ಬೆಳಗಾವಿ ಕುಂದಾ ಕಂಡರಿಯದ ಭರ್ಜರಿ ಮಾರಾಟ
ಬೆಳಗಾವಿ, ಮಾ.14: ಮೂರು ದಿನಗಳ ಕನ್ನಡ ಸಾಂಸ್ಕೃತಿಕ ಜಾತ್ರೆಗೆ ತೆರೆಬಿದ್ದಿದೆ. ಆದರೆ ಬೆಳಗಾವಿಯಿಂದ ಹಿಂತಿರುಗಿದವರು ಬರಿಗೈಲಿ ಬರಲು ಸಾಧ್ಯವೆ? ಕುಂದಾನಗರಿಗೆ ಹೋದವರು ಕುಂದಾ ತರಲಿಲ್ಲ ಎಂದರೆ ಮನೆಮಂದಿ ಸುಮ್ಮನೆ ಬಿಡುತ್ತಾರಾ? ಬಾಯಲ್ಲಿ ನೀರೂರಿಸುವ ಕುಂದಾ ಕೇವಲ ರಾಜ್ಯದಲ್ಲಷ್ಟೇ ಅಲ್ಲ ಹೊರದೇಶಗಳಿಗೂ ರಫ್ತಾಗುತ್ತದೆ ಎಂದರೆ ಇದರ ಮಹತ್ವವನ್ನು ನೀವೇ ಅರಿಯಿರಿ.
ಬೆಳಗಾವಿಯ ವಿಶೇಷ ಸಿಹಿ ತಿನಿಸು ಕುಂದಾಗಾಗಿ ಎಲ್ಲಲ್ಲೂ ಅಹಾಕಾರ. ತಾ ಮುಂದು ನಾ ಮುಂದು ಎಂದು ಗ್ರಾಹಕರು ಕೆಜಿಗಟ್ಟಲೆ ಕುಂದಾ ಖರೀದಿಸಿ ಪಾರ್ಸಲ್ ಕಟ್ಟಿಸಿಕೊಂಡು ಹೋಗಿದ್ದಾರೆ. ಕುಂದಾನಗರಿಯಲ್ಲಿ ಹಿಂದೆದೂ ಕಂಡರಿಯದಷ್ಟು ಕುಂದಾ ಭರ್ಜರಿಯಾಗಿ ಬಿಕರಿಯಾಗಿದೆ. ಅಂಗಡಿ ಮಾಲೀಕರ ಗಲ್ಲಾಪೆಟ್ಟಿಗೆ ಭರ್ತಿಯಾಗಿದೆ.
ಅತುಲ್ ಪುರೋಹಿತ್ ಅವರ ಪ್ರಕಾರ, ಬುಧವಾರದಿಂದ ಸಮ್ಮೇಳನ ಮುಗಿಯುವ ತನಕ ತಮ್ಮ ಅಂಗಡಿಯಲ್ಲಿ ಪ್ರತಿದಿನ 250 ಕೆಜಿ ಕುಂದಾ ಮಾರಾಟವಾಗಿದೆಯಂತೆ. ಕುಂದಾಗೆ ಮುಖ್ಯವಾಗಿ ಕೋವಾ, ಗಟ್ಟಿ ಹಾಗೂ ತಾಜಾ ಹಾಲು ಬೇಕು. ಇದರ ಕೊರತೆಯಿಂದ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂಬುದು ಅವರ ಅಳಲು.
ಬೆಳಗಾವಿಯ 100ಕ್ಕೂ ಅಧಿಕ ಸ್ವೀಟ್ ಸ್ಟಾಲ್ಗಳಲ್ಲಿ ಸರಿಸುಮಾರು 3,000 ಕೆಜಿ ಕುಂದಾ ಮಾರಾಟವಾಗಿದೆ. ಸಮ್ಮೇಳನದ ಕೊನೆಯ ದಿನವಂತೂ ಗ್ರಾಹಕರು ನೂಕು ನುಗ್ಗ್ಗಲಿನಲ್ಲಿ ಕುಂದಾ ಖರೀದಿಸಬೇಕಾದ ಪರಿಸ್ಥಿತಿ ತಲೆದೋರಿತ್ತು. ಸಮ್ಮೇಳನ ಹಾಗೂ ಬಸ್ ನಿಲ್ದಾಣ ಸಮೀಪದ ಮಳಿಗೆಗಳಲ್ಲಂತೂ ಜನಜಂಗುಳಿಯನ್ನು ಸಂಭಾಳಿಸಲು ಹರಸಾಹಸ ಪಡಬೇಕಾಯಿತು. ಕೆಲವರಂತೂ ಕುಂದಾ ಸಿಗದೆ ಪೆಚ್ಚುಮೋರೆ ಹಾಕಿಕೊಳ್ಳಬೇಕಾಯಿತು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications