ಗುರುಫಲ : ಕರ್ಕ ರಾಶಿಗೆ ಹಣಕಾಸಿನ ತೊಂದರೆ, ಎಚ್ಚರ!
ಕರ್ಕ ರಾಶಿಯ ಅಧಿಪತಿ ಸ್ವತಃ ಗುರುವೇ ಆಗಿದ್ದಾನೆ. ಹೀಗಿದ್ಯಾಗ್ಯೂ ಜನ್ಮರಾಶಿಯಿಂದ ಮೂರನೇ ಸ್ಥಾನದಲ್ಲಿ ಬಂದಿರುವ ಗುರು ಅಷ್ಟೇನೂ ಶುಭದಾಯಕನಲ್ಲ. ಆದರೆ, ಒಂದು ಮಾತಂತೂ ನಿಜ. ಪಂಚಮ ಶನಿಯ ಕಾಟದಲ್ಲಿ ಇರುವ ಕರ್ಕ ರಾಶಿಗೆ ಗುರು ಕೂಡ ಕಾಟ ಕೊಡಲಿದ್ದಾನೆ. ಹೀಗಾಗಿ ಆದಷ್ಟು ಗುರುಶಾಂತಿಯೊಂದಿಗೆ ಶನಿಶಾಂತಿ ಮಾಡಿಸಿಕೊಳ್ಳುವುದು ಶುಭ.
ಇನ್ನು ಪಂಚಮಶನಿಯು ಸಂಸಾರಕ್ಕೆ ಹೊಡೆತ ನೀಡುತ್ತಿರುವುದರಿಂದ ಸ್ವಲ್ಪ ಮಾನಸಿಕ ಅಸಮತೋಲನ ಕಳೆದುಕೊಂಡಿರುವ ಕರ್ಕ ರಾಶಿಯವರು ಗುರುವಿನ ಕೃಪಾಕಟಾಕ್ಷ ಪಡೆದುಕೊಳ್ಳಲು ಪ್ರಯತ್ನಿಸಬೇಕು.
ಎಲ್ಲ ಕೆಲಸಗಳು ಅರ್ಧಮರ್ಧಕ್ಕೆ ನಿಲ್ಲುವುದರಿಂದ ಮುಖ್ಯವಾದ ಕೆಲಸಗಳನ್ನೇ ಮಾತ್ರ ಹಾಕಿಕೊಳ್ಳಿ. ಅನವಶ್ಯಕವಾಗಿ ಸಿಕ್ಕಾಪಟ್ಟೆ ಕೆಲಸಗಳನ್ನು ಮೈಮೇಲೆ ಎಳೆದುಕೊಂಡು ಒಂದೂ ಪೂರ್ತಿಯಾಗದ ಹಾಗೆ ಇರುವಂತಾಗಬೇಡಿ. ಬೇಗ ಮುಗಿದರೆ ಬೇಕು ಮತ್ತು ಹೆಚ್ಚಿನ ತಲೆಬಿಸಿ ಇರಬಾರದು ಅಂತಹ ಕೆಲಸಗಳನ್ನು ಯೋಚಿಸಿ. [ಕರ್ಕ ರಾಶಿಗೆ ದುರ್ಮುಖನಾಮ ಸಂವತ್ಸರದ ಫಲಾಫಲ]

ಸರಕಾರದ ಸೇವೆಯಲ್ಲಿರುವವರಿಗೆ ಹೆಚ್ಚಿನ ಒತ್ತಡ ಬರುವುದರಿಂದ ಸ್ವಲ್ಪ ಜಾಗರೂಕತೆಯಿಂದ ಕೆಲಸ ನಿರ್ವಹಿಸಿಕೊಂಡು ಹೋಗಬೇಕು. ಹೊಂದಾಣಿಕೆಯಿಂದಲೇ ಮಾತ್ರ ನಿಮ್ಮನ್ನು ಎಲ್ಲರೂ ಗೌರವದಿಂದ ನೋಡುತ್ತಾರೆ ಎಂಬುದು ನೆನಪಿರಲಿ.
ಹೊಸ ಹೊಸ ಪ್ರಯತ್ನಗಳಿಗೆ ಕೈಹಾಕಿ ಲಾಭದ ರುಚಿ ನೋಡುವುದು ಈ ಸಮಯದಲ್ಲಿ ಬೇಡ. ಇದ್ದುದ್ದನ್ನೇ ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]
ಹಣಕಾಸಿನ ವ್ಯವಹಾರದಲ್ಲಿ ಈ ಬಾರಿ ಜಾಗ್ರತೆ ಇರಲಿ. ತೆಗೆದುಕೊಂಡ ಸಾಲವನ್ನು ಮೊದಲು ತೀರಿಸಿಯೇ ಮುಂದಿನ ಸಾಲಕ್ಕೆ ಕೈ ಚಾಚಬೇಕು. ಹಣ ಉಳಿಸಿಕೊಂಡು ಮುಂದಿನ ದಿನಗಳಿಗೆ ಬೇಕಾಗಬಹುದು ಎಂದು ನೆನಪಿಟ್ಟುಕೊಂಡು ಮುಂದುವರೆಯಿರಿ.
ದೇಹಾರೋಗ್ಯದಲ್ಲಿ ಕಿರಿಕಿರಿ ಬರಂಗಿಲ್ಲವಾದರೂ ಮಾನಸಿಕವಾಗಿ ಸದೃಢರಾಗಬೇಕು ಈ ಸಮಯದಲ್ಲಿ. ಒಟ್ಟಿನಲ್ಲಿ ಕರ್ಕ ರಾಶಿಯವರು ಗುರುವಿನ ಫಲಾಫಲವನ್ನು ಅಷ್ಟೇನೂ ಚೆನ್ನಾಗಿ ಇದೆ ಅಂದುಕೊಳ್ಳಬೇಕಾಗಿಲ್ಲ. ಅಷ್ಟೇ ಅಲ್ಲ ಕೆಟ್ಟದ್ದೂ ಆಗುತ್ತದೆ ಅಂತೇನೂ ಇಲ್ಲ. ಒಟ್ಟು ಫಲಾಫಲ ಕೊಡುವುದರಲ್ಲಿ ಗುರು ಕರ್ಕ ರಾಶಿಯವರಿಗೆ ಸ್ವಲ್ಪ ಕರುಣೆ ತೋರುತ್ತಾನೆ ಎನ್ನಬಹುದು. [ಕರ್ಕ ರಾಶಿ ವರ್ಷಭವಿಷ್ಯ 2016 ಮತ್ತು ಪರಿಹಾರೋಪಾಯ]
-
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei












Click it and Unblock the Notifications