ಕಾರ್ಟೂನ್ : ಕಾವೇರಿ ನದಿ ನೀರು ಹಂಚಿಕೆ, ಯಾರಿಗೆ ಎಷ್ಟು ಪಾಲು?
ಬೆಂಗಳೂರು, ಫೆಬ್ರವರಿ 18: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಪೀಠ ನೀಡಿರುವ ತೀರ್ಪು- ತಮಿಳುನಾಡು ಪಾಲಿಗೆ ಕಹಿಯಾಗಿದ್ದರೆ, ಕರ್ನಾಟಕದ ಪಾಲಿಗೆ ಸಿಹಿಯಾಗಿದೆ.
ವ್ಯಂಗ್ಯಚಿತ್ರಕಾರ ಮದನ್ ಸಿ.ಪಿ ಅವರು ಚಿತ್ರಿಸಿದಂತೆ ಕಾವೇರಿ ನದಿ ನೀರು ಹಂಚಿಕೆ ತಮಿಳುನಾಡಿಗೆ ಎಷ್ಟು? ಕರ್ನಾಟಕಕ್ಕೆ ಎಷ್ಟು? ಕಾವೇರಿ ತಾಯಿ ನೀರು ಮೇಲಿಂದ ಸುರಿಯುತ್ತಿದ್ದಾಳೆ. ನ್ಯಾಯ ದೇವತೆ ಕೊಡೆ ಹಿಡಿದು ಇಬ್ಭಾಗವಾಗುವಂತೆ ಮಾಡಿದ್ದಾಳೆ.
ನ್ಯಾಯದ ತಕಡಿ ಮೇಲೆ ಕರ್ನಾಟಕ ಹಾಗೂ ತಮಿಳುನಾಡು ಸಿಎಂ ಕೂರಿಸಲಾಗಿದೆ. ಕರ್ನಾಟಕದ ಕಡೆಯಿಂದ ತಮಿಳುನಾಡಿನ ಕಡೆಗೆ ಪೈಪ್ ಹರಿಸಲಾಗಿದೆ. ಪೈಪ್ ಮಧ್ಯದಲ್ಲಿ ರಜನಿಕಾಂತ್ ಪಕ್ಷದ ಚಿನ್ಹೆ ಹಾಗೂ ಕಮಲ್ ಹಾಸನ್ ರನ್ನು ತೂಗು ಹಾಕಲಾಗಿದೆ.

ಸುಪ್ರೀಂಕೋರ್ಟ್ ನೀಡಿದ ತೀರ್ಪಿನಂತೆ ವಾರ್ಷಿಕ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಲಿದೆ, ಹೀಗಾಗಿ ಕರ್ನಾಟಕಕ್ಕೆ 284.75 ನೀರು ಸಿಗಲಿದೆ. ತಮಿಳುನಾಡಿಗೆ 419 ಟಿಎಂಸಿ ಅಡಿ ನೀರಿನ ಬದಲಿಗೆ 404. 25 ಟಿಎಂಸಿ ನೀರು ಸಿಗಲಿದೆ.












Click it and Unblock the Notifications