು ಎಂದು ಸಾಹಿತ್ಯ ಸಾರುತ್ತದೆ. ಪ್ರಾಣಿಗಳಂತೆ ಬದುಕಬೇಡಿರಿ, ಜೀವಿಗಳಂತೆ ಬಾಳಿರಿ. ಪ್ರಾಣಹಿಂಡಿ ಜೀವ ತಿನ್ನಬೇಡಿ; ಜೀವಕ್ಕೆ ಜೀವ ಕೊಟ್ಟು ಜೀವಿಸಿರಿ. ಇದು ಸಾಹಿತ್ಯದ ಧ್ವನಿ.
* ತಾಳ್ಮೆ, ಸೈರಣೆ, ಧಾರಣೆ, ಪ್ರಾಣದ ಅಸಹನೆಯಿಂದ ವಿವೇಕ ಹದಗೆಡುವುದು, ರಸ ವಿರಸವಾಗುವುದು.
* ಸಾಹಿತ್ಯವು ಶೈಲಿಯ ಸೊಗಸಲ್ಲ, ರಂಜನೆಯ ರಸವಲ್ಲ, ಸಿಂಗಾರದ ಸಡಗರವಲ್ಲ; ಮಹಾಪುರುಷ, ಮಹಾಪ್ರಕೃತಿಯ ಆತ್ಮರತಿ, ಆತ್ಮಕ್ರೀಡೆಯ, ಮಹಾರಸಗಳ ನಲಿದಾಟ, ಒಲಿದಾಟ, ವಿಶ್ವಸಾಹಿತ್ಯದ ಅಚ್ಚುಕೂಟ ಇಲ್ಲಿದೆ. ಸತ್ಯವು ಅಮೃತವಾಗುವುದು ಇಲ್ಲಿ. ಈ ಸತ್ಯೋಪಾಸನೆಯೂ ಬೇಕು, ನಿತ್ಯೋಪಾಸನೆಯೂ ಬೇಕು.
* ಸಾಹಿತ್ಯದೊಳಗಿನ ತತ್ವಜ್ಞಾನವು ಅದರ ಅಂಗಭೂತವಾಗಿರುತ್ತದೆ. ಅದು ಸಾಹಿತ್ಯವನ್ನು ಪಶುವೆಂದು ಬಗೆದು ತನ್ನ ಪಶುಪತಿತ್ವವನ್ನು ಮೆರೆಯಿಸುವುದಿಲ್ಲ.
* ಹುಟ್ಟಿದ ಸಾಹಿತ್ಯವು ಓದುವವರನ್ನು ಮುಟ್ಟುವುದರಲ್ಲಿಯೇ ಸಾರ್ಥಕತೆ ಇದೆ.
* ಸಾಹಿತ್ಯವೆಂಬುದು ಶಬ್ದದಿಂದ ಜಡವಾಗಿದ್ದರೂ ಅರ್ಥದಿಂದ ಅಮರವಾಗಿರುವುದು.
* ಸಾಹಿತ್ಯವು ಹಠಯೋಗವಲ್ಲ, ರಸಯೋಗ. ರಸ ಮತ್ತು ಜನನ ಬೇರೆಯಲ್ಲ, ವಿರಸ ಮತ್ತು ಮರಣ ಬೇರೆಯಲ್ಲ.
* ಸಾಹಿತ್ಯದ ನೀರು ರಸ, ಅಮೃತ. ಸೋಹಂ ಎಂಬ ಅಹಂಭಾವವಿಲ್ಲ, ಕೋಹಂ ಎಂಬ ಸಂಶಯವಿ. ರಸೋಹಂ ಎಂಬ ಸಂತತ ಪ್ರೀತಿಯೇ ಸಾಹಿತ್ಯದ ಜೀವಾಳ.
* ನಿಜವಾದ ವಿಮರ್ಶಕನಿಗೆ ಸಹೃದಯತೆಯು ಬೇಕು. ದೂರದರ್ಶಕ ಯಂತ್ರವಿರದೆ ಜ್ಯೋತಿರ್ಮಂಡಲವನ್ನು ಹುಡುಕಾಡುವುದು, ಹೃದಯವಿರದೆ ಕಾವ್ಯಸಾಗರವನ್ನು ಕಲಕಾಡುವುದು ಒಂದೇ.
* ಉಪಸಂಹಾರದಲ್ಲಿ ನಾರಾಯಣಾಚಾರ್ಯರು ಕೆಲವೊಂದು ಮಹತ್ವದ ಮಾತುಗಳನ್ನು ಹೇಳುತ್ತಾರೆ. ಬೇಂದ್ರೆ ಬರೆದುದೆಲ್ಲವೂ ಸೂತ್ರಾತ್ಮಕವೇ. ಗದ್ಯವಿರಲಿ, ಪದ್ಯವಿರಲಿ, ಅವರ ಸುಕ್ತಿ ಶೈಲಿಯೇ ಹಾಗೆ. ಅನನ್ಯ, ಅನುಪಮ ಎನ್ನುತ್ತಾರೆ.

ಬೇಂದ್ರೆ ಸೂತ್ರಗಳನ್ನು ಆಧರಿಸಿ ಪ್ರತಿಭಾವಂತ ತರುಣ ಅಧ್ಯಯನಶೀಲರು ಬರೆಯಬಹುದಾದ ಪ್ರಬಂಧಗಳ ವಿಷಯ ಸೂಚಿಸುತ್ತಾರೆ.

1) ಬೇಂದ್ರೆ ಸಾಹಿತ್ಯ ವಿಮರ್ಶೆ ಪರಿಭಾಷೆ.
2) ಬೇಂದ್ರೆ ಸಾಹಿತ್ಯ ಸೂತ್ರಗಳ ಸಮಗ್ರತೆ, ಪೂರ್ಣತೆ, ವ್ಯಾಪ್ತಿ.
3) ಬೇಂದ್ರೆ ಸಾಹಿತ್ಯ ಸೂತ್ರಗಳು ಪಶ್ಚಿಮದ ಕಾವ್ಯಗಳಿಗೆ ಎಷ್ಟರಮಟ್ಟಿಗೆ ಅನ್ವಯಿಸಲು ಸಾಧ್ಯ.
4) ಬೇಂದ್ರೆ ಸಾಹಿತ್ಯ ಸೂತ್ರಗಳ ವೈಶಿಷ್ಟ್ಯ.
5) ಬೇಂದ್ರೆ ಸಾಹಿತ್ಯ ಸೂತ್ರಗಳ ಪ್ರಧಾನ ನೆಲೆ.
6) ಬೇಂದ್ರೆ ಸಾಹಿತ್ಯ ಸೂತ್ರಗಳಲ್ಲಿ ತತ್ತ್ವಶಾಸ್ತ್ರದ ಪ್ರಭಾವ.
7) ಬೇಂದ್ರೆ ಸಾಹಿತ್ಯ ಸೂತ್ರಗಳ ನವೋನವತೆ, ಪ್ರಾಚೀನತೆಯ ಹಿನ್ನೆಲೆ.
8) ಬೇಂದ್ರೆ ಸಾಹಿತ್ಯ ಸೂತ್ರಗಳಲ್ಲಿ ನಿಷ್ಪಕ್ಷಪಾತದ ನಿಲವು.
9) ಸಮಕಾಲೀನ ವಿಮರ್ಶಾ ಗೊಂದಲದಲ್ಲಿ ಬೇಂದ್ರೆ ಸಾಹಿತ್ಯ ಸೂತ್ರಗಳ ಪ್ರಸ್ತುತತೆ.
10) ಬೇಂದ್ರೆ ಸಾಹಿತ್ಯ ಸೂತ್ರಗಳ ಭವಿಷ್ಯ ಸ್ಥಾನ.

** (ಕವಿವರ್ಯ ಬೇಂದ್ರೆ ನಿರೂಪಿಸಿದ ಸಾಹಿತ್ಯ ವಿಮರ್ಶಾ ಸೂತ್ರಗಳು- ಲೇಖಕರು: ಡಾ| ಕೆ.ಎಸ್.ನಾರಾಯಾಣಾಚಾರ್ಯ, ಪ್ರಕಾಶಕರು: ಶ್ರೀಮಾತಾ ಪ್ರಕಾಶನ, ವಿಶ್ವಶ್ರಮ ಚೇತನ, ಹುಬ್ಬಳ್ಳಿ-580 003, ಬೆಲೆ-ರೂ.230, ಪುಟ 40+240).

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+