ಮಿಡತೆಗಳ ನಿಯಂತ್ರಣಕ್ಕೆ ಸರ್ಕಸ್ ಪಿಸ್ತೂಲ್...!
ಸಿನೆಮಾವೊಂದರಲ್ಲಿ ಬರುವ ಪ್ರಸಂಗವಿದು."ಒಬ್ಬ ಪಿಸ್ತೂಲಿನಿಂದ ಎದುರಾಳಿಯತ್ತ ಗುಂಡು ಹಾರಿಸುತ್ತಾನೆ. ಗುಂಡು ಹಿಂದಕ್ಕೆ ಸಿಡಿದು ಶೂಟ್ ಮಾಡಿದವನಿಗೇ ತಾಗುತ್ತದೆ. ಮರುಕ್ಷಣ ಪಿಸ್ತೂಲ್ ನ ನಳಿಕೆ ತನ್ನತ್ತ ತಿರುಗಿಸಿಕೊಂಡು ಶೂಟ್ ಮಾಡುತ್ತಾನೆ ಎರಡನೆಯ ಬುಲೆಟ್ ಅವನಿಗೇ ತಾಕುತ್ತದೆ". ಅವ ಬಳಸಿದ್ದು ಸರ್ಕಸ್ ಪಿಸ್ತೂಲ್ ಎಂಬುದು ಆ ದೃಶ್ಯ ಹೆಣೆದವರು ಸೃಷ್ಟಿಸಿದ ಪ್ರಸಂಗ.
ಇದೀಗ ಮರುಭೂಮಿ ಮಿಡತೆಗಳ ನಿಯಂತ್ರಣಕ್ಕೆಂದು ಸರ್ಕಾರ ಶಿಫಾರಸ್ಸು ಮಾಡಿರುವ ರಾಸಾಯನಿಕಗಳು ಸರ್ಕಸ್ ಪಿಸ್ತೂಲಿನಂತಾಗಬಹುದಾ ಎಂಬ ಗುಮಾನಿ ದಟ್ಟವಾಗಿದೆ.
ಸರ್ಕಾರ ಶಿಫಾರಸ್ಸು ಮಾಡಿರುವ ರಾಸಾಯನಿಕಗಳಲ್ಲಿ ''ಕ್ಲೋರೋಫೈರಿಫಾಸ್ ಹಾಗೂ ಡೆಲ್ಟಾಮೆಥ್ರಿನ್'' ಒಳಗೊಂಡಿವೆ. ಇವೆರಡೂ ಕೀಟನಾಶಕಗಳು ಪರಿಸರಕ್ಕೆ ಹಾನಿಕಾರವೆಂದು ಇವುಗಳನ್ನು ಕೃಷಿ ಕ್ಷೇತ್ರದಲ್ಲಿ ಬಳಸಲು ಆಮದು ಮಾಡಿಕೊಳ್ಳುವುದು, ಉತ್ಪಾದನೆ ಮಾಡುವುದು, ಮಾರಾಟ ಮಾಡುವುದು, ಸಾಗಣೆ ಮಾಡುವುದು, ವಿತರಿಸುವುದು ನಿರ್ಭಂದಿಸಿ ಮೇ 18, 2020 ರಂದು ಭಾರತ ಸರ್ಕಾರದ ಕೃಷಿ ಇಲಾಖೆ ಆದೇಶ ಹೊರಡಿಸಿದೆ. (ಅಉ-ಆಐ-ಇ-18052020-219423)

31 ದೇಶಗಳಲ್ಲಿ ನಿಷೇಧಿತ ರಾಸಾಯನಿಕ ಬಳಕೆ
ಕೃಷಿ ಕ್ಷೇತ್ರದಲ್ಲಿ ಈ ರಾಸಾಯನಿಕಗಳನ್ನು ಬಳಸಬಾರದೆಂಬ ಆದೇಶದಲ್ಲಿಯೇ "ಮರುಭೂಮಿ ಮಿಡತೆ"ಗಳ ನಿಯಂತ್ರಕ್ಕೆ ಬಳಸಬಹುದೆಂದೂ ಸಹ ಹೇಳಲಾಗಿದೆ. ಕ್ಲೋರೋಫೈರಿಫಾಸ್ ರಸಾಯನಿಕವನ್ನು 31 ದೇಶಗಳಲ್ಲಿ ಈಗಾಗಲೇ ನಿಷೇಧಿಸಿರುವುದಾಗಿಯೂ ಇದೇ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಡೆಲ್ಟಾಮೆಥ್ರಿನ್ ಕೂಡಾ ಪರಿಸರಕ್ಕೆ ಹಾನಿಕಾರಕವೆಂದೂ, ವಿಶೇಷವಾಗಿ ಜೇನು ಹುಳುಗಳಿಗೆ ಮಾರಣಾಂತಿಕವೆಂದು ಇದರ ಬಳಕೆಯನ್ನು ನಿಷೇಧಿಸಲಾಗಿದೆ. ಪರಂತು ಮರುಭೂಮಿ ಮಿಡತೆಗಳ ನಿಯಂತ್ರಣಕ್ಕಾಗಿ ಈ ರಾಸಾಯನಿಕವನ್ನು ಕೂಡಾ ಬಳಸಬಹುದೆಂದು ಅದೇ ಆದೇಶದಲ್ಲಿ ದಾರಿಮಾಡಿಕೊಡಲಾಗಿದೆ.

ಯಾವ ರಾಸಾಯನಿಕಗಳು ಜನ-ಜಾನುವಾರುಗಳು, ಪರಿಸರಕ್ಕೆ ಮಾರಕವೆಂದು ಸರ್ಕಾರವೇ ನಿಷೇಧ ಹೇರಿದೆಯೋ ಅದೇ ಕೀಟನಾಶಕಗಳನ್ನು ಮರುಭೂಮಿ ಮಿಡತೆಗಳ ಸಿಂಪರಣೆಗೆ ಬಳಸಬಹುದೆಂದೂ ತಿಳಿಸುತ್ತಾ, ಇದೀಗ ಶಿಫಾರಸ್ಸು ಮಾಡಿದೆ.
ಇಂಥಃ ಇಕ್ಕಟ್ಟಿನ ಸಂದರ್ಭದಲ್ಲಿ ಮರುಭೂಮಿ ಮಿಡತೆಗಳ ನಿಯಂತ್ರಣಕ್ಕೆ ಜೈವಿಕ ತಂತ್ರಜ್ಞಾನದ ಸಾಧ್ಯತೆಗಳ ಬಗ್ಗೆ ಸರ್ಕಾರ ಗಮನಹರಿಸುವುದು ವಿವೇಕದ ನಡೆ ಆಗಬಹುದು. "ನಮಾಜ್ ಮಾಡೋಕೋಗಿ ಮಸೀದಿ ಮೈಮೇಲೆ ಕೆಡವಿಕೊಂಡಂತಾಗಬಾರದು".
-
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ -
Gold Rate Today: ಬಂಗಾರ ಪ್ರಿಯರಿಗೆ ಸಿಹಿಸುದ್ದಿ: ಇಂದೂ ಇಳಿಕೆ ಕಂಡ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರಗಳು ಹೀಗಿವೆ -
ಎಲೆಕ್ಷನ್ ಇವತ್ತೇ ನಡೆದರೆ ತಮಿಳುನಾಡು, ಕೇರಳಂ, ಪಶ್ಚಿಮ ಬಂಗಾಳದಲ್ಲಿ ಯಾರಿಗೆ ಗೆಲುವು? ಸಮೀಕ್ಷೆ ನೀಡಿದ ಮಾಹಿತಿ ಇಲ್ಲಿದೆ -
ಟೀಂ ಇಂಡಿಯಾ ಕ್ರಿಕೆಟರ್ ಕುಲದೀಪ್ ಯಾದವ್ ಕೈಹಿಡಿದ ವಂಶಿಕಾ ಚಡ್ಡಾ ಯಾರು? -
Bengaluru: 1 ತಿಂಗಳು ಬದುಕೋಕೆ ಇಷ್ಟೊಂದು ಖರ್ಚಾಗುತ್ತಾ? ಯುವತಿಯ ಪೋಸ್ಟ್ ಕಂಡು ಬೆಚ್ಚಿಬಿದ್ದ ನೆಟ್ಟಿಗರು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
Oscars 2026: ಮೈಕಲ್ ಜೋರ್ಡಾನ್ ಅತ್ಯುತ್ತಮ ನಟ, ಜೆಸ್ಸಿ ಬಕ್ಲಿ ಅತ್ಯುತ್ತಮ ನಟಿ: ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ -
SSLC ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಹಾಲ್ ಟಿಕೆಟ್ ತೋರಿಸಿದ್ರೆ KSRTC ಬಸ್ಸುಗಳಲ್ಲಿ ಉಚಿತ ಪ್ರಯಾಣ












Click it and Unblock the Notifications