ಮೌನಿ ಅಮಾವಾಸ್ಯೆ: ನದಿ ಸ್ನಾನ, ವಸ್ತ್ರ ದಾನ, ಮೌನ- ಧ್ಯಾನ ಶ್ರೇಷ್ಠ
ಅಮಾವಾಸ್ಯೆ ಹಾಗೂ ಪೌರ್ಣಮಿಗೆ ವಿಶೇಷ ಸ್ಥಾನವಿದೆ. ಇವೆರಡನ್ನೂ ಪೂರ್ಣ ತಿಥಿ ಎಂದು ಕರೆಯುತ್ತೇವೆ. ಉಳಿದದ್ದನ್ನು ರಿಕ್ತ ತಿಥಿ ಎಂದು ಕರೆಯುತ್ತೇವೆ. ಈ ರೀತಿ ತುಂಬ ವಿಶೇಷ ಎನಿಸುವಂತೆ ವರ್ಷದಲ್ಲಿ ಮೂರು ಅಮಾವಾಸ್ಯೆಗಳಿಗೆ ಪ್ರಾಶಸ್ತ್ಯವಿದೆ.
ಮೊದಲ ವಿಶೇಷ ಶನೈಶ್ಚರ ಅಮಾವಾಸ್ಯೆ, ಎರಡನೆಯದು ಸೋಮವಾರದಂದು ಅಮಾವಾಸ್ಯೆ ಬಂದಾಗ ಹಾಗೂ ಮೂರನೆಯ ವಿಶೇಷ ಮೌನಿ ಅಮಾವಾಸ್ಯೆ
ಆದರೆ, ಉತ್ತರ ಭಾರತೀಯರ ಮಾಸದ ಲೆಕ್ಕಾಚಾರ ಬೇರೆಯಾದ್ದರಿಂದ ಇದನ್ನು ಮಾಘ ಅಮಾವಾಸ್ಯೆ ಅಂತ ಅವರು ಕರೆಯುತ್ತಾರೆ. ನಮಗೆ ಇದು ಪೌಷ ಮಾಸದ ಅಮಾವಾಸ್ಯೆ. ಈ ಬಾರಿ ಜನವರಿ 16ರಂದು ಮಂಗಳವಾರ ಅಂದರೆ ಇಂದು ಆರಂಭವಾಗಿರುವ ಈ ಅಮಾವಾಸ್ಯೆ ನಾಳೆ (ಬುಧವಾರ) ಬೆಳಗ್ಗೆ ತನಕ ಇರುತ್ತದೆ.

ಮೌನಿ ಅಮಾವಾಸ್ಯೆ ಅಂದರೆ ಅದರ ಹೆಸರೇ ಹೇಳುವಂತೆ ಹೆಚ್ಚು ಮೌನವಾಗಿರಬೇಕು ಎಂಬುದೇ ಈ ದಿನದ ವಿಶೇಷ. ಅಂದರೆ ಇವತ್ತು ಮೌನವಾಗಿದ್ದು, ದೇವರ ಧ್ಯಾನದಲ್ಲಿ ಸಮಯ ಕಳೆಯಬೇಕು. ಮೌನಿ ಅಮಾವಾಸ್ಯೆಯಂದು ನದಿ ಸ್ನಾನ ಶ್ರೇಷ್ಠ. ಅದರಲ್ಲೂ ಸಂಗಮ ಸ್ನಾನಕ್ಕೆ ಹೆಚ್ಚಿನ ಮಹತ್ವ.
ಏಕೆಂದರೆ, ಸಮುದ್ರ ಮಂಥನದ ವೇಳೆಯಲ್ಲಿ ಒಂದೆರಡು ಹನಿ ಅಮೃತ ಸಂಗಮದಲ್ಲಿ ಬಿತ್ತು ಎಂಬುದು ನಂಬಿಕೆ. ಆದ್ದರಿಂದ ಸಂಗಮದಲ್ಲಿನ ಸ್ನಾನ ನಾಲ್ಕೈದು ಪಟ್ಟು ಹೆಚ್ಚು ಫಲ ಕೊಡುತ್ತದೆ. ಆದರೆ ಹುಣ್ಣಿಮೆ- ಅಮಾವಾಸ್ಯೆಯಂದು ನದಿಯಲ್ಲಿ ಸ್ನಾನ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.
ಮೌನಿ ಅಮಾವಾಸ್ಯೆಯಂದು ಕಂಬಳಿ, ಹತ್ತಿ ವಸ್ತ್ರಗಳನ್ನು ದಾನ ಮಾಡಿದರೆ ಹೆಚ್ಚು ಫಲ. ಅದರಲ್ಲೂ ಅಶಕ್ತರಿಗೆ, ಅಗತ್ಯ ಇರುವವರಿಗೆ ವಸ್ತ್ರ ದಾನ ಮಾಡಿದರೆ ಶ್ರೇಷ್ಠ. ಈ ಮೌನಿ ಅಮಾವಾಸ್ಯೆಯಂದು ಮಹಾವಿಷ್ಣು- ಶಿವನ ಆರಾಧನೆಗೆ ಪ್ರಾಮುಖ್ಯ ಇದೆ. ಕಳಶ ಸ್ವರೂಪದಲ್ಲಿ ಆರಾಧನೆ ಮಾಡಿದರೂ ಸರಿ, ಬೇರೆ ಯಾವುದೇ ರೂಪದಲ್ಲಾದರೂ ಸರಿ ಇಬ್ಬರ ಆರಾಧನೆ ಮಾಡಬೇಕು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications