ಸಿಂಹ ರಾಶಿಯವರಿಗೆ ಜಾಕಪಾಟ್ ಹೊಡೆದಂಗೇನೆ!
ಲಾಭದ ಸ್ಥಾನವೆಂದೇ ಕರೆಯಿಸಿಕೊಳ್ಳುವ ರಾಶಿಯಿಂದ ಎರಡನೇ ಸ್ಥಾನದಲ್ಲಿ ಗುರು ಸಂಚರಿಸುವುದರಿಂದ ಸಿಂಹ ರಾಶಿಯವರಿಗೆ ಜಾಕಪಾಟ್ ಹೊಡೆದಂಗೇನೆ.
ಏಕೆಂದರೆ ಇಷ್ಟು ದಿನ ಅಂದರೆ ಕಳೆದ ವರ್ಷದಿಂದ ಗುರು ನಿಮ್ಮ ರಾಶಿಯಲ್ಲಿಯೇ ಇದ್ದನು. ಈಗ ಸಿಂಹ ರಾಶಿ ಬಿಟ್ಟು ಕನ್ಯಾ ರಾಶಿಗೆ ಸಂಚರಿಸುವುದರಿಂದ ನಿಮಗೆ ಬಿಡುಗಡೆಯ ಭಾಗ್ಯವೆಂದೇ ಹೇಳಬಹುದು.
ಗುರು ಸಂಚಾರದ ಸಮಯದಲ್ಲಿ ಕೆಲವೊಮ್ಮೆ ಮಧುಮೇಹ ಬಂದಿರುವ ಸಂಭವ ಇರುವುದರಿಂದ ಈ ರಾಶಿಯ 35 ವರ್ಷ ಮೇಲಿನವರು ತಪ್ಪದೇ ರಕ್ತದಲ್ಲಿ ಗ್ಲುಕೋಸ್ ಪರೀಕ್ಷಿಸಿಕೊಂಡು ಶುಗರ್ ಬಂದಿದೆಯೋ ಬರುವ ಹಂತದಲ್ಲಿಯೋ ಎಂಬುದನ್ನು ತಿಳಿದುಕೊಳ್ಳಬೇಕು. ಇದು ಮುಖ್ಯವಾದ ಸಂಗತಿ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಇನ್ನು ಕನ್ಯಾ ರಾಶಿಯಲ್ಲಿನ ಗುರು ನಿಮಗೆ ಹಣದೊಂದಿಗೆ ಅದೃಷ್ಟವನ್ನು ತೆರೆದಿಟ್ಟು ಬಿಡುತ್ತಾನೆ. ಕಾಸಿನ ಕೊರತೆಯಿಂದ ಕಂಗಾಲಾದವರಿಗೆ ಈಗ ಗುರುಬಲ ಬಂದಿದೆ ಎಂದೇ ಹೇಳಬಹುದು.
ಇಷ್ಟು ದಿನ ಗುರುಬಲವಿಲ್ಲದೇ ತೊಂದರೆ ಅನುಭವಿಸಿದವರಿಗೆ ಈಗ ಗುರುಬಲವನ್ನು ಕಣ್ಣಾರೆ ನೋಡಿಕೊಂಡು ಅನುಭವಿಸುವ ಸಮಯವೆನ್ನಬಹುದು. ಬಾಕಿ ಇದ್ದ ಹಣ ಅಥವಾ ಸರಕಾರದಿಂದ ಬರಬೇಕಾದ ದುಡ್ಡು ಕೈಸೇರಲು ಹವಣಿಸುತ್ತದೆ. ಕೆಲವೊಂದು ವ್ಯವಹಾರಗಳಲ್ಲಿ ಸಿಲುಕಿ ಹಾಕಿಕೊಂಡ ದುಡ್ಡು ಕೂಡ ಈಗ ಬಂದು ಮನಸ್ಸಿಗೆ ಸಮಾಧಾನವಾಗುತ್ತದೆ. [ಗುರುಫಲ : ವೃಷಭ, ಸಿಂಹ, ಮೀನ, ವೃಶ್ಚಿಕ ರಾಶಿಗೆ ಸೂಪರ್]
ಇಷ್ಟು ದಿನ ವೈರತ್ವ ಸಾಧಿಸಿದವರು ಈಗ ಸ್ನೇಹದ ಹಸ್ತ ಕೈಚಾಚಲು ಮುಂದೆ ಬರುತ್ತಾರೆ. ಬಂದವರನ್ನು ಹೃದಯದಿಂದ ಸ್ವಾಗತಿಸಿ. ಅವರಿಂದಲೇ ಲಾಭ ಮಾಡಿಕೊಳ್ಳುವ ಹಾದಿ ಗೊತ್ತಾಗಬಹುದು. ಎಲ್ಲ ವಿಷಯಗಳಲ್ಲೂ ಸಂತಸವಿರುವುದರಿಂದ ಮಾನಸಿಕ ಸ್ಥಿರತೆ ಹೆಚ್ಚಾಗುತ್ತದೆ. ಜೊತೆಗೆ ಕೆಲವೊಬ್ಬರಿಗೆ ಅಹಂ ಕೂಡ ಬರಬಹುದು. ಅದನ್ನು ಬರದಂತೆ ನೋಡಿಕೊಳ್ಳುವುದು ಜಾಣರ ಲಕ್ಷಣ.
ಈ ಹಿಂದಿನ ಕೆಲ ದಿನಗಳು ನಿಮಗೆ ಕಾಲಿಗೆ ಕಲ್ಲು ಕಟ್ಟಿಕೊಂಡು ಓಡಾಡಿರುವಂತೆ ಅನುಭವವಾಗಿರುತ್ತದೆ. ಹೀಗಾಗಿ ಈಗ ಬಂದಿರುವ ಶುಭಫಲವನ್ನು ಚೆನ್ನಾಗಿ ಬಳಸಿಕೊಂಡು ಆಸ್ತಿಪಾಸ್ತಿ ಮಾಡಿಕೊಂಡು ಆರಾಮಾಗಿ ಸಂಧ್ಯಾಕಾಲದವರೆಗೂ ಜೀವನ ಕಳೆಯಬಹುದು. ನಿಮ್ಮಿಂದ ಕುಟುಂಬದವರೂ ಕೂಡ ಸಂತಸದಿಂದಿರಬಹುದು. [ಸಿಂಹ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]
ಆದರೆ, ಮನೆಯಲ್ಲಿನವರ ರಾಶಿಗಳು ಯಾವವು ಮತ್ತು ಅವರಿಗೇನು ಫಲ ಎಂಬುದನ್ನು ನೀವು ತಿಳಿದುಕೊಂಡು ಅವರೊಂದಿಗೆ ಸೂಕ್ತ ರೀತಿಯಲ್ಲಿ ವರ್ತಿಸಬೇಕು. ಕೆಲವೊಮ್ಮೆ ಈ ರಾಶಿಯ ಪುರುಷರಿಗೆ ಕಚೇರಿ ಅಥವಾ ವ್ಯವಹಾರದಲ್ಲಿ ಅಥವಾ ಸಂಬಂಧಿಕರಲ್ಲಿನ ಮಹಿಳೆಯರಿಂದ ಜೀವನಕ್ಕೆ ಸಹಾಯ ಸಿಗುತ್ತದೆ. ಸಹಾಯ ನೀಡಲು ಬಂದರೆ ತಿರಸ್ಕರಿಸದೇ ಬಯಸದೇ ಬಂದ ಭಾಗ್ಯ ಎಂದುಕೊಂಡು ಸ್ವೀಕರಿಸಬೇಕು. ಕೆಲ ಮಹಿಳೆಯರು ಹೆತ್ತ ತಾಯಿಯಂತೆ ಮುಂದೆ ನಿಂತು ಸಹಾಯಹಸ್ತ ನೀಡುತ್ತಾರೆ. ಹಣದ ಹರಿವು ಹೆಚ್ಚಳವಾಗುವುದರಿಂದ ಹಣವನ್ನು ಸೂಕ್ತವಾಗಿ ಬಳಕೆ ಮಾಡಿಕೊಳ್ಳಬೇಕು. ['ಸಿಂಹಾ'ಸನದ ಅದೃಷ್ಟವಿರುವ ಮಘಾ ನಕ್ಷತ್ರ!]
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications