ದಂಪತಿಗಳ ನಡುವೆ ಗುಟ್ಟೇಕಿರಬೇಕು?

ಕರ್ಕಾಟಕ ರಾಶಿ ಪುರುಷ - ಕರ್ಕಾಟಕ ರಾಶಿ ಸ್ತ್ರೀ : ರಾಶಿ ಒಂದೇ ಆದರೆ ಸ್ತ್ರೀ ಪುರುಷರಿಗೆ ಅವರದೇ ಆದ ಕೆಲವು ಭಿನ್ನತೆ ಇರುತ್ತದೆ ಮನಸ್ಥಿತಿಯಲ್ಲಿ! ಇವರಿಬ್ಬರಲ್ಲಿ ತಮ್ಮ ಬದುಕಲ್ಲಿ ಭದ್ರತೆಯನ್ನು ಹೆಚ್ಚು ಬಯಸುತ್ತಾರೆ. ಸಮಾನತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಗುಣ ಹೊಂದಿರುತ್ತಾರೆ. ಇವರು ಎಲ್ಲಾ ವಿಷಯದಲ್ಲೂ ಓಕೆ, ಆದರೆ ಹಣದ ವಿಷಯಕ್ಕೆ ಬಂದ್ರೆ ಗಲಾಟೆಯೋ ಗಲಾಟೆ. ಅತ್ಯಂತ ಖೇದಕರ ಸಂಗತಿ ಅಂದ್ರೆ ಹಣವೇ ಬುದುಕು, ಹಣವೇ ನಮ್ಮ ದೇವರು ಎನ್ನುವ ನಂಬಿಕೆಯನ್ನು ಇವರಿಬ್ಬರೂ ಹೊಂದಿರುತ್ತಾರೆ. ಹಾಗೆಂದು ಸಂಗಾತಿಯ ಬಗ್ಗೆ ಪ್ರೀತಿ ಇಲ್ಲ ಎಂದು ತಿಳಿಯಬೇಡಿ, ಒಬ್ಬರನ್ನು ಕಂಡ್ರೆ ಮತ್ತೊಬ್ಬರಿಗೆ ಅತಿಯಾದ ಪ್ರಾಣ, ಸಿಕ್ಕಾಪಟ್ಟೆ ಪ್ರೀತಿ. ವಿಶ್ವಾಸದ ವಿಷಯದಲ್ಲೂ ಎಲ್ಲೂ ನಿರ್ಲಕ್ಷ್ಯ ಮಾಡುವ ಹಾಗೆ ಇಲ್ಲ. ಆದ್ರೆ ಹಾಳಾದ್ದು ಮನಸ್ಸಿನಲ್ಲಿ ಬಚ್ಚಿಟ್ಟುಕೊಳ್ಳುವ ಗುಣ ಇವರಿಬ್ಬರಲ್ಲೂ ಇರುವುದರಿಂದ ಒಬ್ಬರ ಬಗ್ಗೆ ಮತ್ತೊಬ್ಬರು ಅರಿಯಲು ಕಷ್ಟವಾಗುತ್ತದೆ. ಎಲ್ಲಿ ಬಾಂಧವ್ಯಗಳ ವಿಷಯದಲ್ಲಿ ಗುಟ್ಟು ಇರುತ್ತದೆಯೋ ಅಲ್ಲಿ ಸಮರಸದಲ್ಲೂ ಕೊರತೆ ಇದ್ದೆ ಇರುತ್ತದೆ. ಯಾಕ್ರೀ ಹೀಗೆ ಮಾಡ್ತೀರಿ? ಬದುಕಿಗಿಂತ ನಿಮ್ಮ ಅಹಂ ದೊಡ್ಡದೇ?
ಕರ್ಕಾಟಕ ರಾಶಿ ಸ್ತ್ರೀ - ಸಿಂಹ ರಾಶಿ ಪುರುಷ : ಇವರಿಬ್ಬರೂ ಮದುವೆಯಾದರೆ ಮೂರು ವಿಷಯಗಳು ನಮ್ಮ ಕಣ್ಣಿಗೆ ಸ್ಪಷ್ಟವಾಗಿ ಗೋಚರವಾಗುತ್ತದೆ. 1) ಕೆಲವು ವರ್ಷಗಳ ಬಳಿಕ ಪುರುಷ ತನ್ನ ಹಠಮಾರಿ ಗುಣದಿಂದ ತನ್ನ ಸಂಗಾತಿಯನ್ನು ತುಂಬಾ ದುಃಖಕ್ಕೆ ಈಡು ಮಾಡ್ತಾನೆ. ಅದೆಷ್ಟರ ಮಟ್ಟಿಗೆ ಅಂದ್ರೆ ನಿಜವಾಗಿಯೂ ನಾನು ಪ್ರೀತಿಸಿ ಮದುವೆ ಆದವ ಇವನೇನಾ ಎನ್ನುವಂತೆ ಇರುತ್ತದೆ ಆ ವ್ಯಕ್ತಿಯ ವರ್ತನೆ. 2) ಸ್ತ್ರೀಯರು ಕೂಡ ಇದಕ್ಕೆ ಹೊರತಲ್ಲ. ಮದುವೆಯಾದ ಸ್ವಲ್ಪ ಕಾಲದಲ್ಲೇ ತನ್ನ ಬಾಲ ಬಿಚ್ತಾಳೆ. ಬದುಕೇ ದುಸ್ತರ ಎನ್ನುವಂತೆ ಮಾಡಿ ಬಿಡ್ತಾಳೆ. ಇವಳೇನಾ ಅವಳು ಎನ್ನುವಂತೆ ಮಾರ್ಪಾಡಾಗುತ್ತಾಳೆ. ಗಂಡನ ಬದುಕು ಯಾವ ಶತ್ರುವಿಗೂ ಬೇಡ! 3) ಕೆಲವು ವರ್ಷಗಳು ಪೂರ್ಣಗೊಂಡ ಬಳಿಕ ಇವರಿಬ್ಬರೂ ತಮ್ಮ ಜೀವನಶೈಲಿ ಹಾಗೂ ವರ್ತನೆಯಲ್ಲಿ ಬದಲಾವಣೆ ಮಾಡಿಕೊಂಡು ಹ್ಯಾಪಿ ಲೈಫ್ ಲೀಡ್ ಮಾಡ್ತಾರೆ. ಆದ್ರೆ ವಿಷಾದಕರ ಸಂಗತಿ ಅಂದ್ರೆ ಮೂರನೆಯ ಸಂಗತಿ ಜಾರಿಯಾಗುವುದು ಅಷ್ಟು ಸುಲಭದ ವಿಷಯವಲ್ಲ. ಈಗಾಗಲೇ ಮದುವೆ ಆಗಿದ್ದರೆ ದಯಮಾಡಿ ಜೀವನ ಸರಿಯಾಗಿಟ್ಟು ಕೊಳ್ಳುವುದರತ್ತ ಗಮನ ಕೊಡಿ. ನೀವು ಎಷ್ಟು ಚಂದದ ಜೀವನ ನಡೆಸಿದರೆ ಅಷ್ಟು ಖುಷಿಯ ಬದುಕು ನಿಮ್ಮದಾಗುತ್ತದೆ ಅಲ್ವೆ? (ಇತರ ರಾಶಿ ಭವಿಷ್ಯಗಳಿಗೆ ಇಲ್ಲಿ ಕ್ಲಿಕ್ಕಿಸಿ.)
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications