AI: ಎಐನಿಂದ ಎಲ್ಲ ಉದ್ಯೋಗ ಹೋಗುತ್ತೆ, ಜನ ತರಕಾರಿ ಬೆಳೆಯಬಹುದು: ಮಸ್ಕ್
ಕೃತಕ ಬುದ್ಧಿಮತ್ತೆಯ (ಎಐ) ಬಳಕೆಯಿಂದಾಗಿ ಅನೇಕ ಉದ್ಯೋಗಗಳು ಖಾಲಿ ಆಗುತ್ತಿವೆ. ಲಕ್ಷಾಂತರ ಮಂದಿ ಈಗಾಗಲೇ ಕೆಲಸ ಕಳೆದುಕೊಂಡು ಅತಂತ್ರರಾಗಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಬಹುತೇಕರು ಉದ್ಯೋಗಗಳು ಕಳೆದುಕೊಳ್ಳಲಿದ್ದಾರೆ ಎಂದು ಈಗಾಗಲೇ ಹಲವರು ಭವಿಷ್ಯವೂ ನುಡಿದಿದ್ದಾರೆ. ಇದೀಗ ಟೆಕ್ ಬಿಲಿಯನೇರ್, ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೂಡ ಆತಂಕಕಾರಿ ವಿಚಾರವೊಂದನ್ನು ತಿಳಿಸಿದ್ದಾರೆ. ಭವಿಷ್ಯದಲ್ಲಿ ಎಲ್ಲ ಉದ್ಯೋಗಗಳನ್ನು ಕೃತಕ ಬುದ್ಧಿಮತ್ತೆ ಮತ್ತು ರೋಬೋಟ್ಗಳು ಆಕ್ರಮಿಸಿಕೊಳ್ಳುತ್ತವೆ. ಆಗ ಮಾನವರು ನಿಜವಾಗಿಯೂ ಕೆಲಸ ಮಾಡುವ ಅಗತ್ಯವಿಲ್ಲ, ಅವರು ಬಯಸಿದರೆ ತರಕಾರಿಗಳನ್ನು ಬೆಳೆಯಬಹುದು ಎಂದಿದ್ದಾರೆ.
ಅಮೆಜಾನ್ನ ಉದ್ಯೋಗಿಗಳನ್ನು ಎಐ ಮತ್ತು ರೋಬೋಟ್ಗಳಿಂದ ಬದಲಾಯಿಸುವ ಯೋಜನೆಗಳ ಕುರಿತು ಇತ್ತೀಚಿನ ವರದಿ ಕುರಿತು ಮಸ್ಕ್ ಈ ರೀತಿ ಉತ್ತರಿಸಿದ್ದಾರೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ಗೆ ಮಸ್ಕ್ ಉತ್ತರಿಸಿದ್ದಾರೆ. ಅಮೇಜಾನ್ 2027ರ ವೇಳೆಗೆ 1,60,000ಕ್ಕೂ ಹೆಚ್ಚು ಉದ್ಯೋಗಗಳನ್ನು ರೋಬೋಟ್ಗಳಿಂದ ಕಡಿತಗೊಳಿಸಲು ಯೋಜನೆ ಹಾಕಿಕೊಂಡಿದೆ. ಇದಕ್ಕೆ ಉತ್ತರಿಸಿರುವ ಮಸ್ಕ್ AI ಮತ್ತು ರೋಬೋಟ್ಗಳು ಎಲ್ಲ ಉದ್ಯೋಗಗಳನ್ನು ಕಸಿಯಲಿವೆ ಎಂದು ನೇರವಾಗಿ ಹೇಳಿದ್ದಾರೆ.

ಕೆಲಸ ಮಾಡುವುದು ಆಯ್ಕೆ
ಕತ್ತಲೆಯಾದ ಭವಿಷ್ಯದ ಬದಲು, ಮಾನವೀಯತೆಯು ಪ್ರತಿದಿನ ಕೆಲಸ ಮಾಡಲು ಒತ್ತಾಯಿಸಲ್ಪಡುವುದರಿಂದ ಅದರಿಂದ ಮುಕ್ತವಾಗಲು ಇದು ಒಂದು ಅವಕಾಶವೆಂದು ಮಸ್ಕ್ ಹೇಳಿದ್ದಾರೆ. ಪ್ರತಿಯೊಂದು ಕೆಲಸವನ್ನು ಎಐ ತೆಗೆದುಕೊಳ್ಳುತ್ತದೆ. ಮಾನವರು ತರಕಾರಿಗಳನ್ನು ಅಂಗಡಿಯಿಂದ ಖರೀದಿಸಿ ತರುವ ಬದಲು, ಅದನ್ನು ತಾವೇ ಬೆಳೆಯಲು ಮುಕ್ತರಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.
ಎಐ, ರೋಬೋಟ್ಗಳು ಎಲ್ಲ ಉದ್ಯೋಗಗಳನ್ನು ಬದಲಿಸಲಿದೆ. ಆಗ ಕೆಲಸ ಮಾಡುವುದು ಒಂದು ಆಯ್ಕೆಯಾಗುತ್ತದೆ. ಆಗ ತರಕಾರಿಯನ್ನು ಅಂಗಡಿಯಿಂದ ಖರೀದಿಸುವ ಬದಲಿಗೆ ತಾವೇ ತರಕಾರಿಗಳನ್ನು ಬೆಳೆಸಿಕೊಳ್ಳುವಂತಾಗುತ್ತದೆ. ವ್ಯಕ್ತಿಗಳು ಬದುಕಲು ಕೆಲಸ ಮಾಡಬೇಕಾದ ಬಾಧ್ಯತೆ ಇನ್ನು ಉಳಿಯುವುದಿಲ್ಲ. ಬದಲಿಗೆ ಕೆಲಸ ಮಾಡುವುದು ವೈಯಕ್ತಿಕ ಇಚ್ಛೆಯಿಂದ ಮಾತ್ರ ನಡೆಯಲಿದೆ ಎಂದಿದ್ದಾರೆ.
ನಾವೆಲ್ಲರೂ ನಮ್ಮ ಜೀವನವನ್ನು ಉಳಿಸಿಕೊಳ್ಳಲು ಹಣ ಸಂಪಾದಿಸಲು ಕೆಲಸ ಮಾಡುತ್ತೇವೆ. ಎಐನಿಂದ ಉದ್ಯೋಗ ನಷ್ಟವಾಗುವ ಭಯಕ್ಕೆ ಇದು ಮುಖ್ಯ ಕಾರಣವಾಗಲಿದೆ. ಮುಂದೆ ಎಐ ಇದ್ದರೆ, ಕೆಲಸ ಮಾಡುವುದು ಮನುಷ್ಯರಿಗೆ ಆಯ್ಕೆಯಾಗಿರಲಿದೆ ಎಂದೂ ಮಸ್ಕ್ ಉಲ್ಲೇಖಿಸಿದ್ದಾರೆ. ಜಗತ್ತು "ಸಾರ್ವತ್ರಿಕ ಹೆಚ್ಚಿನ ಆದಾಯ" ಹೊಂದಿರುತ್ತದೆ. ಮೂಲಭೂತವಾಗಿ ಭವಿಷ್ಯದಲ್ಲಿ ಎಐ ಎಲ್ಲ ಉದ್ಯೋಗಗಳನ್ನು ವಹಿಸಿಕೊಂಡಾಗ, ಮಾನವರು ಹೆಚ್ಚಿನ ಆದಾಯದ ಮಟ್ಟವನ್ನು ಹೊಂದಿರುತ್ತಾರೆ. ಅದು ಕೆಲಸ ಮಾಡದೆಯೇ ತಮ್ಮ ಜೀವನಶೈಲಿಯನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದೂ ಹೇಳಿದ್ದಾರೆ.
ಎಐ ಎಲ್ಲ ಕೆಲಸಗಳನ್ನು ಮಾಡುವ ಮತ್ತು ಮಾನವರು ಜೀವನವನ್ನು ಸರಳವಾಗಿ ಆನಂದಿಸಬಹುದಾದ ಜಗತ್ತು ನಿರ್ಮಿಸಲಿದೆ. ಎಐನಿಂದ ಸರಕು ಮತ್ತು ಸೇವೆಗಳ ಕೊರತೆಯಿಲ್ಲದೆ, ಶೇಕಡಾ 80ರಷ್ಟು ಅವಕಾಶ ಇದೆ ಎಂದು ಹೇಳಿದ್ದರು. ವೈಯಕ್ತಿಕ ರೋಬೋಟ್ಗಳ ಮೂಲಕ ಇದನ್ನು ಸಾಧಿಸಬಹುದು. ಪ್ರತಿಯೊಬ್ಬ ಮನುಷ್ಯನೂ "ತಮ್ಮದೇ ಆದ ವೈಯಕ್ತಿಕ ರೋಬೋಟ್ ಹೊಂದಲಿದ್ದಾರೆ ಎಂದೂ ಭವಿಷ್ಯ ನುಡಿದಿದ್ದಾರೆ.
-
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Oil Import: ತೈಲ ಆಮದಿಗೆ ವಿದೇಶಗಳ ಅನುಮತಿ ಬೇಕಿಲ್ಲ: ಭಾರತದ ಸ್ವತಂತ್ರ ಇಂಧನ ನೀತಿ ಹೊಂದಿದೆ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ರಕ್ಷಿತ್ ಶೆಟ್ಟಿ ಪೋಸ್ಟ್ ವೈರಲ್, ರಶ್ಮಿಕಾ ಮಂದಣ್ಣ ಬಗ್ಗೆ ಚರ್ಚೆ ಶುರು... Rashmika Mandanna -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಮೊಟ್ಟೆ ಬೆಲೆ ಭಾರಿ ಕುಸಿತ, ಕೋಟಿ ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವ ರೈತರು... Operation Roaring Lion -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ












Click it and Unblock the Notifications