ತುಲಾ : ಗುರುವಿನ ಹೊಡೆತಕ್ಕೆ ಜೀವನವೇ ಅಲ್ಲೋಲಕಲ್ಲೋಲ
ಸಾಡೇಸಾತಿಯ ಕೊನೆಯ ಹಂತದಲ್ಲಿ ಇರುವ ತುಲಾ ರಾಶಿಯವರಿಗೆ ಈಗ ಜೀವನ ನುಂಗಲಾರದ ತುಪ್ಪದಂತಾಗುವುದರಲ್ಲಿ ಸಂಶಯವೇ ಇಲ್ಲ. ಏಕೆಂದರೆ 12ನೇ ಸ್ಥಾನದಲ್ಲಿ ಗುರು ಬಂದಿದ್ದಾನೆ. ಮೊದಲೇ ವ್ಯಯಸ್ಥಾನವೆಂದು ಕರೆಯಿಸಿಕೊಳ್ಳುವ 12ನೇ ಸ್ಥಾನದಲ್ಲಿ ಗುರು ಬಂದನಂದರೆ ಹಣಕಾಸಿನ ಸಮಸ್ಯೆ ವಿಪರೀತ ತಲೆದೋರಲಾರಂಭಿಸುತ್ತದೆ.
ಜೊತೆಗೆ ಕೆಲವೊಂದು ರೋಗ ರುಜಿನಗಳು ದೇಹದೊಳಗೆ ಮನೆ ಮಾಡಲು ಆರಂಭಿಸುತ್ತವೆ. ಹೀಗಾಗಿ ಈ ರಾಶಿಯವರು ಮುಂದಿನ ವರ್ಷದ ಜನವರಿಯವರೆಗೂ ತುಂಬಾ ಜಾಗೃತರಾಗಿರಬೇಕು. ಇಲ್ಲವಾದಲ್ಲಿ ಜೀವನ ಪೂರ್ತಿ ಆಸ್ಪತ್ರೆಗೆ ಭೇಟಿ ನೀಡುವುದು ತಪ್ಪುವುದಿಲ್ಲ. ಅಷ್ಟೊಂದು ಪರಿಣಾಮಕಾರಿಯಾಗಿದೆ ಈ ಗ್ರಹಾಚಾರದ ಫಲಾಫಲ.
ಏಕೆಂದರೆ ಮೊದಲೇ ನೀಚ ಶನಿ ವೃಶ್ಚಿಕದಲ್ಲಿದ್ದಾನೆ. ಜೊತೆಗೆ ಗುರು ಕೂಡ ವ್ಯಯ ಸ್ಥಾನಕ್ಕೆ ಬಂದು ಇದ್ದಬದ್ದದ್ದನ್ನೆಲ್ಲಾ ಕರಗಿಸಲಾರಂಭಿಸುತ್ತಾನೆ. ಇದರಿಂದ ಕಂಗೆಟ್ಟ ಪರಿಸ್ಥಿತಿ ತುಲಾ ರಾಶಿಯವರದು. ಇಷ್ಟು ದಿನ ಹನ್ನೊಂದು ಸ್ಥಾನದಲ್ಲಿದ್ದ ಗುರು ಸಾಕಷ್ಟು ಪ್ರಮಾಣದ ಹಣಕಾಸಿನ ವ್ಯವಸ್ಥೆ, ಆಸ್ತಿಪಾಸ್ತಿ ಮತ್ತಿತರರ ಸೌಕರ್ಯಗಳನ್ನು ನೀಡಿದ್ದಾನೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಈ ಸಮಯದಲ್ಲಿ ಗಳಿಸಿಟ್ಟುಕೊಂಡಿದ್ದನ್ನು ಉಳಿಸಿಕೊಂಡು ಹೋಗುವುದನ್ನು ಕಲಿಯಬೇಕು. ಇಲ್ಲವಾದಲ್ಲಿ ಹೇಗೆ ಬಂದಿತ್ತೋ ಹಾಗೇ ಹೊರಟು ಹೋಗುತ್ತವೆ ಕೆಲವೊಂದು ವಸ್ತುಗಳು ನೆನಪಿರಲಿ. ಸಾಡೇಸಾತಿಯ ಪರಿಣಾಮಗಳನ್ನು ಈಗಾಗಲೇ ಅನುಭವಿಸಿರುವುದಿಂದ ಈಗ ಶನಿಗೆ ಗುರುವು ಕೈಜೋಡಿಸುವುದರಿಂದ ಇಬ್ಬಿಬ್ಬರ ಹೊಡೆತ ತಾಳಿಕೊಳ್ಳಲು ಸಿದ್ಧರಾಗಬೇಕು ತುಲಾ ರಾಶಿಯವರು. [ಶನೈಶ್ಚರ ಜಯಂತಿ ಕುರಿತ ವಿಶೇಷ ಲೇಖನ]
ನಮ್ಮ ಧರ್ಮದ ಬಗ್ಗೆ ಅಪನಂಬಿಕೆ ಇದ್ದವರು ಅಥವಾ ಸಾಡೇಸಾತಿಯನ್ನು ಉಡಾಫೆ ಮಾಡಿದವರು ಈಗ ತಪ್ಪಿಸದೇ ಹತ್ತಿರದ ದೇವರಿಗೆ ಉರುಳು ಸೇವೆ, ದೀಡ ನಮಸ್ಕಾರ ಮತ್ತಿತರ ಧಾರ್ಮಿಕ ಕಾರ್ಯ ಮಾಡಿಕೊಂಡು ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಇಲ್ಲವಾದರೆ ಗುರುವಿನ ಹೊಡೆತದಿಂದ ಜೀವನವೇ ಅಲ್ಲೋಲ ಕಲ್ಲೋಲವಾಗಬಹುದು. ಈ ಮಾತನ್ನು ಉಡಾಫೆ ಮಾಡಿದರೆ ಅನುಭವಕ್ಕೆ ಬಂದ ಮೇಲೆ ಹೇಳಿಕೊಳ್ಳಿ ಗುರುಫಲ ಹೇಗಿತ್ತು ಎಂದು. ಉಳಿದವರಾದರೂ ಬುದ್ಧಿ ಕಲಿಯುತ್ತಾರೆ. [ತುಲಾ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
ಹೆಚ್ಚಿನ ತೊಂದರೆಗಳು ಬರುವುದರಿಂದ ಎಲ್ಲ ಕೆಲಸಗಳನ್ನೂ ಶ್ರದ್ಧೆಯಿಂದ ಮಾಡಬೇಕು. ಹೆಚ್ಚಿನ ಶ್ರಮ ಹಾಕಬೇಕು. ಹಣದ ವಿಷಯದಲ್ಲಿ ತೊಂದರೆಗಳ ಮೇಲೆ ತೊಂದರೆ ಬರುವುದರಿಂದ ಇಷ್ಟದ ದೇವರನ್ನು ಸ್ಮರಿಸಬೇಕು. ನೀವು ನೋಡಿರಬಹುದು ಕೆಲವೊಂದು ಜಾತ್ರೆಗಳ ಬಗ್ಗೆ ಯಾವುದೇ ಪತ್ರಿಕೆಗಳಲ್ಲಿ ಸುದ್ದಿ ಬರುವುದಿಲ್ಲ. ಆದರೂ ಕೆಲವೊಂದು ಸ್ಥಳಗಳಲ್ಲಿ ಲಕ್ಷಗಟ್ಟಲೇ ಜನ ಸೇರುತ್ತಾರೆ. ಯಾಕೆ ಎಂದು ಒಮ್ಮೆ ಯೋಚಿಸಿ. ಅದನ್ನೇ ದೈವಭಕ್ತಿ ಎನ್ನುವುದು.
ಈಗ ತುಲಾ ರಾಶಿಯವರು ದೈವಭಕ್ತಿ ಬೆಳೆಸಿಕೊಳ್ಳುವ ಸಮಯ. ಬೆಳೆಸಿಕೊಂಡರೆ ಜೀವನ ಪಾವನ. ದೇಹಾರೋಗ್ಯದ ಬಗ್ಗೆ ತೊಂದರೆಗಳು ಉಲ್ಬಣಿಸುವುದರಿಂದ ಮೊದಲು ವ್ಯಾಯಾಮ ಮಾಡಿಕೊಳ್ಳುವುದನ್ನು ಆರಂಭಿಸಬೇಕು. ಮಧುಮೇಹ ಮತ್ತು ಬಿಪಿ ಬರಲು ಹಾತೊರೆಯುತ್ತಿರುತ್ತದೆ. ಹೀಗಾಗಿ ನಿತ್ಯದ ವ್ಯಾಯಾಮದಿಂದ ರೋಗಗಳು ದೇಹದಲ್ಲಿ ಮನೆ ಮಾಡದಂತೆ ಜಾಗೃತೆ ವಹಿಸಿಕೊಳ್ಳಬೇಕು.
ಗುರು ಸಂಚಾರವಿದ್ದಾಗಲೇ ಮಧುಮೇಹ ಬರುವ ಸಾಧ್ಯತೆಗಳು ಹೆಚ್ಚು. ಹೀಗಾಗಿ 35 ವರ್ಷ ಮೇಲ್ಪಟ್ಟವರು ಗುರು ಸಂಚಾರ ಮುಗಿಯುವವರೆಗೂ ತಿಂಗಳಿಗೊಮ್ಮೆ ರಕ್ತದಲ್ಲಿನ ಗ್ಲುಕೋಸ್ ಪರೀಕ್ಷೆ ಮಾಡಿಕೊಳ್ಳಬೇಕು. ಸಿಹಿ ತಿನಿಸುಗಳನ್ನು ಅತೀ ಕಡಿಮೆ ಮಾಡಬೇಕು. ಸಕ್ಕರೆ ಸಹವಾಸ ಕೂಡ ಕಡಿಮೆ ಮಾಡಬೇಕು. ಮಾನಸಿಕ ಸ್ಥಿರತೆಯೂ ಕೊಂಚ ಕಾಡುವುದರಿಂದ ಧ್ಯಾನ ಮತ್ತು ಯೋಗದಲ್ಲಿ ನಿತ್ಯ ಒಂದು ಗಂಟೆಯನ್ನು ಕಳೆಯಬೇಕು. [ತುಲಾ ರಾಶಿ ವರ್ಷ ಭವಿಷ್ಯ ಮತ್ತು ಪರಿಹಾರೋಪಾಯ]
ಸಂಪಾದಕರ ಮಾತು : ಓದುಗರು, ಸಾಡೇಸಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಯಸಿದ್ದಲ್ಲಿ, ಯಾವುದೇ ತೊಂದರೆಗಳಿಗೆ ಪರಿಹಾರ ಕಂಡುಕೊಳ್ಳಬಯಸಿದ್ದಲ್ಲಿ ಲೇಖಕರಿಗೆ ನೇರವಾಗಿ ಪೋನಾಯಿಸಿ ತಿಳಿದುಕೊಳ್ಳಬಹುದು. (ಲೇಖಕರ ಮೊಬೈಲ್ : 94815 22011)
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications