ಮಿಡತೆಗಳ ನಿಯಂತ್ರಣಕ್ಕೆ ಸರ್ಕಸ್ ಪಿಸ್ತೂಲ್...!
ಸಿನೆಮಾವೊಂದರಲ್ಲಿ ಬರುವ ಪ್ರಸಂಗವಿದು."ಒಬ್ಬ ಪಿಸ್ತೂಲಿನಿಂದ ಎದುರಾಳಿಯತ್ತ ಗುಂಡು ಹಾರಿಸುತ್ತಾನೆ. ಗುಂಡು ಹಿಂದಕ್ಕೆ ಸಿಡಿದು ಶೂಟ್ ಮಾಡಿದವನಿಗೇ ತಾಗುತ್ತದೆ. ಮರುಕ್ಷಣ ಪಿಸ್ತೂಲ್ ನ ನಳಿಕೆ ತನ್ನತ್ತ ತಿರುಗಿಸಿಕೊಂಡು ಶೂಟ್ ಮಾಡುತ್ತಾನೆ ಎರಡನೆಯ ಬುಲೆಟ್ ಅವನಿಗೇ ತಾಕುತ್ತದೆ". ಅವ ಬಳಸಿದ್ದು ಸರ್ಕಸ್ ಪಿಸ್ತೂಲ್ ಎಂಬುದು ಆ ದೃಶ್ಯ ಹೆಣೆದವರು ಸೃಷ್ಟಿಸಿದ ಪ್ರಸಂಗ.
ಇದೀಗ ಮರುಭೂಮಿ ಮಿಡತೆಗಳ ನಿಯಂತ್ರಣಕ್ಕೆಂದು ಸರ್ಕಾರ ಶಿಫಾರಸ್ಸು ಮಾಡಿರುವ ರಾಸಾಯನಿಕಗಳು ಸರ್ಕಸ್ ಪಿಸ್ತೂಲಿನಂತಾಗಬಹುದಾ ಎಂಬ ಗುಮಾನಿ ದಟ್ಟವಾಗಿದೆ.
ಸರ್ಕಾರ ಶಿಫಾರಸ್ಸು ಮಾಡಿರುವ ರಾಸಾಯನಿಕಗಳಲ್ಲಿ ''ಕ್ಲೋರೋಫೈರಿಫಾಸ್ ಹಾಗೂ ಡೆಲ್ಟಾಮೆಥ್ರಿನ್'' ಒಳಗೊಂಡಿವೆ. ಇವೆರಡೂ ಕೀಟನಾಶಕಗಳು ಪರಿಸರಕ್ಕೆ ಹಾನಿಕಾರವೆಂದು ಇವುಗಳನ್ನು ಕೃಷಿ ಕ್ಷೇತ್ರದಲ್ಲಿ ಬಳಸಲು ಆಮದು ಮಾಡಿಕೊಳ್ಳುವುದು, ಉತ್ಪಾದನೆ ಮಾಡುವುದು, ಮಾರಾಟ ಮಾಡುವುದು, ಸಾಗಣೆ ಮಾಡುವುದು, ವಿತರಿಸುವುದು ನಿರ್ಭಂದಿಸಿ ಮೇ 18, 2020 ರಂದು ಭಾರತ ಸರ್ಕಾರದ ಕೃಷಿ ಇಲಾಖೆ ಆದೇಶ ಹೊರಡಿಸಿದೆ. (ಅಉ-ಆಐ-ಇ-18052020-219423)

31 ದೇಶಗಳಲ್ಲಿ ನಿಷೇಧಿತ ರಾಸಾಯನಿಕ ಬಳಕೆ
ಕೃಷಿ ಕ್ಷೇತ್ರದಲ್ಲಿ ಈ ರಾಸಾಯನಿಕಗಳನ್ನು ಬಳಸಬಾರದೆಂಬ ಆದೇಶದಲ್ಲಿಯೇ "ಮರುಭೂಮಿ ಮಿಡತೆ"ಗಳ ನಿಯಂತ್ರಕ್ಕೆ ಬಳಸಬಹುದೆಂದೂ ಸಹ ಹೇಳಲಾಗಿದೆ. ಕ್ಲೋರೋಫೈರಿಫಾಸ್ ರಸಾಯನಿಕವನ್ನು 31 ದೇಶಗಳಲ್ಲಿ ಈಗಾಗಲೇ ನಿಷೇಧಿಸಿರುವುದಾಗಿಯೂ ಇದೇ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಡೆಲ್ಟಾಮೆಥ್ರಿನ್ ಕೂಡಾ ಪರಿಸರಕ್ಕೆ ಹಾನಿಕಾರಕವೆಂದೂ, ವಿಶೇಷವಾಗಿ ಜೇನು ಹುಳುಗಳಿಗೆ ಮಾರಣಾಂತಿಕವೆಂದು ಇದರ ಬಳಕೆಯನ್ನು ನಿಷೇಧಿಸಲಾಗಿದೆ. ಪರಂತು ಮರುಭೂಮಿ ಮಿಡತೆಗಳ ನಿಯಂತ್ರಣಕ್ಕಾಗಿ ಈ ರಾಸಾಯನಿಕವನ್ನು ಕೂಡಾ ಬಳಸಬಹುದೆಂದು ಅದೇ ಆದೇಶದಲ್ಲಿ ದಾರಿಮಾಡಿಕೊಡಲಾಗಿದೆ.

ಯಾವ ರಾಸಾಯನಿಕಗಳು ಜನ-ಜಾನುವಾರುಗಳು, ಪರಿಸರಕ್ಕೆ ಮಾರಕವೆಂದು ಸರ್ಕಾರವೇ ನಿಷೇಧ ಹೇರಿದೆಯೋ ಅದೇ ಕೀಟನಾಶಕಗಳನ್ನು ಮರುಭೂಮಿ ಮಿಡತೆಗಳ ಸಿಂಪರಣೆಗೆ ಬಳಸಬಹುದೆಂದೂ ತಿಳಿಸುತ್ತಾ, ಇದೀಗ ಶಿಫಾರಸ್ಸು ಮಾಡಿದೆ.
ಇಂಥಃ ಇಕ್ಕಟ್ಟಿನ ಸಂದರ್ಭದಲ್ಲಿ ಮರುಭೂಮಿ ಮಿಡತೆಗಳ ನಿಯಂತ್ರಣಕ್ಕೆ ಜೈವಿಕ ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆ ಸರ್ಕಾರ ಗಮನಹರಿಸುವುದು ವಿವೇಕದ ನಡೆ ಆಗಬಹುದು. "ನಮಾಜ್ ಮಾಡೋಕೋಗಿ ಮಸೀದಿ ಮೈಮೇಲೆ ಕೆಡವಿಕೊಂಡಂತಾಗಬಾರದು".
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications