ಈ ಬಾರಿ ಸಮ್ಮೇಳನದಲ್ಲಿ ಸರಳ, ಸ್ವಚ್ಛ ಊಟ

ಸಾಮಾನ್ಯವಾಗಿ ಕನ್ನಡ ಅಕ್ಷರ ಜಾತ್ರೆಗಳು ಜ್ಞಾನದ ಹಸಿವಿನ ಜೊತೆಗೆ ಹೊಟ್ಟೆ ಹಸಿವನ್ನು ನೀಗಿಸುತ್ತಿವೆ. ಕಳೆದ ಕೆಲ ವರ್ಷಗಳಿಂದ ಕೊಂಚ ಅವ್ಯವಸ್ಥೆ ಮೂಡಿದ್ದರೂ, ಈಗಲೂ ಇಸವಿ ಸಮೇತವಾಗಿ ಹೋಳಿಗೆ, ಶೇಂಗಾ ಉಂಡೆ, ಪಾಯಸವನ್ನು ನೆನಪಿಸಿಕೊಂಡು ಹೇಳುವವರಿದ್ದಾರೆ.
ಫೆ.4 ರಿಂದ ಮೂರು ದಿನಗಳ ಕಾಲ ನಡೆಯುವ 77ನೇ ಸಾಹಿತ್ಯ ಸಮ್ಮೇಳನಕ್ಕೆ ನಗರದ ನ್ಯಾಷನಲ್ ಕಾಲೇಜು ಮೈದಾನ ಸಜ್ಜುಗೊಳ್ಳುತ್ತಿದೆ. ಸುಮಾರು 3 ಲಕ್ಷ ಜನರ ಊಟೋಪಚಾರದ ವ್ಯವಸ್ಥೆಗೆ ಸ್ಥಳ, ಸಿಬ್ಬಂದಿಯನ್ನು ಈಗಾಗಲೇ ನಿಗದಿ ಪಡಿಸಿ ತರಬೇತಿ ನೀಡಲಾಗಿದೆ.
ಪ್ರತಿನಿಧಿಗಳಿಗೆ ಮಕ್ಕಳ ಕೂಟ ಬಳಿಯ ಹಳೆ ಕೋಟೆ ಆವರಣದಲ್ಲಿ ಹಾಗೂ ಸಾಹಿತಿ ಮತ್ತು ಗಣ್ಯರಿಗೆ ಮಹಿಳಾ ಸೇವಾ ಸಮಾಜದಲ್ಲೂ ಊಟದ ವ್ಯವಸ್ಥೆ ಏರ್ಪಾಟು ಮಾಡಲಾಗಿದೆ. ಸಮ್ಮೇಳನಕ್ಕೆ 250 ರು ನೀಡಿ ನೋಂದಣಿ ಮಾಡಿಕೊಂಡವರು ಹಾಗೂ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರಿಗೆ ಮಾತ್ರ ಊಟೋಪಚರ ಮಾತ್ರ ವ್ಯವಸ್ಥೆ ಮಾಡಲಾಗಿದೆ.
ಮೊದಲ ದಿನ ಫೆ. 4: ಬೆಳಗ್ಗೆ : ಉಪಾಹಾರಕ್ಕೆ ಪೊಂಗಲ್ ಪ್ಲಸ್ ಚಟ್ನಿ ಹಾಗೂ ಕಾಫಿ, ಟೀ
ಮಧ್ಯಾಹ್ನ : ವಾಂಗೀಬಾತ್, ಅನ್ನ ರಸಂ, ಮೈಸೂರು ಪಾಕ್, ಆಂಬೊಡೆ, ಮೊಸರನ್ನ ಹಾಗೂ ಉಪ್ಪಿನಕಾಯಿ
ರಾತ್ರಿಗೆ ಅನ್ನ ಸಾಂಬಾರ್, ಪಾಯಸ, ಮೊಸರು, ಉಪ್ಪಿನಕಾಯಿ ಹಾಗೂ ಹಪ್ಪಳ
ಫೆ.5 ಎರಡನೇ ದಿನ: ಬೆಳಗ್ಗೆ: ಖಾರಾಬಾತ್, ಕೇಸರಿ ಬಾತ್ ಹಾಗೂ ಕಾಫಿ ಟೀ
ಮಧ್ಯಾಹ್ನ: ಬಿಸಿಬೇಳೆ ಬಾತ್, ಜಹಾಂಗೀರ್, ಅನ್ನ ರಸಂ, ಮೊಸರನ್ನ, ಉಪ್ಪಿನಕಾಯಿ ಹಾಗೂ ಪಕೋಡ
ರಾತ್ರಿಗೆ ಅನ್ನ ಸಾಂಬಾರ್, ಪಾಯಸ, ಮೊಸರನ್ನ, ಉಪ್ಪಿನಕಾಯಿ ಹಾಗೂ ಕಡ್ಡಿಹಪ್ಪಳ
ಫೆ. 6 ಕೊನೆ ದಿನ: ಬೆಳಗ್ಗೆ ಶಾವಿಗೆ ಬಾತ್ ಪ್ಲಸ್ ಚಟ್ನಿ ಹಾಗೂ ಕಾಫಿ, ಟೀ
ಮಧ್ಯಾಹಕ್ಕೆ ಮೆಂತ್ಯ ಬಾತ್. ಅನ್ನರಸಂ, ಬಾದುಷಾ, ಮೊಸರನ್ನ ಹಾಗೂ ಉಪ್ಪಿನಕಾಯಿ
ರಾತ್ರಿಗೆ ಅನ್ನ ಸಾಂಬಾರ್, ಮೊಸರನ್ನ, ಉಪ್ಪಿನಕಾಯಿ ಹಾಗೂ ಕಡ್ಡಿ ಹಪ್ಪಳ
ಉಪಹಾರ 20 ಸಾವಿರ ಜನ, ಮಧ್ಯಾಹ್ನಕ್ಕೆ 50 ಸಾವಿರ, ರಾತ್ರಿಗೆ 25 ಸಾವಿರ ಜನಕ್ಕೆ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಶುಚಿತ್ವಕ್ಕೆ ಮಹತ್ವ ನೀಡಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ವಾಸುದೇವ್ ಅಡಿಗ ಅವರು ಹೇಳಿದ್ದಾರೆ. [ಕನ್ನಡ ಸಾಹಿತ್ಯ ಸಮ್ಮೇಳನ]
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications