ದಂಪತಿಗಳ ನಡುವೆ ಗುಟ್ಟೇಕಿರಬೇಕು?

ಕರ್ಕಾಟಕ ರಾಶಿ ಪುರುಷ - ಕರ್ಕಾಟಕ ರಾಶಿ ಸ್ತ್ರೀ : ರಾಶಿ ಒಂದೇ ಆದರೆ ಸ್ತ್ರೀ ಪುರುಷರಿಗೆ ಅವರದೇ ಆದ ಕೆಲವು ಭಿನ್ನತೆ ಇರುತ್ತದೆ ಮನಸ್ಥಿತಿಯಲ್ಲಿ! ಇವರಿಬ್ಬರಲ್ಲಿ ತಮ್ಮ ಬದುಕಲ್ಲಿ ಭದ್ರತೆಯನ್ನು ಹೆಚ್ಚು ಬಯಸುತ್ತಾರೆ. ಸಮಾನತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಗುಣ ಹೊಂದಿರುತ್ತಾರೆ. ಇವರು ಎಲ್ಲಾ ವಿಷಯದಲ್ಲೂ ಓಕೆ, ಆದರೆ ಹಣದ ವಿಷಯಕ್ಕೆ ಬಂದ್ರೆ ಗಲಾಟೆಯೋ ಗಲಾಟೆ. ಅತ್ಯಂತ ಖೇದಕರ ಸಂಗತಿ ಅಂದ್ರೆ ಹಣವೇ ಬುದುಕು, ಹಣವೇ ನಮ್ಮ ದೇವರು ಎನ್ನುವ ನಂಬಿಕೆಯನ್ನು ಇವರಿಬ್ಬರೂ ಹೊಂದಿರುತ್ತಾರೆ. ಹಾಗೆಂದು ಸಂಗಾತಿಯ ಬಗ್ಗೆ ಪ್ರೀತಿ ಇಲ್ಲ ಎಂದು ತಿಳಿಯಬೇಡಿ, ಒಬ್ಬರನ್ನು ಕಂಡ್ರೆ ಮತ್ತೊಬ್ಬರಿಗೆ ಅತಿಯಾದ ಪ್ರಾಣ, ಸಿಕ್ಕಾಪಟ್ಟೆ ಪ್ರೀತಿ. ವಿಶ್ವಾಸದ ವಿಷಯದಲ್ಲೂ ಎಲ್ಲೂ ನಿರ್ಲಕ್ಷ್ಯ ಮಾಡುವ ಹಾಗೆ ಇಲ್ಲ. ಆದ್ರೆ ಹಾಳಾದ್ದು ಮನಸ್ಸಿನಲ್ಲಿ ಬಚ್ಚಿಟ್ಟುಕೊಳ್ಳುವ ಗುಣ ಇವರಿಬ್ಬರಲ್ಲೂ ಇರುವುದರಿಂದ ಒಬ್ಬರ ಬಗ್ಗೆ ಮತ್ತೊಬ್ಬರು ಅರಿಯಲು ಕಷ್ಟವಾಗುತ್ತದೆ. ಎಲ್ಲಿ ಬಾಂಧವ್ಯಗಳ ವಿಷಯದಲ್ಲಿ ಗುಟ್ಟು ಇರುತ್ತದೆಯೋ ಅಲ್ಲಿ ಸಮರಸದಲ್ಲೂ ಕೊರತೆ ಇದ್ದೆ ಇರುತ್ತದೆ. ಯಾಕ್ರೀ ಹೀಗೆ ಮಾಡ್ತೀರಿ? ಬದುಕಿಗಿಂತ ನಿಮ್ಮ ಅಹಂ ದೊಡ್ಡದೇ?
ಕರ್ಕಾಟಕ ರಾಶಿ ಸ್ತ್ರೀ - ಸಿಂಹ ರಾಶಿ ಪುರುಷ : ಇವರಿಬ್ಬರೂ ಮದುವೆಯಾದರೆ ಮೂರು ವಿಷಯಗಳು ನಮ್ಮ ಕಣ್ಣಿಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. 1) ಕೆಲವು ವರ್ಷಗಳ ಬಳಿಕ ಪುರುಷ ತನ್ನ ಹಠಮಾರಿ ಗುಣದಿಂದ ತನ್ನ ಸಂಗಾತಿಯನ್ನು ತುಂಬಾ ದುಃಖಕ್ಕೆ ಈಡು ಮಾಡ್ತಾನೆ. ಅದೆಷ್ಟರ ಮಟ್ಟಿಗೆ ಅಂದ್ರೆ ನಿಜವಾಗಿಯೂ ನಾನು ಪ್ರೀತಿಸಿ ಮದುವೆ ಆದವ ಇವನೇನಾ ಎನ್ನುವಂತೆ ಇರುತ್ತದೆ ಆ ವ್ಯಕ್ತಿಯ ವರ್ತನೆ. 2) ಸ್ತ್ರೀಯರು ಕೂಡ ಇದಕ್ಕೆ ಹೊರತಲ್ಲ. ಮದುವೆಯಾದ ಸ್ವಲ್ಪ ಕಾಲದಲ್ಲೇ ತನ್ನ ಬಾಲ ಬಿಚ್ತಾಳೆ. ಬದುಕೇ ದುಸ್ತರ ಎನ್ನುವಂತೆ ಮಾಡಿ ಬಿಡ್ತಾಳೆ. ಇವಳೇನಾ ಅವಳು ಎನ್ನುವಂತೆ ಮಾರ್ಪಾಡಾಗುತ್ತಾಳೆ. ಗಂಡನ ಬದುಕು ಯಾವ ಶತ್ರುವಿಗೂ ಬೇಡ! 3) ಕೆಲವು ವರ್ಷಗಳು ಪೂರ್ಣಗೊಂಡ ಬಳಿಕ ಇವರಿಬ್ಬರೂ ತಮ್ಮ ಜೀವನಶೈಲಿ ಹಾಗೂ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡು ಹ್ಯಾಪಿ ಲೈಫ್ ಲೀಡ್ ಮಾಡ್ತಾರೆ. ಆದ್ರೆ ವಿಷಾದಕರ ಸಂಗತಿ ಅಂದ್ರೆ ಮೂರನೆಯ ಸಂಗತಿ ಜಾರಿಯಾಗುವುದು ಅಷ್ಟು ಸುಲಭದ ವಿಷಯವಲ್ಲ. ಈಗಾಗಲೇ ಮದುವೆ ಆಗಿದ್ದರೆ ದಯಮಾಡಿ ಜೀವನ ಸರಿಯಾಗಿಟ್ಟು ಕೊಳ್ಳುವುದರತ್ತ ಗಮನ ಕೊಡಿ. ನೀವು ಎಷ್ಟು ಚಂದದ ಜೀವನ ನಡೆಸಿದರೆ ಅಷ್ಟು ಖುಷಿಯ ಬದುಕು ನಿಮ್ಮದಾಗುತ್ತದೆ ಅಲ್ವೆ? (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications