ಬೆಳಗಾವಿ ಕುಂದಾ ಕಂಡರಿಯದ ಭರ್ಜರಿ ಮಾರಾಟ
ಬೆಳಗಾವಿ, ಮಾ.14: ಮೂರು ದಿನಗಳ ಕನ್ನಡ ಸಾಂಸ್ಕೃತಿಕ ಜಾತ್ರೆಗೆ ತೆರೆಬಿದ್ದಿದೆ. ಆದರೆ ಬೆಳಗಾವಿಯಿಂದ ಹಿಂತಿರುಗಿದವರು ಬರಿಗೈಲಿ ಬರಲು ಸಾಧ್ಯವೆ? ಕುಂದಾನಗರಿಗೆ ಹೋದವರು ಕುಂದಾ ತರಲಿಲ್ಲ ಎಂದರೆ ಮನೆಮಂದಿ ಸುಮ್ಮನೆ ಬಿಡುತ್ತಾರಾ? ಬಾಯಲ್ಲಿ ನೀರೂರಿಸುವ ಕುಂದಾ ಕೇವಲ ರಾಜ್ಯದಲ್ಲಷ್ಟೇ ಅಲ್ಲ ಹೊರದೇಶಗಳಿಗೂ ರಫ್ತಾಗುತ್ತದೆ ಎಂದರೆ ಇದರ ಮಹತ್ವವನ್ನು ನೀವೇ ಅರಿಯಿರಿ.
ಬೆಳಗಾವಿಯ ವಿಶೇಷ ಸಿಹಿ ತಿನಿಸು ಕುಂದಾಗಾಗಿ ಎಲ್ಲಲ್ಲೂ ಅಹಾಕಾರ. ತಾ ಮುಂದು ನಾ ಮುಂದು ಎಂದು ಗ್ರಾಹಕರು ಕೆಜಿಗಟ್ಟಲೆ ಕುಂದಾ ಖರೀದಿಸಿ ಪಾರ್ಸಲ್ ಕಟ್ಟಿಸಿಕೊಂಡು ಹೋಗಿದ್ದಾರೆ. ಕುಂದಾನಗರಿಯಲ್ಲಿ ಹಿಂದೆದೂ ಕಂಡರಿಯದಷ್ಟು ಕುಂದಾ ಭರ್ಜರಿಯಾಗಿ ಬಿಕರಿಯಾಗಿದೆ. ಅಂಗಡಿ ಮಾಲೀಕರ ಗಲ್ಲಾಪೆಟ್ಟಿಗೆ ಭರ್ತಿಯಾಗಿದೆ.
ಅತುಲ್ ಪುರೋಹಿತ್ ಅವರ ಪ್ರಕಾರ, ಬುಧವಾರದಿಂದ ಸಮ್ಮೇಳನ ಮುಗಿಯುವ ತನಕ ತಮ್ಮ ಅಂಗಡಿಯಲ್ಲಿ ಪ್ರತಿದಿನ 250 ಕೆಜಿ ಕುಂದಾ ಮಾರಾಟವಾಗಿದೆಯಂತೆ. ಕುಂದಾಗೆ ಮುಖ್ಯವಾಗಿ ಕೋವಾ, ಗಟ್ಟಿ ಹಾಗೂ ತಾಜಾ ಹಾಲು ಬೇಕು. ಇದರ ಕೊರತೆಯಿಂದ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂಬುದು ಅವರ ಅಳಲು.
ಬೆಳಗಾವಿಯ 100ಕ್ಕೂ ಅಧಿಕ ಸ್ವೀಟ್ ಸ್ಟಾಲ್ಗಳಲ್ಲಿ ಸರಿಸುಮಾರು 3,000 ಕೆಜಿ ಕುಂದಾ ಮಾರಾಟವಾಗಿದೆ. ಸಮ್ಮೇಳನದ ಕೊನೆಯ ದಿನವಂತೂ ಗ್ರಾಹಕರು ನೂಕು ನುಗ್ಗ್ಗಲಿನಲ್ಲಿ ಕುಂದಾ ಖರೀದಿಸಬೇಕಾದ ಪರಿಸ್ಥಿತಿ ತಲೆದೋರಿತ್ತು. ಸಮ್ಮೇಳನ ಹಾಗೂ ಬಸ್ ನಿಲ್ದಾಣ ಸಮೀಪದ ಮಳಿಗೆಗಳಲ್ಲಂತೂ ಜನಜಂಗುಳಿಯನ್ನು ಸಂಭಾಳಿಸಲು ಹರಸಾಹಸ ಪಡಬೇಕಾಯಿತು. ಕೆಲವರಂತೂ ಕುಂದಾ ಸಿಗದೆ ಪೆಚ್ಚುಮೋರೆ ಹಾಕಿಕೊಳ್ಳಬೇಕಾಯಿತು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications