ಸಾಲಮನ್ನಾ ಬಗ್ಗೆ ಊಹಾಪೋಹ ನಂಬಬೇಡಿ: ಕುಮಾರಸ್ವಾಮಿ
ಮೈಸೂರು, ಮೇ 23: ಸಾಲಮನ್ನಾ ಬಗ್ಗೆ ಊಹಾಪೋಹದ ಮಾತುಗಳನ್ನು ರೈತರು ನಂಬಬೇಡಿ, ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಧನಾತ್ಮಕ ನಿರ್ಣಯ ಕೈಗೊಳ್ಳುತ್ತೇವೆ ಎಂದು ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನನ್ನ ಯೋಜನೆ ಬೇರೆ ಇದೆ, ಆರ್ಥಿಕ ತಜ್ಞರ ಚಿಂತನೆ ಬೇರೆ ಇದೆ, ಹಾಗಾಗಿ ಚರ್ಚಿಸಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದ ರೈತರ ಹಿತ ಕಾಪಾಡಿಯೇ ಸಿದ್ದ ಎಂದು ಭರವಸೆ ನೀಡಿದ ಅವರು, ಇಸ್ರೇಲ್ಗಿಂತಲೂ ಉತ್ತಮ ಮಾದರಿ ಕೃಷಿ ಪದ್ಧತಿಯನ್ನು ರಾಜ್ಯದಲ್ಲಿ ಅಳವಡಿಸುವುದಾಗಿ ಅವರು ಹೇಳಿದರು.

ಮತ್ತೆ ಜನತಾದರ್ಶನ ಪ್ರಾರಂಭ ಮಾಡುವುದಾಗಿ ಹೇಳಿದ ಅವರು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದಲೇ ಜನರು ನನ್ನನ್ನು ಭೇಟಿ ಆಗಬಹುದು ಅದಕ್ಕೆ ಪೂರ್ವಾನುಮತಿಯ ಅವಕಾಶವೂ ಇಲ್ಲ ಎಂದರು, ಗ್ರಾಮ ವಾಸ್ಥವ್ಯ ಮಾಡುವುದಾಗಿಯೂ ಅವರು ಹೇಳಿದರು.












Click it and Unblock the Notifications